ಓದುಗರ ಪತ್ರ
ಹೆತ್ತವರ ಕನಸುಗಳು ಅನಂತ, ಮಕ್ಕಳ ಸಾಧನೆಯನ್ನು ಕಣ್ತುಂಬಿಕೊಳ್ಳಲು ಆಸೆ ಪಡುತ್ತಾರೆ. ಕೊನೆಗೆ ಏನೂ ಮಾಡದಿದ್ದರೂ ಪರವಾಗಿಲ್ಲ ಮಕ್ಕಳು ನಮ್ಮ ಕಣ್ಣ ಮುಂದಿದ್ದರೆ ಸಾಕಪ್ಪಾ ಎಂದುಕೊಳ್ಳುತ್ತಾರೆ. ಆದರೆ ಇಂದಿನ ಯುವ ಪೀಳಿಗೆ ಕ್ರೀಡಾಭಿಮಾನದ ಹೆಸರಿನಲ್ಲಿ ಅತಿರೇಕದ ವರ್ತನೆ ತೋರಿ ದುರಂತವನ್ನು ಮೈಮೇಲೆ ಎಳೆದುಕೊಳ್ಳುತ್ತಿರುವುದು ವಿಪರ್ಯಾಸ.
ಏನಾಗಿದೆ ನಮ್ಮ ಸಮಾಜಕ್ಕೆ, ಯುವ ಜನತೆಗೆ? ಯಾಕೀ ಉನ್ಮಾದ? ಭಾವೋತ್ಕರ್ಷ? ರಾಜಕಾರಾಣಿಗಳ, ಸಿನಿಮಾ ನಟರ, ಕ್ರಿಕೆಟ್ ಆಟಗಾರರ ಹಿಂಬಾಲಕರಾಗಿ ಸಮಯ ವ್ಯರ್ಥ ಮಾಡಿಕೊಂಡು ನಿಮ್ಮ ವ್ಯಕ್ತಿತ್ವವನ್ನು, ಸಮಯವನ್ನು ವ್ಯರ್ಥ ಮಾಡಿಕೊಂಡು ಅವರ ಬದುಕನ್ನು ಉದ್ಧಾರ ಮಾಡುತ್ತಿದ್ದೀರಲ್ಲಾ ಏನನ್ನಬೇಕು ನಿಮಗೆ? ನಿಮ್ಮ ಹೆತ್ತವರ ಶಾಶ್ವತ ನೋವಿಗೆ ಪರಿಹಾರವೇನು? ದೇವರು ಕೂಡ ನಿಮ್ಮನ್ನು ಉಳಿಸುವುದಿಲ್ಲ. ಏನೆಂದು ಅವರ ಅಭಿಮಾನಿಗಳಾಗಿದ್ದೀರಿ ಅವರೇನು ರಾಷ್ಟ್ರನಾಯಕರೆ? ನೆಲ ಜಲ ಭಾಷೆಗಾಗಿ ಜೀವತೆತ್ತವರೆ? ದೇಶ ನಾಡು ನುಡಿ ಇತ್ಯಾದಿ ವಿಚಾರಗಳು ಬಂದಾಗ ಮೈಗೆಲ್ಲಾ ಎಣ್ಣೆ ಸವರಿಕೊಂಡು ನುಣಿಚಿಕೊಳ್ಳುವವರು ಕೊನೆ ಪಕ್ಷ ನಿಮ್ಮ ಕುಟುಂಬಕ್ಕೆ ಸಾಂತ್ವನ ಹೇಳುವ ಔದಾರ್ಯವನ್ನೂ ತೋರದ ಮೂರ್ಖರಿಗೆ ನೀವು ಅಭಿಮಾನಿಗಳು. ನಿಮ್ಮ ನೋವು, ಸಾವುಗಳೆಲ್ಲವೂ ನಿಮ್ಮ ಕುಟುಂಬದ ಶಾಶ್ವತ ದುಃಖಗಳೇ ಹೊರತು ಸಾವಿನ ದಲ್ಲಾಳಿಗಳಲ್ಲ ಎಂಬ ಎಚ್ಚರಿಕೆ ನಿಮ್ಮನ್ನು ಕಾಡದ ಹೊರತು ಈ ಘಟನೆಗಳಿಗೆ ಸಾವಿಲ್ಲ.
– ಬ್ಯಾ.ರಾ. ಪ್ರಸನ್ನಕುಮಾರ್, ಬ್ಯಾಡರಹಳ್ಳಿ, ಕೃಷ್ಣರಾಜನಗರ ತಾ.
ಮೈಸೂರಿನ ಭಾರತ್ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ಆಂದೋಲನ ಕಚೇರಿಯಲ್ಲಿ ನಡೆದ ಫೋನ್ ಇನ್ ಕಾರ್ಯಕ್ರಮ ಮೈಸೂರು : ಕ್ಯಾನ್ಸರ್…
ಬೆಂಗಳೂರು : ಫಾರಿನ್ ಸ್ಟೈಲ್ ನಲ್ಲಿ ಪ್ರಪೋಸ್ ಮಾಡ್ತೀನಿ ಅಂತ ಹೇಳಿ ಪ್ರಿಯಕರನ ಕೈಕಾಲು ಕಟ್ಟಿದ ಪ್ರಿಯತಮೆ ಆತನನ್ನು ಬೆಂಕಿ…
ಕೊಡಗು : ಜಿಲ್ಲೆಯಲ್ಲಿ ವಿದೇಶಿ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಕೇಳಿಬಂದಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಪೊನ್ನಂಪೇಟೆ…
ಕುಶಾಲನಗರ : ಅಪ್ರಾಪ್ತ ವಯಸ್ಸಿನ ಬಾಲಕಿಗೆ ನಿಶ್ಚಿತಾರ್ಥ ನಡೆಸಲು ಮುಂದಾದ ಘಟನೆ ಕುಶಾಲನಗರ ತಾಲ್ಲೂಕಿನ ಮುಳ್ಳುಸೋಗೆ ಗ್ರಾಮದಲ್ಲಿ ನಡೆದಿದ್ದು, ಅಧಿಕಾರಿಗಳು…
ಮೈಸೂರು : ಮೈಸೂರು ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ನಗರದ ಹೊರವಲಯದ ದೇವನೂರಿನಲ್ಲಿ ಎರಡು ಕಡೆಗಳಲ್ಲಿ ಪ್ರತ್ಯೇಕ ಕಾರ್ಯಾಚರಣೆ ನಡೆಸಿ ಒತ್ತುವರಿಯಾಗಿದ್ದ…
ಮಂಜು ಕೋಟೆ ಎಚ್. ಡಿ. ಕೋಟೆ : ರಾಜ್ಯದ ಪ್ರಮುಖ ಜಲಾಶಯವಾದ ತಾಲ್ಲೂಕಿನ ಕಬಿನಿ ಜಲಾಶಯದ ನೀರಿನ ಮಟ್ಟ ಮಳೆಯ…