ರಾಜಕೀಯ ನಾಯಕರು ಘನತೆಯಿಂದ ಮಾತಾಡಲಿ
ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ರಾಜಕೀಯ ಪ್ರಮುಖ ನಾಯಕರು ತಮ್ಮ ಭಾಷಣಗಳಲ್ಲಿ ಜನರಿಗೆ ತಾವು ನೀಡಿದ ಕೊಡುಗೆಗಳು, ಅಭಿವೃದ್ಧಿ ಕುರಿತ ಭಾಷಣಗಳ ಬದಲಿಗೆ, ತಮ್ಮ ವಿರೋಧಿಗಳನ್ನು ನಿಂದಿಸುವುದನ್ನೇ ಗುರಿ ಮಾಡಿಕೊಂಡಂತಿದೆ. ಚುನಾಯಿತ ಜನಪ್ರತಿನಿಧಿಗಳ ಭಾಷಣ ಎಂದರೆ ಅದೊಂದು ಎದುರಾಳಿ ನಿಂದನೆ ಎನ್ನುವುದು ಕಡ್ಡಾಯ ಎಂಬಂತಾಗಿದೆ. ಇದು ರಾಜಕೀಯ ನಾಯಕರ ಕುರಿತು ಯುವಸಮೂಹದಲ್ಲಿ ಅಸಹ್ಯ ಹುಟ್ಟಿಸಿದೆ. ಆಡಳಿತ ಪಕ್ಷ ಮತ್ತು ವಿರೋಧಪಕ್ಷಗಳ ನಾಯಕರು ಮತದಾರರನ್ನು ಸೆಳೆಯಲು ತಮ್ಮ ಅವಧಿಯ ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ತಿಳಿಸಬೇಕು. ಆದರೆ ಇಲ್ಲಿ ಅದರ ಹೊರತಾಗಿ ಪ್ರತಿ ಪಕ್ಷಗಳ ತೇಜೋವಧೆಯೇ ಹೆಚ್ಚಾಗಿದೆ. ಈ ವರ್ತನೆಯನ್ನು ಪ್ರಜ್ಞಾವಂತ ನಾಗರಿಕರು ಸಹಿಸುವುದಿಲ್ಲ ಎಂಬುದು ಮಾತ್ರ ಸತ್ಯ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಭಾಷಣವೆಂದರೆ ಕೇಳಲು ವಿರೋಧ ಪಕ್ಷದವರು ಕೂಡ ಹಾಜರಿರುತ್ತಿದ್ದರು. ವಿರೋಧಿಗಳನ್ನು ಟೀಕಿಸಿದರೂ ಅದರಲ್ಲೊಂದು ಘನತೆ, ವ್ಯಂಗ್ಯ ಮತ್ತು ಕಾವ್ಯಾತ್ಮಕತೆಯಿಂದ ಕೂಡಿದ ಭಾಷೆಯನ್ನೇ ಅವರು ಬಳಸುತ್ತಿದ್ದರು. ಆದ್ದರಿಂದ ರಾಜ್ಯದ ರಾಜಕೀಯ ನಾಯಕರು ಇನ್ನು ಮುಂದೆ ಘನತೆಗೆ ತಕ್ಕಂತೆ ಮಾತನಾಡುವತ್ತ ಎಚ್ಚರವಹಿಸಬೇಕು.
-ಬಿ.ಎಸ್.ಚೈತ್ರ, ಚಿತ್ರದುರ್ಗ.
ಕುಮಾರಸ್ವಾಮಿ ಅವರ ಹೇಳಿಕೆಗೆ ಸಿಎಂ, ಬಿಎಸ್ವೈ ಮೌನವೇಕೆ?
ಇದೇ ಜ.2ರಂದು ಮೈಸೂರಿನಲ್ಲಿ ಜಾತ್ಯತೀತ ಜನತಾದಳದಿಂದ ಆಯೋಜಿಸಿದ್ದ ‘ಶರಣರೊಂದಿಗೆ ಕುಮಾರಣ್ಣ‘ ಕಾರ್ಯಕ್ರಮದಲ್ಲಿ, ವೀರಶೈವರ ಮುಖಂಡರನ್ನುದ್ದೇಶಿಸಿ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಯವರು ಮಾತನಾಡಿ ಯಡಿಯೂರಪ್ಪ ಅವರನ್ನು ಬಿಜೆಪಿ ಕಡೆಗಣಿಸಿದೆ, ಬಸವರಾಜ ಬೊಮ್ಮಾಯಿ ಅವರು ಕೂಡ ಮುಖ್ಯಮಂತ್ರಿಯಾಗಿ ಯಾವ ಸ್ವಂತ ತೀರ್ಮಾನ ತೆಗೆದುಕೊಳ್ಳುವ ಹಾಗಿಲ್ಲ. ಬಿಜೆಪಿ ಬೆಂಬಲಿಸುವ ವೀರಶೈವ ನಾಯಕರನ್ನೂ ಕೂಡ ಅಸಡ್ಡೆಯಿಂದ ಕಾಣುತ್ತಿದ್ದಾರೆ. ಇದರಿಂದ ವೀರಶೈವ ಸಮಾಜವು ಎಚ್ಚೆತ್ತುಕೊಂಡು ಬಿಜೆಪಿಯಿಂದ ವಿಮುಖವಾಗುತ್ತಿದೆ ಎಂದಿದ್ದು, ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಈ ವಿಚಾರದ ಬಗ್ಗೆ ಯಡಿಯೂರಪ್ಪ ಅವರು ಮತ್ತು ಬಸವರಾಜ ಬೊಮ್ಮಾಯಿ ಅವರ ಪ್ರತಿಕ್ರಿಯೆ ಏನು? ಕುಮಾರಸ್ವಾಮಿ ಅವರು ಹೇಳುವುದರಲ್ಲಿ ಸತ್ಯಾಂಶವಿದೆಯೇ? ಅಥವಾ ಅದು ಕೇವಲ ಊಹೆಯೇ? ಎಂಬುದರ ಕುರಿತು ಜನರಲ್ಲಿ ಗೊಂದಲ ಸೃಷ್ಟಿಯಾಗಿದೆ. ಆದ್ದರಿಂದ ಈ ಇಬ್ಬರೂ ನಾಯಕರೇ ಆ ಹೇಳಿಕೆಯ ಕುರಿತು ಪ್ರತಿಕ್ರಿಯೆ ನೀಡಬೇಕಿದೆ. ಒಂದು ವೇಳೆ ಅವರುಗಳು ಪ್ರತಿಕ್ರಿಯೆ ನೀಡದಿದ್ದಲ್ಲಿ, ಅದು ಕುಮಾರಸ್ವಾಮಿಯವರ ಹೇಳಿಕೆಗೆ ಬಲ ನೀಡಲಿದೆ. ಅದು ಆ ಮಾತು ನಿಜವೆಂದು ಆ ಸಮುದಾಯ ಪರಿಗಣಿಸ ಬೇಕಾಗಬಹುದು. ಈಗಲಾದರೂ ಸಿಎಂ, ಬಿಎಸ್ವೈ ಪ್ರತಿಕ್ರಿಯಿಸುವುದು ಸೂಕ್ತ.
-ಬ್ಯಾಂಕ್ ಶಿವಕುಮಾರ್, ಜೆ.ಪಿ.ನಗರ, ಮೈಸೂರು.
ಮೈಸೂರು: ಇ-ಸ್ವತ್ತು ಮಾಡಿ ಕೊಡಲು ಅರ್ಜಿದಾರರಿಗೆ ಹಣ ನೀಡುವಂತೆ ಒತ್ತಾಯ ಮಾಡಿದ ಗ್ರಾಮ ಪಂಚಾಯಿತಿ ಪಿಡಿಒ ಕುಳ್ಳೇಗೌಡ ನಾಲ್ಕು ಸಾವಿರ…
ಮೈಸೂರು: ಕಳೆದ ಬಾರಿಯಂತೆ ಈ ಬಾರಿಯೂ ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ…
ಮೈಸೂರು: ನಗರವನ್ನು ಸ್ವಚ್ಛಗೊಳಿಸುವ ಮೂಲಕ ಜನರ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ ವಾಗಿದ್ದು, ಅವರು ಈ ವಿಷಯದಲ್ಲಿ ನಿರ್ಲಕ್ಷ್ಯ…
ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂದು ಪ್ರಸಿದ್ಧಿ ಪಡೆದಿರುವ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಮುಖ್ಯ…
ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್ವಾಶ್ ಮಾಡಲಾಗಿದೆ ಎಂಬ…
ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…