ಸೇವಂತಿಗೆಯಿಂದಲೇ ಬದುಕು ಕಟ್ಟುಕೊಂಡು ಬೆಳೆಗಾರರು, ಮಾರಾಟಗಾರರು, ಮಾಲೆ ಕಟ್ಟುವವರು
ಶ್ರೀಧರ ಆರ್. ಭಟ್ಟ
ನಂಜನಗೂಡು: ಮಳೆಯಾಶ್ರಿತ ಗ್ರಾಮವಾದ ಕವಲಂದೆ ಹೋಬಳಿಯ ಪುಟ್ಟ ಗ್ರಾಮ ಮಲ್ಲ ಹಳ್ಳಿಯ ಉಸಿರೇ ಹೂವಾಗಿದೆ ಎಂದರೆ ತಪ್ಪಾಗಲಾರದು.
ಈ ಗ್ರಾಮದಲ್ಲಿ ಹೂ ಬೆಳೆಯುವವರು, ಹೂ ಮಾರಾಟಗಾರರು ಹಾಗೂ ಹೂಗಳಿಂದ ಸಂಪಾದನೆಗೆ ದಾರಿ ಕಂಡುಕೊಂಡವರು ತುಂಬಿ ತುಳುಕುತ್ತಾರೆ. ಹೀಗಾಗಿ ಈ ಊರನ್ನು ಮಲ್ಲಹಳ್ಳಿ ಅಲಿಯಾಸ್ ಹೂವಿನ ಮಲ್ಲಹಳ್ಳಿ ಎಂದೇ ಕರೆಯುತ್ತಾರೆ.
ಹೂವಿನ ಕೃಷಿ ಕೆಲವರದ್ದಾದರೆ, ಆ ಹೂವನ್ನು ಗ್ರಾಮದಲ್ಲೇ ಖರೀದಿಸಿ ಮಾರುಕಟ್ಟೆಗೆ ಕೊಂಡೊಯ್ದು ಮಾರಾಟ ಮಾಡಿ ಹಣ ಸಂಪಾದನೆ ಮಾಡುವ ಕಾಯಕ ಕೆಲವರದ್ದು. ಆ ಹೂವನ್ನೂ ಮಾಲೆ ಮಾಡಿ ಸಂಪಾದನೆಗೆ ದಾರಿ ಮಾಡಿಕೊಂಡ ವರು ಅನೇಕರು. ಈ ಮೂರು ವರ್ಗದವರಿಂದಲೇ ನಂಜನಗೂಡು ತಾಲ್ಲೂಕಿನ ಮಲ್ಲಹಳ್ಳಿ ಗ್ರಾಮ ಹೂವಿನಂತೆ ನಳನಳಿಸುತ್ತಿದೆ.
ಸುಮಾರು ೪೦೦ ಮನೆಗಳಿರುವ ಈ ಗ್ರಾಮದಲ್ಲಿ ಎಲ್ಲಿ ನೋಡಿದರೂ ಹೂವಿನ ಕೃಷಿ, ಮಾರಾಟ ಹಾಗೂ ಮಾಲೆ ಕಟ್ಟುವ ಕೈಗಾರಿಕೆಗಳೇ ಆವರಿಸಿ ಕೊಂಡು ಒಟ್ಟಾರೆ ಗ್ರಾಮವೇ ಸೇವಂತಿಗೆಯ ಹೂವಿನ ಘಮಲಿನಿಂದ ಆವರಿಸಿಕೊಂಡಿದೆ.
ಮಲ್ಲಹಳ್ಳಿಯ ಸುತ್ತಲಿನ ಭೂಮಿಯಲ್ಲೆಲ್ಲಾ ಹೂವು ಅರಳುತ್ತಲೇ ತನ್ನ ಸುವಾಸನೆಯ ಕಂಪನ್ನು ಬೀರುತ್ತಿದೆ. ತಮ್ಮ ಭೂಮಿಯಲ್ಲಿ ಸೇವಂತಿಗೆ ಬೆಳೆಯನ್ನು ಬಿತ್ತಿ ಬೆಳೆಯವವರು ಹೂವಿನ ಕೃಷಿಕರಾದರೆ, ಅವರ ಮಕ್ಕಳು, ಮೊಮ್ಮಕ್ಕಳೇ ಇದರ ಮಾರಾಟಗಾರರು. ಈ ಹೂವನ್ನು ಮಾಲೆ ಮಾಡಿ ಮನೆಗೆಲಸದೊಂದಿಗೆ ಮಾಸಿಕ ಹತ್ತಾರು ಸಾವಿರ ರೂ. ಸಂಪಾದನೆಗೆ ದಾರಿ ಕಂಡುಕೊಂಡ ನೂರಾರು ಗೃಹಿಣಿಯರೂ ಈ ಊರಿನಲ್ಲಿದ್ದಾರೆ.
ಹೂವಿನ ಕೃಷಿ ಈ ಗ್ರಾಮಕ್ಕೆ ಹೊಸದಲ್ಲ, ಶತ ಶತಮಾನಗಳಿಂದಲೂ ಈ ಗ್ರಾಮ ಹೂವಿನ ಬೆಳೆಗೆ ಹೆಸರುವಾಸಿಯಾಗಿದ್ದರಿಂದಲೇ ಇದನ್ನು ಹೂವಿನ ಮಲ್ಲಹಳ್ಳಿ ಎಂದು ಕರೆಯುವ ಪರಿಪಾಠ ಬೆಳೆದು ಬಂದಿದೆ.
ಆ ಕಾಲದಲ್ಲಿ ತೆರೆದ ಬಾವಿಯಿಂದ ನೀರು ಎತ್ತಿ ಹೂ ಬೆಳೆಸುತ್ತಿದ್ದರೆ ಈಗ ತೆರೆದ ಬಾವಿಯ ಬದಲು ಕೊಳವೆ ಬಾವಿಗಳು ಪಂಪ್ಸೆಟ್, ಹನಿ ನೀರಾವರಿ ಮೂಲಕ ನೀರುಣಿಸಲಾಗುತ್ತದೆ.
ವಾರ್ಷಿಕ ಎರಡರಿಂದ ಮೂರು ಬೆಳೆ ಬೆಳದ ಹೂವನ್ನು ನಂಜನಗೂಡು, ಮೈಸೂರು, ಚಾಮರಾಜನಗರ ಮಾರುಕಟ್ಟೆಗಳಲ್ಲಿ ಮಾರಾಟ ಮಾಡುತ್ತಾರೆ. ವಾರ್ಷಿಕ ಪ್ರತಿ ಎಕರೆಗೆ ೨ರಿಂದ ೩ ಲಕ್ಷ ರೂ. ಆದಾಯ ಕೃಷಿಕನಿಗಾದರೆ ಅದರ ಮಾರಾಟದಿಂದ ಲಕ್ಷಾಂತರ ರೂ. ಸಂಪಾದನೆ ಈ ಗ್ರಾಮದ ಯುವಕರದ್ದಾಗಿದೆ.
ಇನ್ನು ಗ್ರಾಮದ ಸಾಕಷ್ಟು ಮಹಿಳೆಯರಿಗೆ ಈ ಗ್ರಾಮದಲ್ಲಿ ಬೆಳೆದ ಹೂವನ್ನು ಮಾಲೆ ಕಟ್ಟುವುದರಿಂದ ಮಾಸಿಕ ಹತ್ತಾರು ಸಾವಿರ ರೂ. ಆದಾಯವಿದೆ. ಶೇ. ೯೦ರಷ್ಟು ಸೇವಂತಿಗೆ ಹೂ ಬೆಳೆಯುವ ಇಲ್ಲಿ ಸೇವಂತಿಗೆ ಹೂ ದರ ಕೆಜಿಗೆ ೧೦೦ ರೂ. ದಾಟಿದರೆ ನಮ್ಮ ಆದಾಯ ಇಮ್ಮಡಿ ಎನ್ನುತ್ತಾರೆ ಗ್ರಾಮದ ರಂಗಸ್ವಾಮಿ ನಾಯಕ.
ಮೈಸೂರು : ನಗರದ ದಟ್ಟಗಳ್ಳಿಯಲ್ಲಿರುವ ಮಾರಾ ಬಾರ್ ಅಂಡ್ ರೆಸ್ಟೋರೆಂಟ್ (ಫಾಕ್ಸ್ಡೆನ್ಬಾರ್) ನಲ್ಲಿ ಸಂಭವಿಸಿದ ಅಗ್ನಿದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗೂ…
ನನ್ನ ಆದರ್ಶ ವ್ಯಕ್ತಿ ಗಾಂಧಿ ಮಹಾತ್ಮ ಗಾಂಧೀಜಿ ತಮ್ಮ ಜೀವನದಲ್ಲಿ ಬಹಳ ಕಷ್ಟಪಟ್ಟು ಮೇಲೆ ಬಂದರು. ಭಾರತದ ಸ್ವಾತಂತ್ರ್ಯ ಕ್ಕಾಗಿ…
ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಪ್ರಾಣತ್ಯಾಗ ಮಾಡಿದ ಮಹನೀಯರಲ್ಲಿ ಎದ್ದು ಕಾಣುವ ಹೆಸರು ಕರ್ನಾಟಕದ ಹೆಮ್ಮೆಯ ಪುತ್ರ ಮೈಲಾರ…
೧೮೮೭ನೇ ಇಸವಿಯಲ್ಲಿ ನಾನು ಮೆಟ್ರಿಕ್ ಪರೀಕ್ಷೆಯಲ್ಲಿ ತೇರ್ಗಡೆಯಾದೆನು. ಮೆಟ್ರಿಕ್ ಪರೀಕ್ಷೆಗೆ ಬೊಂಬಾಯಿ ಮತ್ತು ಅಹಮದಾಬಾದ್ ಎರಡೂ ಕೇಂದ್ರಗಳಾಗಿದ್ದವು. ನಾನು ಹತ್ತಿರದ…
ಗುಂಡ್ಲುಪೇಟೆ: ತಾಲ್ಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಕುಂದಕೆರೆ ವಲಯದ ಚಿರಕನಹಳ್ಳಿ ಗ್ರಾಮದಲ್ಲಿ ಪೋತರಾಜು ಎಂಬುವವರ ಜಮೀನಿನಲ್ಲಿ ಅರಣ್ಯ…