Andolana originals

ಹೂವನ್ನೇ ಉಸಿರಾಗಿಸಿಕೊಂಡಿರುವ ಹೂವಿನ ಮಲ್ಲಹಳ್ಳಿ

ಸೇವಂತಿಗೆಯಿಂದಲೇ ಬದುಕು ಕಟ್ಟುಕೊಂಡು ಬೆಳೆಗಾರರು, ಮಾರಾಟಗಾರರು, ಮಾಲೆ ಕಟ್ಟುವವರು

ಶ್ರೀಧರ ಆರ್. ಭಟ್ಟ
ನಂಜನಗೂಡು: ಮಳೆಯಾಶ್ರಿತ ಗ್ರಾಮವಾದ ಕವಲಂದೆ ಹೋಬಳಿಯ ಪುಟ್ಟ ಗ್ರಾಮ ಮಲ್ಲ ಹಳ್ಳಿಯ ಉಸಿರೇ ಹೂವಾಗಿದೆ ಎಂದರೆ ತಪ್ಪಾಗಲಾರದು.

ಈ ಗ್ರಾಮದಲ್ಲಿ ಹೂ ಬೆಳೆಯುವವರು, ಹೂ ಮಾರಾಟಗಾರರು ಹಾಗೂ ಹೂಗಳಿಂದ ಸಂಪಾದನೆಗೆ ದಾರಿ ಕಂಡುಕೊಂಡವರು ತುಂಬಿ ತುಳುಕುತ್ತಾರೆ. ಹೀಗಾಗಿ ಈ ಊರನ್ನು ಮಲ್ಲಹಳ್ಳಿ ಅಲಿಯಾಸ್ ಹೂವಿನ ಮಲ್ಲಹಳ್ಳಿ ಎಂದೇ ಕರೆಯುತ್ತಾರೆ.

ಹೂವಿನ ಕೃಷಿ ಕೆಲವರದ್ದಾದರೆ, ಆ ಹೂವನ್ನು ಗ್ರಾಮದಲ್ಲೇ ಖರೀದಿಸಿ ಮಾರುಕಟ್ಟೆಗೆ ಕೊಂಡೊಯ್ದು ಮಾರಾಟ ಮಾಡಿ ಹಣ ಸಂಪಾದನೆ ಮಾಡುವ ಕಾಯಕ ಕೆಲವರದ್ದು. ಆ ಹೂವನ್ನೂ ಮಾಲೆ ಮಾಡಿ ಸಂಪಾದನೆಗೆ ದಾರಿ ಮಾಡಿಕೊಂಡ ವರು ಅನೇಕರು. ಈ ಮೂರು ವರ್ಗದವರಿಂದಲೇ ನಂಜನಗೂಡು ತಾಲ್ಲೂಕಿನ ಮಲ್ಲಹಳ್ಳಿ ಗ್ರಾಮ ಹೂವಿನಂತೆ ನಳನಳಿಸುತ್ತಿದೆ.

ಸುಮಾರು ೪೦೦ ಮನೆಗಳಿರುವ ಈ ಗ್ರಾಮದಲ್ಲಿ ಎಲ್ಲಿ ನೋಡಿದರೂ ಹೂವಿನ ಕೃಷಿ, ಮಾರಾಟ ಹಾಗೂ ಮಾಲೆ ಕಟ್ಟುವ ಕೈಗಾರಿಕೆಗಳೇ ಆವರಿಸಿ ಕೊಂಡು ಒಟ್ಟಾರೆ ಗ್ರಾಮವೇ ಸೇವಂತಿಗೆಯ ಹೂವಿನ ಘಮಲಿನಿಂದ ಆವರಿಸಿಕೊಂಡಿದೆ.

ಮಲ್ಲಹಳ್ಳಿಯ ಸುತ್ತಲಿನ ಭೂಮಿಯಲ್ಲೆಲ್ಲಾ ಹೂವು ಅರಳುತ್ತಲೇ ತನ್ನ ಸುವಾಸನೆಯ ಕಂಪನ್ನು ಬೀರುತ್ತಿದೆ. ತಮ್ಮ ಭೂಮಿಯಲ್ಲಿ ಸೇವಂತಿಗೆ ಬೆಳೆಯನ್ನು ಬಿತ್ತಿ ಬೆಳೆಯವವರು ಹೂವಿನ ಕೃಷಿಕರಾದರೆ, ಅವರ ಮಕ್ಕಳು, ಮೊಮ್ಮಕ್ಕಳೇ ಇದರ ಮಾರಾಟಗಾರರು. ಈ ಹೂವನ್ನು ಮಾಲೆ ಮಾಡಿ ಮನೆಗೆಲಸದೊಂದಿಗೆ ಮಾಸಿಕ ಹತ್ತಾರು ಸಾವಿರ ರೂ. ಸಂಪಾದನೆಗೆ ದಾರಿ ಕಂಡುಕೊಂಡ ನೂರಾರು ಗೃಹಿಣಿಯರೂ ಈ ಊರಿನಲ್ಲಿದ್ದಾರೆ.

ಹೂವಿನ ಕೃಷಿ ಈ ಗ್ರಾಮಕ್ಕೆ ಹೊಸದಲ್ಲ, ಶತ ಶತಮಾನಗಳಿಂದಲೂ ಈ ಗ್ರಾಮ ಹೂವಿನ ಬೆಳೆಗೆ ಹೆಸರುವಾಸಿಯಾಗಿದ್ದರಿಂದಲೇ ಇದನ್ನು ಹೂವಿನ ಮಲ್ಲಹಳ್ಳಿ ಎಂದು ಕರೆಯುವ ಪರಿಪಾಠ ಬೆಳೆದು ಬಂದಿದೆ.

ಆ ಕಾಲದಲ್ಲಿ ತೆರೆದ ಬಾವಿಯಿಂದ ನೀರು ಎತ್ತಿ ಹೂ ಬೆಳೆಸುತ್ತಿದ್ದರೆ ಈಗ ತೆರೆದ ಬಾವಿಯ ಬದಲು ಕೊಳವೆ ಬಾವಿಗಳು ಪಂಪ್‌ಸೆಟ್, ಹನಿ ನೀರಾವರಿ ಮೂಲಕ ನೀರುಣಿಸಲಾಗುತ್ತದೆ.

ವಾರ್ಷಿಕ ಎರಡರಿಂದ ಮೂರು ಬೆಳೆ ಬೆಳದ ಹೂವನ್ನು ನಂಜನಗೂಡು, ಮೈಸೂರು, ಚಾಮರಾಜನಗರ ಮಾರುಕಟ್ಟೆಗಳಲ್ಲಿ ಮಾರಾಟ ಮಾಡುತ್ತಾರೆ. ವಾರ್ಷಿಕ ಪ್ರತಿ ಎಕರೆಗೆ ೨ರಿಂದ ೩ ಲಕ್ಷ ರೂ. ಆದಾಯ ಕೃಷಿಕನಿಗಾದರೆ ಅದರ ಮಾರಾಟದಿಂದ ಲಕ್ಷಾಂತರ ರೂ. ಸಂಪಾದನೆ ಈ ಗ್ರಾಮದ ಯುವಕರದ್ದಾಗಿದೆ.

ಇನ್ನು ಗ್ರಾಮದ ಸಾಕಷ್ಟು ಮಹಿಳೆಯರಿಗೆ ಈ ಗ್ರಾಮದಲ್ಲಿ ಬೆಳೆದ ಹೂವನ್ನು ಮಾಲೆ ಕಟ್ಟುವುದರಿಂದ ಮಾಸಿಕ ಹತ್ತಾರು ಸಾವಿರ ರೂ. ಆದಾಯವಿದೆ. ಶೇ. ೯೦ರಷ್ಟು ಸೇವಂತಿಗೆ ಹೂ ಬೆಳೆಯುವ ಇಲ್ಲಿ ಸೇವಂತಿಗೆ ಹೂ ದರ ಕೆಜಿಗೆ ೧೦೦ ರೂ. ದಾಟಿದರೆ ನಮ್ಮ ಆದಾಯ ಇಮ್ಮಡಿ ಎನ್ನುತ್ತಾರೆ ಗ್ರಾಮದ ರಂಗಸ್ವಾಮಿ ನಾಯಕ.

ಆಂದೋಲನ ಡೆಸ್ಕ್

Recent Posts

ರಷ್ಯಾ ಮೇಲೆ ಉಕ್ರೇನ್‌ ಭೀಕರ ಡ್ರೋನ್‌ ದಾಳಿ: 4 ಮಂದಿ ಸಾವು

ಮಾಸ್ಕೋ: ಉಕ್ರೇನ್‌ ಶನಿವಾರ ರಾತ್ರೋರಾತ್ರಿ ಮಾಸ್ಕೋ ಸೇರಿದಂತೆ ರಷ್ಯಾದ ಅನೇಕ ಭಾಗಗಳನ್ನು ಗುರಿಯಾಗಿಸಿಕೊಂಡು ಡ್ರೋನ್‌ ದಾಳಿ ನಡೆಸಿದೆ. ಈ ವೈಮಾನಿಕ…

12 hours ago

ಮೈಸೂರಿನಲ್ಲಿ ಜನರೊಂದಿಗೆ ಜನತಾದಳ ಕಾರ್ಯಕ್ರಮ

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನೇ ಸೋಲಿಸಿದ ಕ್ಷೇತ್ರ ಎಂಬ ಖ್ಯಾತಿ ಹೊಂದಿರುವ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಭಾನುವಾರ ನಡೆದ ಜನರೊಂದಿಗೆ ಜನತಾದಳ…

12 hours ago

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ: ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ಘೋಷಣೆ

ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತಗೊಂಡ ಪರಿಣಾಮ ರಾಜ್ಯದ ಅನೇಕ ಕಡೆ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ…

13 hours ago

ಕಳೆದ ಮೂರು ದಿನಗಳಿಂದ ಮಹದೇಶ್ವರ ಬೆಟ್ಟಕ್ಕೆ ಲಕ್ಷಾಂತದ ಮಂದಿ ಭಕ್ತರು ಭೇಟಿ

ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು : ರಾಜ್ಯದ ಪ್ರಸಿದ್ಧ ಧಾರ್ಮಿಕ ಯಾತ್ರಾಸ್ಥಳ ಶ್ರೀ ಕ್ಷೇತ್ರ ಮಲೆ…

13 hours ago

ಕಾಡಿನಲ್ಲಿ ಅಕ್ರಮವಾಗಿ ಚರ್ಚ್‌ ನಿರ್ಮಾಣ: 40ಕ್ಕೂ ಹೆಚ್ಚು ಜನರ ಬಂಧನ

ಕೊಡಗು: ಕಾಡಿನೊಳಗೆ ಅಕ್ರಮವಾಗಿ ನಿರ್ಮಿಸಿಕೊಂಡಿದ್ದ ಚರ್ಚ್‌ ಉದ್ಘಾಟನೆಗೆ ಬಂದಿದ್ದ 40ಕ್ಕೂ ಹೆಚ್ಚು ಜನರನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಕೊಡಗಿನಲ್ಲಿ…

14 hours ago

ಹಾರ್ಮುಜ್‌ ದಾಟಿ ಸುರಕ್ಷಿತವಾಗಿ ಭಾರತಕ್ಕೆ ಬಂತು 20,000 ಟನ್‌ ಎಲ್‌ಪಿಜಿ ಟ್ಯಾಂಕರ್‌

ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ನಿರಂತರ ಉದ್ವಿಗ್ನತೆ ಮತ್ತು ಹೆಚ್ಚುತ್ತಿರುವ ಇಂಧನ ಬೆಲೆಗಳ ನಡುವೆಯೇ ಸುಮಾರು 20,000 ಟನ್ ಎಲ್‍ಪಿಜಿಯನ್ನು ಹೊತ್ತ…

14 hours ago