ಎಡಿಟೋರಿಯಲ್

ಆಂದೋಲನ ಓದುಗರ ಪತ್ರ : 08 ಗುರುವಾರ 2022

ಹೆಮ್ಮೆಯ ಮೈ.. ಸೂರು !
ಬೆಂದಕಾಳೂರು
ಬಹಳ ಕಾಲದ ನಂತರ
ಆಯಿತು
ಬೆಂಗಳೂರು
ಮಳೆಯಿಂದ ಆಗಿಹೋಯಿತು
ಈಗ ರಾಜಧಾನಿ
ಬೆಂಗಳೂರು ಅಸ್ತವ್ಯಸ್ತ …
ಸಿಲಿಕಾನ್ ಸಿಟಿಗೆ ಹೋಲಿಸಿದರೆ
ಎಷ್ಟೋ ಪರವಾಗಿಲ್ಲ
ಸಾಂಸ್ಕೃತಿಕ
ರಾಜಧಾನಿ
ನಮ್ಮ ಮೈ……ಸೂರು !
-ಮ.ಗು.ಬಸವಣ್ಣ, ಜೆಎಸ್‌ಎಸ್ ಪ್ರೌಢಶಾಲೆ, ಸುತ್ತೂರು.


‘ತೆರಿಗೆ ಭಿಕ್ಷೆ’ ಪಡೆಯುವುದನ್ನು ನಿಲ್ಲಿಸಿ
ಮೈಸೂರು ನಗರ ಪಾಲಿಕೆಯವರು ಸ್ವತ್ತಿನ ತೆರಿಗೆ ಪಡೆಯುವ ಸಂದರ್ಭದಲ್ಲಿ ಭಿಕ್ಷುಕರ ಸೆಸ್ ವಸೂಲಿ ಮಾಡುತ್ತಾರೆ. ಹಾಗೆಯೇ ರಾಜ್ಯ ಸರ್ಕಾರದ ವತಿಯಿಂದ ಭಿಕ್ಷುಕರ ಪುನರ್ವಸತಿ ಕೇಂದ್ರವು ಕಾರ್ಯನಿರ್ವಹಿಸುತ್ತದೆ. ಪ್ರತಿ ನಗರದ ಸಿಗ್ನಲ್ ಗಳಲ್ಲಿ ಇತ್ತೀಚೆಗೆ ಲೈಂಗಿಕ ಅಲ್ಪ ಸಂಖ್ಯಾತರು ಭಿಕ್ಷಾಟನೆ ನಡೆಸುವುದು ಮಿತಿ ಮೀರಿದೆ. ರೈಲುಗಳಲ್ಲಿಯೂ ಇವರ ಉಪಟಳ ವಿಪರೀತವೆನಿಸುವಷ್ಟು ಹೆಚ್ಚಾಗಿದೆ. ಇದನ್ನು ನಿಯಂತ್ರಿಸುವಲ್ಲಿ ಪಾಲಿಕೆಗಳು ಮತ್ತು ಪುನರ್ವಸತಿ ಕೇಂದ್ರಗಳು ವಿಫಲವಾಗಿವೆ. ಇವರುಗಳನ್ನು ಕರೆದುಕೊಂಡು ಹೋಗಿ ಜೀವನ ನಿರ್ವಹಣೆಗೆ ಸಹಾಯವಾಗುವ ಬೇರೆ ಯಾವುದಾದರೂ  ಅವಶ್ಯ ತರಬೇತಿ ನೀಡುವುದು ಪುನರ್ವಸತಿ ಕೇಂದ್ರಗಳ ಕೆಲಸವಾಗಿದೆ. ಅದನ್ನು ನಿರ್ವಹಿಸಲು ಸಾಧ್ಯವಾಗದಿದ್ದರೆ ಭಿಕ್ಷುಕರ ಸೆಸ್ ವಸೂಲಿಮಾಡಲು ಸರ್ಕಾರಕ್ಕೆ ಯಾವುದೇ ಹಕ್ಕಿಲ್ಲ.
-ಎಸ್.ರವಿ, ಮೈಸೂರು.

ಕಾಯಕ ಯಾವುದು?
ಕಾಯಕವೇ ಕೈಲಾಸ ಎನ್ನುವುದು ನಿರ್ಬಂಧಿತ ಸತ್ಯ. ನಾವು ಇಷ್ಟಪಟ್ಟು ಮಾಡುವ, ಮಾಡುವುದನ್ನು ಸಂತೋಷಿಸುವ, ಅಥವಾ ತಿಳಿದು ಸಂತೋಷದಿಂದ ಮಾಡುವ ಕಾಯಕ ಕೈಲಾಸವೇ ಆಗಬಹುದು. ಆದರೆ ವರ್ಗ ಸಮಾಜದಲ್ಲಿ ಮಾಲೀಕರಿಗಾಗಿ, ಜಾತಿಯ ಸಂಕೋಲೆಯಲ್ಲಿ ಉಳ್ಳವರಿಗಾಗಿ, ‘ಜಾತಿ ಶ್ರೇಷ್ಠ’ರಿಗಾಗಿ ಮಾಡುವ ಕಾಯಕ ಖಂಡಿತ ಕೈಲಾಸವಲ್ಲ. ನಮ್ಮನ್ನು ಕಾಯಕದ ಸಂಕೋಲೆಯಲ್ಲಿ ಬಂಧಿಸಿ ಕೇವಲ ಕಾರ್ಮಿಕರನ್ನಾಗಿಸಿ, ನಮ್ಮ ಮಾನವ ಘನತೆಯನ್ನು, ಸೃಜನ ಶೀಲತೆಯನ್ನು ಕಿತ್ತುಕೊಳ್ಳುವ  ಕಾಯಕ ಖಂಡಿತ ಕೈಲಾಸವಲ್ಲ. ಸ್ವಾತಂತ್ರ್ಯಗಳಿಸುವುದೆಂದರೆ ಜನ್ಮಸಿದ್ಧ ಹಕ್ಕುಗಳಾದ ಮಾನವ ಘನತೆಯನ್ನು, ಸೃಜನಶೀಲತೆಯನ್ನು ಗಳಿಸುವುದು. ಹುಟ್ಟಿನಿಂದಲೇ ಮನುಷ್ಯರ ಮೇಲೆ ಶ್ರಮವಿಭಜನೆಯನ್ನು ಹೇರಿದ ಜಾತಿಸಮಾಜದಲ್ಲಿ, ಉಳ್ಳವರು ಹೇರಿದ ಕಾಯಕದ ವರ್ಗಸಮಾಜದಲ್ಲಿ ಬದುಕುತ್ತಿರುವ ಯಾರೊಬ್ಬರೂ ಸ್ವತಂತ್ರರಲ್ಲ. ಅಂಥ ಯಾರಿಗೂ ಮಾನವ ಘನತೆ ಇಲ್ಲ. (ಬಸವಣ್ಣ ಹೇಳಿದ್ದು ‘ಶರಣರ ಕಾಯವೇ ಕೈಲಾಸ’ ಎಂದು.)
-ಲಕ್ಷ್ಮಿನಾರಾಯಣ ವಿ.ಎನ್, ಮೈಸೂರು.


ಮೇಯರ್ ಆಯ್ಕೆಯಲ್ಲಿ ಗೊಂದಲ

ಮೈಸೂರು ಮಹಾನಗರಪಾಲಿಕೆಯ ೨೪ ನೇ ಮೇಯರ್ ಆಗಿ ಭಾರತೀಯ ಜನತಾ ಪಕ್ಷದ    ಶಿವಕುಮಾರ್ ಹಾಗೂ ಉಪ ಮೇಯರ್ ಆಗಿ ಅದೇ ಪಕ್ಷದ ಡಾ.ಜಿ.ರೂಪಾರವರು ಆಯ್ಕೆಯಾಗಿದ್ದಾರೆ. ಅವರಿಗೆ ಅಭಿನಂದನೆಗಳು.   ಹಲವಾರು ವರ್ಷಗಳಿಂದ ಮೇಯರ್ ಹಾಗೂ ಉಪ ಮೇಯರ್ ಚುನಾವಣೆಗಳಲ್ಲಿ
ಕಡೆಯ ಹಂತದವರೆಗೂ, ಗೊಂದಲ ಹಾಗೂ ಅನಿಶ್ಚಿತತೆ ಕಾಡುತ್ತಿರುವುದನ್ನು ಮೈಸೂರಿನ ಪ್ರಜ್ಞಾವಂತ ನಾಗರಿಕರು  ಗಮನಿಸುತ್ತಲೇ
ಬಂದಿದ್ದಾರೆ.  ಇದೊಂದು ಪ್ರಹಸನದ ಸ್ವರೂಪ ಪಡೆದುಕೊಂಡಿದೆ. ರಾಜ್ಯದ ಮೂರು ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿ,  ಕಾಂಗ್ರೆಸ್ ಮತ್ತು ಜಾ.ದಳ ಈ ಪ್ರಹಸನದ ಕೇಂದ್ರ ಬಿಂದುಗಳು.  ೧೫ ವರ್ಷಗಳ ಹಿಂದೆ ಮೇಯರ್ ಚುನಾವಣೆ ಇಷ್ಟೊಂದು ಗೊಂದಲಮಯವಾಗಿರಲಿಲ್ಲ.  ಎಲ್ಲವೂ ಪೂರ್ವ ನಿರ್ಧಾರಗಳಂತೆ ನಡೆಯುತ್ತಿದ್ದವು.  ಇತ್ತೀಚಿನ ವರ್ಷಗಳಲ್ಲಿ ಮಾತ್ರ ಈ ಗೊಂದಲ ಹೆಚ್ಚಾಗುತ್ತಲೇ ಬಂದಿದೆ.  ಏಕೆಂದರೆ ನಗರ ಪಾಲಿಕೆಯಲ್ಲಿ ಯಾವ ಪಕ್ಷಕ್ಕೂ ಬಹುಮತ ಇಲ್ಲ. ಈ ಬಾರಿ, ಕಾಂಗ್ರೆಸ್, ಬಿಜೆಪಿ ಹಾಗೂ ಜಾ.ದಳ ಸ್ವತಂತ್ರವಾಗಿಯೇ ಮೇಯರ್ ಹುದ್ದೆಗೆ ಸ್ಪರ್ಧಿಸುವುದಾಗಿ ಹೇಳಿಕೊಂಡು ಬಂದಿದ್ದರೂ ಕಡೆಯ ಕ್ಷಣದಲ್ಲಿ ಬಿಜೆಪಿ ಮತ್ತು ಜಾ.ದಳ  ತಮ್ಮ ನಿಜವಾದ ರಾಜಕೀಯ ದಾಳ ಉರುಳಿಸಿದವು.  ವಾಸ್ತವವಾಗಿ ಜಾ.ದಳಕ್ಕೆ ಉಪ ಮೇಯರ್ ಸ್ಥಾನ ಸಿಕ್ಕಬೇಕಿದ್ದರೂ ಸಹ, ತಾಂತ್ರಿಕ ಕಾರಣದಿಂದ ಅಭ್ಯರ್ಥಿ ರೇಷ್ಮಬಾನುರವರ ನಾಮಪತ್ರ ತಿರಸ್ಕೃತಗೊಂಡಿತು.
ಅದೇನೆ ಇರಲಿ, ಗೆದ್ದ ಅಭ್ಯರ್ಥಿಗಳು ಮೈಸೂರಿನ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಲಿ ಎಂಬುದು  ಮೈಸೂರಿನ ನಾಗರಿಕರ ಕಳಕಳಿ.
– ಕೆ.ವಿ.ವಾಸು, ವಿವೇಕಾನಂದ ನಗರ, ಮೈಸೂರು.
andolanait

Recent Posts

2026ರ ದಸರಾ ಗಜಪಡೆ ಪಟ್ಟಿ ಬಿಡುಗಡೆ: ಅಂಬಾರಿ ಸಾರಥಿ ಅಭಿಮನ್ಯುವಿಗೆ ಕೊಕ್‌

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ 2026ಕ್ಕೆ ಸಿದ್ಧತೆಗಳು ಆರಂಭವಾಗಿದ್ದು, ಈ ಬಾರಿ ದಸರಾ ಗಜಪಡೆಯ ಪಟ್ಟಿಯಲ್ಲಿ ಮಹತ್ವದ…

2 hours ago

ಹನೂರು ಶೂಟೌಟ್‌ ಪ್ರಕರಣ: ತಮಿಳುನಾಡು ಸರ್ಕಾರದಿಂದಲೂ ಮೃತರ ಕುಟುಂಬಕ್ಕೆ ತಲಾ 10 ಲಕ್ಷ ಪರಿಹಾರ

ಚೆನ್ನೈ: ಹನೂರು ಶೂಟೌಟ್ ಪ್ರಕರಣದಲ್ಲಿ ಮೃತರ ಕುಟುಂಬಗಳಿಗೆ ತಮಿಳುನಾಡು ಸರ್ಕಾರದಿಂದಲೂ ತಲಾ 10 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಲಾಗಿದೆ.…

2 hours ago

ಗ್ಯಾರೇಜ್‌ಗೆ ಬೆಂಕಿ ಲಕ್ಷಾಂತರ ಮೌಲ್ಯದ ವಸ್ತುಗಳು ಭಸ್ಮ

ಗುಂಡ್ಲುಪೇಟೆ: ಪಟ್ಟಣದ ಕೇರಳ ರಸ್ತೆಯಲ್ಲಿರುವ ಗ್ಯಾರೇಜ್‌ಗೆ ಬೆಂಕಿ ತಗುಲಿ ಸಂಪೂರ್ಣ ಗ್ಯಾರೇಜ್ ಸುಟ್ಟುಹೋಗಿರುವ ಘಟನೆ ನಡೆದಿದೆ. ಪಟ್ಟಣದ ವಾಹಿದ್ ಎಂಬುವವರಿಗೆ…

3 hours ago

ಕೆಆರ್‌ಎಸ್‌ನಿಂದ ತಮಿಳುನಾಡಿಗೆ 4917 ಕ್ಯೂಸೆಕ್‌ ನೀರು ಬಿಡುಗಡೆ

ಮಂಡ್ಯ: ರಾಜ್ಯದಲ್ಲಿ ಕೆಆರ್‌ಎಸ್‌ ಜಲಾಶಯದ ನೀರಿನ ವಿಚಾರವೂ ಚರ್ಚೆಗೆ ಬಂದಿದ್ದು, ಕೇವಲ 1951 ಕ್ಯೂಸೆಕ್ಸ್‌ ನೀರು ಹರಿದು ಬರುತ್ತಿರುವ ಡ್ಯಾಂನಿಂದ…

3 hours ago

ಕಾಡಾನೆಗಳ ಸೆರೆಗೆ ಕಾರ್ಯಾಚರಣೆ: ಮುಂಜಾಗ್ರತಾ ಕ್ರಮವಾಗಿ ಸೆಕ್ಷನ್ 144 ಜಾರಿ

ಕೊಡಗು: ಸಾರ್ವಜನಿಕರಿಗೆ ಉಪಟಳ ನೀಡುತ್ತಿರುವ ಮೂರು ಗಂಡಾನೆಗಳನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಆದೇಶ ನೀಡಿದೆ. ಇಂದು ಬೆಳಿಗ್ಗೆ 10…

8 hours ago

ಹನೂರು ಎನ್‌ಕೌಂಟರ್: ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದೆವು: ACF ಮರಿಸ್ವಾಮಿ

ಹನೂರು: ಕಾವೇರಿ ವನ್ಯಜೀವಿಧಾಮದಲ್ಲಿ ನಡೆದ ಹನೂರು ಎನ್‌ಕೌಂಟರ್ ಬಗ್ಗೆ ಮೊದಲ ಬಾರಿಗೆ ಕಾವೇರಿ ವನ್ಯಧಾಮದ ACF ಮರಿಸ್ವಾಮಿ ಮಾಧ್ಯಮಗಳಿಗೆ ಪ್ರತಿಕ್ರಿಯೆ…

8 hours ago