ಎಡಿಟೋರಿಯಲ್

ಪ್ರಜಾಪ್ರಭುತ್ವದಲ್ಲಿ ಪ್ರಭುತ್ವದ ಟೀಕೆ ಅಪರಾಧವೇ?

ಪ್ರಜಾಪ್ರತಿನಿಧಿಗಳಿಗೆ ‘ಪದ ಸಂಸ್ಕೃತಿ’ ಮುಖ್ಯ

ಆರ್.ರಘು ಕೌಟಿಲ್ಯ

  ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕಾರಣಿಗಳು ಅದರಲ್ಲಿಯೂ ಜನಪ್ರತಿನಿಧಿಗಳು ತಮ್ಮ ನಾಲಿಗೆಯ ಮೇಲೆ ಹಿಡಿತ ಹಾಗೂ ನಡೆನುಡಿಯಲ್ಲಿ ಪಾದರದರ್ಶಕತೆ ಹೊಂದಿರಬೇಕುಸುಳ್ಳನ್ನು ವೈಭವೀಕರಿಸಲು ಮುಂದಾದರೆ ಅದರ ಚಕ್ರವ್ಯೂಹದಲ್ಲಿ ಸಿಲುಕಿಕೊಳ್ಳಬೇಕಾಗುತ್ತದೆ ಎಂಬುದಕ್ಕೆ ರಾಹುಲ್ ಗಾಂಧಿಯವರೇ ಉತ್ತಮ ಉದಾಹರಣೆ.

ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ಧಿಯ ಬಿಡು’ ಎಂಬ ದಾಸಶ್ರೇಷ್ಠರ ಮಾತೊಂದಿದೆಅದರಂತೆ ನಾವು ನಮ್ಮ ‘ಪದ ಸಂಸ್ಕೃತಿ’ಯನ್ನು ಬೆಳಸಿಕೊಳ್ಳದೇ ಹೋದರೆ ನಾವು ಬಳಸುವ ಪದದಿಂದ ನಮ್ಮ ವ್ಯಕ್ತಿತ್ವ ಇಳಿಮುಖವಾಗುತ್ತದೆ ಹಾಗೂ ಜನರೂ ಕೂಡ ಅದನ್ನು ಅಪಹಾಸ್ಯ ಮಾಡುತ್ತಾರೆಪ್ರಸ್ತುತ ಜನರು ಪ್ರಬುದ್ಧರಿದ್ದಾರೆಆಧಾರವಿಲ್ಲದ ಆರೋಪಗಳನ್ನು ಅವರು ಸ್ವೀಕಾರ ಮಾಡುವುದಿಲ್ಲಆದ್ದರಿಂದ ಯಾರು ನಾಲಿಗೆ ಮೇಲೆ ನಿಯಂತ್ರಣ ಸಾಧಿಸುವುದಿಲ್ಲವೋ ಅವರಿಗೆ ಪ್ರಜಾಪ್ರಭುತ್ವದಲ್ಲಿ ಸ್ಥಳವಿಲ್ಲ.

ಇಂದು ಸುಳ್ಳು ಆರೋಪಆಧಾರರಹಿತ ಮಾತುಗಳು ಹಾಗೂ ಸಂಸ್ಕೃತಿ ಹೀನ ಮಾತುಗಳು ಜನರ ಅಪಹಾಸ್ಯಕ್ಕೀಡಾಗಿ ಮುಂದಿನ ದಿನಗಳಲ್ಲಿ ಆ ರಾಜಕಾರಣಿ ಗಂಭೀರವಾದ ವಿಚಾರಗಳನ್ನು ಹೇಳಿದಾಗಲೂ ಜನರು ಅದನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲಆದ್ದರಿಂದ ರಾಜಕಾರಣದ ವ್ಯವಸ್ಥೆಯಲ್ಲಿ ರಾಹುಲ್ ಗಾಂಧಿಯವರ ಈ ಘಟನೆ ಎಲ್ಲರಿಗೂ ಎಚ್ಚರಿಕೆಯಂತಿದ್ದುವಿಶೇಷವಾಗಿ ಕಾಂಗ್ರೆಸಿಗರಿಗೆ ಎಚ್ಚರಿಕೆಯಾಗಿದೆ.

ವಚನ ಸಾಹಿತ್ಯ ಜನ್ಮತಾಳಿದ ಕನ್ನಡ ನಾಡಿನಲ್ಲಿ ಬಹುವಚನದ ಸಂಸ್ಕೃತಿಯನ್ನೇ ಅರಿಯದಂತೆ ಕಾಂಗ್ರೆಸಿಗರು ಮಾತನಾಡುತ್ತಿದ್ದಾರೆನಾಲಿಗೆ ನಮ್ಮ ಸಂಸ್ಕೃತಿಯನ್ನು ಬಿಂಬಿಸುವುದರಿಂದ ಸಿದ್ದರಾಮಯ್ಯಡಿ.ಕೆ.ಶಿವಕುಮಾರ್‌ರಂತಹ ನಾಯಕರು ಬಹುವಚನ ಸಂಸ್ಕೃತಿಯನ್ನು ರೂಢಿಸಿಕೊಳ್ಳಬೇಕುರಾಹುಲ್ ಗಾಂಧಿಯವರ ಘಟನೆಯಿಂದ ಎಚ್ಚೆತ್ತು ಮುಂದಿನ ದಿನಗಳಲ್ಲಿ ಎಚ್ಚರಿಕೆಯ ಹೆಜ್ಜೆ ಇಡಬೇಕಿದೆಆಧಾರರಹಿತ ಆರೋಪಗಳಿಂದ ರಾಜಕೀಯವನ್ನು ಕಲುಷಿತ ಮಾಡಬಾರದುಅದರಲ್ಲಿಯೂ ವ್ಯಕ್ತಿಗತ ನಿಂದನೆಚಾರಿತ್ರ್ಯ ವಧೆ ಮಾಡುವವರಿಗೆ ಇದು ತಕ್ಕ ಪಾಠವಾಗಿದೆ.

ರಾಹುಲ್ ಗಾಂಧಿಯವರನ್ನು ಸಂಸದೀಯ ಸ್ಥಾನದಿಂದ ಅನರ್ಹಗೊಳಿಸಿರುವುದು ಜನಪ್ರತಿನಿಧಿಗಳು ನಾವು ಏನು ಬೇಕಿದ್ದರು ಮಾತನಾಡಬಹುದು ಎಂದುಕೊಂಡಿರುವವರಿಗೆ ತಕ್ಕ ಪಾಠವಾಗಿದೆಅಲ್ಲದೆ ಮಾನನಷ್ಟ ಮೊಕದ್ದಮೆ ಎಷ್ಟು ಗಂಭೀರವಾಗಿದೆ ಎಂಬುದು ಸಾಬೀತಾಗಿದೆಇನ್ನೊಬ್ಬರ ಚರಿತ್ರೆಯ ಮೇಲೆ ಮಸಿ ಬಳಿಯುವ ವಿಕೃತ ಮನಸ್ಸಿರುವವರಿಗೆ ಇದು ಪಾಠವಾಗಿದೆಜನಪ್ರತಿನಿಧಿಗಳ ಮಾತಿಗೆ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಂಕುಶವಿದೆ ಎಂಬುದನ್ನು ನೆನಪಿಸಿದೆಈ ರೀತಿಯ ಮಾತುಗಳಿಂದ ಇಂದು ರಾಹುಲ್ ಗಾಂಧಿಯವರು ಅನರ್ಹಗೊಂಡಿರುವುದು ಸಂಸತ್ತಿಗೆ ಹಾಗೂ ನೆಹರು ಕುಟುಂಬಕ್ಕೆ ಕಪ್ಪು ಚುಕ್ಕಿ ಇಟ್ಟಂತಾಗಿದೆ.

ಪ್ರಜಾಪ್ರಭುತ್ವ ಎಂದ ಮೇಲೆ ಆರೋಪಟೀಕೆಗಳು ಇರಬೇಕುಆದರೆಅದಕ್ಕೆ ಆಧಾರವಿರಬೇಕು ಹಾಗೂ ಆರೋಗ್ಯಕರವಾಗಿರುವ ಜತೆಗೆ ಸಮಾಜಮುಖಿಯಾಗಿರಬೇಕುಇದು ದೇಶದ ಬೆಳವಣಿಗೆಗೂ ಪೂರಕಜನರೂ ಕೂಡ ಅದನ್ನು ಒಪ್ಪುತ್ತಾರೆಆದರೆ ನಾನೇನೇ ಮಾತನಾಡಿದರೂ ಜನ ನಂಬುತ್ತಾರೆ ಎಂಬ ಹುಂಬರಿಗೆ ಇದು ಪಾಠವಾಗಿದೆನೆಹರು ಕುಟುಂಬ ಪ್ರಜಾಪ್ರಭುತ್ವದ ಅವಧಿಯ ಬಹುಪಾಲು ದೇಶದಲ್ಲಿ ಅಧಿಕಾರ ಹಿಡಿದಿದ್ದವರುಪ್ರಜಾಪ್ರಭುತ್ವಅಭಿವ್ಯಕ್ತಿ ಸ್ವಾತಂತ್ರ್ಯದ ವಿರುದ್ಧವಾಗಿ ಅಂಕುಶ ಹಾಕಿದ ಚರಿತ್ರೆ ಈ ಕುಟುಂಬಕ್ಕಿದೆಆದರೆ ಈಗ ಅದೇ ಅವರಿಗೆ ತಿರುಗಬಾಣವಾಗಿದೆ.

ಭಾರತವೆಂಬುದು ಒಂದು ಕುಟುಂಬವಿದ್ದಂತೆಆದರೆ ರಾಹುಲ್ ಗಾಂಧಿ ಅವರು ದೇಶದ ಬಗ್ಗೆ ಇತರೆ ಹೊರದೇಶದ ವೇದಿಕೆಯಲ್ಲಿ ಆಧಾರರಹಿತವಾಗಿ ಮಾತನಾಡುವ ಮೂಲಕ ದೇಶದ ಘನತೆಗೆ ಮಸಿ ಬಳಿಯುವ ಕೆಲಸ ಮಾಡಿದ್ದು ಅತ್ಯಂತ ದುರ್ದೈವದೇಶದ ಘನತೆಗೆ ಧಕ್ಕೆ ತರುವ ಕೆಲಸವು ಸಹ ಒಂದು ರೀತಿಯ ದೇಶ ದ್ರೋಹವೇ ಆಗಿದೆಇದಕ್ಕೆ ಧಿಕ್ಕಾರ ಹೇಳಬೇಕುದೇಶದ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಪ್ರಶ್ನೆ ಕೇಳುವುದುಟೀಕೆ ಮಾಡುವ ಅಧಿಕಾರ ಎಲ್ಲರಿಗೂ ಇದೆಆದರೆ ಅದು ಆರೋಗ್ಯಕರವಾಗಿರಬೇಕುಆರೋಪಕ್ಕೆ ಆಧಾರವಿರಬೇಕುವ್ಯಕ್ತಿಗತವಾಗಿ ನಿಂದಿಸುವುದುಚಾರಿತ್ರ್ಯವಧೆ ರಾಜಕೀಯವೆನಿಸುವುದಿಲ್ಲಪ್ರಶ್ನೆಯೂ ಆಗುವುದಿಲ್ಲ.

ಮತ್ತೊಂದು ಮಾತು ‘ಅಂಗೈ ಹುಣ್ಣಿಗೆ ಕನ್ನಡಿ ಬೇಕೇ’ ಎಂಬಂತೆ ಬಿಜೆಪಿ ಸರ್ಕಾರ ಜನರಿಗಾಗಿ ಮಾಡಿರುವ ಕೆಲಸಗಳುರಾಷ್ಟ್ರೀಯತೆಯ ಪರ ನಿಲುವುಗಳುಕಾಶ್ಮೀರ ವಿಚಾರದಲ್ಲಿ ತೆಗೆದುಕೊಂಡ ದಿಟ್ಟ ನಿರ್ಧಾರಗಳ ಬಗ್ಗೆ ಜನರ ಬೆಂಬಲವಿದೆಬಿಜೆಪಿ ಸರ್ಕಾರದ ಕೆಲಸಗಳೇ ಮಾತನಾಡುತ್ತಿವೆಇನ್ನೂ ಬಾಯಿಯಿಂದ ಉತ್ತರ ಕೊಡುವ ಅವಶ್ಯಕತೆ ಇಲ್ಲ.

ಪ್ರಭುತ್ವದ ಎದುರು ಪ್ರಶ್ನೆಗಳನ್ನು ಕೇಳುವ ‘ಅಲ್ಗಾರಿದಂ’

 

ರಾಜಾರಾಂ ತಲ್ಲೂರು

  ಪ್ರಭುತ್ವದ ಎದುರು ಪ್ರಶ್ನೆಗಳನ್ನು ಕೇಳಿದ್ದಕ್ಕಾಗಿ ನಟರೊಬ್ಬರನ್ನು ಬಂಧಿಸಲಾಯಿತುಇನ್ನೆಲ್ಲೋ ಪತ್ರಕರ್ತರೊಬ್ಬರನ್ನು ಬಂಧಿಸಲಾಯಿತುವಿರೋಧಪಕ್ಷದ ಪ್ರಮುಖ ನಾಯಕರೊಬ್ಬರಿಗೆ ಮಾತಿನ ಮನೆಯಲ್ಲೇ ಮಾತನಾಡುವ ಅವಕಾಶ ನಿರಾಕರಿಸಿ ಕ್ಷಮೆ ಕೇಳಬೇಕೆಂದು ಒತ್ತಾಯಿಸಲಾಯಿತುಈಗ ಅವರ ಲೋಕಸಭೆ ಸದಸ್ಯತ್ವವನ್ನೇ ಅನರ್ಹ ಗೊಳಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಪ್ರಭುತ್ವದ ಎದುರು ಪ್ರಶ್ನೆಗಳನ್ನು ಕೇಳುವುದು ಮತ್ತು ಉತ್ತರದಾಯಿತ್ವವನ್ನು ಬಯಸುವುದು ಅಪರಾಧವೇ ಎಂಬ ಪ್ರಶ್ನೆಯೊಂದು ಧುತ್ತೆಂದು ಎದುರು ಬಂದು ನಿಂತಿದೆಇಂತಹದೊಂದು ಪ್ರಶ್ನೆ ಎದುರು ಬಂದು ನಿಲ್ಲುವ ಪರಿಸ್ಥಿತಿ ಬಂದಿದೆ ಎಂಬುದೇ ಅಭೂತ ಪೂರ್ವ!

ಒಂದು ಚುನಾಯಿತ ಸರ್ಕಾರವು “ಉತ್ತರದಾಯಿತ್ವಕ್ಕೆ” ಬೆನ್ನು ಹಾಕಿ ನಿಂತಾಗಉತ್ತರ ಕೊಡಲು ನಾವು ಸಿದ್ಧರಿಲ್ಲ ಎಂಬುದನ್ನು ಪರೋಕ್ಷವಾಗಿ ಹೇಳಿದಾಗ ಒಂದು ಪ್ರಜಾಸತ್ತಾತ್ಮಕ ವ್ಯವಸ್ಥೆ ಅದನ್ನು ಹೇಗೆ ಸ್ವೀಕರಿಸಬೇಕುಇದಕ್ಕೆ ಇತ್ತೀಚಿನ ಉದಾಹರಣೆ ಕೋವಿಡ್ ಕಾಲದಿಂದ ಆರಂಭಗೊಂಡಿರುವ ಹಠಾತ್ ಸಾವುಗಳು ಮತ್ತು ಹೃದಯಾಘಾತಗಳ ಸಂಖ್ಯೆಯಲ್ಲಿ ಆಗಿರುವ ಅಸಹಜ ಹೆಚ್ಚಳದೇಶದ ಎಲ್ಲೆಡೆ ಇದು ಜನರ ಗಮನ ಸೆಳೆಯುತ್ತಿದೆಜನರ ಜೀವ ರಕ್ಷಣೆ ಪರಮೋಚ್ಛ ಕರ್ತವ್ಯ ಆಗಿರುವ ಒಂದು ಸರ್ಕಾರವು ಈ ಬಗ್ಗೆ ಸಂಸತ್ತಿನಲ್ಲಿ ಪ್ರತಿಪಕ್ಷ ಪ್ರಶ್ನೆ ಕೇಳಿದಾಗತಾನು ಆ ಅಂಕಿಸಂಖ್ಯೆಗಳನ್ನು ಇಟ್ಟುಕೊಂಡಿಲ್ಲಈ ಸಾವಿಗೆ ಕಾರಣಗಳ ಪತ್ತೆ ಮಾಡಲು icmr ಯಾವುದೇ ಅಧ್ಯಯನ ಆರಂಭಿಸಿಲ್ಲ ಎಂಬ ಉತ್ತರ ನೀಡುತ್ತದೆ. (ಲೋಕಸಭೆಯಲ್ಲಿ ಚುಕ್ಕೆರಹಿತ ಪ್ರಶ್ನೆ ಸಂಖ್ಯೆ 2990ದಿನಾಂಕ 1732023). ಕೋವಿಡ್ ಕಾಲದಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯಿದೆ 2005ರ ಅಡಿಯಲ್ಲಿ ಆರೋಗ್ಯ ಸಂಬಂಧಿ ‘ತುರ್ತುಸ್ಥಿತಿ’ಯನ್ನು ತಾನೇ ಸ್ವತಃ  ndma ಮೂಲಕ ನಿಭಾಯಿಸಿದ್ದರ ಕುರಿತು ಅಧಿಕೃತವಾಗಿಯೇ ‘ಜಾಣ ಮರೆವು’ ತೋರಿಸುತ್ತದೆಕೇಳಿದಾಗಲೆಲ್ಲ ಆರೋಗ್ಯವು ರಾಜ್ಯ ಪಟ್ಟಿಯ ವಿಷಯಅದು ತನ್ನ ಜವಾಬ್ದಾರಿ ಅಲ್ಲ ಎಂದು ತಟ್ಟಿ ಹಾರಿಸುತ್ತದೆಇಂತಹ ನೂರಾರು ಉದಾಹರಣೆಗಳನ್ನು ಕೊಡಬಹುದು.

ಹೀಗೆ ಸರ್ಕಾರವೊಂದು ತಾನು ಉತ್ತರದಾಯಿ ಅಲ್ಲ ಎಂಬುದನ್ನು ಕಾಯಿದೆಗಳಲ್ಲಿರುವ ನುಸುಳು ಹಾದಿಗಳ ಮೂಲಕವೇ ಜಾರಿ ತೋರಿಸಿಕೊಂಡಾಗಸಹಜವಾಗಿಯೇ ಪ್ರಶ್ನೆಗಳು ಅಸಹನೆಯ ಹಾದಿ ಹಿಡಿಯುತ್ತವೆಪ್ರಭುತ್ವದೆದುರು ಪ್ರಶ್ನೆ ಕೇಳಿ ಪಡಿಪಾಟಲಿಗೆ ಸಿಕ್ಕಿಹಾಕಿಕೊಂಡಿರುವ ಹೆಚ್ಚಿನವರ ಸಮಸ್ಯೆ ಇದುತಮ್ಮ ಪ್ರಶ್ನೆಗಳು ಸುಲಭವಾಗಿ ಜನರ ಗಮನ ಸೆಳೆಯಬೇಕೆಂಬ ಕಾರಣಕ್ಕೆಕೇಳುವ ಪ್ರಶ್ನೆಗಳನ್ನು (ಅವು ಸತ್ಯವೇ ಆಗಿದ್ದರೂ) ‘ಜ್ಯೂಸಿ’ಗೊಳಿಸಿದಾಗಲೆಲ್ಲಬಹಳ ಸಶಕ್ತವಾದ ರೆಸ್ಪಾನ್ಸ್ ಮೆಷಿನರಿ ಹೊಂದಿರುವ ಆಡಳಿತ ಪಕ್ಷದ ನಿಗಾ ಘಟಕಗಳೆಲ್ಲ ಏಕಾಏಕಿ ಕಾರ್ಯಾರಂಭಿಸಿ ಬಿಡುತ್ತವೆಇದರ ಫಲವೇ ಸಾಲು ಸಾಲು ಕ್ರಿಮಿನಲ್ ಮೊಕದ್ದಮೆಗಳುಇಂತಹದೆಲ್ಲ ನಡೆದಾಗಎತ್ತಬೇಕಾದ ಮಹತ್ವದ ಪ್ರಶ್ನೆಗಳೆಲ್ಲ ಬದಿಗೆ ಸರಿದು ಯಾವ್ಯಾವುದೋ ಪಿಟ್ಕಾಯಣಗಳು ಮುನ್ನೆಲೆಗೆ ಬರುತ್ತವೆಆಳುವವರು ಇದನ್ನೇ ಕಾದುಕೊಂಡಿರುತ್ತಾರೆಸರಳವಾಗಿ ಹೇಳಬೇಕೆಂದರೆಒಂದು ಸರ್ಕಾರದ ಆಡಳಿತ ವೈಖರಿಯನ್ನು ಒಂದಿಡೀ ಅವಧಿಗೆ ಗಮನಿಸಿದ ಬಳಿಕವೂಅದರ ಆಡಳಿತ ನ್ಯೂನತೆಗಳ ಕುರಿತು ಪ್ರಶ್ನೆಗಳನ್ನು ಎತ್ತಿಕೊಂಡೇ ಪ್ರಭುತ್ವವನ್ನು ಉತ್ತರದಾಯಿ ಆಗಿಸಲು ಸಾಧ್ಯವಾಗದಿದ್ದರೆಅದು ಪ್ರಶ್ನಿಸುವವರಲ್ಲೇ ಇರುವ ಕೊರತೆ ಅನ್ನಿಸುತ್ತದೆಆ ರೀತಿಯ ಪ್ರಶ್ನೆಗಳು ಶ್ರಮವನ್ನು ಬೇಡುತ್ತವೆಯಾವುದೋ ಜನಮನ ಕೆರಳಿಸುವ “ಜ್ಯೂಸಿ” ಪ್ರಶ್ನೆಗಳನ್ನು ಎತ್ತಿಕೊಂಡು ಪ್ರಶ್ನಿಸತೊಡಗಿದರೆಅದರಿಂದ ಸಮಸ್ಯೆಗಳೇ ಹೆಚ್ಚು.

ಇಂತಹ ಸಂದರ್ಭದಲ್ಲಿ ಪರಿಸ್ಥಿತಿ ನಿಭಾಯಿಸಲು ಇರುವ ಏಕೈಕ ಹಾದಿ ಎಂದರೆಪ್ರಶ್ನಿಸಲು ಸರಿಯಾದ ಅಲ್ಗಾರಿದಂ ಬಳಸುವುದುಸರ್ಕಾರ ತನ್ನನ್ನು ಪ್ರಶ್ನಿಸುವವರನ್ನು ಹತ್ತಿಕ್ಕಲು ಯಾವ ಕಾನೂನುಗಳನ್ನು ಬಳಸುತ್ತಿದೆಯೋಅದೇ ಕಾನೂನುಗಳನ್ನು ಬಳಸಿಕೊಂಡುದಾಖಲೆಗಳನ್ನು ಮುಂದಿಟ್ಟುಕಾನೂನುಬದ್ಧವಾಗಿಯೇ ಪ್ರಶ್ನೆಗಳನ್ನು ಕೇಳತೊಡಗುವುದು ಸರಿಯಾದ ‘ಅಲ್ಗಾರಿದಂ’ಸಾಂಪ್ರದಾಯಿಕವಾಗಿ ಮಾಧ್ಯಮಗಳು ಈ ಕೆಲಸವನ್ನು ಮಾಡುತ್ತಿದ್ದವುಆದರೆ ಈಗ ಅವು ಅದನ್ನು ಮರೆತಿರುವ ಹಿನ್ನೆಲೆಯಲ್ಲಿನಾಗರಿಕರ ಕಡೆಯಿಂದಲೇ ಈ ಹೊರೆಯನ್ನೂ ಹೊರುವ ಕೆಲಸಗಳು ಆಗಬೇಕಾಗಿವೆಈ ರೀತಿಯ ಪ್ರಶ್ನೆಗಳು ತಕ್ಷಣ ಜನಮನ ಸೆಳೆಯಲಾರವುಆದರೆಇಂತಹ ಪ್ರಶ್ನೆಗಳು ನೂರಾರು ಸಂಖ್ಯೆಯಲ್ಲಿ ಎದ್ದಾಗಒಂದಿಲ್ಲೊಂದು ಹಂತದಲ್ಲಿ ಆಡಳಿತವು ಉತ್ತರದಾಯಿ ಆಗುವುದು ಅನಿವಾರ್ಯವಾಗುತ್ತದೆತಮ್ಮ ಕಣ್ಣೆದುರೇ ನಡೆದಿರುವ ಅನಾಚಾರಗಳಿಗೆ ಉತ್ತರದಾಯಿ ಆಗದ ಸರ್ಕಾರದ ವೈಫಲ್ಯಗಳ ಬಿಸಿ ಅವರದೇ ಮತದಾರರನ್ನೂ ಒಂದಿಲ್ಲೊಂದು ಕಡೆ ತಟ್ಟಿರುತ್ತದೆ ಎಂಬುದನ್ನು ಆಡಳಿತ ಚುಕ್ಕಾಣಿ ಹಿಡಿದಿರುವವರು ಮರೆಯುವಂತಿಲ್ಲ.

andolanait

Share
Published by
andolanait

Recent Posts

ಮುಡಾ: ಇಡಿ ದಾಳಿಗೆ ರಾಜಕೀಯ ಕಾರಣವಲ್ಲ; ಅಶೋಕ್

ಜಾರಿ ನಿರ್ದೇಶನಾಲಯದ ದಾಳಿಗೆ ರಾಜಕೀಯ ಕಾರಣವಲ್ಲ, 3-4 ಸಾವಿರ ಕೋಟಿ ರೂ. ಅಕ್ರಮ ನಡೆದಿದೆ ಎಂದು ಹೇಳಿದ್ದೇ ಕಾಂಗ್ರೆಸ್‌ನವರು: ಪ್ರತಿಪಕ್ಷ…

22 mins ago

BJP ಟಿಕೆಟ್‌ ವಂಚನೆ: ಆರೋಪ ತಳ್ಳಿ ಹಾಕಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ

ನವದೆಹಲಿ: ನನಗೆ ಸಹೋದರಿಯೇ ಇಲ್ಲ ಮತ್ತು ಗೋಪಾಲ್ ಜೋಶಿ ಮೇಲಿನ ಪ್ರಕರಣಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಕೇಂದ್ರ ಸಚಿವ…

27 mins ago

ಮಂಡ್ಯ ಟೂ ಇಂಡಿಯಾ: ಬೃಹತ್‌ ಉದ್ಯೋಗ ಮೇಳಕ್ಕೆ ಮೊದಲ ದಿನ ಅಭೂತಪೂರ್ವ ಸ್ಪಂದನೆ

ಮಂಡ್ಯ ಟೂ ಇಂಡಿಯಾ; ಸಕ್ಕರೆ ನಾಡಿನಲ್ಲಿ 2 ದಿನಗಳ ಬೃಹತ್ ಉದ್ಯೋಗ ಮೇಳ 150ಕ್ಕೂ ಹೆಚ್ಚು ಕಂಪನಿಗಳ ಭಾಗಿ, ಸಾವಿರಾರು…

37 mins ago

ಮುಡಾ ಮೇಲೆ ಇಡಿ ದಾಳಿ: ಸಿಬಿಐ ತನಿಖೆ ನಡೆಸುವರೆಗೂ ಹೋರಾಟ ಮುಂದುವರಿಕೆ: ಸ್ನೇಹಮಯಿ ಕೃಷ್ಣ

ಮೈಸೂರು: ಮುಡಾ ಮೇಲಿನ ಇಡಿ ಕಾರ್ಯಾಚರಣೆ ಕೇವಲ ಸಿಎಂ ಸಿದ್ದರಾಮಯ್ಯ ಅವರ ಕುಟುಂಬದವರ ಪ್ರಕರಣವಲ್ಲ. ಸಂಪೂರ್ಣ ಮುಡಾ ಅಕ್ರಮದ ಬಗ್ಗೆ…

1 hour ago

ಮುಡಾ ಮೇಲೆ ಇ.ಡಿ.ದಾಳಿ: ದಾಖಲೆಗಳನ್ನು ತಿದ್ದಲು ಯಾರಿಂದಲೂ ಸಾಧ್ಯವಿಲ್ಲ: ಡಿಸಿಎಂ ʼಡಿಕೆಶಿʼ

ಬೆಂಗಳೂರು: ಮುಡಾ ಕಚೇರಿ ಮೇಲೆ ಇ.ಡಿ. ಅಧಿಕಾರಿಗಳು ದಾಳಿ ಮಾಡಿ ದಾಖಲೆ ಪರಿಶೀಲಿಸಿದ್ದಾರೆ. ಕಚೇರಿಯಲ್ಲಿಯೇ ದಾಖಲೆಗಳನ್ನು ತಿದ್ದಲು ಯಾರಿಂದಲೂ ಸಾಧ್ಯವಿಲ್ಲ…

2 hours ago

ಮುಡಾ ಕಚೇರಿ ಮೇಲೆ ಇ.ಡಿ.ದಾಳಿ: ಸಿಎಂ ಸಿದ್ದರಾಮಯ್ಯ ಫಸ್ಟ್‌ ರಿಯಾಕ್ಷನ್‌

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿ ಮೇಲೆ ಶುಕ್ರವಾರ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ದಾಳಿ ನಡೆಸಿದ್ದು, ಈ ಬಗ್ಗೆ…

2 hours ago