ಮನರಂಜನೆ

ಸಿನಿಮಾ ಒಂದೇ ಅಲ್ಲ, ಜನರಿಗೆ ಸಾವಿರ ಆಯ್ಕೆಗಳಿವೆ: ರಿಷಭ್ ಶೆಟ್ಟಿ

ಮೊದಲು ಹೀಗಿರಲಿಲ್ಲ, ಕೋವಿಡ್‍ ನಂತರ ಜನ ಕ್ರಮೇಣ ಚಿತ್ರಮಂದಿರಗಳಿಂದ ವಿಮುಖರಾದರು. ಇದಕ್ಕೆ ಓಟಿಟಿ ಕಾರಣ ಎನ್ನಲಾಯ್ತು, ಚಿತ್ರಗಳ ಗುಣಮಟ್ಟ ಎಂದು ಹೇಳಲಾಯ್ತು. ಕಾರಣ ಏನೇ ಇರಲಿ, ಮೊದಲಿಗೆ ಹೋಲಿಸಿದರೆ, ಜನ ಚಿತ್ರಮಂದಿರಗಳ ಕಡೆ ಬರುವುದು ಕಡಿಮೆಯಾಗಿದೆ. ಈ ಬಗ್ಗೆ ಸಾಕಷ್ಟು ನಟರು, ನಿರ್ದೇಶಕರು ಮಾತನಾಡಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ‘ಶಿವಮ್ಮ’ ಚಿತ್ರದ ಪತ್ರಿಕಾಗೋಷ್ಠಿಯ ನಂತರ ರಿಷಭ್‍ ಶೆಟ್ಟಿ ಒಂದಿಷ್ಟು ವಿಷಯಗಳನ್ನು ಹಂಚಿಕೊಂಡಿದ್ದರು.

ಈಗ ಪುನಃ ಒಂದಿಷ್ಟು ಮಾತನಾಡಿದ್ದಾರೆ. ಅದಕ್ಕೆ ವೇದಿಕೆಯಾಗಿದ್ದು ‘ಲಾಫಿಂಗ್‍ ಬುದ್ಧ’ ಚಿತ್ರದ ಹಾಡು ಬಿಡುಗಡೆ ಸಮಾರಂಭ. ಹಾಡು ಬಿಡುಗಡೆಯ ನಂತರ ರಿಷಭ್‍ ಚಿತ್ರರಂಗದ ಕುರಿತು ಕೆಲವು ವಿಷಯಗಳನ್ನು ಹಂಚಿಕೊಳ್ಳುವುದರ ಜೊತೆಗೆ, ಇವತ್ತು ಸಿನಿಮಾ ಒಂದೇ ಅಲ್ಲ, ಜನರ ಮುಂದೆ ಹಲವು ಆಯ್ಕೆಗಳಿವೆ ಎಂದು ಹೇಳಿದ್ದಾರೆ.

ಚಿತ್ರಮಂದಿರದಲ್ಲಿ ನೋಡುವಂಥ ಅನುಭವ ಕೊಟ್ಟರೆ ತಾನೇ ಜನ ಚಿತ್ರಮಂದಿರಗಳಿಗೆ ಬರೋದು ಎನ್ನುವ ರಿಷಭ್, ‘ಜನ ಚಿತ್ರ ನೋಡುತ್ತಿಲ್ಲ ಎಂದು ಬಯ್ಯುವುದು ಸರಿಯಲ್ಲ. ಜನ ಚಿತ್ರಮಂದಿರಕ್ಕೆ ಬರೋದು ಅಲ್ಲಿನ ಅನುಭವ ಪಡೆಯೋಕೆ. ಆದರೆ, ಚಿತ್ರಮಂದಿರಗಳಿಗೆ ಸಿನಿಮಾ ಮಾಡೋದನ್ನು ಕಡಿಮೆ ಮಾಡಿದ್ದಾರೆ. ಕಥೆ, ಚಿತ್ರಗಳು ಚೆನ್ನಾಗಿರಬಹುದು. ಆದರೆ, ಚಿತ್ರಮಂದಿರದಲ್ಲಿ ನೋಡುವ ಅನುಭವ ಕೊಟ್ಟರೆ ತಾನೇ ಜನ ಚಿತ್ರಮಂದಿರಗಳಿಗೆ ಬರೋದು. ಆಮೇಲೆ ಜನ ಬರಲಿಲ್ಲ ಎಂದು ಬಯ್ಯುವುದು ಸರಿಯಲ್ಲ. ಜನರಿಗೆ ಸಾವಿರ ಆಯ್ಕೆಗಳಿವೆ. ಒಮ್ಮೆ ಫೋನ್‍ ತೆಗೆದುಕೊಂಡು ಪ್ರತಿದಿನ ಎಷ್ಟು ಸ್ಕ್ರೀನ್ ಸಮಯ ಆಗಿದೆ ಎಂದು ಗಮನಿಸಿ. ಕನಿಷ್ಠವೆಂದರೂ ಪ್ರತಿಯೊಬ್ಬರೂ ನಾಲ್ಕೈದು ಗಂಟೆಗಳ ಕಾಲ ನಾವು ಮೊಬೈಲ್‍ ನೋಡಿರುತ್ತೇವೆ. ಜನ ಹಾಗೆ ಮೊಬೈಲ್‍ ಒಳಗೆ ಕಳೆದುಹೋಗಿದ್ದಾರೆ’ ಎಂದರು.

‘ಸಿನಿಮಾ ಮಾಡುವವರ ಸಂಖ್ಯೆ ಜಾಸ್ತಿಯಾಗಿರುವುದರಿಂದ, ನೋಡೋರು ಕಡಿಮೆಯಾಗಿದ್ದಾರೆ. ಮನೆಯಲ್ಲಿ ಗಂಡ-ಹೆಂಡತಿ ಯಾವುದೋ ವೀಡಿಯೋ ಶೂಟಿಂಗ್ ಮಾಡುತ್ತಿರುತ್ತಾರೆ. ಅವರೇ ಎಡಿಟ್‍ ಮಾಡಿ, ಮ್ಯೂಸಿಕ್‍ ಮಾಡುತ್ತಿರುತ್ತಾರೆ. ಅದು ಮಿಲಿಯನ್‍ಗಟ್ಟಲೆ ವೀಕ್ಷಣೆ ಆಗುತ್ತಿರುತ್ತದೆ. ಅದರ ಕಾಮೆಂಟ್ಸ್ ನೋಡುವುದರಲ್ಲಿ ಅವರು ಬ್ಯುಸಿಯಾಗಿರುತ್ತಾರೆ. ಅವರು ನಮಗಿಂತ ಬಹಳ ಬ್ಯುಸಿಯಾಗಿರುತ್ತಾರೆ. ಹಾಗಿರುವಾಗ ಅವರು ಚಿತ್ರಮಂದಿರಕ್ಕೇಕೆ ಬರುತ್ತಾರೆ?’ ಎಂದರು.

ಮುಂದಿನ ದಿನಗಳಲ್ಲಿ ಪರಿಸ್ಥಿತಿ ಸುಧಾರಿಸಬಹುದು ಎಂಬ ಆಶಾಭಾವನೆ ಇದೆ ಎಂದ ರಿಷಭ್, ‘ಬಹಳ ದಿನಗಳಿಂದ ಜನ ಚಿತ್ರಮಂದಿರಗಳಿಗೆ ಬಂದಿಲ್ಲ. ‘ಭೀಮ’ದಿಂದ ಜನ ಚಿತ್ರಮಂದಿರಗಳಿಗೆ ಬರಬಹುದು ಎಂಬ ನಂಬಿಕೆ ಇದೆ. ನಂತರ ಗಣೇಶ್‍ ಅವರ ಚಿತ್ರಕ್ಕೆ ಬರಬಹುದು. ‘ಪೌಡರ್‍’ಗೆ ಬರಬಹುದು. ಒಂದಿಷ್ಟು ನಿರೀಕ್ಷೆಯ ಚಿತ್ರಗಳು ಇರುವುದರ ಜೊತೆಗೆ, ಚಿತ್ರಮಂದಿರದಲ್ಲಿ ಒಳ್ಳೆಯ ಅನುಭವ ಕೊಡುವ ಚಿತ್ರಗಳಿರುವುದರಿಂದ ಪರಿಸ್ಥಿತಿ ಸರಿ ಹೋಗಬಹುದು ಎಂಬ ನಂಬಿಕೆ ಇದೆ. ಜನರಿಗೂ ಆ ನಂಬಿಕೆ ಉಳಿದರೆ ಜನ ಇನ್ನಷ್ಟು ಸಂಖ್ಯೆಯಲ್ಲಿ ಬರಬಹುದು ಎಂಬ ಆಶಾಭಾವನೆ ಇದೆ’ ಎಂದರು.

ಭೂಮಿಕಾ

Recent Posts

ವಾಹನ ಸವಾರರ ಗಮನಕ್ಕೆ ; ಏಪ್ರಿಲ್‌ 1 ರಿಂದ ಟೋಲ್‌ಗಳಲ್ಲಿ ಇಲ್ಲ ನಗದು ಪಾವತಿ

ಹೊಸದಿಲ್ಲಿ : ಮುಂಬರುವ ಏಪ್ರಿಲ್‌ನಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ರಸ್ತೆಗಳ ಟೋಲ್ ಪ್ಲಾಜಾಗಳಲ್ಲಿ ನಗದು ವಹಿವಾಟುಗಳನ್ನು ಸ್ವೀಕರಿಸುವುದಿಲ್ಲ ಎಂದು ರಸ್ತೆ…

2 hours ago

ಕಾಡಾನೆ ದಾಳಿಗೆ ಕಾರ್ಮಿಕ ಮಹಿಳೆ ಗಂಭೀರ ; ಅರಣ್ಯ ಇಲಾಖೆ ಸಿಬ್ಬಂದಿಗೂ ಗಾಯ

ಸಿದ್ದಾಪುರ : ವಿರಾಜಪೇಟೆ ತಾಲ್ಲೂಕಿನ ಮಾಲ್ದಾರೆ ಸಮೀಪದ ತಟ್ಟಳ್ಳಿಯಲ್ಲಿ ಕಾಫಿ ತೋಟದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕರ ಮೇಲೆ ಕಾಡಾನೆ ದಾಳಿ…

4 hours ago

ಫೆ.28ರಿಂದ ಪಿಯುಸಿ ಪರೀಕ್ಷೆ : ಪರೀಕ್ಷಾ ಕೇಂದ್ರಗಳ ಸುತ್ತಲೂ ನಿಷೇಧಾಜ್ಞೆ ಜಾರಿ

ಮೈಸೂರು : ಫೆ.28ರಿಂದ ಮಾ.17ರವರೆಗೆ ಮೈಸೂರು ನಗರದ 28 ಪರೀಕ್ಷಾ ಕೇಂದ್ರಗಳಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯಲಿದ್ದು, ಸದರಿ ಪರೀಕ್ಷೆಗಳನ್ನು…

4 hours ago

ಚಿರತೆ ಪ್ರತ್ಯಕ್ಷ : ಗ್ರಾಮಸ್ಥರಲ್ಲಿ ಆತಂಕ

ತಿ.ನರಸೀಪುರ : ತಾಲ್ಲೂಕಿನ ಕೇತಹಳ್ಳಿ ಗ್ರಾಮದಲ್ಲಿ ಚಿರತೆಯೊಂದು ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಗ್ರಾಮದಲ್ಲಿ ರಾತ್ರಿ ವೇಳೆ ಚಿರತೆ ಸಂಚರಿಸುತ್ತಿದ್ದುದನ್ನು ಯುವಕರಿಬ್ಬರು…

4 hours ago

ಸ್ನೇಹಮಯಿ ಕೃಷ್ಣ ಮನೆಯಲ್ಲಿ ಸಿಸಿಬಿ ಪೊಲೀಸರಿಂದ ತಲಾಶ್‌ ; ಮಹತ್ವದ ದಾಖಲೆ ಲಭ್ಯ

ಮೈಸೂರು : ಈ ಹಿಂದೆ ಎಂಡಿಎ ಆಯುಕ್ತರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಡಾ.ಡಿ.ಬಿ.ನಟೇಶ್ ಅವರ ವಿರುದ್ಧ ಲಂಚ ನೀಡಿರುವ ಆರೋಪ ಹೊರಿಸಿದ್ದ…

4 hours ago

ಹುಲಿ ಕಳೇಬರ ಪತ್ತೆ ಪ್ರಕರಣ : ಓರ್ವ ಬಂಧನ

ಹನೂರು : ಇಲ್ಲಿನ ಗುಂಡಾಲ್ ಜಲಾಶಯದಲ್ಲಿ ಹುಲಿ ಕಳೇಬರ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೋರ್ವನನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.…

4 hours ago