ಮೈಸೂರಿನ ಕೆಆರ್ಎಸ್ ರಸ್ತೆ ಅಥವಾ ಪ್ರಿನ್ಸೆಸ್ ರಸ್ತೆಗೆ ‘ಸಿದ್ದರಾಮಯ್ಯ ಆರೋಗ್ಯ ರಸ್ತೆ‘ ಎಂದು ನಾಮಕರಣ ಮಾಡಲು ಮುಂದಾಗಿರುವುದು ಸೂಕ್ತವಲ್ಲ ಅನಿಸುತ್ತದೆ.
ಮೊದಲನೆಯದಾಗಿ ಜೀವಂತವಿರುವ ವ್ಯಕ್ತಿಗಳ ಹೆಸರನ್ನು ರಸ್ತೆಗಳಿಗೆ ಇಡುವುದು ಸ್ವಲ್ಪವೂ ಸರಿ ಇಲ್ಲ. ಈ ಬಲವಂತದ ನಾಮಕರಣದ ಬಗ್ಗೆ ಜನ ಏನೇ ಹೇಳಿದರೂ ಇದು ಅರಸೊತ್ತಿಗೆಯ ಬಗ್ಗೆ ಅದಮ್ಯ ಪ್ರೀತಿ, ಗೌರವವಿರುವ ಮೈಸೂರಿಗರಿಗೆ ಬಗೆಯುವ ದ್ರೋಹ ಎಂದೇ ಹೇಳಬೇಕಾಗುತ್ತದೆ. ಡಿವಿಜಿಯವರ ಕುರಿತಾದ ಪ್ರಸಂಗವೊಂದು ನೆನಪಿಗೆ ಬರುತ್ತದೆ. ಒಮ್ಮೆ ಡಿವಿಜಿಯವರಿಗೆ ಸರ್ಕಾರ ದೊಡ್ಡ ಪ್ರಶಸ್ತಿಯೊಂದನ್ನು ನೀಡಿರುತ್ತದೆ. ಈ ಸಮಯದಲ್ಲಿ ಡಿವಿಜಿಯವರ ಅಭಿಮಾನಿಗಳು, ಅವರ ಮನೆಗೆ ತೆರಳಿ ‘ನಿಮ್ಮ ಮನೆಯ ಮುಂದಿನ ರಸ್ತೆಗೆ ನಿಮ್ಮ ಹೆಸರಿಡಬೇಕೆಂದಿದ್ದೇವೆ‘ ಎನ್ನುವ ಪ್ರಸ್ತಾಪವನ್ನು ಮುಂದಿಡುತ್ತಾರೆ. ಆಗ ಬಹಳ ಸಂಕೋಚದಿಂದ ಡಿವಿಜಿಯವರು, ‘ಅಯ್ಯಾ. . . ನನ್ನ ಪಾಡಿಗೆ ನಾನು ಹೇಗೋ ಮರ್ಯಾದೆಯಿಂದ ಮನೆಯೊಳಗೆ ಜೀವಿಸುತ್ತಿದ್ದೇನೆ. ದಯಮಾಡಿ ಬೀದಿಗೆ ನನ್ನ ಹೆಸರಿಟ್ಟು, ನನ್ನನ್ನು ಎಲ್ಲರೂ ತುಳಿಯುವಂತೆ ಮತ್ತು ಎಳೆದಾಡುವಂತೆ ಮಾಡಬೇಡಿರಿ’ ಎಂದು ವಿನಂತಿಸಿದರಂತೆ. ಆ ಮೂಲಕ ಅವರ ಅಭಿಮಾನಿಗಳ ಪ್ರೀತಿಯ ಪ್ರಸ್ತಾಪವನ್ನು ನಯವಾಗಿ ತಿರಸ್ಕರಿಸಿದರಂತೆ. ಈ ಬಗೆಯ ನಿರ್ಲಿಪ್ತ ಮನಃಸ್ಥಿತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರೂ ಪ್ರದರ್ಶಿಸಬಲ್ಲರೆ? ಕಾದು ನೋಡೋಣ.
-ನಾಗಮಂಗಲ ನರಸಿಂಹ ಮೂರ್ತಿ, ಮೈಸೂರು.
ರಾಜ್ಕೋಟ್ : ಡೆರಿಲ್ ಮಿಚೆಲ್ ಅಮೋಘ ಶತಕ (131) ಹಾಗೂ ವಿಲ್ ಯಂಗ್ (87) ಅರ್ಧಶತಕದ ನೆರವಿನಿಂದ ಆತಿಥೇಯ ಭಾರತ…
ಮೈಸೂರು : ನಗರದ ಹೃದಯ ಭಾಗವಾದ ಕೆ.ಆರ್.ವೃತ್ತದಲ್ಲಿ ಗಂಧದಗುಡಿ ಫೌಂಡೇಶನ್ ಮತ್ತು ನಗರ ಸಂಚಾರ ಪೊಲೀಸ್ ಸಂಯುಕ್ತಾಶ್ರಯದಲ್ಲಿ ಸಂಕ್ರಾಂತಿ ಹಬ್ಬದ…
ಬೆಂಗಳೂರು : ಬ್ಯಾನರ್ ಅಳವಡಿಕೆ ಸಂಬಂಧಪಟ್ಟ ಬಳ್ಳಾರಿಯಲ್ಲಿ ನಡೆದ ಗಲಭೆ ಖಂಡಿಸಿ ಪಾದಯಾತ್ರೆ ನಡೆಸುವ ವಿಷಯದಲ್ಲಿ ಬಿಜೆಪಿಯೊಳಗೆ ಭಿನ್ನಾಭಿಪ್ರಾಯ ವ್ಯಕ್ತವಾಗಿದೆ.…
ಮೈಸೂರು: ವರ್ಕ್ ಫ್ರಂ ಹೋಂ ಕೆಲಸಕ್ಕೆ ಸೇರಿದ ಮಹಿಳೆ ನಂತರ ನಕಲಿ ಕಂಪೆನಿಯವರ ಮಾತನ್ನು ಕೇಳಿ ಷೇರು ಮಾರುಕಟ್ಟೆಯಲ್ಲಿ ಹಣ…
ಮೈಸೂರು : ಎರಡು ಪ್ರತ್ಯೇಕ ಅಪಘಾತಗಳಲ್ಲಿ ಇಬ್ಬರು ಮೃತಪಟ್ಟಿರುವ ಘಟನೆ ತಾಲ್ಲೂಕಿನ ಬೆಳವಾಡಿ ಹಾಗೂ ಕಡಕೊಳ ಬಳಿ ನಡೆದಿದೆ. ಮೊದಲನೇ…
ಮೈಸೂರು : ವರ್ಷದ ಮೊದಲ ಹಬ್ಬ ಸುಗ್ಗಿ ಸಂಕ್ರಾತಿ ಹಿನ್ನೆಲೆ ನಗರದಲ್ಲಿ ಸಂಭ್ರಮ ಮನೆ ಮಾಡಿದ್ದು, ಮಾರುಕಟ್ಟೆಯಲ್ಲಿ ಹಬ್ಬಕ್ಕೆ ಬೇಕಾದ…