ಓದುಗರ ಪತ್ರ
ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ (ಎಸ್ಐಆರ್-೨೬) ಕಾರ್ಯ ಮುಗಿದು ಇದೀಗ ಕರಡು ಪಟ್ಟಿ ಬಿಡುಗಡೆಯಾಗಿದೆ. ಎಸ್ಐಆರ್ ಬಗ್ಗೆ ಹಲವಾರು ಅನುಮಾನ ಇದೆ ಎಂಬ ಆರೋಪದಡಿ ಹಲವರು ಚುನಾವಣಾ ಆಯೋಗದ ಕ್ರಮವನ್ನು ವಿರೋಧಿಸುತ್ತಲೇ ಬಂದಿದ್ದಾರೆ.
ಇಂತಹ ಬೆಳವಣಿಗೆಯ ನಡುವೆಯೇ ಇದೀಗ ಕರಡು ಪಟ್ಟಿಯಲ್ಲಿ ಸಾವಿರಾರು ಹೆಸರುಗಳು ಡಿಲಿಟ್ ಆಗಿರುವ ಮಾಹಿತಿ ತಿಳಿದು ಕೆಲವರು ಬೇಸರ ವ್ಯಕ್ತಪಡಿಸುತ್ತಿರುವ ನಡುವೆ, ಪಟ್ಟಿಯಲ್ಲಿ ಹೆಸರು ಇರುವವರು ಕೂಡ ತಮ್ಮ ಸಂಪೂರ್ಣ ಮಾಹಿತಿ ಅಂದರೆ ಹೆಸರು, ತಂದೆ ಹೆಸರು, ಗಂಡು-ಹೆಣ್ಣುಹಾಗೂ ಜನ್ಮ ದಿನಾಂಕ ಸರಿಯಾಗಿದೆಯೇ ಎಂಬುದನ್ನು ತಿಳಿದುಕೊಳ್ಳುವ ಅವಶ್ಯಕತೆ ಇದೆ. ಏಕೆಂದರೆ ನಾನು ಈ ಬಗ್ಗೆ ನಮ್ಮ ಮನೆಯವರ ಮಾಹಿತಿಯನ್ನು ಕರಡು ಪಟ್ಟಿಯಲ್ಲಿ ಪರಿಶೀಲಿಸಿದಾಗ ನಮ್ಮ ಮನೆಯಲ್ಲಿರುವ ನಾಲ್ವರ ಪೈಕಿ ನನ್ನ ಮಗನ ವಯಸ್ಸು ನಾವು ಮಾಹಿತಿ ಕೊಟ್ಟಿರುವ ಪ್ರಕಾರ ೨೯ ವರ್ಷ ಎಂಬುದಾಗಬೇಕಿತ್ತು. ಆದರೆ ಕರಡು ಪಟ್ಟಿಯಲ್ಲಿ ಅವನ ವಯಸ್ಸು ೪೨ ವರ್ಷ ಎಂದು ನಮೂದಾಗಿದೆ. ಇದು ನಮ್ಮ ಒಂದು ಮನೆಯ ಸಮಸ್ಯೆಯಲ್ಲ, ನಾನು ಕೆಲವು ಬಿಎಲ್ಒಗಳನ್ನುವಿಚಾರಿಸಿದಾಗ ಅವರು ಕೊಟ್ಟ ಮಾಹಿತಿಯಂತೆ ಕೆಲವರಿಗೆ ತಂದೆ ಹೆಸರು ಬದಲಾಗಿದೆ, ಮತ್ತೆ ಕೆಲವರಿಗೆ ಗಂಡು ಎಂಬ ಬದಲು ಹೆಣ್ಣು, ಹೆಣ್ಣು ಎಂಬ ಜಗದಲ್ಲಿ ಗಂಡು ಎಂದು ನಮೂದಾಗಿದೆಯಲ್ಲದೆ, ಮನೆ ನಂಬರ್ ಹಾಗೂ ಜನ್ಮ ದಿನಾಂಕಗಳೂ ಬದಲಾಗಿದೆ ಎಂದು ತಿಳಿಸಿದ್ದಾರೆ. ಇದಕ್ಕೆ ಕಂಪ್ಯೂಟರ್ ಆಪರೇಟರ್ಗಳೇ ಕಾರಣ ಎಂಬ ಮಾಹಿತಿಯೂ ಇದೆ. ಇದು ನಿಜವೇ ಆದರೆ ಇಂತಹ ತಪ್ಪು ಮಾಡಿರುವವರ ವಿರುದ್ಧ ಸಂಬಂಧಪಟ್ಟವರು ಸೂಕ್ತ ಕ್ರಮ ಕೈಗೊಳ್ಳಬೇಕು.
ಹಾಗೆಯೇ ತಿದ್ದುಪಡಿಗೆ ಹೆಚ್ಚಿನ ಅವಕಾಶ ನೀಡಿ, ಮತ್ತೆ ಇಂತಹ ಪ್ರಮಾದ ಆಗದಂತೆ ಕ್ರಮ ವಹಿಸಬೇಕಾಗಿದೆ.
-ಎಂ.ಮಹೇಶ್ ನಿಲಸೋಗೆ, ಮೈಸೂರು
ರಾಜ್ಯ ವಿಧಾನ ಮಂಡಲದ ಮುಂಗಾರು ಅಧಿವೇಶನ ವಿರೋಧ ಪಕ್ಷಗಳ ಸಕ್ರೀಯ ಭಾಗವಹಿಸುವಿಕೆ ಇಲ್ಲದೇ ನೀರಸವಾಗಿ ಕೊನೆಗೊಂಡಿದ್ದು ಪ್ರಜಾಪ್ರಭುತ್ವದ ದುರ್ದೈವದ ಸಂಗತಿಯಾಗಿದೆ.…
15 ಸಾವಿರ ಶಿಕ್ಷಕರ ನೇಮಕಾತಿಯಲ್ಲಿ ಹಿಂದಿ ಶಿಕ್ಷಕರನ್ನು ಪಟ್ಟಿಯಿಂದ ಹೊರಗಿಟ್ಟಿರುವುದು ಖಂಡನೀಯ. ಇದು ಸಂವಿಧಾನ ಬಾಹಿರ ನಡೆ. ಇದು ಹಿಂದಿ…
ಮಲ್ಟಿಪ್ಲೆಕ್ಸ್ಗಳಲ್ಲಿ ಕನ್ನಡದ ಚಲನಚಿತ್ರಗಳು ಪ್ರದರ್ಶಿತವಾಗುತ್ತವೆ. ಗ್ರಾಹಕರಿಗೆ ನೀಡುವ ಟಿಕೆಟಿನಲ್ಲಿ ಸಿನಿಮಾದ ಹೆಸರೂ ಅಚ್ಚಾಗಿರುತ್ತದೆ.ಆದರೆ... ಕನ್ನಡ ಚಿತ್ರಕ್ಕೆ ಖರೀದಿಸುವ ಟಿಕೆಟ್ನಲ್ಲಿ ಚಿತ್ರದ…
ಕನ್ನಡ ಚಿತ್ರವೊಂದು ದೇಶ-ವಿದೇಶಗಳಲ್ಲಿ ಜೈತ್ರಯಾತ್ರೆ ಮಾಡುತ್ತಿರುವ ಸಂದರ್ಭ. ಕನ್ನಡ ಚಿತ್ರರಂಗದ ಕಡೆ ಭಾರತದ ಉಳಿದ ಚಿತ್ರೋದ್ಯಮಗಳು ತಿರುಗಿ ನೋಡುವ ಬೆಳವಣಿಗೆ.…
ಬೆಂಗಳೂರು : ಸರ್ಕಾರಿ ಸೇವೆಯಲ್ಲಿದ್ದುಕೊಂಡು ನಿಯಮಗಳನ್ನು ಉಲ್ಲಂಘಿಸಿ ಆರ್ಎಸ್ಎಸ್ ಪಥಸಂಚಲನದಲ್ಲಿ ಭಾಗಿಯಾಗಿದ್ದ ಯಾದಗಿರಿ ಜಿಲ್ಲೆಯ ಇಬ್ಬರು ಸರ್ಕಾರಿ ಶಾಲಾ ಶಿಕ್ಷಕರನ್ನು…