ಓದುಗರ ಪತ್ರ

ಓದುಗರ ಪತ್ರ | ಗಿಡ, ಮರಗಳಿಗೆ ಮಾರಕವಾಗಿರುವ ಟೈಲ್‌ಗಳು

ಮೈಸೂರು ಮಹಾನಗರ ಪಾಲಿಕೆ ಪಾದಚಾರಿ ಮಾರ್ಗಗಳಿಗೆ ಇಂಟರ್ ಲಾಕಿಂಗ್ ಟೈಲ್ಸ್‌ಗಳನ್ನು ಅಳವಡಿಸುತ್ತಿದ್ದು, ಇದು ಪಾದಚಾರಿಗಳಿಗೆ ಸುರಕ್ಷಿತ ಮತ್ತು ಆರಾಮದಾಯಕವಾದ ನಡಿಗೆಗೆ ಅನುಕೂಲವಾಗುತ್ತದೆ.

ಆದರೆ, ಹಲವು ಕಡೆ ಗಿಡಮರಗಳಿಗೆ ನೀರು ಹಾಕಲೂ ಆಗದಂತೆ ಟೈಲ್ಸ್ ಗಳನ್ನು ಹಾಕುತ್ತಿರುವುದರಿಂದ ಹತ್ತಾರು ವರ್ಷಗಳಿಂದ ಬೆಳೆಸಿರುವ ಮರಗಳು ಒಣಗುತ್ತಿವೆ. ಸುಂದರ ಪಾದಚಾರಿ ಮಾರ್ಗದ ನೆಪದಲ್ಲಿ ಮರಗಳನ್ನು ಉಸಿರುಗಟ್ಟಿಸಲಾಗುತ್ತಿದೆ. ಈಗಾಗಲೇ ರಸ್ತೆಯನ್ನು ಅಗೆದು ಮರಗಳ ಬೇರಿಗೆ ಹಾನಿ ಮಾಡಲಾಗಿದೆ. ಮರಗಳ ಸುತ್ತ ನಾಲ್ಕು ಅಡಿ ಜಾಗವನ್ನೂ ಬಿಡದಂತೆ ಅಗೆಯಲಾಗಿದೆ. ಪಾದಚಾರಿ ಮಾರ್ಗ ನಿರ್ಮಿಸಲು ಮರಗಳನ್ನು ಬೇರು ಸಮೇತ ಕೊರೆಯುವುದು ಸರಿಯಲ್ಲ. ಮರಗಳ ಸುತ್ತ ನಾಲ್ಕು ಅಡಿ ಜಾಗ ಬಿಟ್ಟು ಟೈಲ್ಸ್ ಅಳವಡಿಸಬೇಕು. ಬೆಳೆದ ಮರಗಳ ಬೇರುಗಳಿಗೆ ಹಾನಿಯಾಗದಂತೆ ಎಚ್ಚರಿಕೆ ವಹಿಸಬೇಕು. ಮರಗಳಿಗೆ ಹಾಗೂ ಅದರ ಬೇರುಗಳಿಗೆ ಹಾನಿ ಯಾಗದಂತೆ ಕೆಲಸ ಮಾಡಲು ಗುತ್ತಿಗೆದಾರರಿಗೆ ಸಂಬಂಧಪಟ್ಟವರು ಮೊದಲೇ ಸೂಚಿಸಬೇಕಿದೆ.

-ಗೋವಿತ್ ಕಿರಣ್, ರಾಜೇಂದ್ರ ನಗರ, ಮೈಸೂರು

ಆಂದೋಲನ ಡೆಸ್ಕ್

Recent Posts

ಮನ್‌ಮುಲ್ ಅಧ್ಯಕ್ಷರಾಗಿ ಹರೀಶ್‌ಬಾಬು ಆಯ್ಕೆ ಬಹುತೇಕ ಖಚಿತ

ಬಿ.ಟಿ. ಮೋಹನ್ ಕುಮಾರ್ ಯು.ಸಿ.ಶಿವಕುಮಾರ್ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಇಂದು ಚುನಾವಣೆ  ಮಂಡ್ಯ: ಮಂಡ್ಯ ಜಿಲ್ಲಾ ಹಾಲು ಒಕ್ಕೂಟ (ಮನ್ಮುಲ್)…

3 mins ago

ಅಂದು ಮಿನಿ ವಿಧಾನಸೌಧ, ಇಂದು ಪ್ರಮೋದಾ ದೇವಿ ಒಡೆಯರ ಆಸ್ತಿ?

ಎಸ್.ಎಸ್.ಭಟ್ ನಂಜನಗೂಡು ಜನತೆಯ ಕುತೂಹಲಕ್ಕೆ ಕಾರಣವಾಗಿರುವ ಫಲಕ ನಂಜನಗೂಡು: ೧೯೭೦- ೮೦ರ ದಶಕಗಳಲ್ಲಿ ಮಿನಿ ವಿಧಾನಸೌಧವಿದ್ದ ಜಾಗ ಇಂದು ಪ್ರಮೋದಾದೇವ…

7 mins ago

ಓದುಗರ ಪತ್ರ: ಮೇಕೆ.. ಡಿಕೆ !

ಮೇಕೆ.. ಡಿಕೆ ! ಅಂದು, ಹರಿಯುವ ಕಾವೇರಿ ನದಿಯ ಈ ಕಡೆಯಿಂದ ಆ ಕಡೆಗೆ ಜಿಗಿದು ದಾಟಿ ಬಿಟ್ಟಿತಂತೆ ಮೇಕೆ…

21 hours ago

ಓದುಗರ ಪತ್ರ: ಮಂತ್ರಾಲಯ ಮಠದ ಕಾರ್ಯ ಜನಮೆಚ್ಚುವಂತಹದ್ದು

ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದ ವತಿಯಿಂದ ಸುಮಾರು ೪೦ ಎಕರೆ ಪ್ರದೇಶದಲ್ಲಿ ಜಲಾಶಯ…

21 hours ago

ಓದುಗರ ಪತ್ರ: ಕಾವೇರಿ: ಶಾಶ್ವತ ಪರಿಹಾರ ಅಗತ್ಯ

ಕಳೆದ ವಾರ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ತಮಿಳುನಾಡಿಗೆ ಮುಂದಿನ ೧೫ ದಿನಗಳ ಕಾಲ, ಪ್ರತಿ ದಿನ ೩,೫೦೦ ಕ್ಯೂಸೆಕ್…

21 hours ago

ಕಾಯಕಲ್ಪಕ್ಕೆ ಕಾದಿವೆ ನಿರ್ಲಕ್ಷಿತ ಸರ್ಕಾರಿ ಆಸ್ತಿಗಳು

ವಸಂತಕುಮಾರ್ ಮೈಸೂರು ಮಠ, ಸಾಮಾಜಿಕ ಹೋರಾಟಗಾರ ಮೈಸೂರಿನಲ್ಲಿ ಹಲವೆಡೆ ದುಸ್ಥಿತಿಯಲ್ಲಿರುವ ಹಾಗೂ ಅನೈರ್ಮಲ್ಯ ತಾಣವಾಗಿರುವ ಹಲವು ಸರ್ಕಾರಿ ಕಟ್ಟಡಗಳು, ವಾಚನಾಲಯ…

21 hours ago