ಎಡಿಟೋರಿಯಲ್

ಮಾತೃತ್ವದ ಸೌಲಭ್ಯಗಳಿಂದ ವಂಚಿತ ಮಹಿಳೆಯರು

ಭಾರತದಲ್ಲಿ ಪ್ರತಿಯೊಂದು ರಾಜ್ಯ ಸರ್ಕಾರವೂ ಮಹಿಳೆಯರಿಗೆ ನೇರ ನಗದು ಪಾವತಿ ಮಾಡುವ ಯೋಜನೆಗಳನ್ನು ಜಾರಿಗೊಳಿಸುತ್ತಿದ್ದರೂ, ಮಹಿಳಾ ಸಮುದಾಯಗಳಲ್ಲಿ ದುರ್ಬಲರಾದವರಿಗೆ, ವಿಶೇಷವಾಗಿ ಗರ್ಭಿಣಿ ಮಹಿಳೆಯರಿಗೆ, ಕಾನೂನಾತ್ಮಕವಾಗಿ ತಲುಪಬೇಕಾದ ಮಾತೃತ್ವದ ಪ್ರಯೋಜನಗಳು ತಲುಪುತ್ತಿಲ್ಲ. ದುರ್ಬಲ ವರ್ಗದ ಬಹುಪಾಲು ಮಹಿಳೆಯರು ಶಾಸನಾತ್ಮಕ ಹಕ್ಕುಗಳಿಂದ ವಂಚಿತರಾಗುತ್ತಿದ್ದಾರೆ. ಇನ್ನೂ ದಯನೀಯ ವಿಚಾರ ಎಂದರೆ ಈಗಾಗಲೇ ಗರ್ಭಿಣಿಯರಿಗೆ ಪಾವತಿ ಮಾಡುತ್ತಿರುವ ಅಲ್ಪ ಹಣದ ಪ್ರಮಾಣವೂ ಸತತವಾಗಿ ಕುಸಿಯುತ್ತಿದೆ.

ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (NFSA) ೨೦೦೩ರ ಅನುಸಾರ, ಔಪಚಾರಿಕ ಕ್ಷೇತ್ರದಲ್ಲಿ ಈಗಾಗಲೇ ಸೌಲಭ್ಯಗಳನ್ನು ಪಡೆಯುತ್ತಿರುವ ಮಹಿಳೆಯರನ್ನು ಹೊರತುಪಡಿಸಿ, ಎಲ್ಲ ಗರ್ಭಿಣಿ ಮಹಿಳೆಯರೂ ಪ್ರತಿ ಮಗುವಿಗೆ ೬,೦೦೦ ರೂ. ಗಳ ಮಾತೃತ್ವ ಸೌಲಭ್ಯವನ್ನು ಪಡೆಯಬೇಕಿದೆ. ಇಂದಿನ ಮಾರುಕಟ್ಟೆ ಬೆಲೆಗಳಿಗೆ ಹೋಲಿಸಿದಾಗ, ಇದು ಕನಿಷ್ಠ ೧೨,೦೦೦ ರೂ. ಗಳಾದರೂ ಇರಬೇಕಾಗುತ್ತದೆ. ಸಾರ್ವತ್ರಿಕ ಮಾತೃತ್ವ ಸೌಲಭ್ಯಗಳ ನೀತಿಯನ್ನು ಅನುಷ್ಠಾನಗೊಳಿಸಿದ್ದು, NFSA ಕಾಯ್ದೆಯ ಒಂದು ಚಾರಿತ್ರಿಕ ಹೆಜ್ಜೆ. ಅಲ್ಪ ಮಟ್ಟಿಗೆ ಅನುಕೂಲಕರವಾಗಿರುವ ಕುಟುಂಬಗಳಲ್ಲೂ ಗರ್ಭಿಣಿಯರು ಪೌಷ್ಟಿಕ ಆಹಾರದಿಂದ, ಆರೋಗ್ಯ ಕಾಳಜಿಯಿಂದ ಮತ್ತು ವಿಶ್ರಾಂತಿಯಿಂದ ವಂಚಿತರಾಗಿರುತ್ತಾರೆ. ಹಾಗಾಗಿ ಈ ಮಹಿಳೆಯರಿಗೆ, ಹುಟ್ಟುವ ಮಕ್ಕಳನ್ನು ಮತ್ತು ಸ್ವತಃ ತಮ್ಮನ್ನೂ ಪಾಲನೆ ಮಾಡುವ ನಿಟ್ಟಿನಲ್ಲಿ ಮಾತೃತ್ವ ಸೌಲಭ್ಯಗಳು ನೆರವಾಗುತ್ತವೆ.

ಆದರೆ ಅತ್ಯಲ್ಪ ಎನ್ನಬಹುದಾದ ಈ ಸೌಲಭ್ಯದ ಮೊತ್ತವನ್ನೂ ಅರ್ಹ ಮಹಿಳೆಯರಿಗೆ ತಲುಪಿಸಲಾಗುತ್ತಿಲ್ಲ. ಕೇಂದ್ರ ಸರ್ಕಾರವು ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆಯ (PMMVY) ಮೂಲಕ ಇದನ್ನು ಪೂರೈಸುವುದಾಗಿ ಹೇಳುತ್ತಿದ್ದರೂ, ವಾಸ್ತವವಾಗಿ ಇದು ನಡೆಯುತ್ತಿಲ್ಲ. ಈ ಯೋಜನೆಯ ಸೌಲಭ್ಯಗಳು ಒಂದು ಮಗು ಇರುವ ಕುಟುಂಬಗಳಿಗೆ ಮಾತ್ರವೇ ಅನ್ವಯಿಸುತ್ತದೆ. ಇತ್ತೀಚೆಗೆ ಎರಡನೇ ಮಗು ಹೆಣ್ಣಾದರೆ ಮಾತ್ರ ಅಂತಹ ಕುಟುಂಬಗಳಿಗೂ ಇದನ್ನು ವಿಸ್ತರಿಸಲಾಗಿದೆ. ಈ ನಿರ್ಬಂಧದ ನಿಯಮವೇ NFSA ಕಾಯ್ದೆಯ ಸ್ಪಷ್ಟ ಉಲ್ಲಂಘನೆಯಾಗಿದೆ. ಅಷ್ಟೇ ಅಲ್ಲದೆ ಈ ಯೋಜನೆಯಲ್ಲಿ ಮೊದಲನೇ ಮಗುವಿಗೆ ನೀಡುವ ಮೊತ್ತವನ್ನು ಏಕಾಏಕಿ ೫,೦೦೦ ರೂ. ಗಳಿಗೆ ಇಳಿಸಲಾಗಿದೆ.

ಮಾಹಿತಿ ದತ್ತಾಂಶಗಳ ಅಸ್ಪಷ್ಟತೆ : ಈ ನಿರ್ಬಂಧಿತ, ಕಡಿಮೆ ಮಾಡಲಾಗಿರುವ ಸೌಲಭ್ಯಗಳನ್ನೂ ಅಸಂಖ್ಯಾತ ಅರ್ಹ ಮಹಿಳೆಯರಿಗೆ ನಿರಾಕರಿಸಲಾಗುತ್ತಿದೆ. ಸರ್ಕಾರವು ಈ ವೈಫಲ್ಯವನ್ನು ಮರೆಮಾಚುತ್ತದೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು(PMMVY) ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನೇ ಒದಗಿಸುವುದಿಲ್ಲ. ಮಾಹಿತಿ ಹಕ್ಕು ಕಾಯ್ದೆ (RTI) ಸೆಕ್ಷನ್ ೪ರ ಅನ್ವಯ ಮೂಲ ಮಾಹಿತಿಯನ್ನು ಕ್ರಿಯಾಶೀಲವಾಗಿ ಬಹಿರಂಗಪಡಿಸಬೇಕು ಎಂಬ ನಿಯಮವೇ ಸಚಿವಾಲಯಕ್ಕೆ ತಿಳಿದಿಲ್ಲ ಅನಿಸುತ್ತದೆ. ಈ ಯೋಜನೆಯ ಅತ್ಯಂತ ಸರಳ ದತ್ತಾಂಶಗಳೂ ಸಾರ್ವಜನಿಕ ವಲಯದಲ್ಲಿ ಲಭ್ಯವಾಗುವುದಿಲ್ಲ. ಆದಾಗ್ಯೂ ಸಚಿವಾಲಯವು (PMMVY) ಕುರಿತ ನಮ್ಮ RTI ಅರ್ಜಿಯ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿತ್ತು. ಈ ಮಾಹಿತಿಯ ಆಧಾರದಲ್ಲಿ ನಾವು ಯೋಜನೆಯ ಪರಿಣಾಮಕಾರಿ ಅನುಷ್ಠಾನವನ್ನು ಅಂದಾಜು ಮಾಡಲು ಸಾಧ್ಯವಾಯಿತು. ಕನಿಷ್ಠ (PMMVY) ಯೋಜನೆಯ ಒಂದು ಕಂತನ್ನು ಪಡೆದಿರುವ ಗರ್ಭಿಣಿ ಮಹಿಳೆಯರ ಅನುಪಾತವನ್ನು ನಿಷ್ಕರ್ಷೆ ಮಾಡಲು ಸಾಧ್ಯವಾಯಿತು. ಇದು ವಿಶಾಲ ನೆಲೆಯ ಒಂದು ನಿರ್ವಚನೆ ಎಂದು ಹೇಳಬಹುದು: ಮೊದಲನೆಯ ಕಂತು ಕೇವಲ ೩,೦೦೦ ರೂ. ಗಳು. ಎರಡನೆಯ ಕಂತನ್ನು ಪಡೆಯಲು ಹಲವು ಕಠಿಣ ಷರತ್ತುಗಳು ಅನ್ವಯವಾಗುತ್ತವೆ. ಎರಡನೆಯ ಹೆಣ್ಣು ಮಗುವಿನ ಸಲುವಾಗಿ ಇದನ್ನು ಅಳವಡಿಸಲಾಗಿದೆ. ನಮ್ಮ ಅಂದಾಜು ಬಹಳ ನಿರಾಶಾದಾಯಕವಾಗಿತ್ತು. ಯೋಜನೆಯ ಪರಿಣಾಮಕಾರಿ ಅನುಷ್ಠಾನವು ೨೦೧೯-೨೦ರಲ್ಲಿ ಪರಾಕಾಷ್ಠೆ ತಲುಪಿದ್ದರೂ ಶೇ. ೩೬ರಷ್ಟು ಮಾತ್ರ ದಾಖಲಾಗಿದ್ದು, ಸಮಾಧಾನಕರವಾಗಿ ಕಾಣಲಿಲ್ಲ. ತದನಂತರ ಈ ಪ್ರಮಾಣ ಕಡಿಮೆಯಾಗುತ್ತಲೇ ಬಂದಿರುವುದು ಬಜೆಟ್ ಅಂಕಿಅಂಶಗಳಲ್ಲೂ ಗೋಚರಿಸುತ್ತದೆ.

ಅಧಿಕೃತ ಪ್ರತಿಪಾದನೆ: ಈ ಅಂಕಿ-ಅಂಶಗಳನ್ನು ನಾವು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ರಾಜ್ಯ ಹಾಗೂ ಕೇಂದ್ರ ಮಟ್ಟದ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದೆವು. ೨೦೨೩-೨೪ರಲ್ಲಿ (PMMVY) ಯೋಜನೆಯು ಅಕ್ಷರಶಃ ಸ್ಥಗಿತವಾಗಿತ್ತು ಎನ್ನುವುದನ್ನು ಅವರು ಅಲ್ಲಗಳೆಯುವುದಿಲ್ಲ. ಆದರೆ ಇದಕ್ಕೆ ಪ್ರಮುಖ ಸಾಫ್ಟ್‌ವೇರ್ ತಂತ್ರಜ್ಞಾನದಲ್ಲಿ ಉಂಟಾದ ಬದಲಾವಣೆಗಳು ಮತ್ತು ೨೦೨೩ರಲ್ಲಿ ಅನುಷ್ಠಾನದ ಪ್ರಕ್ರಿಯೆಯನ್ನು ವಿಳಂಬವಾಗಿ ಆರಂಭಿಸಿದ್ದು, ಕಾರಣ ಎಂದು ಹೇಳುತ್ತಾರೆ. ದತ್ತಾಂಶಗಳನ್ನು ಇನ್ನೂ ಹೆಚ್ಚಿನ ಪರಿಶೋಧನೆಗೆ ಒಳಪಡಿಸಿದಾಗ ತಿಳಿದುಬಂದ ಸಂಗತಿ ಎಂದರೆ ಇಲ್ಲಿ ಸಮಸ್ಯೆ ಇರುವುದು ಅರ್ಜಿಗಳ ಸಂಖ್ಯೆಯಲ್ಲಿನ ಇಳಿಕೆ ಅಲ್ಲ, ಬದಲಾಗಿ ವಿತರಣೆಯ ದರದಲ್ಲಿ ಕಡಿಮೆಯಾಗಿರುವುದು. ಒಬ್ಬ ಅಽಕಾರಿಯ ಅಭಿಪ್ರಾಯದಂತೆ, ಪ್ರತಿದಿನವೂ ‘ಸಾಫ್ಟ್‌ವೇರ್’ ಸಮಸ್ಯೆಗಳು ಇರುತ್ತಿದ್ದವು.

ಆದರೆ ಸಮಸ್ಯೆ ಆರಂಭವಾಗಿದ್ದು ೨೦೨೩-೨೪ರಲ್ಲಿ ಅಲ್ಲ. ೨೦೧೭ರಲ್ಲಿ ಜಾರಿಗೆ ಬಂದ PII ಯೋಜನೆಯು ತನ್ನ ಆರಂಭದ ಹಂತದಿಂದಲೂ ಹಲವು ಸಂಕೀರ್ಣ ತೊಡಕುಗಳನ್ನು ಎದುರಿಸುತ್ತಿದೆ. ಇವುಗಳಲ್ಲಿ ಕೆಲವು ಮಾತ್ರ ಆಧಾರ್ ಆಧಾರಿತ ಪಾವತಿ ಮತ್ತು ಡಿಜಿಟಲ್ ಕಿರುಕುಳಕ್ಕೆ ಸಂಬಂಽಸಿವೆ. ಈ ತೊಡಕುಗಳ ಬಗ್ಗೆ ಗಮನ ಸೆಳೆಯುವಂತಹ ಮತ್ತು ಅದರಿಂದಾಗುವ ತನ್ನದೇ ಆದ ಪ್ರತ್ಯೇಕ ಪರಿಣಾಮಗಳ ಬಗ್ಗೆ ಹಲವು ವರದಿಗಳು ದಾಖಲಾಗಿವೆ. ಈ ವಾಸ್ತವಿಕ ವರದಿಗಳಿಗೆ ಪ್ರತಿಕ್ರಿಯಿಸುವ ಬದಲಾಗಿ ಕೇಂದ್ರ ಸರ್ಕಾರವು ೨೦೨೩-೨೪ರಲ್ಲಿ ಇನ್ನೂ ಹಲವು ತೊಡಕುಗಳನ್ನು ಸೃಷ್ಟಿಸಿದೆ. ಇದು ಭಾರತೀಯ ಮಹಿಳೆಯರ ಪಾಲಿಗೆ ಭೀಕರ ಪರಿಣಾಮಗಳನ್ನು ಉಂಟುಮಾಡಿವೆ. ಆದರೆ ಸರ್ಕಾರದ ಅಭಿಪ್ರಾಯದಲ್ಲಿ PMMVY ಯೋಜನೆಗೆ ವೆಚ್ಚದಲ್ಲಿ ಕಡಿತ ಮಾಡಿರುವುದು ಉತ್ತಮ ಉಪಕ್ರಮವಾಗಿದೆ. ಹಾಗಾಗಿಯೇ ತೊಡಕುಗಳನ್ನು ಉಂಟು ಮಾಡುವ ಪ್ರವೃತ್ತಿಯೂ ಸ್ಥಿರತೆಯನ್ನು ಕಂಡುಕೊಂಡಿದೆ.

ತಮಿಳುನಾಡು-ಒಡಿಶಾದ ನಿದರ್ಶನಗಳು: ಏತನ್ಮಧ್ಯೆ ತಮಿಳುನಾಡು ೧೯೮೭ರಿಂದ ಮತ್ತು ಒಡಿಶಾ ೨೦೦೯ರಿಂದ ಮಾತೃತ್ವ ನೆರವು ಯೋಜನೆಗಳ ಅನುಷ್ಠಾನದಲ್ಲಿ ಒಂದು ಸರಳವಾದ ಮತ್ತು ಪರಿಣಾಮಕಾರಿಯಾದ ಮಾದರಿಯನ್ನು ಅಳವಡಿಸಿವೆ. ಈ ರಾಜ್ಯಗಳಲ್ಲಿ ನೀಡಲಾಗುತ್ತಿರುವ ಹಣಕಾಸು ನೆರವು PMMVY ಯೋಜನೆಯ ಮೊತ್ತಕ್ಕಿಂತಲೂ ಹೆಚ್ಚಾಗಿದ್ದು, ಒಡಿಶಾದಲ್ಲಿ ಪ್ರತಿ ಮಗುವಿಗೆ ೧೦,೦೦೦ ರೂ. ಮತ್ತು ತಮಿಳುನಾಡಿನಲ್ಲಿ ೧೮,೦೦೦ ರೂ. ಗಳನ್ನು ನೀಡಲಾಗುತ್ತಿದೆ. ಒಡಿಶಾದಲ್ಲಿ ೨೦೨೪ರ ಲೋಕಸಭಾ ಚುನಾವಣೆಗಳಿಗೆ ಮುನ್ನ ಈ ಮೊತ್ತವನ್ನು ದುಪ್ಪಟ್ಟುಗೊಳಿಸಲಾಯಿತು. ತಮಿಳುನಾಡಿನಲ್ಲಿ ಡಿಎಂಕೆ ಈ ಮೊತ್ತವನ್ನು ೨೪,೦೦೦ ರೂ. ಗಳಿಗೆ ಹೆಚ್ಚಿಸುವುದಾಗಿ ೨೦೨೧ರ ಚುನಾವಣೆಗಳ ಪ್ರಣಾಳಿಕೆಯಲ್ಲಿ ಘೋಷಿಸಿತ್ತು. ಬಹುಶಃ ಈ ಘೋಷಣೆಯನ್ನು ಜಾರಿಗೊಳಿಸಲು ಮುಂಬರುವ ಚುನಾವಣೆಗಳಿಗೆ ಕಾಯುತ್ತಿರಬಹುದು. ಈ ರಾಜ್ಯಗಳಿಗೆ ಸಂಬಂಽಸಿದಂತೆ, ರಾಷ್ಟ್ರೀಯ ಕುಟುಂಬ ಆರೋಗ್ಯ ಯೋಜನೆಯ (NFSC) ಅಡಿಯಲ್ಲಿ ನೀಡುತ್ತಿರುವುದು, ನಿಯಮಗಳಿಗಿಂತಲೂ ಕಡಿಮೆ ಇದ್ದರೂ, PMMVY ಯೋಜನೆಯಡಿ ನೆರವನ್ನು ಹೆಚ್ಚಿಸಲಾಗಿಲ್ಲ.

ಒಡಿಶಾ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಈ ಮೊತ್ತ ಹೆಚ್ಚಾಗಿರುವುದಷ್ಟೇ ಅಲ್ಲದೆ, ಯೋಜನೆಯ ಅನುಷ್ಠಾನವೂ ಉತ್ತಮವಾಗಿದೆ. ಒಡಿಶಾದ ಆರ್ಥಿಕ ಸಮೀಕ್ಷೆಯಲ್ಲಿ ವರದಿ ಮಾಡಿರುವಂತೆ, ೨೦೨೧-೨೨ರಲ್ಲಿ ರಾಜ್ಯದ ಶೇ. ೬೪ ಜನನಗಳನ್ನು ಈ ಯೋಜನೆಯಡಿ ಒಳಗೊಳ್ಳಲಾಗಿತ್ತು. ತಮಿಳುನಾಡಿನಲ್ಲಿ ೨೦೨೩-೨೪ರಲ್ಲಿ ಶೇ. ೮೪ರಷ್ಟು ಜನನಗಳನ್ನು ಒಳಗೊಳ್ಳಲಾಗಿತ್ತು. ಈ ವರ್ಷಗಳಲ್ಲಿ ಅಖಿಲ ಭಾರತದ ಸರಾಸರಿ ಶೇ. ೧೦ಕ್ಕಿಂತಲೂ ಕಡಿಮೆಯಾಗಿತ್ತು. ಈ ವ್ಯತ್ಯಾಸ ಬಹಳ ಗಂಭೀರವಾಗಿ ಪರಿಗಣಿಸಬೇಕಾದ ವಿಷಯ. ಔಪಚಾರಿಕ ಕ್ಷೇತ್ರದಲ್ಲಿ ಭಾರತದ ಮಹಿಳೆಯರು ೨೬ ವಾರಗಳ ವೇತನಸಹಿತ ಮಾತೃತ್ವ ರಜೆ ಸೌಲಭ್ಯವನ್ನು ಪಡೆಯುತ್ತಾರೆ. ಇದು ೨೦೧೭ರಲ್ಲಿ ಮಾಡಿದ ಮಾತೃತ್ವ ನೆರವು ಕಾಯ್ದೆ ೧೯೬೭ರ ತಿದ್ದುಪಡಿಯ ಫಲ. ವಿಶ್ವ ಆರೋಗ್ಯ ಸಂಸ್ಥೆಯ ನಿಯಮ ಈ ನಿಟ್ಟಿನಲ್ಲಿ ೧೪ ವಾರಗಳಾಗಿವೆ. ಅಸಂಘಟಿತ ಕ್ಷೇತ್ರದಲ್ಲಿ, ಒಂದು ವೇಳೆ ಗರ್ಭಿಣಿ ಮಹಿಳೆಯರು PMMVY ಯೋಜನೆಯ ಎಲ್ಲ ಅಡೆತಡೆಗಳನ್ನೂ ದಾಟುವುದರಲ್ಲಿ ಯಶಸ್ವಿಯಾದರೆ ಆಗ ೫,೦೦೦ ರೂ. ಗಳನ್ನು ಪಡೆಯುತ್ತಾರೆ.

PMMVY ಒಂದು ವಿಫಲ ಯೋಜನೆ ಎನ್ನುವುದು ಸ್ಪಷ್ಟವಾಗಿ ಸಾಬೀತಾಗಿದೆ. ಕೇಂದ್ರ ಸರ್ಕಾರವು ಗರ್ಭಿಣಿ ಮಹಿಳೆಯರಿಗೆ ನೆರವಾಗುವುದಕ್ಕಿಂತಲೂ ಹಣ ಉಳಿತಾಯ ಮಾಡುವ ದಿಕ್ಕಿನಲ್ಲಿ ಯೋಚಿಸುತ್ತಿದೆ. ತತ್ಪರಿಣಾಮವಾಗಿ, ಒಂದು ಜನಪ್ರಿಯವೂ, ಉಪಯುಕ್ತವೂ ಆಗಬಹುದಾಗಿದ್ದ ಯೋಜನೆಯನ್ನು ನಿಷ್ಕೃಯಗೊಳಿಸಿದೆ. ಇದು ಘೆಊಖಅ ನಿಯಮಗಳ ಉಲ್ಲಂಘನೆಯೂ ಆಗಿದೆ. ಇಡೀ ಯೋಜನೆಯನ್ನು ಮರುವಿನ್ಯಾಸಗೊಳಿಸಿ, ಕಾಯ್ದೆಯ ನಿಯಮಗಳ ಅನುಸಾರ ಪುನಃ ಸಕ್ರಿಯಗೊಳಿಸಬೇಕಿದೆ. ಯೋಜನೆಯ ಪ್ರಯೋಜನಗಳನ್ನು ಹೆಚ್ಚಿಸುವುದಷ್ಟೇ ಅಲ್ಲದೆ, ಮಾರುಕಟ್ಟೆ ಬೆಲೆಗಳಿಗೆ ಸಮನಾಗಿ ನಿಗದಿಪಡಿಸಬೇಕಾಗುತ್ತದೆ. ಗರ್ಭಿಣಿ ಮಹಿಳೆಯರಿಗೆ ಉತ್ತಮವಾದ ಸಾರ್ವಜನಿಕ ಬೆಂಬಲ ನೀಡುವುದರಿಂದ ಇಡೀ ಸಮಾಜವೇ ಲಾಭ ಪಡೆಯುತ್ತದೆ.

(ಮೂಲ: A leap backward for maternity entitlemnts ೨೭ ಫೆಬ್ರವರಿ ೨೦೨೫ – ಜೇನ್ ಡ್ರೀಜ್- ರೀತಿಕಾ ಖೇರ) ಕನ್ನಡಕ್ಕೆ: ನಾ. ದಿವಾಕರ

ಆಂದೋಲನ ಡೆಸ್ಕ್

Share
Published by
ಆಂದೋಲನ ಡೆಸ್ಕ್

Recent Posts

ಮೈಸೂರು ವಿ.ವಿ 106ನೇ ಘಟಿಕೋತ್ಸವ : 30,966 ಅಭ್ಯರ್ಥಿಗಳಿಗೆ ಪದವಿ

ಮೈಸೂರು : ಮೈಸೂರು ವಿಶ್ವವಿದ್ಯಾನಿಲಯದ 106ನೇ ಘಟಿಕೋತ್ಸವವು ಜ.5ರಂದು ಬೆಳಿಗ್ಗೆ 11:30ಕ್ಕೆ ಕ್ರಾಫರ್ಡ್‌ ಭವನದಲ್ಲಿ ನಡೆಯಲಿದೆ. ಒಟ್ಟು 30,966 ವಿದ್ಯಾರ್ಥಿಗಳಿಗೆ…

2 hours ago

ಬಳ್ಳಾರಿ ಘರ್ಷಣೆ | ಮೃತನ ಕುಟುಂಬಕ್ಕೆ 25 ಲಕ್ಷ ಪರಿಹಾರ ನೀಡಿದ ಜಮೀರ್‌ ; ಮನೆ ಕಟ್ಟಿಸಿ ಕೊಡುವ ಭರವಸೆ

ಬಳ್ಳಾರಿ : ಬಳ್ಳಾರಿಯಲ್ಲಿ ವಾಲ್ಮೀಕಿ ಬ್ಯಾನರ್ ಕಟ್ಟುವ ವಿಚಾರವಾಗಿ ಗುಂಪುಗಳ ನಡುವೆ ನಡೆದ ಮಾರಮಾರಿಯಲ್ಲಿ ವೇಳೆ ಗುಂಡು ತಗುಲಿ ಮೃತಪಟ್ಟಿದ್ದ…

2 hours ago

ಚಿಕ್ಕಲ್ಲೂರು ಸಿದ್ದಪ್ಪಾಜಿ ಜಾತ್ರೆಗೆ ವಿದ್ಯುಕ್ತ ಚಾಲನೆ

ಕೊಳ್ಳೇಗಾಲ : ಸುಪ್ರಸಿದ್ಧ ಚಿಕ್ಕಲ್ಲೂರು ಸಿದ್ದಪ್ಪಾಜಿ ಜಾತ್ರೆಯಲ್ಲಿ ಮೊದಲನೇ ದಿನವಾದ ಶನಿವಾರ ತಡರಾತ್ರಿ ಚಂದ್ರ ಮಂಡಲೋತ್ಸವದ ಮೂಲಕ ವಿದ್ಯುಕ್ತ ಚಾಲನೆ…

2 hours ago

ವಂದೇ ಭಾರತ್‌ ಸ್ಲೀಪರ್‌ ರೈಲು ಶೀಘ್ರ ಚಾಲನೆ

ಹೊಸದಿಲ್ಲಿ : ವೇಗ, ಸೌಲಭ್ಯ, ಆರಾಮಕ್ಕಾಗಿಯೇ ಜನಪ್ರಿಯವಾಗಿರುವ ವಂದೇ ಭಾರತ್ ಇದೀಗ ಸ್ಲೀಪರ್ ಆವೃತ್ತಿ ಮೂಲಕವೂ ಹಳಿಗಿಳಿಯಲು ಸಜ್ಜಾಗಿದೆ. ಪ್ರಯಾಣಿಕರ…

4 hours ago

ಮಹಾತ್ಮಗಾಂಧಿ ನರೇಗಾ ಕಾಯ್ದೆ ಪುನರ್ ಸ್ಥಾಪಿಸಿ: ಸಿ.ಎಂ.ಸಿದ್ದರಾಮಯ್ಯ ಆಗ್ರಹ

ರಾಯಚೂರು : ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ(ಮ-ನರೇಗಾ) ಕಾಯ್ದೆಯನ್ನು ಹೊಸ ಹೆಸರಲ್ಲಿ ಹೊಸ ಕಾಯ್ದೆಯೆಂದು ಘೋಷಿಸಿರುವ…

4 hours ago

ಕ್ಯಾರಕಸ್‌ ಮೇಲೆ ಅಮೆರಿಕಾ ವೈಮಾನಿಕ ದಾಳಿ ; ವೆನೆಜುವೆಲಾ ಅಧ್ಯಕ್ಷ ಮಡುರೊ ಪತ್ನಿ ಸೆರೆ

ಕ್ಯಾರಕಾಸ್ : ವೆನೆಜುವೆಲಾ ಮೇಲಿನ ವೈಮಾನಿಕ ದಾಳಿ ಬಳಿಕ ಅಮೆರಿಕ ಪಡೆಗಳು ಅಧ್ಯಕ್ಷ ನಿಕೋಲಸ್ ಮಡುರೊ ಮತ್ತು ಅವರ ಪತ್ನಿಯನ್ನು…

4 hours ago