ಎಡಿಟೋರಿಯಲ್

ಆಂದೋಲನ ಓದುಗರ ಪತ್ರ: 25 ಶುಕ್ರವಾರ 2022

ಸಾತಗಳ್ಳಿ ಕೆರೆಯನ್ನೂ ಉಳಿಸಿ!

ಅವಸಾನದ ಅಂಚಿಗೆ ತಲುಪಿದ್ದ ದೇವನೂರು ಕೆರೆಯನ್ನು ಸಮಗ್ರ ಅಭಿವೃದ್ಧಿ ಪಡಿಸಲು ಸರ್ಕಾರದ ಪ್ರತಿನಿಧಿಗಳು ಕಾರ್ಯಪ್ರವೃತ್ತ ರಾಗಿರುವುದು ತುಂಬಾ ಸಂತೋಷದಾಯಕ ಸಂಗತಿ. ಅದೇ ರೀತಿ ಸಾತಗಳ್ಳಿ ಕೆರೆಯನ್ನು ಅಭಿವೃದ್ಧಿ ಪಡಿಸದೆ ಅದನ್ನು ಮುಚ್ಚಿ ಕ್ರಿಕೆಟ್ ಸ್ಟೇಡಿಯಂ ಮಾಡುತ್ತಿರುವುದು ಎಷ್ಟು ನ್ಯಾಯ? ಸಾತಗಳ್ಳಿ ಕೆರೆಗೆ ಬರುವ ನೀರಿನ ಸೆಲೆ ಬತ್ತಿದೆ ಎಂದು ಹೇಳಿ ಕೆರೆಯನ್ನು ಮುಚ್ಚುವ ಬದಲು ಮಳೆ ನೀರನ್ನು ಸಂಗ್ರಹ ಮಾಡುವ ಮೂಲಕ ಗಮನ ಹರಿಸಿ ಕೆರೆಯನ್ನು ಅಭಿವೃದ್ಧಿ ಪಡಿಸುವುದು ಉತ್ತಮ. ಕ್ರಿಕೆಟ್ ಪ್ರೇಮಿಗಳಿಗೆ ನಿರಾಸೆ ಮಾಡದೆ ಬೇರೆ ಕಡೆ ಸರ್ಕಾರದವರು ಭೂಮಿಯನ್ನು ಗುರುತಿಸಿ ಕೊಡುವುದು ಸೂಕ್ತ. ಸಂಬಂಧ ಪಟ್ಟವರು ಇತ್ತಾ ಕಡೆ ಗಮನ ಹರಿಸಬೇಕು.
-ಬೆಸಗರಹಳ್ಳಿ ರವಿ ಪ್ರಸಾದ್ , ಮೈಸೂರು.


ಜನಮಾನಸದಲ್ಲಿ ಮಾಸದ ‘ಕೆಂಪಗಿ ದೊರೆ’

ದಮನಿತರ ದನಿಯಾಗಿ, ಕಾರ್ಮಿಕರ ನೇತಾರರಾಗಿ ಜನಮಾನಸದಲ್ಲಿ ಸದಾ ಹಚ್ಚ ಹಸಿರಾಗಿ ಉಳಿದು, ತಳ ಸಮುದಾಯಕ್ಕೆ ಆಶಾಕಿರಣದ ಬೆಳಕಾದವರು ‘ಆಂದೋಲನ’ ದಿನಪತ್ರಿಕೆ ಸಂಸ್ಥಾಪಕ ಸಂಪಾದಕರ ರಾಜಶೇಖರ ಕೋಟಿಯವರು. ಅವರು ಕೇವಲ ನೆನಪಲ್ಲ. ನಮ್ಮೊಂದಿಗೆ ಇದ್ದಾರೆ. ಅವರ ಆಶೋತ್ತರಗಳು ಸದಾ ನಮ್ಮನ್ನೂ ಬಡಿದೆಬ್ಬಿಸಿ ನಾವು ಸಾಮಾಜಿಕ ನ್ಯಾಯದ ಕೆಲಸಗಳು ಮಾಡಲು ಪ್ರೇರೇಪಿಸುತ್ತಿವೆ. ಅವರ ಅಕಾಲಿಕ ನಿಧನದ ಬಳಿಕವೂ ‘ಆಂದೋಲನ’ ಸಂಪಾದಕರು ಅದೇ ಹಾದಿಯಲ್ಲಿ ಸಾಗುವ ಮೂಲಕ ಕೋಟಿಯವರ ದಾರ್ಶನಿಕ ಹೆಜ್ಜೆ ಗುರುತು ಉಳಿಸುತ್ತಿರುವುದು ಮಾತ್ರವಲ್ಲದೆ, ದಮನಿತರಾದ ನಮ್ಮಂತಹ ಅನೇಕರಿಗೆ ವೇದಿಕೆ ನೀಡುತ್ತಿದ್ದಾರೆ. ಕೋಟಿಯವರ ಹೆಸರನ್ನು ಮೈಸೂರು ನಗರದ ವೃತ್ತವೊಂದಕ್ಕೆ ಇಡಬೇಕೆಂಬುದು ನನ್ನ ಮನವಿಯಾಗಿದೆ. ಆ ಮೂಲಕ ಜನಮಾನಸದಲ್ಲಿ ‘ಕೆಂಪಂಗಿ ದೊರೆ’ ಕೋಟಿಯವರು ಸದಾ ಜೀವಂತವಾಗಿ ಇರುತ್ತಾರೆ.

– ಕೆ.ಮಹೇಶ್, ವಕ್ತಾರರು, ಜಿಲ್ಲಾ ಕಾಂಗ್ರೆಸ್ ಸಮಿತಿ.


ನಾಗರಿಕ ಸಮಾಜ ತಲೆ ತಗ್ಗಿಸುವಂತಹ ಕೃತ್ಯ

ಹೆಗ್ಗೋಠಾರದಲ್ಲಿ ದಲಿತ ಮಹಿಳೆಯೊಬ್ಬರು ಸಾರ್ವಜನಿಕ ಟ್ಯಾಂಕ್‌ನ ನಲ್ಲಿಯಲ್ಲಿ ನೀರು ಕುಡಿದರೆಂಬ ಕ್ಷುಲ್ಲಕ ಕಾರಣಕ್ಕೆ ಸವರ್ಣಿಯರು ಆ ಟ್ಯಾಂಕ್‌ನಲ್ಲಿ ಸಂಗ್ರಹವಾಗಿದ್ದ ನೀರನ್ನ ಖಾಲಿ ಮಾಡಿ ಅದನ್ನು ಗೋಮೂತ್ರದಿಂದ ಶುದ್ಧೀಕರಣ ಮಾಡುವ ಮೂಲಕ ಬಹಿರಂಗವಾಗಿಯೇ ಅಸ್ಪೃಶ್ಯತೆ ಆಚರಣೆ ಮಾಡಿದ್ದಾರೆ. ಇದು ನಾಗರಿಕ ಸಮಾಜ ಅನಾಗರಿಕರಂತೆ ನಡೆದುಕೊಂಡಿರುವಂತಹ ಒಂದು ಅಮಾನವೀಯವಾದ ಕೃತ್ಯ. ಈ ಘಟನೆಯಿಂದ ಇಡೀ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಾಗಿದೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು. ಇಂತಹ ಅಮಾನವೀಯ ಘಟನೆಗಳು ಮರುಕಳಿಸದಂತೆ ಜನಜಾಗೃತಿ ಮೂಡಿಸಬೇಕು.

-ಅಪುರಾ, ಅಗತಗೌಡನಹಳ್ಳಿ, ಗುಂಡ್ಲುಪೇಟೆ ತಾಲ್ಲೂಕು.


ವಸ್ತ್ರ ಸಂಹಿತೆ ಮತ್ತು ವಿಶ್ವಕಪ್ ಫುಟಬಾಲ್

ಕತಾರ್ ದೇಶದಲ್ಲಿ ನಡೆಯುತ್ತಿರುವ ವಿಶ್ವಕಪ್ ಫುಟ್‌ಬಾಲ್ ಪಂದ್ಯವನ್ನು ವೀಕ್ಷಿಸುವರ ಮೇಲೆ ಅಲ್ಲಿ ಸರ್ಕಾರ ಹಲವಾರು ಸಂಹಿತೆಗಳನ್ನು ವಿಧಿಸಿದೆ. ಬಿಯರ್, ಮದ್ಯ ಸೇವಿಸುವಂತಿಲ್ಲ. ಮಹಿಳೆಯರು ಮೈ ಕಾಣುವ ಉಡುಪು ಧರಿಸುವಂತಿಲ್ಲ. ಯುವಪ್ರೇಮಿಗಳಿಗೆ ಅವಕಾಶವಿಲ್ಲ. ಹಂದಿ ಮಾಂಸ ಸೇವನೆ ನಿಷಿದ್ಧ. ಹೀಗೆ ತನ್ನ ದೇಶದ ಸಾಂಸ್ಕೃತಿಕ, ಧಾರ್ಮಿಕ ಮತ್ತು ಪರಂಪರೆಗೆ ಅನುಗುಣವಾಗಿ ಕಟ್ಟು ಪಾಡುಗಳನ್ನು ವಿಧಿಸಿದೆ. ಇದನ್ನು ತಪ್ಪು ಎನ್ನಲಾಗದು. ಈ ಸಂಹಿತೆಗಳನ್ನು ಯಾರೂ ಪ್ರಶ್ನಿಸಿಲ್ಲ ಮತ್ತು ಅದನ್ನು ಚಾಚೂ ತಪ್ಪದೇ ಪಾಲಿಸುತ್ತಿದ್ದಾರೆ. ಅಕಸ್ಮಾತ್ ನಮ್ಮ ದೇಶದಲ್ಲೂ , ದೇಶದ ಸಂಸ್ಕ್ರತಿ, ಧಾರ್ಮಿಕತೆ, ಸಂಸ್ಕಾರ ಮತ್ತು ಪರಂಪರೆಗಳಿಗೆ ಅನುಗುಣವಾಗಿ ಇಂತಹ ಸಂಹಿತೆಗಳನ್ನು ವಿದಿಸಿದ್ದರೆ , ಇವುಗಳನ್ನು ವಿರೋಧಿಸಿ ದೇಶಾದ್ಯಂತ ಪ್ರತಿಭಟನೆ ನಡೆಯುತ್ತಿತ್ತು.

-ರಮಾನಂದ ಶರ್ಮ, ಬೆಂಗಳೂರು.

andolana

Recent Posts

ಮನ್‌ಮುಲ್ ಅಧ್ಯಕ್ಷರಾಗಿ ಹರೀಶ್‌ಬಾಬು ಆಯ್ಕೆ ಬಹುತೇಕ ಖಚಿತ

ಬಿ.ಟಿ. ಮೋಹನ್ ಕುಮಾರ್ ಯು.ಸಿ.ಶಿವಕುಮಾರ್ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಇಂದು ಚುನಾವಣೆ  ಮಂಡ್ಯ: ಮಂಡ್ಯ ಜಿಲ್ಲಾ ಹಾಲು ಒಕ್ಕೂಟ (ಮನ್ಮುಲ್)…

2 mins ago

ಅಂದು ಮಿನಿ ವಿಧಾನಸೌಧ, ಇಂದು ಪ್ರಮೋದಾ ದೇವಿ ಒಡೆಯರ ಆಸ್ತಿ?

ಎಸ್.ಎಸ್.ಭಟ್ ನಂಜನಗೂಡು ಜನತೆಯ ಕುತೂಹಲಕ್ಕೆ ಕಾರಣವಾಗಿರುವ ಫಲಕ ನಂಜನಗೂಡು: ೧೯೭೦- ೮೦ರ ದಶಕಗಳಲ್ಲಿ ಮಿನಿ ವಿಧಾನಸೌಧವಿದ್ದ ಜಾಗ ಇಂದು ಪ್ರಮೋದಾದೇವ…

6 mins ago

ಓದುಗರ ಪತ್ರ: ಮೇಕೆ.. ಡಿಕೆ !

ಮೇಕೆ.. ಡಿಕೆ ! ಅಂದು, ಹರಿಯುವ ಕಾವೇರಿ ನದಿಯ ಈ ಕಡೆಯಿಂದ ಆ ಕಡೆಗೆ ಜಿಗಿದು ದಾಟಿ ಬಿಟ್ಟಿತಂತೆ ಮೇಕೆ…

21 hours ago

ಓದುಗರ ಪತ್ರ: ಮಂತ್ರಾಲಯ ಮಠದ ಕಾರ್ಯ ಜನಮೆಚ್ಚುವಂತಹದ್ದು

ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದ ವತಿಯಿಂದ ಸುಮಾರು ೪೦ ಎಕರೆ ಪ್ರದೇಶದಲ್ಲಿ ಜಲಾಶಯ…

21 hours ago

ಓದುಗರ ಪತ್ರ: ಕಾವೇರಿ: ಶಾಶ್ವತ ಪರಿಹಾರ ಅಗತ್ಯ

ಕಳೆದ ವಾರ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ತಮಿಳುನಾಡಿಗೆ ಮುಂದಿನ ೧೫ ದಿನಗಳ ಕಾಲ, ಪ್ರತಿ ದಿನ ೩,೫೦೦ ಕ್ಯೂಸೆಕ್…

21 hours ago

ಕಾಯಕಲ್ಪಕ್ಕೆ ಕಾದಿವೆ ನಿರ್ಲಕ್ಷಿತ ಸರ್ಕಾರಿ ಆಸ್ತಿಗಳು

ವಸಂತಕುಮಾರ್ ಮೈಸೂರು ಮಠ, ಸಾಮಾಜಿಕ ಹೋರಾಟಗಾರ ಮೈಸೂರಿನಲ್ಲಿ ಹಲವೆಡೆ ದುಸ್ಥಿತಿಯಲ್ಲಿರುವ ಹಾಗೂ ಅನೈರ್ಮಲ್ಯ ತಾಣವಾಗಿರುವ ಹಲವು ಸರ್ಕಾರಿ ಕಟ್ಟಡಗಳು, ವಾಚನಾಲಯ…

21 hours ago