ಎಡಿಟೋರಿಯಲ್

ಒಬ್ಬ ಹೃದಯವಂತ ವ್ಯಕ್ತಿ ಜಿ.ರಾಜಶೇಖರ

– ಪ್ರಸನ್ನ

ಪಾರ್ಕಿನ್ಸನ್ ಖಾಯಿಲೆಯಿಂದಾಗಿ, ಕಳೆದ ನಾಲ್ಕು ವರ್ಷಗಳಿಂದ ಬಳಲುತ್ತಿದ್ದ ಜಿ.ರಾಜಶೇಖರ ನಿನ್ನೆ ನಿಧನರಾದರು. ಕೆಲವೊಮ್ಮೆ ಸಾವೇ ಸಮಾಧಾನಕರವಂತೆ. ಕಡೆಗೂ ಅವರನ್ನು ಕೊಂಡೊಯ್ದು ಸಂಕಟದಿಂದ ಬಿಡುಗಡೆಗೊಳಿಸಿ, ಸಾವು ಸಮಾಧಾನಕರವಾಗಿಯೇ ನಡೆದುಕೊಂಡಿತು. ಅವರ ಸಂಕಟವನ್ನು ನೋಡುವುದು, ಕಡೆ ಕಡೆಗೆ, ನನ್ನಿಂದಾಗುತ್ತಿರಲಿಲ್ಲ. ಏನೋ ಹೇಳಬೇಕೆಂದು ಅವರು ಪ್ರಯಾಸ ಪಡುವುದು, ಅದನ್ನರಿಯಲೆಂದು ನಾವು ಪ್ರಯಾಸಪಡುವುದನ್ನು, ಇಬ್ಬರನ್ನೂ ಕೊಲ್ಲುತ್ತಿತ್ತು.

ಇತ್ತೀಚೆಗೆ ಉಡುಪಿಗೆ ಹೋದಾಗ ಸಹ ಅವರನ್ನು ಕಂಡು ಬರುವ ದೈರ್ಯವಾಗುತ್ತಿರಲಿಲ್ಲ ನನಗೆ.

ಪಾದರಸದಂತಹ ಮೆದುಳು, ಅದಕ್ಕೆ ತದ್ವಿರುದ್ಧವಾಗಿದ್ದ ಮೃದು ಹೃದಯ ರಾಜಶೇಖರದ್ದು. ಜೊತೆಗೆ, ನಾಚಿಕೆ ಸ್ವಭಾವ, ಹಿಂಜರಿಕೆ. ಆದರೆ, ಒಳ್ಳೆಯ ಪುಸ್ತಕಗಳು ಹಾಗೂ ಒಳಿತಿನ ವಿಚಾರಗಳು ಕನ್ನಡಕ್ಕೆ ತಲುಪುವ ಬಹಳ ಮುಂಚೆಯೇ, ಉಡುಪಿಯ ಮೂಲೆಯಲ್ಲಿದ್ದ, ಸಣ್ಣ ಮನೆಯೊಂದರಲ್ಲಿದ್ದ, ಕಾರಕೂನ ರಾಜಶೇಖರನ್ನು ತಲುಪಿಬಿಡುತ್ತಿತ್ತು.

ಅದು ಹೇಗೋ. ಹಲವು ಆಯಾಮಗಳ ವ್ಯಕ್ತಿತ್ವ ಅವರದ್ದು.

ಮಾರ್ಕ್ಸ್‌ವಾದಿ ರಾಜಶೇಖರ, ಟ್ರೇಡ್ ಯೂನಿಯನ್ ರಾಜಶೇಖರ, ಸಾಹಿತ್ಯ ವಿಮರ್ಶಕ ರಾಜಶೇಖರ, ಅಲ್ಪಸಂಖ್ಯಾತರ ಸಂಗಾತಿ ರಾಜಶೇಖರ… ಇತ್ಯಾದಿ. ಯಾವುದೂ ಇಂದಿನ ಕಾಲಮಾನದಲ್ಲಿ ಗೆಲ್ಲುವುದು ಸಾಧ್ಯವಿರಲಿಲ್ಲ. ಆದರೆ ಸೋಲುವ ಜಾಯಮಾನವಲ್ಲ ರಾಜಶೇಖರದ್ದು. ಸೋಲು ಗೆಲುವುಗಳಾಚೆ ನಡೆದಿದ್ದರು ಅವರು.

ಆತ ಬರೆದದ್ದು ಒಂದೇ ಒಂದು ಪುಸ್ತಕ ‘ಕಾಗೋಡು ಸತ್ಯಾಗ್ರಹ’. ವಿಟ್ಗೆನ್ ಸ್ಟೈನ್ ಎಂಬ ತತ್ತ್ವಜ್ಞಾನಿ ಹೀಗೆಯೇ ಇದ್ದನಂತೆ. ೩೮ ಪುಟಗಳ, ಟ್ರ್ಯಾಕ್ಟಟಸ್ ಎಂಬ ಹೆಸರಿನ ಒಂದು ಸಣ್ಣ ಪುಸ್ತಕ ಬರೆದ ಆತ. ಆದರೆ, ಆಕ್ಸ್ಫರ್ಡ್ ವಿಶ್ವವಿದ್ಯಾಲಯ ಅದನ್ನೇ ಥೀಸಿಸ್ ಎಂದು ಸ್ವೀಕರಿಸಿ ಡಾಕ್ಟರೇಟ್ ಪದವಿ ನೀಡಿತ್ತು. ವಿಟ್ಗೆನ್ ಸ್ಟೈನ್ ಜರ್ಮನಿಯ ಯೂಹೂದ್ಯನಾಗಿದ್ದ. ರಾಜಶೇಖರ ಮಾರ್ಕ್ಸ್ವಾದಿ ಬ್ರಾಹ್ಮಣನಾಗಿದ್ದ. ರಾಜಶೇಖರರೊಟ್ಟಿಗೆ ಒಡನಾಟವಿದ್ದವರಿಗೆ ಅಥವಾ ಬಿಡಿ ಲೇಖನ ಓದಿದವರಿಗಷ್ಟೆ ಗೊತ್ತಿತ್ತು. ಆತನ ಮೌಲ್ಯ.

ಈಗನ್ನಿಸುತ್ತಿದೆ, ರಾಜಶೇಖರ ಏನನ್ನೋ ಹೇಳಬೇಕೆಂದು ಪ್ರಯಾಸಪಡುತ್ತಿದ್ದದ್ದು, ಕೇಳುಗರು ಅದೇನೆಂದು ಅರ್ಥವಾಗದೆ ಪ್ರಯಾಸಪಡುತ್ತಿದ್ದದ್ದು, ಆತನಿಗೆ ಪಾರ್ಕಿನ್ಸನ್ ಖಾಯಿಲೆ ಬಂದ ನಂತರದ ಸಮಸ್ಯೆ ಮಾತ್ರವೇ ಅಲ್ಲ. ಮೊದಲು ಹೀಗೆಯೇ ಇತ್ತು. ಆತನ ಮೆದುಳು ಸಮಾಜವಾದದ ತತ್ವ ಮಿಡಿಯುತ್ತಿದ್ದರೆ, ಹೃದಯ ಕನ್ನಡದ ಹೃದಯವಂತಿಕೆ ಮಿಡಿಯುತ್ತಿತ್ತು. ಸಂವಹನ ಸಾಧಿಸಬೇಕೆಂದರೆ ಕೇಳುಗರ ಹೃದಯವೂ ಮಿಡಿಯಬೇಕು ತಾನೆ.

ಆದರೆ, ಈಚಿನ ದಿನಗಳಲ್ಲಿ ಮಾತು ಮೆದುಳಿಂದ ಕೆಳಕ್ಕಿಳಿಯುವುದೇ ಇಲ್ಲ. ಕಿಡಿ ಕಿಡಿಯಾಗಿ, ಕಿರಿ ಕಿರಿಯಾಗಿ, ಮೇಲು ಮೇಲೆ ಹಾರುತ್ತಿರುತ್ತದೆ. ಮೆದುಳುಗಳ ನಡುವೆ ಎಂದಾದರೂ ಸಂಬಂಧ ಸಾಧ್ಯವೇ? ಎಲ್ಲ ಹಿಂದೂಗಳು ಮೆದುಳು ನೆನಪಿಸಿದ್ದಷ್ಟನ್ನೇ ನುಡಿಯುತ್ತಿದ್ದಾರೆ, ಎಲ್ಲ ಮುಸಲನ್ಮಾರು, ಎಲ್ಲ ಪಕ್ಷಗಳು, ಎಲ್ಲ ನಾಯಕರು, ಅಷ್ಟನ್ನೆ ನುಡಿಯುತ್ತಿದ್ದಾರೆ. ಅವಸರದಲ್ಲಿದ್ದಾರೆ, ಯುದ್ಧೋನ್ಮಾದದಲ್ಲಿದ್ದಾರೆ. ಇಡೀ ಮನುಕುಲಕ್ಕೇ ಪಾರ್ಕಿನ್ಸನ್ ಎಂಬ ಹೆಸರಿನ ಅಭಿವ್ಯಕ್ತಿ ಹೀನತೆಯ ಖಾಯಿಲೆ ಬಡಿದಿದೆ. ಆದರೆ, ಈ ಖಾಯಿಲೆ ಬಲಿ ತೆಗೆದುಕೊಂಡ ಒಬ್ಬ ಹೃದಯವಂತ ವ್ಯಕ್ತಿ ಜಿ.ರಾಜಶೇಖರ.

andolana

Recent Posts

ಅರಣ್ಯ ಅಧಿಕಾರಿಗಳಿಂದಲೇ ಮೈಸೂರಿನಲ್ಲಿ ʻಮರಗಳ ಮಾರಣಹೋಮ’

ಮೈಸೂರು : ನಗರದ ಎನ್‌ಐಇ ಕಾಲೇಜು ಹಿಂಭಾಗದ ಅರಣ್ಯ ಇಲಾಖೆಯ ಶ್ರೀಗಂಧದ ಕೋಠಿ ಆವರಣದಲ್ಲಿ ಕ್ವಾರ್ಟರ್ಸ್ ಕಟ್ಟಡ ನಿರ್ಮಾಣಕ್ಕಾಗಿ ಹತ್ತಾರು…

21 mins ago

ಮೈಸೂರಿನಿಂದ ಲಕ್ನೋಗೆ ಭವ್ಯ ಪೀಠ : UP ವಿಧಾನಸಭೆಯಲ್ಲಿ ಕರ್ನಾಟಕದ ಕಲಾ ಛಾಪು

ಮೈಸೂರು : ಕರ್ನಾಟಕದ ಕಲಾ-ಶಿಲ್ಪ ಪರಂಪರೆಯು ಮತ್ತೊಮ್ಮೆ ರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದೆ. ಮೈಸೂರಿನ ಖ್ಯಾತ ಕರಕುಶಲ ಶಿಲ್ಪಿ ಕೈಸರ್…

1 hour ago

ಮಾರ್ಚ್‌ನಲ್ಲಿ ಬಜೆಟ್‌ ಮಂಡನೆ : ಪೂರ್ವಭಾವಿ ಸಭೆ ಆರಂಭಿಸಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕೃತವಾಗಿ ಗುರುವಾರದಿಂದ ಬಜೆಟ್ ತಯಾರಿಕೆಯ ಪೂರ್ವಭಾವಿ ಸಭೆಗಳನ್ನು ಆರಂಭಿಸಿದ್ದಾರೆ. ಮಾರ್ಚ್.6ರಂದು ವಿಧಾನಸಭೆಯಲ್ಲಿ ಸಿದ್ದರಾಮಯ್ಯ ಅವರು ತಮ್ಮ…

2 hours ago

ಸಾರ್ವಜನಿಕ ಸ್ಥಳದಲ್ಲಿ ಸಿಗರೇಟ್‌ ಸೇದಿ ಫೋಟೋಶೂಟ್:‌ ರಜತ್‌ ವಿರುದ್ಧ ಎಫ್‌ಐಆರ್‌ ದಾಖಲು

ಮೈಸೂರು: ಬಿಗ್‌ಬಾಸ್‌ ಮಾಜಿ ಸ್ಪರ್ಧಿ ರಜತ್‌ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಮೈಸೂರಿನ ಲಕ್ಷ್ಮೀಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ…

2 hours ago

ಮೆಟ್ರೋ ಪ್ರಯಾಣ ದರ ಏರಿಕೆ: ಸಚಿವ ದಿನೇಶ್‌ ಗುಂಡೂರಾವ್‌ ಸಮರ್ಥನೆ

ಬೆಂಗಳೂರು: ಮೆಟ್ರೋ ಪ್ರಯಾಣ ದರ ಹೆಚ್ಚಳ ಮಾಡಿರುವುದನ್ನು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಸಮರ್ಥಿಸಿಕೊಂಡಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು,…

2 hours ago

ಹನೂರು ತಾಲ್ಲೂಕು ವ್ಯಾಪ್ತಿಯಲ್ಲಿ ಮುಂದುವರಿದ ಹಸುಗಳ ಮರಣ ಮೃದಂಗ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು  ಹನೂರು: ತಾಲ್ಲೂಕು ವ್ಯಾಪ್ತಿಯಲ್ಲಿ ಹಸುಗಳ ಮರಣ ಮೃದಂಗ ಮುಂದುವರೆದಿದ್ದು ಸಂಬಂಧಪಟ್ಟ ಪಶುಸಂಗೋಪನಾ…

3 hours ago