ಎಡಿಟೋರಿಯಲ್

ಎಳವೆಯ ಮೂರು ಪ್ರಸಂಗಗಳು

  ಮ್ಮ ಹಿರೀಕರು ನನ್ನ ಎಳವೆಗೆ ಸಂಬಂಧಿಸಿದ ಕೆಲವು ಘಟನೆಗಳನ್ನು ರೇಜಿಗೆ ಬರುವಷ್ಟು ಸಲ ಹೇಳುತ್ತಿದ್ದರು:

ಮೊದಲನೆಯದು– ನನಗೆ ‘ಅಮ್ಮ’ ಬಂದ ಘಟನೆಕೂಸಿಗೆ ವರ್ಷ ತುಂಬುವ ಮೊದಲೇ ಮೈತುಂಬ ದಡಾರದ ಗುಳ್ಳೆಗಳೆದ್ದು ಒಡೆದುದೇಹ ರಸಿಕೆಯಲ್ಲದ್ದಿದ ಗೊಂಬೆಯಾಯಿತಂತೆಉಡಿಸಿದ ಬಟ್ಟೆ ಕಳೆವಾಗ ಚರ್ಮವೂ ಕಿತ್ತು ಬರುತ್ತಿತ್ತಂತೆಕೂಸನ್ನು ತೆಂಗಿನೆಣ್ಣೆ ಸವರಿದ ಬಾಳೆಯೆಲೆಯ ಮೇಲೆ ಮಲಗಿಸಬೇಕಾಯಿತಂತೆಅದು ರಾತ್ರಿಯಿಡೀ ಅಳುತ್ತ ಬೀದಿಯವರಿಗೆ ರೇಜಿಗೆ ಮಾಡುತ್ತಿದ್ದರಿಂದಅದನ್ನು ಸೋದರಮಾವ ಗದ್ದೆಯಲ್ಲಿದ್ದ ಗುಡಿಸಲಲ್ಲಿ ಇರಿಸಿಕೊಂಡಿದ್ದನಂತೆಬೇವಿನಸೊಪ್ಪಿಂದ ಗಾಳಿ ಹಾಕುತ್ತ ಮನೆಯವರು ಪಾಳಿಯ ಮೇಲೆ ಜಾಗರಣೆ ನಡೆಸುತ್ತಿದ್ದರಂತೆ. ‘ಉಳಿಯುವುದು ಕಷ್ಟ’ ಎಂದುಕೊಂಡಿದ್ದಾಗದೇವರು ಉಗುಳಿ ‘ಬದುಕಿಕೊ’ ಎಂದು ಬಿಟ್ಟನಂತೆಕೂಸೇನೊ ಉಳಿಯಿತುಆದರೆ ನಿತ್ರಾಣಿಯಾಯಿತುಹದಿನೈದು ವರ್ಷ ತುಂಬಿದರೂತುಂಬಿದ ಕೊಡ ಎತ್ತಲುಎತ್ತನ್ನು ಜಗ್ಗಿ ನಿಲ್ಲಿಸಲುಕೊರೆಚೀಲ ರಾಗಿ ಎತ್ತಲು ಆಗುತ್ತಿರಲಿಲ್ಲನಾನು ಹೊಯ್ದಾಡುತ್ತ ನಡೆವುದನ್ನು ಕಂಡವರು ‘ದಸ್ತಣ್ಣಇದು ಒಂಟೆಲುಬಿನ ಕೇಸು ಕಂಡ್ರಿದಿಮ್ಮನೆ ಕೆಲಸಕ್ಕಲ್ಲ’ ಎಂದು ಶರಾ ಬರೆಯುತ್ತಿದ್ದರುಇದರಿಂದ ಅಂಗಡಿಗೆ ಓಡಾಡುವಕುಲುಮೆಯಲ್ಲಿ ತಿದಿ ಜಗ್ಗುವಹಾಲು ಹಿಂಡುವಸೆಗಣಿ ಬಾಚುವಅಂಗಳ ಗುಡಿಸುವಸಂತೆಯಲ್ಲಿ ಕಬ್ಬಿಣದ ಸಾಮಗ್ರಿ ಮಾರುವ ಲಘುಕಾಯಕಗಳು ನನ್ನ ಖಾತೆಗೆ ಬಂದವು.

ಎರಡನೆಯದುಅಮ್ಮನಿಗೆ ಕಾಯಿಲೆಯಾಗಿಎದೆಹಾಲು ಬಿಡಿಸಿ ಪಾರ್ವತಕ್ಕನ ಮನೆಗೆ ಕಳಿಸಿದ ಘಟನೆಈಕೆ ಪಕ್ಕದ ಬೆಟ್ಟತಾವರೆಕೆರೆಯವಳುಸಂತೆಗೆ ಕಪ್ಪು ಬಲೂನುಗಳಂತಹ ಮಡಕೆಗಳನ್ನು ಗಾಡಿ ಮೇಲೆ ಹೇರಿಕೊಂಡು ಹುಷಾರಾಗಿ ತರುತ್ತಿದ್ದವಳುಅಮ್ಮನ ಗೆಳತಿಇಬ್ಬರೂ ಗಾಡಿ ಕಟ್ಟಿಸಿಕೊಂಡು ಸಂತೆಗೆಸಿನಿಮಾಕ್ಕೆ ಹೋಗುತ್ತಿದ್ದರುಪಾರ್ವತಕ್ಕನ ಗಂಡ ದೇವೀರಣ್ಣಅಪ್ಪನ ದೋಸ್ತನಮ್ಮನೆಯ ಆಲೆಮನೆಕಣಸುಗ್ಗಿ ಕೆಲಸಗಳಿಗೆ ದೇವೀರಣ್ಣನ ಮಗ ತಿಪ್ಪೇಶಿ ಬರುತ್ತಿದ್ದನುಅಲ್ಲಿಂದ ತರಕಾರಿಕಾಳುಕಡ್ಡಿ ನಮ್ಮನೆಗೆ ಬರುತ್ತಿದ್ದವುಅಮ್ಮ ನನಗೆ ಎದೆಹಾಲು ಬಿಡಿಸಿದಾಗ ಪಾರ್ವತಕ್ಕ ತನ್ನಲ್ಲಿ ಇರಿಸಿಕೊಂಡಿದ್ದಳುನಾನು ಅವಳಿಗೆ ‘ಪಾಲತಾ’ ಎನ್ನುತ್ತಿದ್ದೆನಂತೆಅಮ್ಮನನ್ನು ನೆನೆದು ಅಳುತ್ತಿದ್ದೆನಂತೆರಾತ್ರಿ ಎದ್ದು ಎರಡಕ್ಕೆ ಹೋಗಲು ‘ಪಾಲತಾ ಪಾಖನಾ…’ ಎಂದೆನಂತೆಭಾಷೆ ತಿಳಿಯದ ಪಾರ್ವತಕ್ಕ ‘ಬೆಲ್ಲ ಬೇಕೆಹಪ್ಪಳ ಸುಟ್ಟುಕೊಡನೇ’ ಎಂದು ಕೇಳುತ್ತಿದ್ದಳಂತೆದೊಡ್ಡವನಾದ ಮೇಲೂ ಆಕೆ ಇದನ್ನು ಎಲ್ಲರೆದುರು ಹೇಳಿ ಗೋಳು ಹಾಕುತ್ತಿದ್ದಳುಆಕೆ ಕೆಂಪಗಿದ್ದಳುಸುಂದರವಾಗಿದ್ದಳುನಕ್ಕಾಗ ಕಣ್ಣಸುತ್ತ ನಿರಿಗೆಗಳಾಗುತ್ತಿದ್ದವುಅವಳ ಸಮಸ್ತ ಚೈತನ್ಯವೇ ನಗುವಲ್ಲಡಗಿತ್ತು.

ಪಾರ್ವತಕ್ಕ ಸಾಯುವ ಮುಂಚೆ ನನ್ನನ್ನು ನೋಡಬೇಕೆಂದು ಯಾರ‍್ಯಾರದೊ ಕೈಯಲ್ಲಿ ಹೇಳಿ ಕಳುಹಿಸಿದಳುಹಂಪಿ ಸೇರಿದ ಬಳಿಕ ದೇಶಾಂತರ ತಿರುಗುತ್ತಿದ್ದ ನಾನುಹೋದೆಸುಟ್ಟಬತ್ತಿಯಂತೆ ಅಂಗಳದಲ್ಲಿ ಮಲಗಿದ್ದಳುಮುಪ್ಪು ಕಾಯಿಲೆ ಜರ್ಜರಿತವಾಗಿಸಿದ್ದವುಹೇನೆಂದು ತಲೆ ಬೋಳಿಸಿದ್ದರಿಂದ ಬೌದ್ಧ ಸನ್ಯಾಸಿನಿಯಂತಿದ್ದಳುಮಲಗಿ ಚರ್ಮ ಸುಲಿದು ಮೈಯಿಂದ ಕಟುವಾಸನೆ ಬರುತ್ತಿತ್ತುಕಣ್ಣಸುತ್ತ ನಿರಿಗೆಯಾಗುವಂತೆ ನಗು ಮುಕ್ಕಳಿಸುತ್ತ ಪ್ರೀತಿ ಸೂಸುತ್ತಿದ್ದ ಪಾಲತಳ ಚಿತ್ರ ಭಗ್ನಗೊಂಡಿತ್ತುಈ ರೂಪಾಂತರ ನಂಬಲು ಕಷ್ಟವಾಯಿತುನನ್ನ ಪಾಲತ ಹೀಗಾದಳೆ ಎಂದು ವಿಸ್ಮಯಪಡುತ್ತಹೊಂಚಿಕೊಂಡು ಸುಳಿದಾಡುತ್ತಿರುವ ಸಾವನ್ನು ಕಾಣುತ್ತವಾಸನೆಯನ್ನು ಕಷ್ಟದಿಂದ ಸಹಿಸುತ್ತಕೈಒಣಗಿ ಚಕ್ಕಳವಾಗಿದ್ದ ಆಕೆಯ ಕೈಹಿಡಿದುಕೊಂಡು ಏನೂ ತೋಚದೆ ಸುಮ್ಮನೆ ಕೂತೆಇದೇ ಕೈಯೇನು ನನಗೆ ಉಣಿಸಿದ್ದುಪಾಲತಾ ಗೆಳತಿಯನ್ನು ಅರ್ಥಾತ್ ಅಮ್ಮನನ್ನು ನೆನೆದು ಅತ್ತಳುನಾನು ಎಳವೆಯಲ್ಲಿ ಅವಳ ಗೋಳು ಹಾಕಿಕೊಂಡದ್ದನ್ನು ಕೊನೆಯ ಸಲವೆಂಬಂತೆ ಹೇಳಿದಳುಅವಳ ಸುಕ್ಕುದುಟಿಗಳಲ್ಲಿ ನಗು ಸುಳಿಯಿತೇಮುಸ್ಸಂಜೆ ಮಸುಕಿನಲ್ಲಿ ಗೊತ್ತಾಗಲಿಲ್ಲಕೈಯಮೇಲೆ ಬೆಚ್ಚನೆಯ ಕಣ್ಣೀರ ಹನಿಗಳು ಬಿದ್ದವುಸಾವಿಗೆ ದುಃಖಿಸಿದಳೊಬೆಳೆದು ದೊಡ್ಡ ಮನುಷ್ಯನಾಗಿರುವುದಕ್ಕೆ ಆನಂದದಿಂದ ಅತ್ತಳೋತಡವಾಗಿ ಬಂದ ನಾನು ಪಾಪಪ್ರeಯಿಂದ ಪರಿತಾಪದಿಂದ ಕಾಲು ಮುಟ್ಟಿ ನಮಸ್ಕರಿಸಿದೆಭಾವನಾತ್ಮಕವಾಗಿ ತಾನು ಒಳಗೊಳ್ಳಲಾಗದ ಈ ನಾಟಕೀಯ ಮಿಲನವನ್ನು ನೋಡುತ್ತ ಬಳಲಿದಂತಿದ್ದ ಬಾನುವನ್ನು ಮತ್ತಷ್ಟು ಬಳಲಿಸಬಾರದು ಎಂದುಕೊನೆಯ ಬಸ್ಸನ್ನು ತಪ್ಪಿಸಿ ಕೊಳ್ಳಬಾರದು ಎಂದುಮರಳಿದೆಮಾರನೆಯ ದಿನ ಪ್ರಾಣ ಹೋಯಿತಂತೆನನಗಾಗೇ ಜೀವ ಹಿಡಿದಿದ್ದಳೇಈಗಲೂ ತಾಯಿ ಪ್ರೀತಿ ಎಂದಾಗ ಸಂಸಾರ ಸಂಭಾಳಿಸುತ್ತ ಸಿಡುಕಿಯಾಗಿದ್ದ ಅಮ್ಮನ ನೆನಪಾಗುವುದಿಲ್ಲನಕ್ಕಾಗ ನಿರಿಗೆಗಟ್ಟುತ್ತಿದ್ದ ಪಾರ್ವತಕ್ಕಳ ಸುಂದರ ಕೆಂಪುಮುಖ ಸುಳಿಯು ತ್ತದೆಬೇಂದ್ರೆ ತಾನು ಐದು ತಾಯಂದಿರ ಮಗನೆಂದು ಹೇಳಿಕೊಳ್ಳುವುದುಂಟುನನ್ನ ಮಟ್ಟಿಗೆ ದಡಾರದಮ್ಮನೂ ಸೇರಿದರೆ ಮೂವರು ತಾಯಂದಿರು.

ಮೂರನೆಯದು– ಬಣವೆಗೆ ಅಗ್ನಿಸ್ಪರ್ಶವಾದ ಘಟನೆಊರಲ್ಲಿ ನಮ್ಮನೆ ಗಲ್ಲಿಯ ಕೊನೆಗಿತ್ತುಗಲ್ಲಿಯ ನಡುವಿದ್ದ ಬೇವಿನಮರಕ್ಕೆ ಸೂಫಿಸಂತ ಅಬ್ದುಲ್ ಖಾದರ್ ಜೀಲಾನಿಯವರ ಪುಣ್ಯತಿಥಿ ಆಚರಿಸುವವರೆಲ್ಲ ಹಸಿರುಬಾವುಟ ಕಟ್ಟುತ್ತಿದ್ದರುಅದರ ಬುಡಕ್ಕಾನಿಸಿ ನಿಲ್ಲಿಸಿದ್ದ ಬಾವುಟಗಳ ಬಟ್ಟೆ ಬಣ್ಣಗೆಟ್ಟು ಹರಿದುಹೋಗಿದ್ದುಬಿದಿರುಗಳು ಮಾತ್ರ ನಿಂತಿರುತ್ತಿದ್ದವುಈ ಮರದಡಿ ದಿನವೆಲ್ಲ ನಾವು ಹಳೇಬಟ್ಟೆ ಸೇರಿಸಿ ಮಾಡಿದ ಮೂಸಂಬಿ ಗಾತ್ರದ ಚೆಂಡಿನಿಂದ ಸಿಕ್ಕವರಿಗೆ ಬೀಸುವುದುಬಟ್ಟೆಯನ್ನು ನುಲಿಮಾಡಿ ಕಾಲ್ಬೆರಳಲ್ಲಿ ಸಿಕ್ಕಿಸಿಕೊಂಡು ಹಿಂದರಮುಖಿ ಚಿಮ್ಮಿಸುವುದುಬಳೆಚೂರನ್ನು ಮಣ್ಣಿನ ದಿಬ್ಬದಲ್ಲಿ ಅಡಗಿಸುವುದುಉಯ್ಯಾಲೆಗೋಲಿಲಗೋರಿಬುಗುರಿಮರಕೋತಿ ಇತ್ಯಾದಿ ಆಡುತ್ತಿದ್ದೆವುಜಗುಲಿಯ ಮೇಲೆ ಕೂತು ಎಲೆ ಅಡಿಕೆ ಮೆಲ್ಲುತ್ತ ಸಖಿಯರೊಡನೆ ಹರಟುತ್ತ ಅಮ್ಮ ನಮ್ಮ ಬಾಲಲೀಲೆ ಗಮನಿಸುತ್ತಿದ್ದಳುಬೀದಿಯಾಟ ಬೇಸರವಾದರೆ ಈಜಲು ಕಟ್ಟೆಹೊಳೆಗೆ ಹೋಗುತ್ತಿದ್ದೆವುಬೇಲಿಸಾಲಿಗೆ ಹೋಗಿ ಹಕ್ಕಿಗಳನ್ನು ಚಾಟರಬಿಲ್ಲಿನಿಂದ ಹೊಡೆಯುತ್ತಿದ್ದೆವುಬಾವಿಕಟ್ಟೆ ಬಳಿ ಮದುವೆ ಆಟವಾಡುತ್ತಿದ್ದೆವುಒಮ್ಮೆ ಹುಡುಗರೆಲ್ಲ ಸೇರಿನೂರ್ ಎಂಬ ಹುಡುಗಿಗೂ ನನಗೂ ಮದುವೆ ಮಾಡಿಸಿದರುಮೊಮ್ಮಕ್ಕಳಾಗಿ ಮುದುಕಿಯಾಗಿರುವ ಈಕೆ ಎಲ್ಲಾದರೂ ಕಂಡಾಗ ‘ರಹಮತಿನೀನು ನನಗೆ ಮದುವೆ ಆಗಿದ್ದೆ ಮರೀಬೇಡ’ ಎಂದು ನವವಧುವಿನಂತೆ ನಾಚುತ್ತ ಹೇಳುವುದುಂಟು.

ನಮ್ಮ ಅಡುಗೆಯಾಟದಿಂದ ಒಂದು ದಿನ ಅನಾಹುತವಾಯಿತುಕಣದಲ್ಲಿ ಒಕ್ಕಲಿಗೆ ಒಟ್ಟಿದ್ದ ಬಣವೆಗಳ ಬುಡದಲ್ಲಿ ಆಟವಾಡುತ್ತಿದ್ದೆವುತೆಂಗಿನಚಿಪ್ಪುಗಳಲ್ಲಿ ಮಣ್ಣುಕಲಸಿ ಅನ್ನ ಮುದ್ದೆಹಸಿರುಸೊಪ್ಪನ್ನು ಅರೆದು ಸಾರುಯಾರೊ ಒಬ್ಬ ಮನೆಯಿಂದ ಬೆಂಕಿ ಪೊಟ್ಟಣವನ್ನು ತಂದಿದ್ದಒಲೆ ಹೊತ್ತಿಸಿದ್ದೆವುಅದು ನಮ್ಮ ದಾದಾನ ಕಿರಿಯ ಮಗಳ ಜಂಪರಿಗೆ ಹತ್ತಿತು.

 

ಅವಳು ರಾಗಿಬಣವೆಗಳತ್ತ ಓಡಲು ಜ್ವಾಲೆ ಅವಕ್ಕೆ ದಾಟಿತುವರ್ಷವಿಡೀ ಕಷ್ಟಪಟ್ಟು ಬೆಳೆದ ಪೈರುಹಾಹಾಕಾರ ಪಡುತ್ತ ಜನ ಬಣವೆಗೆ ನೀರು ಹೊಯ್ಯುತೊಡಗಿದರುಮಗಳ ಬಟ್ಟೆಗೆ ತಗುಲಿದ ಬೆಂಕಿ ಆರಿಸಲು ದಾದಾ ಸಮೀಪಿಸಿದಾಗಆಕೆ ‘ಅಪ್ಪಾ ಹೊಡೆಯಬೇಡಿಇನ್ನೊಮ್ಮೆ ಮಾಡುವುದಿಲ್ಲ’ ಎಂದು ಗೋಗರೆದಳುಸುಟ್ಟಗಾಯದ ಬಾಲ ಸತ್ತುಹೋದಳುಆದರೆ ಅವಳಾಡಿದ ಕೊನೆಯ ಮಾತನ್ನು ಊರು ಬಹಳ ಕಾಲ ನೆನೆದು ದುಃಖಿಸುತ್ತಿತ್ತುನನ್ನ ಚಿಕ್ಕಮ್ಮ ಈಗಲೂ ಕಂಡರೆ, ‘ಅಗೊ ನೋಡುಬಣವೆಗೆ ಬೆಂಕಿಯಿಟ್ಟವನು ಬಂದ’ ಎನ್ನುತ್ತಾಳೆಆಡೊ ಹುಡುಗರ ಗುಂಪಲ್ಲಿ ಯಾರಿಟ್ಟರೊ ಬೆಂಕಿಬಾಲಾಪರಾಧದ ಅಪಕೀರ್ತಿ ನನಗೆ ಸುತ್ತಿಕೊಂಡಿತುಬಾಳ ನೆನಪುಗಳಲ್ಲಿ ಸಂಭ್ರಮಕ್ಕೆ ನೋವಿನೆಳೆಗಳು ಸುತ್ತಿಕೊಂಡಿರುವುದು ಒಂದು ವೈರುಧ್ಯ.

andolanait

Recent Posts

ಬೋರ್‌ವೆಲ್, ಪಂಪ್‌ಸೆಟ್ ಕೇಬಲ್‌ ಕಳ್ಳತನ ಯುವಕರಿಗೆ ಧರ್ಮದೇಟು

ಮಂಡ್ಯ : ಬೋರ್‌ವೆಲ್, ಪಂಪ್‌ಸೆಟ್ ಕೇಬಲ್ ಕಳವು ಮಾಡುತ್ತಿದ್ದ ಅಪ್ರಾಪ್ತ ಬಾಲಕ ಸೇರಿದಂತೆ ಮೂವರನ್ನು ಸಾರ್ವಜನಿಕರೇ ಹಿಡಿದು ಕಂಬಕ್ಕೆ ಕಟ್ಟಿ…

35 seconds ago

ವಿದ್ಯುತ್‌ ಶಾರ್ಟ್‌ ಸರ್ಕ್ಯೂಟ್‌ ; ಸುಟ್ಟು ಹೋದ 6 ಎಕರೆ ಕಬ್ಬು

ಹನೂರು : ಅತಿಯಾದ ಗಾಳಿಯ ರಭಸಕ್ಕೆ ವಿದ್ಯುತ್ ತಂತಿ ಒಂದಕ್ಕೊಂದು ಸ್ಪರ್ಶಿಸಿ ಬೆಂಕಿ ಹೊತ್ತಿಕೊಂಡು ಜಮೀನಿನಲ್ಲಿದ್ದ 6 ಎಕರೆ ಕಬ್ಬು…

2 hours ago

ಆಷಾಢ ಶುಕ್ರವಾರ, ಶನಿವಾರ, ಭಾನುವಾರ ಚಾಮುಂಡಿಬೆಟ್ಟಕ್ಕೆ ಖಾಸಗಿ ವಾಹನಗಳ ಪ್ರವೇಶಕ್ಕೆ ನಿರ್ಬಂಧ

ಮೈಸೂರು: ಆಷಾಢ ಶುಕ್ರವಾರ, ಶನಿವಾರ ಹಾಗೂ ಭಾನುವಾರ ಚಾಮುಂಡಿಬೆಟ್ಟಕ್ಕೆ ಖಾಸಗಿ ವಾಹನಗಳ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ ಎಂದು ಸಚಿವ ಯತೀಂದ್ರ…

5 hours ago

ಕಾರಂಜಿ ಕೆರೆ ಉದ್ಯಾನದಲ್ಲಿ ‘ಪರಿಸರ ಅನುಭವ ವಲಯ’

ಮೈಸೂರು: ಜೀವವೈವಿಧ್ಯ ತಾಣವಾಗಿರುವn ಹಾಗೂ ಪ್ರಕೃತಿಯ ಸೊಬಗಿನ ವಾತಾವರಣದಿಂದ ಕೂಡಿರುವ ಕಾರಂಜಿ ಕೆರೆ ಉದ್ಯಾನದಲ್ಲಿ ‘ಪರಿಸರ ಅನುಭವ ವಲಯ’ ನಿರ್ಮಾಣ…

6 hours ago

ಅಲೆಮಾರಿ ಜನಾಂಗ ನಾಡಿನ ಸಂಸ್ಕೃತಿಯ ಜೀವಂತಿಕೆ

ಟಿ.ಕೆ.ಹರೀಶ್ ಸಮುದಾಯಗಳಿಗೆ ಸೂರು, ಶಿಕ್ಷಣ ಒದಗಿಸುವುದು ಅತ್ಯಗತ್ಯ ಭಾರತೀಯ ಅಲೆಮಾರಿ ಜನಾಂಗಗಳು ಕೇವಲ ಸಂಚಾರಿಗಳಲ್ಲ; ಅವರು ನಮ್ಮ ಶ್ರೀಮಂತ ಸಾಂಸ್ಕೃತಿಕ…

12 hours ago

ಓದುಗರ ಪತ್ರ: ನೆಮ್ಮದಿ ಕೇಂದ್ರಕ್ಕೆ ಹೆಚ್ಚುವರಿ ಸಿಬ್ಬಂದಿ ನಿಯೋಜಿಸಿ

ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲ್ಲೂಕು ಕಚೇರಿ ಆಡಳಿತ ಸೌಧದಲ್ಲಿ ಇರುವ ನೆಮ್ಮದಿ ಕೇಂದ್ರದ ಮೂಲಕ ಜಾತಿ ಪ್ರಮಾಣ ಪತ್ರ, ಆದಾಯ…

12 hours ago