ಸಂಪಾದಕೀಯ

ಕಟಕಟೆಯ ಕಥೆಗಳು| ಹಣ ಕೀಳುವ ಸೈಬರ್ ವಂಚಕರಿಂದ ಜಾಗೃತರಾಗಿರೋಣ

  • ಜಿ.ವಿ.ರಾಮಮೂರ್ತಿ, ಮಾಜಿ ಅಧ್ಯಕ್ಷರು, ಮೈಸೂರು ವಕೀಲರ ಸಂಘ

ಸೈಬರ್ ಕ್ರೈಮ್ ಎಂಬ ಶಬ್ದ ಇತ್ತೀಚಿನ ದಿನಗಳಲ್ಲಿ ಬಹಳ ಸದ್ದು ಮಾಡುತ್ತಿದೆ. ಸೈಬರ್ ಕೈಮ್ ಪಿಡುಗಿನಿಂದಾಗಿ ಎಷ್ಟೋ ಮಂದಿ ತಾವು ಜೀವನಪೂರ್ತಿ ಕಷ್ಟಪಟ್ಟು ಸಂಪಾದಿಸಿದ ಹಣ ಕಳೆದುಕೊಳ್ಳುತ್ತಾರೆ. ಕ್ಷಣ ಮಾತ್ರದಲ್ಲಿ ಮೋಸಗಾರರು ಆ ಹಣವನ್ನು ಕಸಿಯುತ್ತಿರುವುದು ಆತಂಕಪಡಬೇಕಾದ ವಿಷಯ.

ಮುಖ್ಯವಾಗಿ ಈ ಸೈಬರ್ ಕ್ರಿಮಿನಲ್‌ ಗಳು ಮನುಷ್ಯನ ಎರಡು ಭಾವನೆಗಳನ್ನು ಉಪಯೋಗಿಸಿಕೊಂಡು ಮೋಸ ಮಾಡುತ್ತಾರೆ. ಅವುಗಳಲ್ಲಿ ಮತ್ತೊಂದು ಅತಿಯಾದ ಆಸೆ. ಕೆಲವು ತಿಂಗಳುಗಳ ಹಿಂದೆ ನನ್ನ ಆತ್ಮೀಯರೊಬ್ಬರು ನನಗೆ ಗಾಬರಿಯಿಂದ ಕರೆ ಮಾಡಿ ‘ನಾನು ದೊಡ್ಡ ಸಮಸ್ಯೆಯೊಂದರಲ್ಲಿ ಸಿಲುಕಿದ್ದೇನೆ. ಸಹಾಯ ಮಾಡಿ ಅಂದರು. ನಾನು ಏನೆಂದು ವಿಚಾರಿಸಿದಾಗ ಅವರು, ‘ಮುಂಬೈನಿಂದ ಪೊಲೀಸರು ಫೋನ್ ಮಾಡಿದ್ದರು. ನನ್ನ ಮೇಲೆ ಯಾವುದೋ ಕ್ರಿಮಿನಲ್ ಕೇಸ್ ದಾಖಲಾಗಿದೆಯಂತೆ, ಆದ್ದರಿಂದ ನನ್ನ ಖಾತೆಯಲ್ಲಿರುವ ಹಣವನ್ನೆಲ್ಲ ಅವರು ಹೇಳುತ್ತಿರುವ ಬ್ಯಾಂಕ್ ಅಕೌಂಟ್‌ಗೆ ಹಾಕಬೇಕೆಂದು ಒಂದು ಬ್ಯಾಂಕ್ ಅಕೌಂಟ್ ನಂಬರ್ ಕಳುಹಿಸಿದ್ದಾರೆ. ಏನು ಮಾಡಬೇಕೆಂದು ತೋಚುತ್ತಿಲ್ಲ’ ಎಂದು ಹೇಳಿದರು.

ನಾನು “ಅದು ಫ್ರಾಡ್ ಕಾಲ್. ಅದಕ್ಕೆ ನೀವು ಯಾವುದೇ ಉತ್ತರ ಕೊಡಬೇಡಿ. ಯಾವುದೇ ಮಾಹಿತಿ ಕೇಳಿದರೂ ಹೇಳಬೇಡಿ’ ಎಂದೆ. ಮತ್ತೆ ಮಧ್ಯಾಹ್ನ ಅವರೇ ನನಗೆ ಕರೆ ಮಾಡಿ ‘ನೀವು ಬೇಗ ಹಣ ಟ್ರಾನ್ಸ್ಫರ್ ಮಾಡದಿದ್ದರೆ ನಿಮ್ಮನ್ನು ಅರೆಸ್ಟ್ ಮಾಡಬೇಕಾಗುತ್ತದೆ’ ಎಂದು ಮುಂಬೈ ಪೊಲೀಸರು ಮತ್ತೆ ಕರೆ ಮಾಡಿದ್ದರು ಎಂದು ವಿಷಯ ತಿಳಿಸಿದರು. ಅದಲ್ಲದೆ ನನ್ನ ಲೊಕೇಶನ್ ಹಾಗೂ ಕೆವೈಸಿ ಡೀಟೇಲ್ಸ್ ಕೂಡ ಕೇಳುತ್ತಿದ್ದಾರೆ ಏನು ಮಾಡುವುದು ಎಂದರು. ನಾನು ಕೂಡಲೇ ಆ ನಂಬರ್ ಬ್ಲಾಕ್ ಮಾಡಿ ಅಂತ ತಿಳಿ ಹೇಳಿದೆ. ಅವರು ಅರೆಮನಸ್ಸಿನಿಂದಲೇ ಅದಕ್ಕೆ ಒಪ್ಪಿಕೊಂಡರು.

ಅದಾದ ನಂತರ ಮತ್ತೆ ಮಾರನೇ ದಿನ ಬೆಳಿಗ್ಗೆ ಗಾಬರಿಗೊಂಡ ಅವರು ನಮ್ಮ ಮನೆಗೆ ಬಂದರು. ನಾನು ಏನೆಂದು ಕೇಳುವ ಮೊದಲೇ ಅವರು ಒಂದೇ ಉಸಿರಿನಲ್ಲಿ ಅವರ ಮೊಬೈಲಿಗೆ ಬೇರೊಬ್ಬ ವ್ಯಕ್ತಿ ಫೋನ್ ಮಾಡಿ ನಾನು ಮುಂಬೈ ಡಿವಿಷನ್‌ನ ಪಬ್ಲಿಕ್ ಪ್ರಾಸಿಕ್ಯೂಟರ್, ನಿಮ್ಮ ಮೇಲೆ ಗಂಭೀರವಾದ ಆರೋಪಗಳಿವೆ, ಹಾಗಾಗಿ ನಿಮ್ಮ ಬ್ಯಾಂಕ್ ಖಾತೆಯಲ್ಲಿ ಇರುವ ಹಣವನ್ನೆಲ್ಲ ನಾವು ಹೇಳಿದ ಅಕೌಂಟಿಗೆ ಹಾಕಿ. ತನಿಖೆ ಪೂರ್ಣಗೊಂಡ ನಂತರ ಬಿಡುಗಡೆ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ ಎಂದರು. ಇದು ವಂಚಕರ ಜಾಲ ಎಂದು ಗೊತ್ತಾಯ್ತು. ಹಾಗಾಗಿ ಆ ನಂಬರಿಗೆ ಯಾವುದೇ ಕಾಲ್ ಆಗಲಿ, ಮೆಸೇಜ್ ಆಗಲಿ ಮಾಡಬಾರದೆಂದು ತಿಳಿಸಿದೆ. ಮಾರನೆಯ ದಿನ ಮತ್ತೆ ಫೋನ್ ಮಾಡಿ, ಅವರು ಕಾಲ್ ಮಾಡಿ ನಿಮ್ಮ ಮನೆಗೆ ಬಂದು ನಿಮ್ಮನ್ನು ಅರೆಸ್ಟ್ ಮಾಡುತ್ತೇವೆ ಎಂದೆಲ್ಲ ಹೆದರಿಸುತ್ತಿದ್ದಾರೆ, ನಿಮ್ಮ ಕುಟುಂಬದವರನ್ನೂ ಅರೆಸ್ಟ್ ಮಾಡ್ತೀವಿ ಎಂದು ಧಮ್ಮಿ ಹಾಕುತ್ತಿದ್ದಾರೆ. ಏನು ಮಾಡುವುದು?’ ಎಂದು ಭಯಭೀತರಾಗಿ ಕೇಳಿದರು. ಅವರಿಗೆ ಸ್ಪಷ್ಟವಾಗಿ ಹೇಳಿದೆ ‘ಇದು ಫೇಕ್ ಕಾಲ್. ನಿಮಗೆ ಹೆದರಿಸಿ ಹಣ ಹೊಡೆಯುವ ಹುನ್ನಾರ. ದಯವಿಟ್ಟು ಯಾವುದೇ ಮಾಹಿತಿಯನ್ನು ಕೊಡ ಬೇಡಿ ಆ ನಂಬರ್‌ಗಳಿಂದ ಫೋನ್ ಬಂದರೆ ಬ್ಲಾಕ್ ಮಾಡಿ ಬಿಡಿ’ ಎಂದೆ ಅಷ್ಟು ಹೇಳಿದರೂ ಅವರಿಗೆ ಇನ್ನು ಸ್ವಲ್ಪ ಅಳುಕು ಇತ್ತು. ನಿಮಗೆ ಏನೂ ಆಗುವುದಿಲ್ಲ. ಹೆದರುವ ಅವಶ್ಯಕತೆ ಇಲ್ಲ ಎಂದು ಹೇಳಿ ಸುಮ್ಮನಾಗಿಸಿದ್ದೆ.

ಇದಾದ ನಂತರ ಈ ಕಡೆಯಿಂದ ಏನೂ ರೆಸ್ಪಾನ್ಸ್ ಸಿಗದಿದ್ದಾಗ ಅವರು ಫೋನ್ ಯಾರಿಗಾದರೂ ಈ ರೀತಿಯ ಕರೆಗಳು ಬಂದಾಗ ಅಥವಾ ಅನುಮಾನಾಸದವಾದ ಮಾಡುವುದನ್ನು ನಿಲ್ಲಿಸಿದರು. ಇದಾದ ಕೆಲವು ದಿನಗಳ ನಂತರ ಆ ನನ್ನ ಸ್ನೇಹಿತರು ಮೆಸೇಜುಗಳು ಬಂದಾಗ ನಿಮ್ಮ ಯಾವುದೇ ಮಾಹಿತಿಯನ್ನೂ ನೀಡದೆ ಕೂಡಲೇ ನನಗೆ ಫೋನ್ ಮಾಡಿ ‘ಪೇಪರ್ ನೋಡಿದ್ರಾ?’ ಅಂತ ಕೇಳಿದರು. ನಾನು ಸೈಬರ್ ಪೊಲೀಸರನ್ನು ಅಥವಾ ವಕೀಲರನ್ನು ಸಂಪರ್ಕ ಮಾಡಿದರೆ ಮುಂದಾಗುವ ಏನೆಂದು ಕೇಳಿದಾಗ, ತಮ್ಮದೇ ರೀತಿಯಲ್ಲಿ ಸೈಬರ್ ವಂಚಕರು ಒಬ್ಬವ್ಯಕ್ತಿಗೆ ಕೇಸ್ ಕೆಟ್ಟ ಪರಿಣಾಮಗಳಿಂದ ತಪ್ಪಿಸಿಕೊಳ್ಳಬಹುದು. ಇಲ್ಲದಿದ್ದರೆ ಬೆವರು ಸುರಿಸಿ ಇರುವುದಾಗಿ ಭಯ ಹುಟ್ಟಿಸಿ ಹಲವಾರು ಲಕ್ಷ ರೂಪಾಯಿಗಳನ್ನು ಕಸಿದು ಮೋಸ ಮಾಡಿರುವ ವಿಷಯ ತಿಳಿಸಿದರು. ಅವರಿಗೆ ಸಹಾಯ ಮಾಡಿದಕ್ಕಾಗಿ ನನಗೆ ಧನ್ಯವಾದ ಹೇಳಿದರು.

ಹಿಂದೊಮ್ಮೆ ನಮ್ಮ ಸ್ನೇಹಿತರೊಬ್ಬರಿಗೆ ಒಂದು ಇ-ಮೇಲ್ ಬಂದು, ಅವರ ಹೆಸರಿಗೆ ಅಪಾರವಾದ ಹಣ ಲಾಟರಿಯಲ್ಲಿ ಬಂದಿದೆ ಎಂದು, ಅದನ್ನು ನಿಮ್ಮ ಅಕೌಂಟಿಗೆ ತರಿಸಿಕೊಳ್ಳಲು ಹಣ ನೀಡಬೇಕೆಂದು ಕೆಲ ಸೈಬರ್ ಕ್ರಿಮಿಗಳು ಲಕ್ಷಾಂತರ ರೂಪಾಯಿ ವಂಚನೆ ಮಾಡಿದ್ದೂ ನಡೆದಿದೆ. ಕೆಲವು ವಂಚಕರು ಫೇಸ್‌ಬುಕ್ ನಕಲಿ ಖಾತೆಗಳನ್ನು ತೆರೆದು ಬ್ಲಾಕ್ ಮೇಲ್ ಮಾಡಿ ಹಣ ಕೀಳುವುದೂ ಈ ನಡುವೆ ಹೆಚ್ಚಾಗಿದೆ. ಇವಷ್ಟೇ ಅಲ್ಲದೆ ಇನ್ನು ಹತ್ತು ಹಲವು ರೀತಿಯ ಸೈಬರ್ ಕೈಂಗಳು ಪ್ರತಿನಿತ್ಯ ನಡೆಯುತ್ತಿರುತ್ತವೆ.

ಈ ರೀತಿ ಸೈಬರ್ ಕೈಂಗಳು ಹೆಚ್ಚಾಗುತ್ತಿರುವ ಕಾರಣ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಯಾರೂ ನಿಮಗೆ ಪುಕ್ಕಟೆಯಾಗಿ ಹಣ ಕೊಡುವುದಿಲ್ಲ. ವಿನಾಕಾರಣ ನಿಮ್ಮ ಮೇಲೆ ಕೇಸುಗಳನ್ನು ಹಾಕಲು ಆಗುವುದಿಲ್ಲ. ಯಾರಿಗಾದರೂ ಈ ರೀತಿಯ ಕರೆಗಳು ಬಂದಾಗ ಅಥವಾ ಅನುಮಾನವಾದ ಮೆಸೇಜುಗಳ ಬಂದಾಗ ನಿಮ್ಮ ಯಾವುದೇ ಮಾಹಿತಿಯನ್ನು ನೀಡದೆ ಕೊಡಲೇ ಸೈಬರ್‌ ಪೊಲೀಸರನ್ನು ಅಥವಾ ವಕೀಲರನ್ನು ಸಂಪರ್ಕ ಮಾಡಿದರೆ ಮುಂದಾಗುವ ಕೆಟ್ಟ ಪರಿಣಾಮಗಳಿಂದ ತಪ್ಪಿಸಿಕೊಳ್ಳಬಹುದು. ಇಲ್ಲದಿದ್ದರೆ ಬೆವರು ಸುರಿಸಿ ಸಂಪಾದಿಸಿದ ನಿಮ್ಮ ಹಣ ವಂಚಕರ ಜೇಬು ಸೇರುವುದು ಖಚಿತ.

ಈ ರೀತಿ ಸೈಬರ್ ಕೈಂಗಳು ಹೆಚ್ಚಾಗುತ್ತಿರುವ ಕಾರಣ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಯಾರೂ ನಿಮಗೆ ಪುಕ್ಕಟೆಯಾಗಿ ಹಣ ಕೊಡುವುದಿಲ್ಲ. ವಿನಾಕಾರಣ ನಿಮ್ಮ ಮೇಲೆ ಕೇಸುಗಳನ್ನು ಹಾಕಲು ಆಗುವುದಿಲ್ಲ. ಯಾರಿಗಾದರೂ ಈ ರೀತಿಯ ಕರೆಗಳು ಬಂದಾಗ ಅಥವಾ ಅನುಮಾನಾಸ್ಪದವಾದ ಮೆಸೇಜುಗಳು ಬಂದಾಗ ನಿಮ್ಮ ಯಾವುದೇ ಮಾಹಿತಿಯನ್ನೂ ನೀಡದೆ ಕೂಡಲೇ ಸೈಬರ್ ಪೊಲೀಸರನ್ನು ಅಥವಾ ವಕೀಲರನ್ನು ಸಂಪರ್ಕ ಮಾಡಿದರೆ ಮುಂದಾಗುವ ಕೆಟ್ಟ ಪರಿಣಾಮಗಳಿಂದ ತಪ್ಪಿಸಿಕೊಳ್ಳಬಹುದು.

ಆಂದೋಲನ ಡೆಸ್ಕ್

Share
Published by
ಆಂದೋಲನ ಡೆಸ್ಕ್

Recent Posts

ಮೈಸೂರು: ಹೊಸ ಮಠದ ಚಿದಾನಂದ ಸ್ವಾಮೀಜಿ ಲಿಂಗೈಕ್ಯ

ಮೈಸೂರು: ಮೈಸೂರಿನ ಶಂಕರ ಮಠದ ರಸ್ತಯಲ್ಲಿರುವ ಹೊಸ ಮಠದ ಚಿದಾನಂದ ಸ್ವಾಮೀಜಿ ಅವರು ಇಂದು ಲಿಂಗೈಕ್ಯರಾಗಿದ್ದಾರೆ. ವಯೋಸಹಜ ಆರೋಗ್ಯ ಸಮಸ್ಯೆಗಳಿಂದ…

3 hours ago

ಓದುಗರ ಪತ್ರ: ಹೋಟೆಲ್‌ಗಳ ಆಹಾರ ಶುದ್ಧತೆ, ಪದಾರ್ಥಗಳ ತಪಾಸಣೆ ನಿಯಮಿತವಾಗಿ ನಡೆಯಲಿ

ಅಧಿಕಾರಿಗಳ ತಪಾಸಣೆ ವೇಳೆ ಬೆಂಗಳೂರಿನ ಕೆಲವು ಪಂಚತಾರಾ ಹೋಟೆಲ್‌ಗಳಲ್ಲಿ, ಕೊಳೆತ ಮಾಂಸ, ಹಳೆಯ ತರಕಾರಿಗಳು ಇರುವುದು ಪತ್ತೆಯಾಗಿರುವುದೇ ಎಲ್ಲೆಲ್ಲೂ ಚರ್ಚಿತ…

9 hours ago

ಓದುಗರ ಪತ್ರ: ವೈದ್ಯಕೀಯ ಸೀಟು ಹೆಚ್ಚಳ: ಪ್ರಶಂಸನೀಯ ನಡೆ

೨೦೨೮ - ೨೯ ರ ಶೈಕ್ಷಣಿಕ ವರ್ಷದ ವೇಳೆಗೆ ದೇಶಾದ್ಯಂತ ಹೆಚ್ಚುವರಿಯಾಗಿ ೫,೦೦೦ ಸ್ನಾತಕೋತ್ತರ ವೈದ್ಯಕೀಯ ಸೀಟುಗಳನ್ನು ಸೇರ್ಪಡೆಗೊಳಿಸಿ ದೇಶದಲ್ಲಿ…

9 hours ago

ಓದುಗರ ಪತ್ರ: ಬಂದ್ ಮಾಡುವುದರಿಂದ ನಮಗೇ ತೊಂದರೆ ಅಲ್ಲವೇ?

ಪ್ರಸ್ತುತ ವರ್ಷ ಮುಂಗಾರು ಕೈಕೊಟ್ಟಿದ್ದು ಎಲ್‌ನಿನೋ ಪರಿಣಾಮ ಎಂದು ವರದಿಗಳು ಹೇಳಿವೆ. ಜೊತೆಗೆ ಹವಾಮಾನ ಇಲಾಖೆ ಅದನ್ನು ಪುಷ್ಟೀಕರಿಸಿದ್ದು, ಈ…

9 hours ago

ತಂಬಾಕು ನಿಯಂತ್ರಣ: ಕೇಂದ್ರ ದ್ವಂದ್ವ ನೀತಿ

ವಸಂತಕುಮಾರ ಮೈಸೂರು ಮಠ, ತಂಬಾಕು ವಿರೋಧಿ ಹೋರಾಟಗಾರ ಗುಣಮಟ್ಟದ ತಂಬಾಕು ಬೆಳೆ ಸಂಬಂಧ ರಾಜಕೀಯ ಹಸ್ತಕ್ಷೇಪ ಸಲ್ಲದು ಯಾವುದೇ ರೀತಿಯ…

9 hours ago

ಮಳೆಗಾಲದಲ್ಲಿ ಶುದ್ಧ ಕುಡಿಯುವ ನೀರು, ಬಿಸಿ ನೀರು ಒದಗಿಸಿ

ನವೀನ್ ಡಿಸೋಜ ಸಾಂಕ್ರಾಮಿಕ ಕಾಯಿಲೆಯಲ್ಲಿ ಹಿನ್ನೆಲೆ ಹೋಟೆಲ್, ರೆಸ್ಟೋರೆಂಟ್‌ಗಳಿಗೆ ಆಹಾರ ಸುರಕ್ಷತೆ ಇಲಾಖೆ ಸೂಚನೆ  ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮಳೆ…

10 hours ago