ಮನರಂಜನೆ

ಸಿನಿಮಾ ಒಂದೇ ಅಲ್ಲ, ಜನರಿಗೆ ಸಾವಿರ ಆಯ್ಕೆಗಳಿವೆ: ರಿಷಭ್ ಶೆಟ್ಟಿ

ಮೊದಲು ಹೀಗಿರಲಿಲ್ಲ, ಕೋವಿಡ್‍ ನಂತರ ಜನ ಕ್ರಮೇಣ ಚಿತ್ರಮಂದಿರಗಳಿಂದ ವಿಮುಖರಾದರು. ಇದಕ್ಕೆ ಓಟಿಟಿ ಕಾರಣ ಎನ್ನಲಾಯ್ತು, ಚಿತ್ರಗಳ ಗುಣಮಟ್ಟ ಎಂದು ಹೇಳಲಾಯ್ತು. ಕಾರಣ ಏನೇ ಇರಲಿ, ಮೊದಲಿಗೆ ಹೋಲಿಸಿದರೆ, ಜನ ಚಿತ್ರಮಂದಿರಗಳ ಕಡೆ ಬರುವುದು ಕಡಿಮೆಯಾಗಿದೆ. ಈ ಬಗ್ಗೆ ಸಾಕಷ್ಟು ನಟರು, ನಿರ್ದೇಶಕರು ಮಾತನಾಡಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ‘ಶಿವಮ್ಮ’ ಚಿತ್ರದ ಪತ್ರಿಕಾಗೋಷ್ಠಿಯ ನಂತರ ರಿಷಭ್‍ ಶೆಟ್ಟಿ ಒಂದಿಷ್ಟು ವಿಷಯಗಳನ್ನು ಹಂಚಿಕೊಂಡಿದ್ದರು.

ಈಗ ಪುನಃ ಒಂದಿಷ್ಟು ಮಾತನಾಡಿದ್ದಾರೆ. ಅದಕ್ಕೆ ವೇದಿಕೆಯಾಗಿದ್ದು ‘ಲಾಫಿಂಗ್‍ ಬುದ್ಧ’ ಚಿತ್ರದ ಹಾಡು ಬಿಡುಗಡೆ ಸಮಾರಂಭ. ಹಾಡು ಬಿಡುಗಡೆಯ ನಂತರ ರಿಷಭ್‍ ಚಿತ್ರರಂಗದ ಕುರಿತು ಕೆಲವು ವಿಷಯಗಳನ್ನು ಹಂಚಿಕೊಳ್ಳುವುದರ ಜೊತೆಗೆ, ಇವತ್ತು ಸಿನಿಮಾ ಒಂದೇ ಅಲ್ಲ, ಜನರ ಮುಂದೆ ಹಲವು ಆಯ್ಕೆಗಳಿವೆ ಎಂದು ಹೇಳಿದ್ದಾರೆ.

ಚಿತ್ರಮಂದಿರದಲ್ಲಿ ನೋಡುವಂಥ ಅನುಭವ ಕೊಟ್ಟರೆ ತಾನೇ ಜನ ಚಿತ್ರಮಂದಿರಗಳಿಗೆ ಬರೋದು ಎನ್ನುವ ರಿಷಭ್, ‘ಜನ ಚಿತ್ರ ನೋಡುತ್ತಿಲ್ಲ ಎಂದು ಬಯ್ಯುವುದು ಸರಿಯಲ್ಲ. ಜನ ಚಿತ್ರಮಂದಿರಕ್ಕೆ ಬರೋದು ಅಲ್ಲಿನ ಅನುಭವ ಪಡೆಯೋಕೆ. ಆದರೆ, ಚಿತ್ರಮಂದಿರಗಳಿಗೆ ಸಿನಿಮಾ ಮಾಡೋದನ್ನು ಕಡಿಮೆ ಮಾಡಿದ್ದಾರೆ. ಕಥೆ, ಚಿತ್ರಗಳು ಚೆನ್ನಾಗಿರಬಹುದು. ಆದರೆ, ಚಿತ್ರಮಂದಿರದಲ್ಲಿ ನೋಡುವ ಅನುಭವ ಕೊಟ್ಟರೆ ತಾನೇ ಜನ ಚಿತ್ರಮಂದಿರಗಳಿಗೆ ಬರೋದು. ಆಮೇಲೆ ಜನ ಬರಲಿಲ್ಲ ಎಂದು ಬಯ್ಯುವುದು ಸರಿಯಲ್ಲ. ಜನರಿಗೆ ಸಾವಿರ ಆಯ್ಕೆಗಳಿವೆ. ಒಮ್ಮೆ ಫೋನ್‍ ತೆಗೆದುಕೊಂಡು ಪ್ರತಿದಿನ ಎಷ್ಟು ಸ್ಕ್ರೀನ್ ಸಮಯ ಆಗಿದೆ ಎಂದು ಗಮನಿಸಿ. ಕನಿಷ್ಠವೆಂದರೂ ಪ್ರತಿಯೊಬ್ಬರೂ ನಾಲ್ಕೈದು ಗಂಟೆಗಳ ಕಾಲ ನಾವು ಮೊಬೈಲ್‍ ನೋಡಿರುತ್ತೇವೆ. ಜನ ಹಾಗೆ ಮೊಬೈಲ್‍ ಒಳಗೆ ಕಳೆದುಹೋಗಿದ್ದಾರೆ’ ಎಂದರು.

‘ಸಿನಿಮಾ ಮಾಡುವವರ ಸಂಖ್ಯೆ ಜಾಸ್ತಿಯಾಗಿರುವುದರಿಂದ, ನೋಡೋರು ಕಡಿಮೆಯಾಗಿದ್ದಾರೆ. ಮನೆಯಲ್ಲಿ ಗಂಡ-ಹೆಂಡತಿ ಯಾವುದೋ ವೀಡಿಯೋ ಶೂಟಿಂಗ್ ಮಾಡುತ್ತಿರುತ್ತಾರೆ. ಅವರೇ ಎಡಿಟ್‍ ಮಾಡಿ, ಮ್ಯೂಸಿಕ್‍ ಮಾಡುತ್ತಿರುತ್ತಾರೆ. ಅದು ಮಿಲಿಯನ್‍ಗಟ್ಟಲೆ ವೀಕ್ಷಣೆ ಆಗುತ್ತಿರುತ್ತದೆ. ಅದರ ಕಾಮೆಂಟ್ಸ್ ನೋಡುವುದರಲ್ಲಿ ಅವರು ಬ್ಯುಸಿಯಾಗಿರುತ್ತಾರೆ. ಅವರು ನಮಗಿಂತ ಬಹಳ ಬ್ಯುಸಿಯಾಗಿರುತ್ತಾರೆ. ಹಾಗಿರುವಾಗ ಅವರು ಚಿತ್ರಮಂದಿರಕ್ಕೇಕೆ ಬರುತ್ತಾರೆ?’ ಎಂದರು.

ಮುಂದಿನ ದಿನಗಳಲ್ಲಿ ಪರಿಸ್ಥಿತಿ ಸುಧಾರಿಸಬಹುದು ಎಂಬ ಆಶಾಭಾವನೆ ಇದೆ ಎಂದ ರಿಷಭ್, ‘ಬಹಳ ದಿನಗಳಿಂದ ಜನ ಚಿತ್ರಮಂದಿರಗಳಿಗೆ ಬಂದಿಲ್ಲ. ‘ಭೀಮ’ದಿಂದ ಜನ ಚಿತ್ರಮಂದಿರಗಳಿಗೆ ಬರಬಹುದು ಎಂಬ ನಂಬಿಕೆ ಇದೆ. ನಂತರ ಗಣೇಶ್‍ ಅವರ ಚಿತ್ರಕ್ಕೆ ಬರಬಹುದು. ‘ಪೌಡರ್‍’ಗೆ ಬರಬಹುದು. ಒಂದಿಷ್ಟು ನಿರೀಕ್ಷೆಯ ಚಿತ್ರಗಳು ಇರುವುದರ ಜೊತೆಗೆ, ಚಿತ್ರಮಂದಿರದಲ್ಲಿ ಒಳ್ಳೆಯ ಅನುಭವ ಕೊಡುವ ಚಿತ್ರಗಳಿರುವುದರಿಂದ ಪರಿಸ್ಥಿತಿ ಸರಿ ಹೋಗಬಹುದು ಎಂಬ ನಂಬಿಕೆ ಇದೆ. ಜನರಿಗೂ ಆ ನಂಬಿಕೆ ಉಳಿದರೆ ಜನ ಇನ್ನಷ್ಟು ಸಂಖ್ಯೆಯಲ್ಲಿ ಬರಬಹುದು ಎಂಬ ಆಶಾಭಾವನೆ ಇದೆ’ ಎಂದರು.

ಭೂಮಿಕಾ

Recent Posts

ಮುಡಾಗೆ ಆರ್ಥಿಕ ಸಂಕಷ್ಟ; 20 ಕೋಟಿ ರೂ ನಷ್ಟ

ಮೈಸೂರು: ಬದಲಿ ನಿವೇಶನ ಹಂಚಿಕೆ, ೫೦:೫೦ ಅನುಪಾತದಲ್ಲಿ ನಿವೇಶನ ಅಕ್ರಮ ಹಂಚಿಕೆ ಹಗರಣದಿಂದಾಗಿ ಇಡೀ ರಾಜ್ಯದ ಗಮನ ಸೆಳೆದಿರುವ ಮೈಸೂರು…

43 mins ago

ಆಂದೋಲನ ಫಲಶ್ರುತಿ: ಕೊನೆಗೂ ತೆರವಾಯ್ತು ಬೃಹತ್‌ ಮರದ ಕಾಂಡ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಜುಂಬೂ ಸವಾರಿ ಸಾಗುವ ಮಾರ್ಗದಲ್ಲಿ ಕಳೆದ ಎರಡೂ ವರ್ಷಗಳಿಂದ ಬಿದ್ದಿದ್ದ ಬೃಹತ್ ಮರದ ಕಾಂಡವನ್ನು…

53 mins ago

ಜಂಬೂ ಸವಾರಿ ಮಾರ್ಗದಲ್ಲಿ ಸಣ್ಣ ಬದಲಾವಣೆ

ಮೈಸೂರು: ಈ ಬಾರಿಯ ದಸರಾ ಮಹೋತ್ಸವದ ಜಂಬೂ ಸವಾರಿಯನ್ನು ವೀಕ್ಷಿಸಲು ಆಗಮಿಸಿದ ಎಲ್ಲರಿಗೂ ಚಿನ್ನದ ಅಂಬಾರಿ ನೋಡುವ ಅವಕಾಶ ಸಿಗಬೇಕು…

1 hour ago

ಪೈಲ್ವಾನರ ಕಸರತ್ತಿಗೆ ಗರಡಿ ಮನೆಗಳು ಸಜ್ಜು

ಮೈಸೂರು: ಸಾಂಸ್ಕೃತಿಕ ರಾಜಧಾನಿ, ಅರಮನೆಗಳ ನಗರಿ ಎಂದು ಕರೆಯುವ ಮೈಸೂರನ್ನು ಗರಡಿ ಮನೆಗಳ ನಗರಿ ಎಂದೂ ಇತ್ತೀಚಿನ ವರ್ಷಗಳಲ್ಲಿ ಕರೆಯುವುದು…

1 hour ago

ತಿ.‌ ನರಸೀಪುರ: ಬೈಕ್ ಡಿಕ್ಕಿ ಚಿರತೆ ಸಾವು

ತಿ. ನರಸೀಪುರ: ತಾಲೂಕಿನ ಬನ್ನೂರು ಹೋಬಳಿಯ ಬಸವನಹಳ್ಳಿ ಗ್ರಾಮದ ಸಮೀಪದ ಮುಖ್ಯರಸ್ತೆಯಲ್ಲಿ ದ್ವಿಚಕ್ರ ವಾಹನ ಚಿರತೆಗೆ ಡಿಕ್ಕಿ ಹೊಡೆದ ಪರಿಣಾಮ…

9 hours ago

ತಿರುಪತಿ ಲಡ್ಡು: ತುಪ್ಪದಲ್ಲಿ ಪ್ರಾಣಿ ಕೊಬ್ಬು ಬಳಕೆ

ಅಮರಾವತಿ: ಜಗತ್‌ ಪ್ರಸಿದ್ಧ ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಹಾಗೂ ಕಳಪೆ ಗುಣಮಟ್ಟದ ಪದಾರ್ಥಗಳು ಪತ್ತೆಯಾಗಿದೆ ಎಂದು ತೆಲುಗು…

11 hours ago