ಎಡಿಟೋರಿಯಲ್

ವಯೋವೃದ್ಧರಿಗೆ ಮರೆಗುಳಿತನವೆಂಬ ಶಾಪ

ಪಿಂಚಣಿಗರ ಸ್ವರ್ಗ ಎಂಬ ಅನ್ವರ್ಥನಾಮಹೊಂದಿರುವ ಮೈಸೂರು ನಗರದಲ್ಲಿ ತೀರಾ ಇತ್ತೀಚೆಗೆ ನಡೆದ ಘಟನೆ ಇದು. ಸುಮಾರು ೭೦ ವರ್ಷ ಮೀರಿದ ವಯೋ ವೃದ್ಧರೊಬ್ಬರು ಬೆಂಗಳೂರಿನಿಂದ ತಡರಾತ್ರಿ ಮೈಸೂರಿಗೆ ವಾಪಸ್ಸಾಗಿದ್ದಾರೆ. ಆದರೆ, ನಗರದ ಪ್ರತಿಷ್ಠಿತ ಬಡಾವಣೆಯಲ್ಲಿರುವ ತಮ್ಮ ಮನೆಯ ವಿಳಾಸ ಹೇಳಲು ನೆನಪಾಗುತ್ತಿಲ್ಲ. ತಡರಾತ್ರಿ ಕಾರಣಕ್ಕೆ ಜನ ಸಂಚಾರ ವಿರಳವಾಗಿದ್ದರಿಂದ ನೆರವಿಗೆ ಬರಲು ದಾರಿಹೋಕರು ಇಲ್ಲ. ಇಂತಹ ಸ್ಥಿತಿಯಲ್ಲಿ ಪರಿತಪಿಸುತ್ತಾ ನಿಂತಿದ್ದಾಗ ಪತ್ರಿಕಾ ಕಚೇರಿಯಲ್ಲಿ ರಾತ್ರಿಪಾಳಿ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದವರೊಬ್ಬರು ಇಷ್ಟು ತಡರಾತ್ರಿ ವೈದ್ಧರೊಬ್ಬರು ಒಬ್ಬಂಟಿಯಾಗಿ ನಿಂತಿರುವುದನ್ನು ಕಂಡು ಹತ್ತಿರ ಹೋಗಿ ಮಾತನಾಡಿಸಿದಾಗ ಅವರ ಮರೆಗುಳಿತನದ ಸಮಸ್ಯೆ ಗೊತ್ತಾಗಿದೆ. ತಮ್ಮ ಬೈಕ್‌ನಲ್ಲಿ ವಯೋವೃದ್ಧರನ್ನು ಕೂರಿಸಿಕೊಂಡು ಅವರು ಹೇಳಿದ ಬಡಾವಣೆಯನ್ನು ನಾಲ್ಕಾರು ಬಾರಿ ಸುತ್ತಿದ್ದರೂ ಅವರ ಮನೆ ಇರುವ ರಸ್ತೆ ಅವರಿಗೆ ನೆನಪಾಗುತ್ತಿಲ್ಲ. ಸುಮಾರು ಅರ್ಧಗಂಟೆ ಸುತ್ತಾಡಿದ ನಂತರ ಹೇಗೋ ಮನೆ ಪತ್ತೆ ಹಚ್ಚಿ, ಬೈಕ್ ನಿಲ್ಲಿಸಿದವರಿಗೆ ಅಚ್ಚರಿ! ಮನೆಯ ಕಾಂಪೌಂಡ್ ಒಳಗೆ ಎರಡು ಐಷಾರಾಮಿ ಕಾರುಗಳು ನಿಂತಿವೆ. ಮನೆಯ ಹಿರಿಯ ಜೀವವೊಂದು ಮನೆಗೆ ವಾಪಸ್ಸಾಗಿಲ್ಲ ಎಂಬ ಯಾವ ಅಳುಕೂ ಇಲ್ಲದೇ ಮನೆಯವರೆಲ್ಲ ನಿದ್ರೆಗೆ ಜಾರಿದ್ದಾರೆ. ಕಾಂಪೌಂಡ್ ಗೇಟು ತೆರೆದು ಒಳ ಹೋಗಿ ನಾಲ್ಕಾರು ಸಲ ಕಾಲಿಂಗ್ ಬೆಲ್ ಅದುಮಿದ ಬಳಿಕ ಬಾಗಿಲು ತೆರೆದು ಇಣುಕಿದ ವ್ಯಕ್ತಿ ಗೊಣಗುತ್ತಲೇ ಆ ವೃದ್ಧರನ್ನು ಒಳಗೆ ಕರೆದು ಕೊಂಡು ದಡಾರ್ ಎಂದು ಬಾಗಿಲು ಹಾಕಿ ಕೊಂಡು, ಲೈಟ್ ಆಫ್ ಮಾಡಿದರೆ ವಿನಾ ಅಷ್ಟು ತಡರಾತ್ರಿಯಲ್ಲಿ ತಮ್ಮ ಕುಟುಂಬದ ಹಿರಿಯ ಜೀವವನ್ನು ಮನೆಗೆ ಸುರಕ್ಷಿತವಾಗಿ ಕರೆತಂದು ಬಿಟ್ಟಿದ್ದಕ್ಕೆ ಕನಿಷ್ಠ ಧನ್ಯವಾದ ಕೂಡ ಹೇಳುವ ಸೌಜನ್ಯ ತೋರಲಿಲ್ಲ.

ಮನುಷ್ಯನಿಗೆ ವಯಸ್ಸಾದಂತೆಲ್ಲ ಆರೋಗ್ಯ ಸಮಸ್ಯೆಗಳು ದೇಹವನ್ನು ಬಾಽಸುತ್ತವೆ. ಮಧುಮೇಹ, ರಕ್ತದೊತ್ತಡ, ಮಂಡಿ ನೋವು ಸೇರಿದಂತೆ ಇಡೀ ದೇಹ ಅನಾರೋಗ್ಯಗಳ ಆಗರ  ಆಗುತ್ತದೆ. ಅದರಲ್ಲಿ ಮರೆಗುಳಿತನವೂ ಒಂದು. ವಯೋವೃದ್ಧರಲ್ಲಿ ಈ ಮರೆವಿನ ಸಮಸ್ಯೆ ಸಾಮಾನ್ಯ. ನೆನಪಿನ ಶಕ್ತಿ ಕುಂದುತ್ತಾ ಬರುವುದನ್ನೇ ಮರೆಗುಳಿತನ (ಅಲ್ಜೈಮರ್) ಎಂದು ಕರೆಯಲಾಗುತ್ತದೆ. ವಯಸ್ಸಾದಂತೆ ಬದುಕಿನ ಕಹಿ ಘಟನೆಗಳನ್ನು ನೆನಪು ಮಾಡಿಕೊಂಡು ಕೊರಗುವ ಬದಲು, ಮರೆಯುವುದು ಸೂಕ್ತ ಅನ್ನಿಸಬಹುದು. ಆದರೆ, ಈ ಮರೆವು ಕಾಯಿಲೆಯಾಗಿ ಪರಿಣಮಿಸಿದರೆ ಶಾಪವೂ ಆಗಲಿದೆ. ಆಗ ಬದುಕಿನ ಕಹಿ ಘಟನೆಗಳಿರಲಿ, ನಿತ್ಯ ಜೀವನದ ಆಗುಹೋಗುಗಳೂ ನೆನಪಿನಲ್ಲಿ ಉಳಿಯದೆ, ನೆನಪಿಗೆ ಬಾರದೇ ಪರಿತಪಿಸಬೇಕಾಗುತ್ತದೆ. ನಾನು ಎಲ್ಲಿದ್ದೇನೆ? ಏನು ಮಾಡುತ್ತಿದ್ದೇನೆ ಎನ್ನುವು ದರ ಪರಿವೇ ಇರುವುದಿಲ್ಲ. ಇಡೀ ಪ್ರಪಂಚದಲ್ಲಿ ಗಂಭೀರ ಕಾಯಿಲೆಯಾಗಿ ಪರಿಣಮಿಸಿರುವ ಈ ಕಾಯಿಲೇಯ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿಯೇ ಒಂದು ದಿನವನ್ನು ಮೀಸಲಿಡಲಾಗಿದ್ದು, ಪ್ರತಿ ವರ್ಷ ಸೆಪ್ಟೆಂಬರ್ ೨೧ರಂದು ವಿಶ್ವ ಅಲ್ಜೈಮರ‍್ಸ್ ದಿನವನ್ನು ಆಚರಿಸಲಾಗುತ್ತಿದೆ.

ಅಲ್ಜೈಮರ್ ಕಾಯಿಲೆಯ ಲಕ್ಷಣಗಳು: ನೆನಪಿನ ಶಕ್ತಿ ಕುಂದುವಿಕೆ, ನಿತ್ಯದ ಕೆಲಸ ಮಾಡುವಾಗ ತೊಡಕುಗಳು, ವರ್ತನೆಯಲ್ಲಿ ಬದಲಾವಣೆ, ಸಂವಹನ ಕೌಶಲದಲ್ಲಿ ತೊಂದರೆಗಳು ಎದುರಾಗುತ್ತವೆ.

ವಿಶ್ವ ಅಲ್ಜೈಮರ‍್ಸ್ ದಿನದ ಇತಿಹಾಸ:  ಅಲ್ಜೈಮರ‍್ಸ್ ದಿನದ ಇತಿಹಾಸ ಶತಮಾನಗಳಷ್ಟು ಹಳೆಯದು. ಜರ್ಮನ್‌ನ ಮನೋವೈದ್ಯ ಅಲೋಯಿಸ್ ಅಲ್ಜೈಮರ್ ಅವರು ಈ ಕಾಯಿಲೆಯನ್ನು ಮೊಟ್ಟ ಮೊದಲ ಬಾರಿಗೆ ಗುರುತಿಸಿದರು. ಐವತ್ತು ವರ್ಷ ವಯಸ್ಸಿನ ಮಹಿಳೆಯೊಬ್ಬರಲ್ಲಿ ಈ ಕಾಯಿಲೆ ಕಾಣಿಸಿಕೊಂಡು ಮೃತಪಟ್ಟಳು. ಆ ಘಟನೆ ಬಳಿಕ ಜನರಿಗೆ ಈ ಕಾಯಿಲೆಯ ಬಗ್ಗೆ ಅರಿವು ಮೂಡಿಸುವ ಕೆಲಸಗಳು ನಡೆದವು. ಆ ನಂತರ ಹಲವು ಪ್ರಕರಣಗಳು ಬೆಳಕಿಗೆ ಬಂದವು. ಮೊಟ್ಟ ಮೊದಲ ಬಾರಿಗೆ ಈ ಕಾಯಿಲೆಯನ್ನು ಪತ್ತೆಹಚ್ಚಿದ ಹಿನ್ನೆಲೆಯಲ್ಲಿ ಈ ಕಾಯಿಲೆಗೆ ಆ ವೈದ್ಯರ ಹೆಸರನ್ನೇ ಇಡಲಾಗಿದೆ. ೧೯೦೬ರಿಂದ ಪ್ರತಿ ವರ್ಷ ಸೆಪ್ಟೆಂಬರ್ ೨೧ರಂದು ವಿಶ್ವ ಅಲ್ಜೈಮರ‍್ಸ್ ದಿನವನ್ನು ಆಚರಿಸುತ್ತಾ ಬರಲಾಗಿದೆ. ವಯಸ್ಸಾದವರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಈ ಅಲ್ಜೈಮರ್ ಲಕ್ಷಣಗಳನ್ನು ಗುರುತಿಸಿ, ಚಿಕಿತ್ಸೆ ಕೊಡಿಸಬೇಕು. ಈ ಕಾಯಿಲೆಯಿಂದ ಬಳಲುತ್ತಿರುವವರನ್ನು ಸಮಾಜ ನೋಡುವ ದೃಷ್ಟಿಕೋನವನ್ನು ಬದಲಾಯಿಸುವ ಉದ್ದೇಶ ದಿಂದ ಈ ದಿನದ ಆಚರಣೆ ಮುಖ್ಯವಾಗಿದೆ.

ಆಂದೋಲನ ಡೆಸ್ಕ್

Share
Published by
ಆಂದೋಲನ ಡೆಸ್ಕ್

Recent Posts

ಹನೂರು| ಬೆಟ್ಟಳ್ಳಿ ಮಾರಮ್ಮ ಜಾತ್ರಾ ಮಹೋತ್ಸವಕ್ಕೆ ಅಧಿಕೃತ ಚಾಲನೆ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು  ಹನೂರು: ಪಟ್ಟಣದ ಗ್ರಾಮ ದೇವತೆ ಶ್ರೀ ಬೆಟ್ಟಳ್ಳಿ ಮಾರಮ್ಮ ಜಾತ್ರಾ ಮಹೋತ್ಸವಕ್ಕೆ…

15 seconds ago

ಎಲ್ಲಾ ಶಾಸಕರಿಗೂ ಮಂತ್ರಿ ಆಗಬೇಕೆಂಬ ಆಸೆ ಇರುತ್ತದೆ: ಡಿಸಿಎಂ ಡಿ.ಕೆ.ಶಿವಕುಮಾರ್‌

ಬೆಂಗಳೂರು: ಸಂಪುಟ ಪುನಾರಚನೆ ಮಾಡಿ ಹೊಸ ಶಾಸಕರಿಗೆ ಅವಕಾಶ ನೀಡಿ ಎಂದು ಕಾಂಗ್ರೆಸ್‌ ಹೈಕಮಾಂಡ್‌ಗೆ ಶಾಸಕರು ಪತ್ರ ಬರೆದ ವಿಚಾರಕ್ಕೆ…

2 hours ago

114 ಸೆಕ್ಷನ್‌ ಜಾರಿಗೊಳಿಸಿ ವನ್ಯಜೀವಿ ಸೆರೆ ಕಾರ್ಯಾಚರಣೆ ನಡೆಸಿ: ಸಚಿವ ಈಶ್ವರ್‌ ಖಂಡ್ರೆ ಸೂಚನೆ

ಬೆಂಗಳೂರು: ಕಾಡಂಚಿನ ಗ್ರಾಮಗಳಲ್ಲಿ ಕಾಡು ಪ್ರಾಣಿಗಳ ಉಪಟಳ ಜಾಸ್ತಿಯಾದರೆ 114 ಸೆಕ್ಷನ್‌ ಜಾರಿಗೊಳಿಸಿ ವನ್ಯಜೀವಿ ಸೆರೆ ಕಾರ್ಯಾಚರಣೆ ನಡೆಸಿ ಎಂದು…

2 hours ago

ಸಿಎಂ ಸಿದ್ದರಾಮಯ್ಯ ಭೇಟಿಯಾದ ತೆಲಂಗಾಣ ಡಿಸಿಎಂ: ಮಗನ ಮದುವೆಗೆ ಆಹ್ವಾನ

ಬೆಂಗಳೂರು: ತೆಲಂಗಾಣ ರಾಜ್ಯದ ಡಿಸಿಎಂ ಭಟ್ಟಿ ವಿಕ್ರಮಾರ್ಕ ಮಲ್ಲು ಅವರಿಂದು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಡಿಸಿಎಂ…

2 hours ago

ಶಿವಮೊಗ್ಗದಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಹತ್ಯೆ ಪ್ರಕರಣ: 15 ಲಕ್ಷ ಪರಿಹಾರ ಘೋಷಿಸಿದ ರಾಜ್ಯ ಸರ್ಕಾರ

ಶಿವಮೊಗ್ಗ: ಇಲ್ಲಿನ ಸೂಳೆಬೈಲಿನಲ್ಲಿ ನಡೆದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಸಂಕೇತ್‌ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಆತನ ಕುಟುಂಬಕ್ಕೆ 15…

2 hours ago

ಹೊಸ ಶಾಸಕರನ್ನು ಮಂತ್ರಿ ಮಾಡಿದ್ರೆ ತಪ್ಪೇನು?: ಮಾಜಿ ಸಚಿವ ಕೆ.ಎನ್.ರಾಜಣ್ಣ

ಬೆಂಗಳೂರು: ಸಂಪುಟ ಪುನಾರಚನೆ ಮಾಡಿ ಹೊಸ ಶಾಸಕರಿಗೆ ಅವಕಾಶ ನೀಡಿ ಎಂದು ಕಾಂಗ್ರೆಸ್‌ ಹೈಕಮಾಂಡ್‌ಗೆ ಶಾಸಕರು ಪತ್ರ ಬರೆದ ವಿಚಾರಕ್ಕೆ…

2 hours ago