ಎಡಿಟೋರಿಯಲ್

‘ಭಾರತೀಯರ ಸ್ವಪ್ರಜ್ಞೆ ಜಾಗೃತಗೊಳ್ಳಲು ಇದು ಸಕಾಲ’

-ಪುಷ್ಪರಾಜ್ ದೇಶಪಾಂಡೆ

ಭಾರತ ಶರವೇಗದೊಂದಿಗೆ ಹಿಂದಿರುಗಿ ಬರಲಾಗದಂತಹ ಒಂದು ನಿರ್ಣಾಯಕ ಹಂತವನ್ನು ತಲುಪುತ್ತಿದೆ. ದೇಶದ ರಾಜಕೀಯ ಸಂಸ್ಕೃತಿಯು ಎಷ್ಟರ ಮಟ್ಟಿಗೆ ಬಲಪಂಥದೆಡೆಗೆ ವಾಲಿದೆ ಎಂದರೆ ಭಾರತ ಎತ್ತ ಸಾಗುತ್ತಿದೆ (ಹೇಗೆ ತಲುಪುವುದು ಎನ್ನುವುದರ ಬಗ್ಗೆ ಪಕ್ಷಗಳ ಭಿನ್ನ ನಿಲುವುಗಳ ಹೊರತಾಗಿಯೂ) ಎನ್ನುವುದರ ಬಗ್ಗೆ ಒಮ್ಮತದ ಅಭಿಪ್ರಾಯವೂ ಅಸಾಧ್ಯವಾಗಿದೆ. ದ್ವೇಷ ಮತ್ತು ಹಿಂಸೆ ಎಷ್ಟು ವ್ಯಾಪಕವಾಗಿ ಹರಡಿದೆಯೆಂದರೆ ನಿನ್ನೆ ಊಹಿಸಲಸಾಧ್ಯವಾಗಿದ್ದ ಸಂಗತಿಗಳು ನಾಳೆಗೆ ಅನಿವಾರ್ಯವಾಗುತ್ತಿವೆ. ನಿಸ್ಸಂದೇಹವಾಗಿ ಹೇಳುವುದಾದರೆ, ಭಾರತದ ಪ್ರಜಾತಂತ್ರದ ಪರಿಕಲ್ಪನೆಯನ್ನು ಯಶಸ್ವಿಯಾಗಿ ಭಗ್ನಗೊಳಿಸಲಾಗಿದೆ. ಭಾರತದ ಸಂವಿಧಾನ ರಚನಾ ಮಂಡಳಿಯಲ್ಲಿ ಎಲ್ಲರ ಒಮ್ಮತದೊಂದಿಗೆ ಬೆಸೆಯಲಾದ ದೇಶದ ರಾಜಕೀಯ ಸಂಸ್ಕೃತಿಯನ್ನು ಗುಟ್ಟಾಗಿ ಮರುರಚನೆ ಮಾಡಲಾಗುತ್ತಿದೆ.

ಈ ಪ್ರಕ್ರಿಯೆ ೨೦೧೪ರಿಂದಲೇ ಆರಂಭವಾಗಿದೆ ಎಂದು ಹೇಳುವುದು ಅರ್ಧಸತ್ಯವಾಗುತ್ತದೆ. ಸದಾ ರಾಜಕಾರಣದ ಪರಿಧಿಯಲ್ಲೇ ಇರಬೇಕಾದ ಅವಧಿಯಲ್ಲಿ, ಅಧಿಕಾರದ ಹಂಗಿಲ್ಲದೆೆುೀಂ, ಆರೆಸ್ಸೆಸ್ ಮತ್ತು ಆನಂತರ ಬಿಜೆಪಿಗಳು ಚುನಾವಣೇತರ ರಾಜಕೀಯದ ಬಗ್ಗೆ ಹೆಚ್ಚು ಗಮನಹರಿಸುವುದು ಅನಿವಾರ್ಯವಾಗಿತ್ತು. ಆದರೆ ಎರಡು ನಿರ್ಣಾಯಕ ತಿರುವುಗಳು ಈ ಎರಡೂ ಸಂಘಟನೆಗಳ ಕಾರ್ಯವ್ಯಾಪ್ತಿಯನ್ನು ಹಿಗ್ಗಿಸಲು ನೆರವಾಗಿದ್ದವು. ಜನತಾ ಪಕ್ಷದ ಸರ್ಕಾರವು, ಆರೆಸ್ಸೆಸ್ ಬಗ್ಗೆ ಅನುಕಂಪವುಳ್ಳವರನ್ನು ಅಧಿಕಾರಶಾಹಿಯಲ್ಲಿ, ಮಾಧ್ಯಮಗಳಲ್ಲಿ ಮತ್ತು ಚಲನಚಿತ್ರರಂಗದಲ್ಲಿ ಸ್ಥಾಪಿಸಲು ಅವಕಾಶವನ್ನು ಕಲ್ಪಿಸಿತ್ತು. ಈ ಯೋಜನೆಯು ಎನ್ಡಿಎ ಆಳ್ವಿಕೆಯ ಮೊದಲ ಪಾಳಿಯಲ್ಲಿ ತೀವ್ರತೆಯನ್ನು ಪಡೆದುಕೊಂಡಿತ್ತು. ೨೦೧೦ ರಿಂದ ೨೦೧೪ರ ಅವಧಿಯಲ್ಲಿ ಇದು ಪರಿಣಾಮಕಾರಿಯಾಗಿ ತಳವೂರಲು ಸಾಧ್ಯವಾಗಿತ್ತು. ಯುಪಿಎ ಸರ್ಕಾರದ ಒಳಗೆ ಮತ್ತು ಹೊರಗೂ ಪ್ರಮುಖ ಪಾತ್ರಧಾರಿಗಳು ಭಾರತದ ಸ್ವಪ್ರಜ್ಞೆಗೆ ಹೊಸ ರೂಪವನ್ನು ನೀಡಲು ಶ್ರಮಿಸಿದ್ದರು.

ಇಲ್ಲಿ ಮೂರು ಅಂತರ್ ಸಂಬಂಧಿತ ವಿಚಾರಗಳನ್ನು ಪ್ರಸ್ತಾಪಿಸುವುದಾದರೆ, ಭ್ರಷ್ಟಾಚಾರದ ವಿರುದ್ಧ ಅಖಿಲ ಭಾರತ ಆಂದೋಲನವು (ಇದನ್ನು ನೇರವಾಗಿ ಆರೆಸ್ಸೆಸ್-ಬಿಜೆಪಿ ಪೋಷಿಸಿದ್ದವು) ಯುಪಿಎ ಸರ್ಕಾರವನ್ನು ಅಸ್ಥಿರಗೊಳಿಸಿದ್ದೇ ಅಲ್ಲದೆ ಆಡಳಿತ ವಿರೋಧಿ ಅಲೆಯನ್ನು ಸಮರ್ಥಿಸುವಂತೆ ಮಾಡಿತ್ತು. ಇದಕ್ಕೆ ಪೂರಕವಾಗಿ ಅನೇಕ ಹಿರಿಯ ಅಧಿಕಾರಿಗಳು (ಆನಂತರ ಇವರಲ್ಲಿ ಹಲವರು ಬಿಜೆಪಿ ಸೇರಿದ್ದರು) ೨೦೧೧ರಿಂದಲೇ ಪ್ರಭುತ್ವದ ಅಧಿಕಾರದ ಕೀಲಿಗಳನ್ನು ಶಿಥಿಲಗೊಳಿಸಿದ್ದರು. ಈ ಪ್ರಕ್ರಿಯೆಯೊಂದಿಗೇ ಬಿಜೆಪಿ ಸಂಸತ್ ಅಧಿವೇಶನಕ್ಕೆ ತಡೆೊಂಡ್ಡುವ ಮೂಲಕ ಆಡಳಿತ ನೀತಿ ನಿಷ್ಕ್ರಿಯವಾಗಿದೆ ಎನ್ನುವ ಒಂದು ಮಿಥ್ಯೆಯನ್ನು ಸೃಷ್ಟಿಸಿತ್ತು. ಒಟ್ಟಾರೆಯಾಗಿ ಈ ಎಲ್ಲ ಕಾರಣಗಳಿಂದ ಭಾರತದ ಸಕಲ ಸಮಸ್ಯೆಗಳಿಗೂ ಮೇಲ್ಪದರದ ಅಧಿಕಾರಾರೂಢ ವ್ಯವಸ್ಥೆೆುೀಂ ಕಾರಣ ಮತ್ತು ಅದು ಪೋಷಿಸುವ ರಾಜಕೀಯ ಸಂಸ್ಕ ೃತಿೆುೀಂ ಕಾರಣ ಎಂದು ಬಿಂಬಿಸಲಾಯಿತು.

ಜನತೆಯ ಸಹಮತ ಮತ್ತು ಸಮ್ಮತಿ: ಜನತೆಯ ಸಹಮತ ಮತ್ತು ಸಮ್ಮತಿ ಇಲ್ಲದೆ ಹೋಗಿದ್ದರೆ ಇದಾವುದೂ ಸಾಧ್ಯವಾಗುತ್ತಿರಲಿಲ್ಲ. ಆದರೆ ಈ ಸಮ್ಮತಿಯು ಸ್ವಾಭಾವಿಕವಾಗಿ ಸೃಷ್ಟಿಯಾಗಲಿಲ್ಲ. ಭಾರತದ ರಾಜಕೀಯ ಸಂಸ್ಕ ೃತಿಯ ಮೇಲೆ ತನ್ನ ಬಹು ಆಯಾಮಗಳ ದಾಳಿಯಲ್ಲಿ ಸಂಘಪರಿವಾರವು ಮೊದಲು ಸಾಮಾಜಿಕ ಸಂಕಥನಗಳಿಗೆ ಮರುಜೀವ ನೀಡಿತ್ತು. ಸಾಮಾಜಿಕ ಮಾಧ್ಯಮಗಳನ್ನು ಪರಿಣಾಮಕಾರಿಯಾಗಿ ಸಶಕ್ತಗೊಳಿಸಿತ್ತು. ಪ್ರಗತಿಪರ ಸಂಘಟನೆಗಳು ಇನ್ನೂ ಟ್ವಿಟ್ಟರ್ ಬಳಕೆಯಲ್ಲೇ ಮುಂದುವರೆಯುತ್ತಿದ್ದಾಗ (ಭಾರತದಲ್ಲಿ ೨೩.೬ ದಶಲಕ್ಷ ಟ್ವಿಟ್ಟರ್ ಬಳಕೆದಾರರಿದ್ದಾರೆ) ಸಂಘಪರಿವಾರವು ಯುಟ್ಯೂಬ್ (ಭಾರತದಲ್ಲಿ ನಿತ್ಯ ಬಳಕೆದಾರರ ಸಂಖ್ಯೆ ೨೬೫ ದಶಲಕ್ಷ), ಫೇಸ್‌ಬುಕ್ (ಭಾರತದಲ್ಲಿ ೩೨೯ ದಶಲಕ್ಷ ಬಳಕೆದಾರರಿದ್ದಾರೆ), ಮತ್ತು ವಾಟ್ಸಾಪ್ (ಭಾರತದಲ್ಲಿ ೪೫೯ ದಶಲಕ್ಷ ಬಳಕೆದಾರರಿದ್ದಾರೆ), ಈ ಮೂರು ಮಾಧ್ಯಮಗಳ ಮೇಲೆ ಹಿಡಿತ ಸಾಧಿಸಿತ್ತು. ಭಾರತದಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯವಾಗಿರುವ ಮೂವರಲ್ಲಿ ಒಬ್ಬರು ರಾಜಕೀಯ ವಿಷಯ ವಸ್ತುವನ್ನೇ ಬಳಸುತ್ತಾರೆ. ಇವರಲ್ಲಿ ಬಹುಪಾಲು ಬಳಕೆದಾರರು ಸಂಘಪರಿವಾರದವರೇ ಆಗಿರುತ್ತಾರೆ. ಇದೇ ರೀತಿ, ಆರೆಸ್ಸೆಸ್ ಮತ್ತು ಬಿಜೆಪಿ ಜನಪ್ರಿಯ ಸಾಂಸ್ಕ ೃತಿಕ ವಲಯವನ್ನು ಯಶಸ್ವಿಯಾಗಿ ಸಶಕ್ತಗೊಳಿಸಿದೆ. ಆಕ್ಸಿಡೆಂಟಲ್ ಪ್ರ್ತ್ಯೈಮ್ ಮಿನಿಸ್ಟರ್, ಉರಿ-ಸರ್ಜಿಕಲ್ ಸ್ಟ್ರೈಕ್, ದ ತಾಷ್ಕೆಂಟ್ ಫೈಲ್ಸ್, ದ ಕಾಶ್ಮೀರ್ ಫೈಲ್ಸ್, ೧೯೪೬, ಕೊಲ್ಕತ್ತಾ ಕಿಲ್ಲಿಂಗ್ಸ್ ಮುಂತಾದ ಚಲನಚಿತ್ರಗಳಷ್ಟೇ ಅಲ್ಲದೆ, ಮಾಧ್ಯಮ ವಾಹಿನಿಗಳು, ಪುಸ್ತಕಗಳು ಮತ್ತು ಚಿಂತನಾ ವಾಹಿನಿಗಳನ್ನು ಹರಿಬಿಡುವ ಮೂಲಕ ಸಂಘಪರಿವಾರದ ಸೈದ್ಧಾಂತಿಕ, ರಾಜಕೀಯ ಮತ್ತು ಸಾಂಸ್ಕ ೃತಿಕ ಸಂದೇಶವನ್ನು ರವಾನಿಸುವುದರಲ್ಲಿ ಯಶಸ್ವಿಯಾಗಿದೆ.

ಮತ್ತೊಂದೆಡೆ ಸಂಘಪರಿವಾರವು ಶಿಕ್ಷಣ ವ್ಯವಸ್ಥೆಯನ್ನು ನಿಯಂತ್ರಿಸುವ (ಪಠ್ಯಕ್ರಮಗಳ ಬದಲಾವಣೆ, ತನ್ನ ಕಾರ್ಯಕರ್ತರನ್ನು ಬೋಧಕರನ್ನಾಗಿ ನೇಮಿಸುವುದು) ಮೂಲಕ ನಮ್ಮ ರಾಷ್ಟ್ರಪ್ರಜ್ಞೆಯನ್ನು ಪುನಾರೂಪಿಸಲು ಮುಂದಾಗಿದೆ. ಈ ಹಾದಿಯಲ್ಲಿ ಸಂಘಪರಿವಾರವು ತಮ್ಮ ಆ್ಂಕೆುಯ ಸಮುದಾಯದ ನಾಯಕರಿಗೆ ರಾಜಕೀಯ ಹುದ್ದೆ, ಸ್ಥಾನಗಳನ್ನು ನೀಡುವುದರ ಮೂಲಕ ಅವರಿಂದ ಪ್ರೋಂಜನ ಪಡೆಯತ್ತಿದೆ. ಹಾಗೂ ತಳಮಟ್ಟದಲ್ಲಿರುವ ಧಾರ್ಮಿಕ ಸಂಸ್ಥೆಗಳ ಜಾಲವನ್ನು ಬಳಸಿಕೊಳ್ಳುತ್ತಿದೆ. ಹೊರದೇಶಗಳಲ್ಲಿರುವ ಭಾರತೀಯ ಸಂಜಾತರೊಡನೆ ಸಂಪರ್ಕ ಸಾಧಿಸಲು ವಿದೇಶಿ ರಾಯಭಾರಿಗಳ ಸಹಕಾರದೊಂದಿಗೆ ತನ್ನದೇ ಆದ ಸಂಘಟನೆಗಳನ್ನು ನಿರ್ವಹಿಸುತ್ತಿದೆ.

ಪ್ರಗತಿಪರರನ್ನು ಹಿಮ್ಮೆಟ್ಟಿಸಲಾಗಿದೆ: ಆದರೆ ಎಲ್ಲ ವಿದ್ಯಮಾನಗಳ ಶ್ರೇಯಸ್ಸನ್ನು ಸಂಘಪರಿವಾರಕ್ಕೆ ಆರೋಪಿಸುವುದು ನ್ಯಾಯಯುತವಲ್ಲ. ಇಂದಿನ ಭಾರತದಲ್ಲಿ ಇತರೆ ಪುರೋಗಾಮಿ ಶಕ್ತಿಗಳೂ ಡಿಜಿಟಲ್ ಪ್ರಪಂಚದಲ್ಲಿ ಸದೃಶ ಭಾಗಿದಾರರಾಗಿವೆ. ಪ್ರಗತಿಪರರು ಸಂಘಟನಾತ್ಮಕ ದೌರ್ಬಲ್ಯಗಳಿಂದ ಮತ್ತು ಸಂಪನ್ಮೂಲಗಳ ಕೊರತೆಯಿಂದ ಬಳಲುತ್ತಿರುವುದು ವಾಸ್ತವವೇ ಹೌದು. ಆದರೆ ಅವರು ಹಿನ್ನಡೆ ಅನುಭವಿಸುತ್ತಿರುವುದಕ್ಕೆ ಕಾರಣ ಬೇರೆೆುೀಂ ಆಗಿದೆ. ಬಿಜೆಪಿಯನ್ನು ಎದುರಿಸುವ ಮಾರ್ಗದಲ್ಲಿ ಪ್ರಗತಿಪರರು ಅರ್ಜಿಗಳು, ಬಹಿರಂಗ ಪತ್ರಗಳು, ಸಾಂಕೇತಿಕ ಪ್ರತಿಭಟನೆಗಳು, ಧರಣಿಗಳು, ಪತ್ರಿಕಾ ಪ್ರಕಟಣೆಗಳು, ಟ್ವೀಟ್‌ಗಳು ಹೀಗೆ ಪ್ರಚಲಿತ ಕಾರ್ಯತಂತ್ರಗಳಿಗೇ ಮೊರೆಹೋಗುತ್ತಿದ್ದಾರೆ. ಇಂದು ಪ್ರಗತಿಪರರ ಪಕ್ಷಗಳು ದೂರದೃಷ್ಟಿಯ ಕೊರತೆ ಹೊಂದಿವೆ , ರಾಜನೀತಿ ಮತ್ತು ಲೋಕನೀತಿ (ಜನಪರ ರಾಜಕಾರಣ) ಎರಡನ್ನೂ ಮರೆತಿವೆ ಎಂದು ಭಾವಿಸಬೇಕಾಗುತ್ತಿದೆ.

ಚೇತರಿಕೆಗಾಗಿ ಹಾದಿಗಳು: ಪ್ರಗತಿಪರ ಶಕ್ತಿಗಳಿಗೆ ಕಠಿಣ ಪರಿಶ್ರಮದ ತಿದ್ದುಪಡಿ ಅಗತ್ಯವಿದೆ. ನಮ್ಮ ಮುಂದಿರುವ ಬಹುದೊಡ್ಡ ಸವಾಲೆಂದರೆ, ಭಾರತದ ಸ್ವಪ್ರಜ್ಞೆಯನ್ನು ಹೇಗೆ ಪುನರ್ೋಂಜನೆಗೊಳಪಡಿಸುವುದು ಎಂದು ೋಂಚಿಸುವುದು. ಇದನ್ನು ಕೇವಲ ಚುನಾವಣೆಗಳಲ್ಲಿ ಗೆಲ್ಲುವುದರಿಂದ ಸಾಧಿಸಲಾಗುವುದಿಲ್ಲ ಅಥವಾ ಸಾಂಕೇತಿಕ ತಂತ್ರಗಾರಿಕೆಗಳಿಂದಲೂ ಸಾಧ್ಯವಿಲ್ಲ. ನಿರಂತರವಾಗಿ ಸಾಗುತ್ತಿರುವ ಬಲಪಂಥದತ್ತ ವಾಲುವಿಕೆಯನ್ನು ಇದರಿಂದ ತಡೆಗಟ್ಟುವುದೂ ಸಾಧ್ಯವಿಲ್ಲ. ನಾವು ಶಕ್ತಿಯುತವಾದ ರಾಜಕೀಯ ಮತ್ತು ಮಾನಸಿಕ ಸ್ಥಿತಿಯನ್ನು ಮರಳಿ ಪಡೆಯುವಂತಾಗಬೇಕು. ಇದನ್ನು ಸಾಧಿಸಬೇಕೆಂದರೆ ಭಾರತದ ಸಂವಿಧಾನವನ್ನೇ ಸೃಜನಾತ್ಮಕವಾಗಿ ಬಳಸಿಕೊಂಡು ಭಾರತದ ಮೊದಲು ಸಾಫ್ಟೇತ್ವರನ್ನು (ಸಂಸ್ಕೃತಿ, ಮೌಲ್ಯಗಳು ಮತ್ತು ಧೋರಣೆಗಳು) , ಆನಂತರ ಹಾರ್ಡ್ವೇರನ್ನು ( ಅರ್ಥವ್ಯವಸ್ಥೆ, ಸಂಸ್ಥೆಗಳು ಮತ್ತು ವ್ಯವಸ್ಥೆಗಳು) ಪುನರ್ ಜಾಗೃತಗೊಳಿಸಬೇಕು.

ಪ್ರಗತಿಪರ ಶಕ್ತಿಗಳ ಬಳಿ ಪ್ರಭುತ್ವದ ಸಾಧನೆ ಸಲಕರಣೆಗಳು ಇಲ್ಲದೇ ಇದ್ದರೂ ( ಕೆಲವು ರಾಜ್ಯಗಳನ್ನು ಹೊರತುಪಡಿಸಿ) ಅವರ ಬತ್ತಳಿಕೆಯಲ್ಲಿ ಇತರ ಬಾಣಗಳೂ ಇವೆ. ಜಾಗೃತಗೊಳಿಸುವ ರಾಜಕೀಯ ತಂತ್ರಗಳಾದ ಪಾದಯಾತ್ರೆಗಳನ್ನು ನಡೆಸುವುದು, ಸಮುದಾಯಗಳನ್ನು ಮತ್ತು ಕ್ಷೇತ್ರೀಯ ಪ್ರಭಾವಿ ಕ್ಷೇತ್ರಗಳನ್ನು ಸಾಮೂಹಿಕ ನೆಲೆಯಲ್ಲಿ ಸಂಪರ್ಕಿಸುವುದು, ರಾಷ್ಟ್ರೀಯ ಮಹತ್ವ ಹೊಂದಿರುವ ವಿಚಾರಗಳಲ್ಲಿ ಸಮೂಹ ನಿಧಿ ಸಂಗ್ರಹದ ಮೂಲಕ ತಳಮಟ್ಟದ ಚಳವಳಿಗಳನ್ನು ಹಮ್ಮಿಕೊಳ್ಳುವುದು, ಪಂಚಾಯತ್, ಮೊಹಲ್ಲಾ ಸ್ತರಗಳಲ್ಲಿ ಸಭೆಗಳನ್ನು ನಡೆಸುವುದು ಇತ್ಯಾದಿ ಮಾರ್ಗಗಳಿವೆ. ರಾಜಕೀಯವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ಭಾರತವನ್ನು ಪುನರ್ ಜಾಗೃತಗೊಳಿಸುವ ಕೈಂಕರ್ಯದಲ್ಲಿ ಸಂಪೂರ್ಣವಾಗಿ ತೊಡಗುವಂತಹ ಸಂಘಟನೆಗಳು ಇಲ್ಲಿ ಅವಶ್ಯವಾಗಿ ಬೇಕಾಗುತ್ತವೆ.

(ದ ಹಿಂದೂ ಆಂಗ್ಲ ಪತ್ರಿಕೆಯಲ್ಲಿ ಆ.೨ರಂದು ಈ ಲೇಖನ ಪ್ರಕಟವಾಗಿದ್ದು, ಲೇಖಕ ಸಮೃದ್ಧ ಭಾರತ ಫೌಂಡೇಷನ್ ಸಂಸ್ಥೆಯ ನಿರ್ದೇಶಕರು. ಅನುವಾದ: ನಾ. ದಿವಾಕರ)

 

 

 

andolana

Recent Posts

ತಿರುಪತಿ ಲಡ್ಡು: ತುಪ್ಪದಲ್ಲಿ ಪ್ರಾಣಿ ಕೊಬ್ಬು ಬಳಕೆ

ಅಮರಾವತಿ: ಜಗತ್‌ ಪ್ರಸಿದ್ಧ ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಹಾಗೂ ಕಳಪೆ ಗುಣಮಟ್ಟದ ಪದಾರ್ಥಗಳು ಪತ್ತೆಯಾಗಿದೆ ಎಂದು ತೆಲುಗು…

6 mins ago

ಬುರ್ಖಾಧಾರಿ ಮಹಿಳೆಯಿಂದ ಸಲ್ಮಾನ್‌ ಖಾನ್‌ ತಂದೆಗೆ ಜೀವ ಬೆದರಿಕೆ: ಮಹಿಳೆ ಸೇರಿ ಇಬ್ಬರ ಬಂಧನ

ಮುಂಬೈ:‌ ಬಾಲಿವುಡ್‌ನ ಭಾಯಿಜಾನ್ ಸಲ್ಮಾನ್‌ ಖಾನ್‌ ಅವರ ತಂದೆಗೆ ಬುರ್ಖಾ ಧರಿಸಿದ್ದ ಮಹಿಳೆ ಹಾಗೂ ಇನ್ನೊರ್ವ ವ್ಯಕ್ತಿ ಜೀವ ಬೆದರಿಕೆ…

32 mins ago

ಶಾಸಕ ಮುನಿರತ್ನಗೆ ಜಾಮೀನು: ಅತ್ಯಾಚಾರ ಪ್ರಕರಣದಲ್ಲಿ ಮತ್ತೆ ಬಂಧನ ಸಾಧ್ಯತೆ

ಬೆಂಗಳೂರು: ಗುತ್ತಿಗೆದಾರರೊಬ್ಬರಿಗೆ ಜಾತಿನಿಂದನೆ ಹಾಗೂ ಪ್ರಾಣ ಬೆದರಿಕೆ ಹಾಕಿದ ಪ್ರಕರಣದಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನಗೆ…

1 hour ago

ನುಡಿ ಹಬ್ಬಕ್ಕೆ ಆಹ್ವಾನಿಸಲು ಸಿದ್ಧವಾಗಿದೆ ಕನ್ನಡ ರಥ

ಮಂಡ್ಯ: ಜಿಲ್ಲೆಯಲ್ಲಿ ಡಿಸೆಂಬರ್ 20, 21, 22 ರಂದು ನಡೆಯಲಿರುವ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ…

2 hours ago

ಬಸ್‌ನಲ್ಲಿ ಪ್ರಯಾಣ: ಮಹಿಳೆಯರಿಂದ ಶಕ್ತಿಯೋಜನೆಯ ಅಭಿಪ್ರಾಯ ಪಡೆದ ಪುಷ್ಪ ಅಮರನಾಥ್‌

ಮೈಸೂರು: ರಾಜ್ಯ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಶಕ್ತಿಯೋಜನೆ ಫಲಾನುಭವಿಗಳ ಅಭಿಪ್ರಾಯ ಸಂಗ್ರಹಿಸಲು ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷೆಯಾದ ಡಾ…

2 hours ago

ಕರ್ನಾಟಕ ಪಬ್ಲಿಕ್ ಶಾಲೆಗೆ ಮೇಲ್ದರ್ಜೇಗೇರಿಸಲು ಅಗತ್ಯ ಕ್ರಮ: ʻಜಿಟಿಡಿʼ

ಮೈಸೂರು: ಬಡವರ ಮಕ್ಕಳೇ ಸರ್ಕಾರಿ ಶಾಲೆಗಳಲ್ಲಿ ಹೆಚ್ಚಾಗಿ ವ್ಯಾಸಂಗ ಮಾಡುವ ಕಾರಣ ಶಾಲೆಗಳ ಅಭಿವೃದ್ಧಿ ಶಿಕ್ಷಕರ ಮೇಲಿದೆ. ಕ್ಷೇತ್ರದಲ್ಲಿ ಬರುವ…

3 hours ago