ಎಡಿಟೋರಿಯಲ್

ವಾರೆ ನೋಟ : ಕೊಟ್ರನ ಡಿಪ್ಲೊಮಸಿ

ಬಹಳ ದಿನಗಳ ನಂತರ ಕಾಫೀ ಕುಡಿಯೋ ಟೈಮಿಗೆ ಕೊಟ್ರ ಬಂದ. ‘ನಮುಸ್ಕಾರ ಸಾ ಏನ್ ವಿಸೇಸ? ಚನ್ನಾಗಿದ್ದೀರಾ?’ ಅಂದ.

ನಾನೇನ್ ಬಿಡಪ್ಪಾ ಚನ್ನಾಗೇ ಇದ್ದೀನಿ.. ಬೆಲೆ ಏರಿಕೆ ಅಂತಾ ಸ್ವಲ್ಪ ಟೈಟ್ ಆಗಿದೆ. ಇವತ್ತುಂದಿನಾ ನಿಂಗೆ ಕಾಫಿ ಕೊಡಾನಾ ಅಂದ್ರೆ ಹಾಲಿನ ರೇಟೂ ಏರಿ ಬಿಟ್ಟಿದೆ ಷುಗರ್ ಮೊದಲೇ ಏರಿತ್ತು. ಕಾಫಿ ಪುಡೀನೂ ಏರಿದೆ.. ಇಷ್ಟೇ ನೋಡಪಾ ನಮ್ ವಿಶೇಷಾ..ಟ ಅಂದೆ.

ಕೊಟ್ರನ ಮುಖ ಕಪ್ಪಿಟ್ಟಿತು. ಮುಖ ಕಪ್ಪಿಟ್ಟಿದ್ದು ನನ್ನ ಕಷ್ಟ ಕೇಳಿ ಅಲ್ಲಾ.. ಕಾಫೀ ಸಿಗ್ತಾ ಇಲ್ವಲ್ಲಾ ಅಂತಾ.
ಆದರೂ ಸುಧಾರಿಸಿಕೊಂಡ ಕೊಟ್ರ ‘ಏನ್ ಸಾ ನೀವು? ಇಡೀ ದೇಶಾನೆ ಮ್ಯಾಕ್ರೊ ಎಕಾನಮಿ ಬಗ್ಗೆ ಚಿಂತಿಸ್ತಾ ಇದ್ರೆ ನೀವು ಮೈಕ್ರೊ ಎಕಾನಮಿ ಬಗ್ಗೆ ಚಿಂತಿಸ್ತಾ ಇದ್ದೀರಿ… ಸಣ್ಣ ಪುಟ್ಟ ಬೆಲೆ ಏರಿಕೆ ಎಲ್ಲಾ ಬುಡಿ ಸಾ.. ಇನ್‌ಫ್ಲೇಷನ್ ಕಂಟ್ರೋಲ್‌ಗೆ ಬರ್ತಾ ಇದೆ, ಕನ್ಸಪ್ಶನ್ ಜಾಸ್ತಿ ಆಗ್ತ ಇದೆ. ಎಕಾನಮಿ ಫಾಸ್ಟಾಗಿ ರಿಕವರಿ ಆಗ್ತಾ ಇದೆ.. ಸಾ..’ ಅಂದ.

ಇಪ್ಪತ್ವರ್ಷದಿಂದ ಎಕನಾಮಿಕ್ಸ್ ಕಲಿಸ್ತಾ ಇರೋನು ನಾನು.. ಈ ಬಡ್ಡಿ ಮಗಾ ನನ್ ಕ್ಲಾಸಲ್ಲೇ ನಾಲ್ಕು ಸಲ ಡುಮ್ಕಿ ಹೊಡೆದಿದ್ದಾನೆ.. ಈಗ ನಂಗೆನೇ ಮೈಕ್ರೋ, ಮ್ಯಾಕ್ರೊ ಎಕನಾಮಿಕ್ಸ್ ಅಂತೆಲ್ಲಾ ಹೇಳ್ತಾ ಕಿಂಡಲ್ ಮಾಡ್ತಾ ಇದ್ದಾನೆ ಅಂತಾ ಕೋಪ ಬಂತು. ಕಾಫಿ ಕೊಡದೇ ಹೊದ್ರೆ ಇನ್ನು ಏನೇನೋ ಹೇಳಿಬಿಡ್ತಾನೋ ಅಂತಾ ಭಯ ಆಗಿ, ‘ಕೊಟ್ರ ಬಂದಿದ್ದಾನೆ ಕಣೆ…’ ಎಂದು ಜೋರಾಗಿ ಕೂಗಿ ಹೇಳಿದೆ. ಮಡದಿ ತಕ್ಷಣ ಕಾಫಿ ಕಪ್ಪು ಹಿಡಿದು ಹೊರಬಂದಳು.. ‘ಏನೋ ಕೊಟ್ರಾ ಚನ್ನಾಗಿದ್ದೀಯೇನೋ? ಶಾನೆದಿನಾ ಆಯ್ತು ಈ ಕಡೆ ಬರಲೇ ಇಲ್ಲಾ’ ಅಂತಾ ಪ್ರೀತಿಯಿಂದ ಕೇಳಿದಳು.
ಕೊಟ್ರ ಕಾಫೀ ಹೀರುತ್ತಾ ‘ಸಮಾವೇಸ ಅದೂ ಇದೂ ಅಂತಾ ಇತ್ತು ಅದಿಕ್ಕೆ ಬರಕ್ಕಾಗ್ಲಿಲ್ಲ ’ಅಂದ. ಮಡದಿ ನಗುತ್ತಾ ಒಳಹೋದಳು.


ಅಲ್ಲಲೇ ಕೊಟ್ರ.. ಸಿ೨೦ ಸುಮ್ಮಿತ್‌ನಲ್ಲಿ ಏನೋ ಎಡವಟ್ ಮಾಡಿದ್ದೀಯಾ ಅಂತಾ ಕಾಲೇಜಲೆಲ್ಲಾ ಗುಲ್ಲಾಗಿದೆ ಗೊತ್ತಾ’ ಅಂತಾ ಕೇಳಿದೆ.

‘ಸಾ.. ಯಾವೋ ಯಡವಟ್‌ಗಳು ಗುಲ್ಲು ಮಾಡಿರಬೇಕು ಸಾ.. ಅದುಕ್ಕೆಲ್ಲಾ ತಲೆ ಕಡಿಸ್ಕೋಬೇಡಿ’ ಅಂದ.


ಲೇ ಕೊಟ್ರ ಗುಲ್ಲಾಗಿರೋದು ಯಾವ ವಿಷ್ಯ ಅಂತಾ ಗೊತ್ತೇನೋ? ನಿನ್ನ ಗ್ಯಾಂಗಿನ ಹುಡುಗ್ರಜತೆ ಹೊಡೆದಾಡಿದ್ರಲ್ಲಾ.. ಆ ಹುಡುಗ್ರ ಗ್ಯಾಂಗ್ ಲೀಡರ್ ಷಿಂಗ್ಲಿಕಪ್ಪನ ಜತೆ ನೀನು ಹ್ಯಾಂಡ್ ಷೇಕ್ ಮಾಡಿದ್ದಲ್ಲದೇ ಹಗ್ ಮಾಡೋಕು ಹೋಗಿದ್ಯಂತೆ? ಹೌದೆನ್ಲಾ?’ ಅಂತ ನಾನು ಕೇಳಿದೆ.

‘ಸಾ.. ಆ ವಿಷ್ಯಾನಾ ಅಷ್ಟು ದೊಡ್ಡದು ಮಾಡೋದು ಏನಿದೆ ಸಾ? ಕಾಲೇಜ್-೨೦ ಸುಮ್ಮಿತ್‌ನಲ್ಲಿ ನಂಗೆ ಸರಿಯಾಟಿಯಾಗಿ ನಿಲ್ಲಬಲ್ಲ ಪರ್ಸನ್ ಅಂದ್ರೆ ಷಿಂಗ್ಲಿಕಪ್ಪಾ ಒಬ್ಬನೇ ಇದ್ದುದ್ದು ಅದುಕ್ಕೆ ಷೇಕ್ ಹ್ಯಾಂಡ್ ಮಾಡಿದ್ದು.. ನಾನು ಷೇಕ್ ಹ್ಯಾಂಡ್ ಮಾಡದೇ ಇದ್ದಿದ್ರೆ ಮಿಡಿಯಾ ಅಟೆನ್ಷನ್ ನನ್ ಕಡೆ ಬರ್ತಾನೇ ಇರ್ಲಿಲ್ಲ .. ಒಳ್ಳೆ ಫೋಟೋ ಆಪಾರ್ಚುನಿಟಿ ಮಿಸ್ಸಾಗಿ ಬಿಟ್ಟಿರೋದು ಸಾ..’ ಅಂದ.

‘ಏನೋಪಾ.. ನಿನ್ನ ಗ್ಯಾಂಗಿನ ಹುಡುಗ್ರುಗೆ ಹೊಡೆದ ಗ್ಯಾಂಗಿನ ಲೀಡರ್‌ಗೆ ನೀನ್ ಷೇಕ್‌ಹ್ಯಾಂಡ್ ಮಾಡಿದ್ದ ವಿಷಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ಲಾಗಿ ಎಲ್ಲರೂ ಷೇಕ್ ಆಗಿರೋದಂತೂ ನಿಜಾ ಕಣಪ್ಪಾ..’ ಅಂದೆ.

‘ಷೇಕ್ ಆಗಿರೋದು ನಾನು ಹ್ಯಾಂಡ್‌ಷೇಕ್ ಮಾಡಿದ್ದಕ್ಕೆ ಅಲ್ಲಾ ಸಾ.. ನಾನು ಹ್ಯಾಂಡ್ ಷೇಕ್ ಮಾಡಿದ ಫೋಟೋ ವಿಡಿಯೋ ಯಾವ್ ಲೆವೆಲ್ಲಿಗೆ ಹೋಗಿದ್ದಾವೆ.. ಎಷ್ಟು ಪಬ್ಲಿಸಿಟಿ ಸಿಕ್ಕಿದೆ ಅಂದರೆ… ನಮ್ ವಿರೋಧಿಗಳೆಲ್ಲಾ ಷೇಕ್ ಆಗ್ಬುಟ್ಟೌರೆ.. ಸಾ..’ ಅಂದ.

‘ಅಲ್ಲಲೇ ನಿಮ್ಮುಡುಗ್ರ ಮೇಲೆ ಅಟ್ಯಾಕ್ ಮಾಡಿದ ಗ್ಯಾಂಗಿನ ಲೀಡರ್‌ನ ನೀನು ಅಟ್ಯಾಕ್ ಮಾಡೋದು ಬ್ಯಾಡ ಅಟ್ ಲೀಸ್ಟ್ ಡಿಟ್ಯಾಚ್ ಮಾಡಬಹುದಿತ್ತಲ್ವಾ? ನೀನು ಷೇಕ್ ಹ್ಯಾಂಡ್ ಮಾಡಿದ್ರಿಂದ ನಿನ್ ಗ್ಯಾಂಗಿನ ಹುಡುಗ್ರ ಮೊರಾಲಿಟಿ ಲೋ ಆಗಲ್ವಾ? ಅಂದೆ.

‘ಎಂತಾದೂ ಲೋ ಆಗಲ್ಲ ಸಾ… ಇವೆಲ್ಲ ಸುಮ್ಮನೆ ಕೆಲಸ ಇಲ್ಲದ ಜನ ಮಾಡೋ ಕಿತಾಪತಿಗಳು… ಗುಲ್ಲುಗಳು.. ನೋಡಿ ಸಾ ಇವತ್ತುಂದಿನಾ ಎದುರಿಗೆ ಸಿಕ್ಕಾಗ ನಮುಸ್ಕಾರ ಅಂದುಬಿಟ್ರೆ, ಷೇಕ್ ಹ್ಯಾಂಡ್ ಮಾಡಿಬಿಟ್ರೆ, ಒಂದು ವಾರ್ಮ್ ಹಗ್ ಕೊಟ್ರೆ ನಾವು ಕಳೆದುಕೊಳ್ಳೋದು ಏನೂ ಇರೊಲ್ಲ ಸಾ… ಲವ್ ಅಂಡ್ ಲೆಟ್ ಲವ್ ಪಾಲಿಸಿನಾ ಪಾಲಿಸಬೇಕು ಸಾ..’ ಅಂದ.

ಕೊಟ್ರ ಬಡ್ಡಿಮಗಾ ನಾನು ಅಂದುಕೊಂಡಷ್ಟು ದಡ್ಡ ಅಲ್ಲಾ.. ನಾನು ಅಂದುಕೊಂಡಿದ್ದಕ್ಕಿಂತಲೂ ಹೆಚ್ಚು ಬುದ್ದಿವಂತ ಇದ್ದಾನೆ ಅನಿಸ್ತು.. ‘ಅಲ್ಲಲೇ ಕೊಟ್ರಾ ಇಷ್ಟೆಲ್ಲಾ ಒಳ್ಳೆ ಸಂಗತಿಗಳು ನಿಂಗೆ ಹೆಂಗೆ ಗೊತ್ತಾಯ್ತೋ? ಅಂತ ಕೇಳಿದೆ.


ಸಾ ನಾನೀಗ ವಿಶ್ವಗುರುಗಳನ್ನು ಪಾಲೋ ಮಾಡ್ತಾ ಇದ್ದೀನಿ. ಎಲ್ಲಾ ಅವರ ಪ್ರೇರಣೆ, ಪ್ರೇರೇಪಣೆ..! ’ಅಂದ.

‘ಯಾರೋ ಅದು ನಿನ್ನ ವಿಶ್ವಗುರು?’ ಎಂದು ತಿರುಗಿ ನೋಡೋವಷ್ಟರಲ್ಲಿ ಕೊಟ್ರ ಗೇಟು ದಾಟಿ ಹೋಗಿದ್ದ!

 

-‘ಅಷ್ಟಾವಕ್ರಾ’

andolanait

Recent Posts

ಇಶಾ ಫೌಂಡೇಶನ್‌ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂಕೋರ್ಟ್‌

ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್‌ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್‌ವಾಶ್‌ ಮಾಡಲಾಗಿದೆ ಎಂಬ…

1 hour ago

ಮಡಿಕೇರಿ: ಮಗನಿಂದಲೇ ತಂದೆಯ ಹತ್ಯೆ..

ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…

2 hours ago

ಮುಡಾ: ಇಡಿ ದಾಳಿಗೆ ರಾಜಕೀಯ ಕಾರಣವಲ್ಲ; ಅಶೋಕ್

ಜಾರಿ ನಿರ್ದೇಶನಾಲಯದ ದಾಳಿಗೆ ರಾಜಕೀಯ ಕಾರಣವಲ್ಲ, 3-4 ಸಾವಿರ ಕೋಟಿ ರೂ. ಅಕ್ರಮ ನಡೆದಿದೆ ಎಂದು ಹೇಳಿದ್ದೇ ಕಾಂಗ್ರೆಸ್‌ನವರು: ಪ್ರತಿಪಕ್ಷ…

2 hours ago

BJP ಟಿಕೆಟ್‌ ವಂಚನೆ: ಆರೋಪ ತಳ್ಳಿ ಹಾಕಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ

ನವದೆಹಲಿ: ನನಗೆ ಸಹೋದರಿಯೇ ಇಲ್ಲ ಮತ್ತು ಗೋಪಾಲ್ ಜೋಶಿ ಮೇಲಿನ ಪ್ರಕರಣಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಕೇಂದ್ರ ಸಚಿವ…

3 hours ago

ಮಂಡ್ಯ ಟೂ ಇಂಡಿಯಾ: ಬೃಹತ್‌ ಉದ್ಯೋಗ ಮೇಳಕ್ಕೆ ಮೊದಲ ದಿನ ಅಭೂತಪೂರ್ವ ಸ್ಪಂದನೆ

ಮಂಡ್ಯ ಟೂ ಇಂಡಿಯಾ; ಸಕ್ಕರೆ ನಾಡಿನಲ್ಲಿ 2 ದಿನಗಳ ಬೃಹತ್ ಉದ್ಯೋಗ ಮೇಳ 150ಕ್ಕೂ ಹೆಚ್ಚು ಕಂಪನಿಗಳ ಭಾಗಿ, ಸಾವಿರಾರು…

3 hours ago

ಮುಡಾ ಮೇಲೆ ಇಡಿ ದಾಳಿ: ಸಿಬಿಐ ತನಿಖೆ ನಡೆಸುವರೆಗೂ ಹೋರಾಟ ಮುಂದುವರಿಕೆ: ಸ್ನೇಹಮಯಿ ಕೃಷ್ಣ

ಮೈಸೂರು: ಮುಡಾ ಮೇಲಿನ ಇಡಿ ಕಾರ್ಯಾಚರಣೆ ಕೇವಲ ಸಿಎಂ ಸಿದ್ದರಾಮಯ್ಯ ಅವರ ಕುಟುಂಬದವರ ಪ್ರಕರಣವಲ್ಲ. ಸಂಪೂರ್ಣ ಮುಡಾ ಅಕ್ರಮದ ಬಗ್ಗೆ…

3 hours ago