ಮನರಂಜನೆ

ಮೊದಲು ಕನ್ನಡ, ನಂತರ ಬೇರೆ ಭಾಷೆಗಳಲ್ಲಿ ಬರಲಿದ್ದಾನೆ ‘ಬ್ರ್ಯಾಟ್‍’

‘ಡಾರ್ಲಿಂಗ್‍’ ಕೃಷ್ಣ ಅಭಿನಯದ ಮತ್ತು ಶಶಾಂಕ್‍ ನಿರ್ದೇಶನದ ‘ಬ್ರ್ಯಾಟ್‍’ ಚಿತ್ರವು ಪ್ಯಾನ್‍ ಇಂಡಿಯಾ ಚಿತ್ರವಾಗಿ ಅಕ್ಟೋಬರ್‍.31ರಂದು ಬಿಡುಗಡೆಯಾಗಲಿದೆ ಎಂಬ ಸುದ್ದಿ ಮೊದಲಿತ್ತು. ಆದರೆ, ಚಿತ್ರವನ್ನು ಮೊದಲು ಕನ್ನಡದಲ್ಲಿ ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ಮುಂದಾಗಿದೆ. ನಂತರ ನೋಡಿಕೊಂಡು, ಬೇರೆ ಭಾಷೆಗಳಲ್ಲಿ ಬಿಡುಗಡೆ ಮಾಡುವುದಕ್ಕೆ ತೀರ್ಮಾನಿಸಿದೆ.

ಇತ್ತೀಚೆಗೆ ‘ಬ್ರ್ಯಾಟ್‍’ ಚಿತ್ರದ ಕನ್ನಡ ಅವತರಣಿಕೆಯ ಟ್ರೇಲರ್‍ ಬಿಡುಡೆಯಾಗಿದೆ. ಸುದೀಪ್‍ ಬಂದು ಟ್ರೇಲರ್‍ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಶಾಂಕ್‍, ‘‘ಕೌಸಲ್ಯ ಸುಪ್ರಜಾ ರಾಮ’ ನಂತರ ಅದೇ ತರಹದ ಇನ್ನೊಂದು ಸಿನಿಮಾ ಮಾಡಬಹುದಿತ್ತು, ಅದನ್ನು ಬಿಟ್ಟು ಹೊಸ ಚಾಲೆಂಜ್‍ ತಗೊಂಡಿದ್ದೀವಿ. ನನಗೆ ಯಾವತ್ತೂ ಒಂದು ಜಾನರ್‍ಗೆ ಅಂಟಿಕೊಳ್ಳುವುದಕ್ಕೆ ಇಷ್ಟವಿಲ್ಲ. ಹಾಗಾಗಿ, ಬೇರೆ ತರಹದ ಪ್ರಯತ್ನ ಮಾಡಿದ್ದೃವೆ. ಇದು ಪ್ಯಾನ್‍ ಇಂಡಿಯಾ ಸಿನಿಮಾ ಆದರೂ, ಮೊದಲು ಕನ್ನಡದಲ್ಲಿ ಬಿಡುಗಡೆ ಮಾಡ್ತೀವಿ, ನಂತರ ಬೇರೆ ಭಾಷೆಗಳಲ್ಲಿ ನೋಡಿಕೊಂಡು ಬಿಡುಗಡೆ ಮಾಡ್ತೀವಿ’ ಎಂದರು.

ಇದನ್ನು ಓದಿ: ‘ವೃಷಭ’ಗೆ ಟೈಟಲ್ ಸಮಸ್ಯೆ: ಅಳಲು ತೋಡಿಕೊಂಡ ಚಿತ್ರತಂಡ ತಂಡ

ಈ ಚಿತ್ರವು ನಾಯಕ ಕೃಷ್ಣ ಅವರ ಇಮೇಜ್‍ ಬದಲಾಯಿಸುತ್ತದೆ ಎಂಬ ನಂಬಿಕೆ ಇದೆ ಎನ್ನುವ ಶಶಾಂಕ್‍, ‘‘ಕೃಷ್ಣ ಆರಡಿ ಇದ್ದಾರೆ. ಅವರೊಬ್ಬ ಆ್ಯಕ್ಷನ್‍ ಹೀರೋ. ಅವರು ಯಾವತ್ತೂ ನನಗೆ ರೊಮ್ಯಾಂಟಿಕ್‍ ಹೀರೋ ಆಗಿ ಕಾಣಿಸಲೇ ಇಲ್ಲ, ‘ಲವ್ ಮಾಕ್ಟೇಲ್‍’ ಹಿಟ್‍ ಆಗಿ ಅವರು ರೊಮ್ಯಾಂಟಿಕ್‍ ಹೀರೋ ಆದರು. ‘ಬ್ರ್ಯಾಟ್‍’ ಚಿತ್ರ ಅವರ ಇಮೇಜ್‍ ಸಂಪೂರ್ಣ ಬದಲಾಯಿಸುತ್ತದೆ ಎಂಬ ನಂಬಿಕೆ ಇದೆ’ ಎಂದರು.

ಈ ‘ಬ್ರ್ಯಾಟ್‍’ ಎಂಬ ಪದದಲ್ಲಿರುವ ಒಂದಂಶ ಕೃಷ್ಣನಲ್ಲಿಲ್ಲ ಎನ್ನುವ ಸುದೀಪ್‍, ‘ಕೃಷ್ಣ ಕ್ರಿಕೆಟ್‍ ಆಡುತ್ತಾರೆ, ಊಟ ಮಾಡುತ್ತಾರೆ, ಮನೆಗೆ ಹೋಗುತ್ತಾರೆ. ಅದೂ ಅವರ ಮನಗೇ ಹೋಗುತ್ತಾರೆ. ಅವರಿಗೆ ಯಾವ ಅಭ್ಯಾಸಗಳೂ ಇಲ್ಲ. ನಾವು ಅವರನ್ನು ಕ್ಲೀನ್‍ ಕೃಷ್ಣಪ್ಪ ಎನ್ನುತ್ತೇವೆ. ಅವರನ್ನು ಇಟ್ಟುಕೊಂಡು ಈ ಟೈಟಲ್‍ ಇಡೋದಕ್ಕೆ ಧೈರ್ಯ ಬೇಕು. ಶಶಾಂಕ್‍ ತಮ್ಮ ಸಾಮರ್ಥ್ಯಕ್ಕೆ ತಕ್ಕ ಹಾಗೆ ಇನ್ನೂ ಸಿನಿಮಾ ಮಾಡಿಲ್ಲ. ತಲೆಯಿಂದ ಎಲ್ಲರನ್ನೂ ತೆಗೆದು ಹಾಕಿ, ನಿಮಗೋಸ್ಕರ ಕಥೆ ಬರೆಯಿರಿ. ಅದು ನಿಮ್ಮ ಜೀವನದ ದೊಡ್ಡ ಹಿಟ್‍ ಆಗುತ್ತದೆ’ ಎಂದು ಹಾರೈಸಿದರು.

ಡಾಲ್ಫಿನ್ ಎಂಟರ್ಟೈನ್ಮೆಂಟ್ ಲಾಂಛನದಲ್ಲಿ ಮಂಜುನಾಥ್ ಕಂದಕೂರ್ ನಿರ್ಮಿಸಿರುವ, ಶಶಾಂಕ್ ನಿರ್ದೇಶನದ ‘ಬ್ರ್ಯಾಟ್‍’ ಚಿತ್ರವು ಅಕ್ಟೊಬರ್ 31ರಂದು ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ. ಕೃಷ್ಣಗೆ ನಾಯಕಿಯಾಗಿ ಮನಿಷಾ ಕುಂದುಕೂರು ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಕೃಷ್ಣ ಮತ್ತು ಮನಿಷಾ ಜೊತೆಗೆ ಡ್ರ್ಯಾಗನ್‍ ಮಂಜು, ಅಚ್ಯುತ್‍ ಕುಮಾರ್‍, ರಮೇಶ್‍ ಇಂದಿರಾ ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ಅರ್ಜುನ್‍ ಜನ್ಯ ಸಂಗೀತ ಮತ್ತು ಅಭಿಲಾಷ್‍ ಕಲ್ಲತ್ತಿ ಛಾಯಾಗ್ರಹಣವಿದೆ.

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಪುಷ್ಪ ವೃಷ್ಟಿ..!

ಪುಷ್ಪ ವೃಷ್ಟಿ..! ಅತಿವೃಷ್ಟಿ, ಅನಾವೃಷ್ಟಿಯ ವರದಿ ಬರೆಯುತಿಹರಂತೆ ಸಚಿವರು... ‘ಒಂಬತ್ತು ಜಿಗಳಲ್ಲಿ ಮೋಡ ಕವಿದ ವಾತಾವರಣ ಕಾರಣ, ಅಲ್ಲಿಗಿಲ್ಲ ಮಂತ್ರಿ…

7 hours ago

ಓದುಗರ ಪತ್ರ: ರೈತ ಮಕ್ಕಳ ವಿದ್ಯಾಭ್ಯಾಸ ಶುಲ್ಕದಲ್ಲಿ

ರಿಯಾಯಿತಿಗೆ ಸರ್ಕಾರ ಕ್ರಮ ಕೈಗೊಳ್ಳಲಿ ರಾಜ್ಯದ ಹಲವು ಭಾಗಗಳಲ್ಲಿ ಕಳೆದ ವರ್ಷಕ್ಕಿಂತ ಈ ಬಾರಿ ನಿರೀಕ್ಷಿಸಿದಷ್ಟು ಮಳೆಯಿಲ್ಲದ ಕಾರಣ ಕೃಷಿ ಕ್ಷೇತ್ರ…

7 hours ago

ಓದುಗರ ಪತ್ರ: ಧಾರ್ಮಿಕ ಮುಖಂಡರು ರೈತರ ಬೆನ್ನಿಗೆ ನಿಲ್ಲಬೇಕು

ರಾಜ್ಯದಲ್ಲಿ ನಗರೀಕರಣದ ವೇಗದಿಂದಾಗಿ ಕೃಷಿ ಭೂಮಿಯ ವಿಸ್ತೀರ್ಣ ಸುಮಾರು ಶೇ. ೧೩ರಷ್ಟು ಕುಸಿದಿದೆ ಎಂದು ವರದಿಗಳು ಹೇಳಿವೆ. ಮೂಲಸೌಕರ್ಯಗಳ ಹೆಸರಿನಲ್ಲಿ…

7 hours ago

ಧ್ರುವೀಕರಣದ ನೆಲೆಗಟ್ಟಿನ ಮೇಲೆ ರಾಜ್ಯ ರಾಜಕಾರಣ

ಆರ್.‌ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ  ಕರ್ನಾಟಕದ ರಾಜಕಾರಣ ಧ್ರುವೀಕರಣದ ನೆಲೆಗಟ್ಟಿಗೆ ಬಂದು ತಲುಪಿದೆ. ಅಂದ ಹಾಗೆ ಧ್ರುವೀಕರಣಕ್ಕೆ ಅಸಮಾ ಧಾನ,ಅತೃಪ್ತಿ,ಭಿನ್ನಾಭಿಪ್ರಾಯಗಳೇ…

7 hours ago

ಪಕ್ಕದಲ್ಲೇ ನದಿಯಿದ್ದರೂ ಚಿಕ್ಕಮಂದಗೆರೆ ಗ್ರಾಮಕ್ಕಿಲ್ಲ ನೀರು!

ಮಹೇಶ್ ಕರೋಟಿ ಹೇಮಾವತಿ ನದಿ ದಡದಲ್ಲೇ ನೀರಿಗಾಗಿ ಹಾಹಾಕಾರ ಕಿಕ್ಕೇರಿ: ಮಂದಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಮಂದಗೆರೆ ಗ್ರಾಮವು ಹೇಮಾವತಿ…

7 hours ago

ಕೊಡಗಿನಲ್ಲಿ1,20,874 ಮಕ್ಕಳಿಗೆ ಮಾತ್ರೆ ವಿತರಣೆ ಗುರಿ

ನವೀನ್ ಡಿಸೋಜ ಇಂದು ರಾಷ್ಟ್ರೀಯ ಜಂತುಹುಳು ನಿವಾರಣಾ ದಿನ ಜಂತುಹುಳು ಬಾಧೆ ತಡೆಗೆ ಆರೋಗ್ಯ ಇಲಾಖೆಯ ಮಹತ್ವದ ಹೆಜ್ಜೆ ಮಡಿಕೇರಿ:…

7 hours ago