ಎಡಿಟೋರಿಯಲ್

‘ಪ್ರಭುತ್ವ’ಕ್ಕೆ ಸವಾಲು, ನಾಮದ ಬಲವೊಂದಿದ್ದರೆ ಸಾಕೊ…

 

   ನ್ಯಥಾ ಭಾವಿಸಬಾರದಾಗಿ ವಿನಂತಿಶೀರ್ಷಿಕೆ ನೋಡಿದ ಕೂಡಲೇ ಅಂಕಣ ಚುನಾವಣೆಯತ್ತ ಹೊರಳಿತು ಎಂದು ಖಂಡಿತ ತಿಳಿದುಕೊಳ್ಳಬಾರದು. ‘ಪ್ರಭುತ್ವ’ಕ್ಕೆ ಸವಾಲು ಎಂದು ಹೇಳಿರುವುದು ಸೀಮಿತವಾಗಿ ಈ ಹೆಸರಿನ ಚಿತ್ರವೊಂದಕ್ಕೆ ಸಂಬಂಧಪಟ್ಟಂತೆ ಮಾತ್ರ. ‘ಪ್ರಜಾಪ್ರಭುತ್ವ’ದ ಸವಾಲಿನ ಕುರಿತು ಇಲ್ಲಿ ಯಾವುದೇ ಮಾತಿಲ್ಲಅದನ್ನು ಓದುಗ/ಮತದಾರ ಮಹಾಪ್ರಭು ಅವರವರ ಭಾವಅವರವರ ಭಕುತಿಗೆ ಅನುಗುಣವಾಗಿ ತಿಳಿದುಕೊಳ್ಳುತ್ತಾರೆ.

ನಾಮದ ಬಲ’ ಕೂಡಚುನಾವಣೆಯಾಗಲಿಅದಕ್ಕೆ ಯಾರದೋ ಹೆಸರಿನ ಪ್ರಸ್ತಾಪವಾಗಲಿ ಇಲ್ಲಿ ಮಾಡುವುದಿಲ್ಲಇದು ತಮ್ಮ ಚಿತ್ರದ ಶೀರ್ಷಿಕೆಯ ಕುರಿತಂತೆ ಎದ್ದ ವಿವಾದಅದರ ಬೆಳವಣಿಗೆವಸ್ತುಸ್ಥಿತಿ ಇತ್ಯಾದಿ ಪ್ರಸಂಗಗಳ ಮಾತು.

ಮೊದಲು ಈ ‘ನಾಮ’ದತ್ತಲೇ ಬರೋಣಇತ್ತೀಚೆಗೆ ಶೀರ್ಷಿಕೆಯೊಂದು ತಮಗೆ ಸಲ್ಲಬೇಕು ಎಂದು ಸುದ್ದಿಯಾದದ್ದು ‘ರೋಸಿ’ ಹೆಸರಿಗೆಒಂದು ‘ರೋಸಿ’ಇನ್ನೊಂದು ‘ರೋಸಿ 45’. ‘ರೋಸಿ’ ಹೆಸರಿನ ಚಿತ್ರ ಇತ್ತೀಚೆಗೆ ಸೆಟ್ಟೇರಿತುಇದು ಲೂಸ್ ಮಾದ ಖ್ಯಾತಿಯ ಯೋಗಿ ಅಭಿನಯದ ೫೦ನೇ ಚಿತ್ರಯೋಗೀಶ್ ತೆರೆಯ ಮೇಲೆ ಲೂಸ್ ಮಾದ ಆಗಿ ಕಾಣಿಸಿಕೊಂಡದ್ದುಮಾವ ವಿಜಯ್ ಮುಖ್ಯಭೂಮಿಕೆಯ ‘ದುನಿಯಾ’ ಮೂಲಕಆ ಪಾತ್ರದ ಹೆಸರು ಅವರ ಹೆಸರಿಗೆ ಅಂಟಿಕೊಂಡಿತುಸಣ್ಣಪುಟ್ಟ ಪಾತ್ರಗಳಿಂದ ಮುಖ್ಯ ಭೂಮಿಕೆಗೆ ಜಿಗಿದ ಯೋಗೀಶ್ ಆಗಲೇ ಐವತ್ತರ ಹೊಸ್ತಿಲಲ್ಲಿದ್ದಾರೆಮೊನ್ನೆ ಅವರ ಐವತ್ತನೇ ಚಿತ್ರದ ಹೆಸರಿನ ಅನಾವರಣ ಮತ್ತು ಮುಹೂರ್ತ ಆಯಿತುವೈ.ರಾಜೇಶ್ಡಿ.ವೈ.ವಿನೋದ್ ಅವರಿಗಾಗಿ ‘ಹೆಡ್‌ಬುಷ್’ ಖ್ಯಾತಿಯ ಶೂನ್ಯ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆಯೋಗೀಶ್ ಪ್ರಕಾರ ಅವರು ಗ್ಯಾಂಗ್‌ಸ್ಟರ್ ಆಗಿ ಕಾಣಿಸಿಕೊಳ್ಳುತ್ತಿರುವ ಚಿತ್ರವಿದು.

ಶಿವರಾಜ್‌ಕುಮಾರ್ 60ನೇ ಜನ್ಮದಿನದ ಸಂದರ್ಭದಲ್ಲಿ ಅವರ ಹೊಸ ಚಿತ್ರದ ಪ್ರಕಟಣೆ ಆಗಿತ್ತುಸಂಗೀತ ಸಂಯೋಜಕ ಅರ್ಜುನ್ ಜನ್ಯ ಹೇಳಿದ ಕಥೆಯನ್ನು ಇಷ್ಟಪಟ್ಟ ಶಿವಣ್ಣಅವರಿಂದಲೇ ಆ ಚಿತ್ರವನ್ನು ನಿರ್ದೇಶಿಸಲು ಹೇಳಿದರುಹೆಸರಾಂತ ನಿರ್ಮಾಪಕರಾದ ‘ನಾತಿಚರಾಮಿ’, ‘ಗಾಳಿಪಟ 2’ ಚಿತ್ರಗಳ ಖ್ಯಾತಿಯ ರಮೇಶ್ ರೆಡ್ಡಿ ಇದನ್ನು ನಿರ್ಮಿಸುವುದಾಗಿಯೂ ಪ್ರಕಟವಾಯಿತುಆಗ ಮೊದಲ ನೋಟದಲ್ಲಿದ್ದ ಹೆಸರು ‘45’ಅಖಿಲ ಭಾರತ ಮಟ್ಟದಲ್ಲಿತೆರೆಗೆ ಬರಲಿರುವ ಈ ಚಿತ್ರದಲ್ಲಿ ಶಿವಣ್ಣ ಅವರೊಂದಿಗೆ ಉಪೇಂದ್ರರಾಜ್ ಬಿ.ಶೆಟ್ಟಿ ಅವರೂ ಪ್ರಮುಖ ಪಾತ್ರಧಾರಿಗಳು ಎಂದೂ ಹೇಳಲಾಯಿತು.

ಈ ನಡುವೆ ನಿರ್ಮಾಣ ಸಂಸ್ಥೆ ‘45’ರ ಬದಲು ‘ರೋಸಿ 45’ ಶೀರ್ಷಿಕೆಯನ್ನು ವಾಣಿಜ್ಯ ಮಂಡಳಿಯಿಂದ ಕೇಳಿರಬೇಕುವಾಣಿಜ್ಯ ಮಂಡಳಿ ಅದಕ್ಕೆ ಅನುಮತಿ ನೀಡಿದೆಈ ಹೆಸರನ್ನು ಶಿವರಾಜ್‌ಕುಮಾರ್ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ ಸೂರಜ್ ಪ್ರೊಡಕ್ಷನ್ಸ್‌ಗೆ ನೋಂದಾಯಿಸಲಾಗಿದೆಈಗ ಡಿ.ವೈ.ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಚಿತ್ರಕ್ಕೂ ಅದೇ ಹೆಸರನ್ನು ಇಟ್ಟಿದೆಕರ್ನಾಟಕ ವಾಣಿಜ್ಯ ಮಂಡಳಿ ಗಮನಕ್ಕೆ ಇದು ಬಂದಿದ್ದುಮೊದಲು ಶೀರ್ಷಿಕೆ ನೋಂದಾಯಿಸಿದವರು ಮಾತ್ರ ಶೀರ್ಷಿಕೆ ಬಳಸಿಕೊಳ್ಳಬಹುದು ಎಂದು ಪತ್ರ ನೀಡಿತ್ತುಹಾಗಾಗಿ ಈ ಶೀರ್ಷಿಕೆ ತನ್ನದು ಎಂದು ಸೂರಜ್ ಸಂಸ್ಥೆ ಹೇಳಿಕೊಂಡಿತ್ತು.

ತಮ್ಮ ಅಭಿನಯದ ಐವತ್ತನೇ ಚಿತ್ರಕ್ಕೆ ‘ರೋಸಿ’ ಹೆಸರೇ ಸೂಕ್ತ ಎಂದುಕೊಂಡ ಯೋಗೀಶ್ ಶಿವಣ್ಣ ಅವರನ್ನೇ ನೇರವಾಗಿ ಕಂಡು ವಿಷಯ ತಿಳಿಸಿದರಂತೆತಮ್ಮ ಮುಂದಿನ ಚಿತ್ರ ‘45’ಅರ್ಜುನ್ ಜನ್ಯ ನಿರ್ದೇಶಿಸುತ್ತಾರೆ ಎಂದು ಜನ್ಮದಿನದಂದು ಸಾಮಾಜಿಕ ತಾಣದಲ್ಲಿ ಹೇಳಿದ್ದ ಶಿವಣ್ಣ ಅವರಿಗೆ ಈ ಹೆಸರು ಬದಲಾದ ವಿಷಯವೇ ಗೊತ್ತಿರಲಿಲ್ಲ ಎನ್ನುವುದು ನಂತರ ತಿಳಿದು ಬಂದ ವಿಷಯಹಾಗಂತ ಅವರೇ ಹೇಳಿದರು ಎಂದು ಯೋಗೀಶ್ ಹೇಳಿದ್ದಾಗಿ ವರದಿಯಾಯಿತುಹಾಗಾಗಿ ಯೋಗೀಶ್ ಅಭಿನಯದ 50ನೇ ಚಿತ್ರ ‘ರೋಸಿ’ ಆಗಲಿದೆಹಾಗಾದರೆವಾಣಿಜ್ಯ ಮಂಡಳಿ ಅವಸರದಲ್ಲಿ ಈ ಶೀರ್ಷಿಕೆಯ ಅಧಿಕೃತತೆಯನ್ನು ಹೇಳಿದ್ದಾದರೂ ಯಾಕೆ ಎಂದು ಕೇಳುವವರೂ ಇದ್ದಾರೆನ್ನಿಮಂಡಳಿಯಲ್ಲಿ ಹೆಸರುಪತ್ರ ವ್ಯವಹಾರಗಳು ತಡವಾದರೆಬೇರೆಡೆ ಅದನ್ನು ಮಾಡಿಕೊಳ್ಳುವ ವ್ಯವಸ್ಥೆಯೂ ಇರುವುದರಿಂದ ಇಂತಹ ಅಬದ್ಧಗಳಿಗೆ ದಾರಿಯಾಗಿದೆ.

ಇನ್ನು ‘ಪ್ರಭುತ್ವ’ದ ಸವಾಲಿನ ವಿಷಯಈ ವಾರ ತೆರೆಗೆ ಬರಬೇಕಾಗಿದ್ದ ಚಿತ್ರವಿದುಮೇಘರಾಜ್ ಮೂವೀಸ್ ಲಾಂಛನದಲ್ಲಿ ಶಿವಕುಮಾರ್ ಎನ್ನುವವರು ನಿರ್ಮಿಸಿರುವ ಚಿತ್ರಚಿತ್ರದ ಹೆಸರೇ ಸೂಚಿಸುವಂತೆಇದು ಪ್ರಭುತ್ವಕ್ಕೆ ಸಂಬಂಧಿಸಿದಂತೆ ಇರುವ ಕಥಾನಕ ಎನ್ನುತಾರೆಕಥೆಗಾರರೂ ಆಗಿರುವ ನಿರ್ಮಾಪಕನಿವೇಶನೋದ್ಯಮಿ ಶಿವಕುಮಾರ್.

2018ರಲ್ಲಿ ನಡೆದ ವಿಧಾನಸಭಾ ಚುನಾವಣೆಗೆ ಮೊದಲು ತೆರೆಗೆ ಬರಬೇಕಾಗಿದ್ದ ಚಿತ್ರವದು. 2017ರಲ್ಲೇ ಈ ನಿರ್ಮಾಪಕರು ಕಥೆಯನ್ನು ಸಿದ್ಧಪಡಿಸಿಚುನಾವಣೆಮತದಾನದ ವೇಳೆ ಪ್ರಜೆಯ ಕರ್ತವ್ಯವೇ ಮೊದಲಾದವನ್ನು ಸೇರಿಸಿ ಈ ಕಥೆ ಸಿದ್ಧಪಡಿಸಿದ್ದರಂತೆಇದೀಗ ಮತ್ತೆ ಚುನಾವಣೆ ಬಂದರೂ ಚಿತ್ರ ಸಿದ್ಧವಾಗಿರಲಿಲ್ಲಮೊನ್ನೆ ನಿರ್ಮಾಪಕರು ಪತ್ರಿಕಾಗೋಷ್ಠಿ ಕರೆದಿದ್ದರುವಾಣಿಜ್ಯ ಮಂಡಳಿಯಲ್ಲಿ ಈ ಗೋಷ್ಠಿ ಕರೆದದ್ದರ ಉದ್ದೇಶತಮ್ಮ ಚಿತ್ರದ ನಿರ್ದೇಶಕರುಚಿತ್ರ ಬಿಡುಗಡೆ ಮಾಡದಂತೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿರುವುದಾಗಿ ಅವರ ವಕೀಲರು ಕಳುಹಿಸಿರುವ ಪತ್ರದ ಕುರಿತಂತೆ ಹೇಳುವುದು ಹಾಗೂ ಮಂಡಳಿಗೆ ಈ ಕುರಿತು ದೂರು ನೀಡುವುದುವಾಣಿಜ್ಯ ಮಂಡಳಿಯ ಅಧ್ಯಕ್ಷರ ಕಾರ್ಯ ಬಾಹುಳ್ಯವೋ ಏನೋಅವರ ಗೈರು ಹಾಜರಿಯಲ್ಲಿ ನಿರ್ಮಾಪಕ ಶಿವಕುಮಾರ್ ಪತ್ರಿಕಾ ಗೋಷ್ಠಿ ಆರಂಭಿಸಿದರುನಿರ್ಮಾಪಕರ ಮಗ ರವಿರಾಜ್ಚಿತ್ರದ ಜಂಟಿ ನಿರ್ದೇಶಕ ವಿನಯ ಮೂರ್ತಿಮುಖ್ಯ ಪಾತ್ರಧಾರಿಗಳಾದ ಚೇತನ್ ಚಂದ್ರ ಮತ್ತು ಪಾವನಾ ಪತ್ರಿಕಾಗೋಷ್ಠಿಯಲ್ಲಿದ್ದರುಚೋದ್ಯವೆಂದರೆತಡೆಯಾಜ್ಞೆಯಲ್ಲಿ ಇಷ್ಟೂ ಜನರ ಹೆಸರಿತ್ತು ಎನ್ನುವುದು.

ನಿರ್ಮಾಪಕರ ಪ್ರಕಾರ, 2017ರಲ್ಲಿ ಸದ್ರಿ ನಿರ್ದೇಶಕರುಈ ಚಿತ್ರವನ್ನು ನಿರ್ದೇಶಿಸಿಮೊದಲ ಪ್ರತಿ ನೀಡಲು 2.5 ಕೋಟಿ ರೂನಿರ್ಮಾಣ ವೆಚ್ಚಕ್ಕೆ ಒಪ್ಪಿದವರು, 2022ರಲ್ಲಿ ಚಿತ್ರೀಕರಣ ಮುಗಿಸುವ ವೇಳೆಗೆ ಎಂಟು ಕೋಟಿ ರೂವೆಚ್ಚ ಮಾಡಿದ್ದಾರೆಚಿತ್ರೀಕರಣೋತ್ತರ ಕೆಲಸಗಳು ಇನ್ನೂ ಆಗಿರಲಿಲ್ಲತಾವೇ ಮಾಡಿಕೊಡುವುದಾಗಿ ಹೇಳಿ ಮತ್ತೆಮತ್ತೆ ಹಣ ಪಡೆದು ಕೆಲಸ ಮಾಡಲಿಲ್ಲನಂತರ ಸಿನಿಮಾದ ಸಂಕಲನಕಾರರುಜಂಟಿ ನಿರ್ದೇಶಕರು ಸೇರಿ ಆ ಕೆಲಸ ಮುಗಿಸಲಾಗಿದೆಮಾತ್ರವಲ್ಲಚಿತ್ರಕ್ಕೂ ತಮಗೂ ಯಾವುದೇ ರೀತಿಯ ಸಂಬಂಧ ಇಲ್ಲ ಎಂಬುದಾಗಿ ಕೊನೆಯಲ್ಲಿ ಬರೆದುಕೊಟ್ಟಿದ್ದಾರೆ.

ಇದನ್ನು ಹೇಳಿದ್ದು ಮಾತ್ರವಲ್ಲದೆನಿರ್ದೇಶಕರು ಬರೆದು ಕೊಟ್ಟ ಪತ್ರದ ಪ್ರತಿವಾಣಿಜ್ಯ ಮಂಡಳಿಗೆ ನೀಡಿದ ದೂರಿನ ಪ್ರತಿ ಹಾಗೂ ವಕೀಲರಿಂದ ಬಂದ ಪತ್ರದ ಪ್ರತಿಗಳನ್ನು ನೀಡಿದರು.

ತಮಗೂ ಚಿತ್ರಕ್ಕೂ ಸಂಬಂಧವಿಲ್ಲ ಎಂದು ಲಿಖಿತವಾಗಿ ಹೇಳಿದ ನಿರ್ದೇಶಕರು ನ್ಯಾಯಾಲಯದ ಮೂಲಕ ತಡೆಯಾಜ್ಞೆ ತಂದಿದ್ದಾರೆಚುನಾವಣೆಗೆ ಮೊದಲೇ ಈ ಚಿತ್ರವನ್ನು ತೆರೆಗೆ ತರುವ ನಿರ್ಮಾಪಕರ ಧಾವಂತಕ್ಕೆ ಕೊಂಚ ತಡೆಯಾದರೂತಡೆಯಾಜ್ಞೆ ತೆರವುಗೊಳಿಸಿ ಬಿಡುಗಡೆ ಮಾಡುವುದು ಅಸಾಧ್ಯದ ಮಾತೇನಲ್ಲನಿರ್ಮಾಪಕರು ಹೇಳಿದ ವಿವರಗಳನ್ನು ಕೇಳಿದರೆಅವರ ಔದಾರ್ಯವನ್ನು ನಿರ್ದೇಶಕರು ಬಳಸಿಕೊಂಡಿದ್ದು ಸ್ಪಷ್ಟಕಳೆದ ಐದು ವರ್ಷಗಳಲ್ಲಿ ಚುನಾವಣೆಯಲ್ಲಿ ಗೆದ್ದು ಬಂದ ಶಾಸಕ ತಮ್ಮ ಕ್ಷೇತ್ರಕ್ಕೆ ಎಷ್ಟು ಸಹಾಯ ಮಾಡಿದರೋ ಏನೋಆದರೆ ಈ ನಿರ್ಮಾಪಕರುತಮ್ಮ ನಿರ್ದೇಶಕರನ್ನು ಅಷ್ಟೊಂದು ಚೆನ್ನಾಗಿ ನೋಡಿಕೊಂಡಿದ್ದಾರೆಅವರಿಗೆ ಇರಲು ಬಾಡಿಗೆ ಮನೆ ಕೊಡಿಸಿಅವರ ಮದುವೆ ವೆಚ್ಚ ನೋಡಿಕೊಂಡುದೈನಂದಿನ ದಿನಸಿ ಮತ್ತಿತರ ವೆಚ್ಚಗಳಿಗಾಗಿ 1200 ರಿಂದ 1800 ರೂವರೆಗೆ ಪ್ರತಿದಿನ ನೀಡಿಅವರ ಮಡದಿಮಗು ಚಿಕಿತ್ಸೆಯೇ ಮೊದಲಾದ ವೆಚ್ಚಗಳನ್ನೂ ಭರಿಸಿದ್ದರಿಂದ ನಿರ್ದೇಶಕರು ತಮ್ಮ ಕೆಲಸವನ್ನು ಮರೆತರೇನೋನಿರ್ದೇಶಕರ ವಿರುದ್ಧ ಕ್ರಮಕೈಗೊಳ್ಳಲು ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ ನಿರ್ಮಾಪಕರುನಿರ್ದೇಶಕರ ಸಂಘದ ಗಮನಕ್ಕೆ ಇದನ್ನು ತರಬೇಕುಅಲ್ಲಿನ ವಿಷಯ ಮತ್ತೊಮ್ಮೆ ಹೇಳೋಣ.

ನಿರ್ಮಾಪಕರಿಗೆ ತಾವು ಬರೆದು ಕೊಟ್ಟ ಪತ್ರದ ಸುಳಿವು ನೀಡದೆಚಿತ್ರದ ಬಿಡುಗಡೆಗೆ ತಡೆನೀಡಲು ನಿರ್ದೇಶಕರು ನ್ಯಾಯಾಲಯದ ಮೊರೆ ಹೋಗಿ ಯಶಸ್ವಿಯೇನೋ ಆದರುಆದರೆ ನಿರ್ಮಾಪಕರು ಆ ಪತ್ರವನ್ನು ನ್ಯಾಯಾಲಯದ ಮುಂದೆ ಇಟ್ಟಾಗಅದೇನು ಮಾಡುತ್ತದೋ ಕಾದು ನೋಡೋಣಹೊಸದಾಗಿ ಚಿತ್ರ ನಿರ್ಮಾಣಕ್ಕೆ ಬರುವವರಲ್ಲಿ ಇಂತಹ ಅನುಭವ ಆಗುವ ನಿರ್ಮಾಪಕರ ಸಂಖ್ಯೆ ಕಡಿಮೆ ಏನೂ ಅಲ್ಲ.

 

andolanait

Recent Posts

ಬಾ.ನಾ.ಸುಬ್ರಹ್ಮಣ್ಯ ಅವರ ವೈಡ್‌ ಆಂಗಲ್‌ | ವಾಣಿಜ್ಯ ಮಂಡಳಿ: ಹೊಸ ಬಿರುಸು, ಗರಿಗೆದರಿದ ಕಲಾವಿದರ ಸಂಘ

ಚುನಾವಣೆ ಕಳೆದು ಚಲನಚಿತ್ರ ವಾಣಿಜ್ಯ ಮಂಡಳಿಗೆ ಹೊಸ ಭಾರವಾಹಿಗಳ ಆಯ್ಕೆ ಆಗಿದೆ. ನಟ, ನಿರ್ಮಾಪಕಿ ಜಯಮಾಲ ನೇತೃತ್ವದ ಆಡಳಿತ ಮಂಡಳಿ…

2 hours ago

ಹೀಲಿಯಂ ಗ್ಯಾಸ್ ಬಲೂನ್ ಮಾರಾಟಕ್ಕಿಲ್ಲ ಕಡಿವಾಣ

ಹಳ್ಳಿಗಳ ಹಬ್ಬ, ಜಾತ್ರೆಗಳಲ್ಲಿ ಬಲೂನ್‌ಗಳ ಮಾರಾಟ ಅವಘಡ ಸಂಭವಿಸಿದರೆ ಯಾರು ಹೊಣೆ? 2025ರ ವರ್ಷಾಂತ್ಯದಲ್ಲಿ ಮೈಸೂರಿನಲ್ಲಿ ನಡೆದಿದ್ದ ಸ್ಫೋಟ ಬಲೂನ್‌ಗಳಿಗೆ…

2 hours ago

ನಗರೀಕರಣದಿಂದ ಮಾದಗಳ್ಳಿ ಕೆರೆಗೆ ಕಂಟಕ

ಕುಕ್ಕರಹಳ್ಳಿ ಕೆರೆಯ ಜಲಮೂಲ ಉಳಿವಿಕೆ ಅಭಿಯಾನ ಅಭಿಯಾನಕ್ಕೆ ಹೆಚ್ಚುತ್ತಿರುವ ಜನಬೆಂಬಲ ನಾಲಾ ನಡಿಗೆ, ನಾಲಾ ಹಬ್ಬ ಆಚರಿಸಲು ನಿರ್ಧಾರ ಗಿರೀಶ್‌…

3 hours ago

ಮಹಾಪಂಚ್‌ ಕಾರ್ಟೂನ್‌

ಮಹಾಪಂಚ್‌ ಕಾರ್ಟೂನ್‌ | ಫೆಬ್ರವರಿ 13 ಶುಕ್ರವಾರ  

5 hours ago

T 20 World Cup : ನಮೀಬಿಯ ವಿರುದ್ಧ ಭಾರತಕ್ಕೆ 93 ರನ್‌ಗಳ ಭರ್ಜರಿ ಜಯ

ಹೊಸದಿಲ್ಲಿ : ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಐಸಿಸಿ ಟಿ20 ವಿಶ್ವಕಪ್ ಪಂದ್ಯದಲ್ಲಿ ಭಾರತ ತಂಡ ನಮೀಬಿಯಾ ವಿರುದ್ಧ…

13 hours ago

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್‌ ಪಂದ್ಯಕ್ಕೆ ಅನುಮತಿ : ಡಿಸಿಎಂ ಡಿ.ಕೆ.ಶಿವಕುಮಾರ್‌

ಬೆಂಗಳೂರು : ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಗಳಿಗೆ ಅನುಮತಿ ನೀಡಲಾಗಿದೆ ಎಂದು  ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಸಚಿವ ಸಂಪುಟ…

14 hours ago