ಎಡಿಟೋರಿಯಲ್

ಆಂದೋಲನ ಓದುಗರಪತ್ರ : 09 ಮಂಗಳವಾರ 2022

ಸಂಕೇತಾರಾಧನೆಯಾದ ಲಕ್ಷ್ಮೀ  ಪೂಜೆ

ಅತಿವೃಷ್ಟಿ, ಪ್ರವಾಹ, ಭೂಕುಸಿತ, ತೀವ್ರ ನಿರುದ್ಯೋಗ ಮತ್ತು ಬೆಲೆೆುೀಂರಿಕೆಯ ಈ ದಿನಗಳಲ್ಲಿ ಜನರು ವರಮಹಾಲಕ್ಷ್ಮಿ ಹಬ್ಬಕ್ಕಾಗಿ ಮುಗಿಬಿದ್ದು ವಸ್ತುಗಳನ್ನು ಖರೀದಿಸಿದರು ಎಂದೂ ದೃಶ್ಯ ಮಾಧ್ಯಮಗಳು ವರದಿ ಮಾಡಿದವು. ವಾಸ್ತವವಾಗಿ, ಸಂಪತ್ತು, ಒಡವೆ – ವಸ್ತ್ರಗಳು ಶ್ರಮದ ಉತ್ಪನ್ನಗಳು. ಶ್ರಮಿಕರು ಇವುಗಳ ಸೃಷ್ಟಿಕರ್ತರು. ನಿಸರ್ಗ ಸಹಜ ಪದಾರ್ಥಗಳನ್ನು ಶ್ರಮದಿಂದ ಮಾರ್ಪಡಿಸಿ ಬದುಕಿಗೆ ಅಗತ್ಯವಾದ ವಸ್ತು ಮತ್ತು ಸೇವೆಗಳನ್ನು ಸೃಷ್ಟಿಸುವವರೂ ಶ್ರಮಿಕರೇ. ಇವುಗಳನ್ನು ವಿನಿಮಯ ಮಾಡಿಕೊಳ್ಳಲು ಮಾನವರು ಕಂಡು ಕೊಂಡಿರುವ ಸಾಧನ ಹಣ. ಹಣದ ಮೌಲ್ಯಕ್ಕೆ ಆಧಾರವಾಗಿ ಬಳಸುವ ಬಂಗಾರವೂ ಶ್ರಮದಿಂದ ತಯಾರಾಗುವ ವಸ್ತುವೇ. ನಿಜವಾದ ಆರಾಧನೆ ಶ್ರಮದ ಆರಾಧನೆ ಆಗಬೇಕು. ಲಕ್ಷ್ಮೀ ಹಣದ ಅಂದರೆ ವಸ್ತುವಿನ ಅಂದರೆ ಶ್ರಮದ ಅಧಿದೇವತೆ. ಆದರೆ ಲಕ್ಷ್ಮಿಪೂಜೆಯು ಶ್ರಮದ ನೈಜ ಆರಾಧನೆಯಾಗದೆ ಕೇವಲ ಸಂಕೇತರಾಧನೆ ಆಗಿದೆ. ದೇಶವೆಂದರೆ ಜನರು ಎಂದಾಗದೆ ಅದರ ಸಂಕೇತವಾದ ಭೂಪಟ, ಚಿತ್ರಪಟ ಮತ್ತು ಬಾವುಟಗಳನ್ನು ಆರಾಧಿಸುತ್ತಾರಲ್ಲ ಹಾಗೆ.
-ವಿ. ಎನ್. ಲಕ್ಷ್ಮೀನಾರಾಯಣ, ಮೈಸೂರು.


ಮುರುಘಾ ಶರಣರ ಕ್ರಮ ಸಮಂಸಜವಲ್ಲ

ಚಿತ್ರದುರ್ಗ ಮಠದ ಮುರುಘಾ ಶರಣರು ಪ್ರಗತಿಪರ ಚಿಂತಕರು. ಅಂತಹವರು ವೀರಶೈವ ಲಿಂಗಾಯಿತರ ಓಟಿಗೋಸ್ಕರ ಬಂದಿರುವ ರಾಹುಲ್ ಗಾಂಧಿ ಅವರಿಗೆ ಲಿಂಗಧಾರಣೆಯನ್ನು ಕೂತ ಜಾಗದಲ್ಲೇ, ಯಾವುದೇ ಕ್ರಮವಿಲ್ಲದೆ ಮಾಡಿದ್ದು ಸಮಂಜಸವಲ್ಲ. ವೀರಶೈವರ ಲಿಂಗಧಾರಣೆಗೆ ಅಪಚಾರವೆಸಗಿದ್ದಾರೆ. ಇನ್ನು ವೀರಶೈವರು ಮತ್ತು ಇತರರು ಯಾವ ಕಾವಿಗೆ ಕಾಲಿಗೆರಗಿ ನಮಿಸುತ್ತಿದ್ದರೋ, ಅಂತಹ ಸ್ವಾಮೀಜಿಗಳು ರಾಜಕೀಯ ನಾಯಕರ ಕಾಲಬುಡದಲ್ಲಿ ಕುಳಿತು ವೀರಶೈವ ಲಿಂಗಾಯಿತರಿಗೆ ಅಪಚಾರವೆಸಗಿದ್ದಾರೆ. ವೀರಶೈವ ಲಿಂಗಾಯತ ಸಮುದಾಯ ಇದನ್ನು ಬಲವಾಗಿ ಖಂಡಿಸಬೇಕು.
-ಬ್ಯಾಂಕ್ ಶಿವಕುಮಾರ್, ಜೆ ಪಿ ನಗರ, ಮೈಸೂರು.


ಬಿಸಿಯೂಟದಲ್ಲಿ ಮೊಟ್ಟೆ ಸ್ವಾಗತಾರ್ಹ!

ರಾಜ್ಯದ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಲಕ್ಷಾಂತರ ಮಕ್ಕಳು ಮಧ್ಯಾಹ್ನದ ಬಿಸಿಯೂಟ ೋಂಜನೆಯಡಿ ಆಹಾರ ಸೇವಿಸುತ್ತಿದ್ದಾರೆ. ಇದರಿಂದ ಮಕ್ಕಳ ದಾಖಲಾತಿ ಹಾಗೂ ಹಾಜರಾತಿ ಯಲ್ಲಿ ಗಣನೀಯವಾಗಿ ಹೆಚ್ಚಾಗುತ್ತಿದೆ. ಪ್ರಸ್ತುತ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಮಕ್ಕಳಿಗೆ ವಾರದಲ್ಲಿ ಎರಡು ದಿನ ಮೊಟ್ಟೆ ನೀಡಲು ಸರ್ಕಾರ ನಿರ್ಧರಿಸಿರುವುದು ಉತ್ತಮ ಬೆಳವಣಿಗೆಯಾಗಿದೆ.
ಆದೇ ರೀತಿ ಮಧ್ಯಾಹ್ನದ ಬಿಸಿಯೂಟದಲ್ಲಿ ಮೊಟ್ಟೆ ತಿನ್ನದ ವಿದ್ಯಾರ್ಥಿಗಳಿಗೆ ಬಾಳೆಹಣ್ಣು ಅಥವಾ ಚುಕ್ಕಿ ನೀಡಲು ನಿರ್ಧರಿಸಿರುವ ರಾಜ್ಯ ಸರ್ಕಾರದ ಕ್ರಮ ಕೂಡ ಮೆಚ್ಚುವಂತಹದ್ದು.
-ಹರಳಹಳ್ಳಿಪುಟ್ಟರಾಜು, ಪಾಂಡವಪುರ ತಾ.


ಟೀ ಅಂಗಡಿಗಳಲ್ಲಿ ಧೂಮಪಾನದ ಹಾವಳಿ

ಸಾಂಸ್ಕೃತಿಕ ನಾಡು ಮೈಸೂರಿನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಸಂಪೂರ್ಣವಾಗಿ ನಿಷೇಧವಾಗಿಲ್ಲ. ಇದು ಧೂಮಪಾನಿಗಳಲ್ಲದೆ, ಸ್ಥಳದಲ್ಲಿರುವವರಿಗೂ ಹಾನಿಕಾರಕ. ಕಾಲೇಜು, ಆಸ್ಪತ್ರೆಗಳ ಆವರಣಗಳಲ್ಲಿ ಹೆಚ್ಚಾಗಿ ಧೂಮಪಾನ ಮಾಡುತ್ತಾರೆ. ಅದರಲ್ಲಿಯೂ ಟೀ ಅಂಗಡಿಗಳಲ್ಲಿ ಧೂಮಪಾನಿಗಳಿಗೆ ಒಳಗೆ ಜಾಗ ಕಾಯ್ದಿರಿಸಿರುತ್ತಾರೆ. ಧೂಮಪಾನ ಮಾಡದವರು ಹೊರಗಡೆ ನಿಂತು ಟೀ ಕುಡಿಯುವ ಸ್ಥಿತಿ ಎದುರಾಗಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮವಹಿಸಬೇಕು.
-ಅರ್ಪಣಾ ರಾಜೀವ್, ಮಹಾರಾಜ ಕಾಲೇಜು ವಿದ್ಯಾರ್ಥಿನಿ, ಮೈಸೂರು.

andolana

Recent Posts

ಬೋನಿಗೆ ಬಿದ್ದ ಚಿರತೆ : ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

ಟಿ.ನರಸೀಪುರ : ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಚಿರತೆ ಬಿದ್ದ ಘಟನೆ ಟಿ.ನರಸೀಪುರ ತಾಲ್ಲೂಕಿನ ಶ್ರೀರಂಗರಾಜಪುರ ಗ್ರಾಮದಲ್ಲಿ ನಡೆದಿದೆ. ಕಳೆದ…

58 mins ago

ನನಗೂ ಎಂಎಲ್‌ಸಿ ಸ್ಥಾನ ಕೊಡಿ : ರಕ್ತದಲ್ಲಿ ಸಹಿ ಹಾಕಿ ವರಿಷ್ಠರಿಗೆ ಪತ್ರ ಬರೆದ ಕಾಂಗ್ರೆಸ್ ಕಾರ್ಯಕರ್ತ

ಮೈಸೂರು: ಎಂಎಲ್‌ಸಿ ಸ್ಥಾನಕ್ಕಾಗಿ ರಕ್ತದಲ್ಲಿ ಸಹಿ ಮಾಡಿ ಮನವಿ ಮಾಡಿಕೊಂಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಕಾಂಗ್ರೆಸ್ ಪಕ್ಷದ ಕಾರ್ಯಕರ್ತನೊಬ್ಬರು ತಮ್ಮ…

1 hour ago

ಓದುಗರ ಪತ್ರ:  ದೇವಾಲಯಗಳ ಬಳಿ ಪೊಲೀಸ್ ಗಸ್ತು ಹೆಚ್ಚಿಸಿ

ಧನುರ್ಮಾಸ ಆರಂಭವಾದ ಕೂಡಲೇ ಎಲ್ಲೆಡೆ ದೇವಸ್ಥಾನಗಳಲ್ಲಿ ಬ್ರಾಹ್ಮಿ ಮುಹೂರ್ತದಲ್ಲಿ ಬೆಳಗಿನ ಜಾವ ಪೂಜೆ ಆರಂಭವಾಗುತ್ತದೆ. ಮಹಿಳೆಯರು ಬೆಳಗಿನ ಚಳಿಯಲ್ಲಿಯೇ ದೇವಾಲಯಗಳಿಗೆ…

4 hours ago

ನಂಜನಗೂಡು | ಚಲಿಸುತ್ತಿದ್ದ ಬಸ್‌ ಬೆಂಕಿಗಾಹುತಿ ; 40ಕ್ಕೂ ಹೆಚ್ಚು ಪ್ರಯಾಣಿಕರು ಪಾರು

ಮೈಸೂರು : ಚಲಿಸುತ್ತಿದ್ದ ವೇಳೆಯೇ ಬೆಂಕಿ ಕಾಣಿಸಿಕೊಂಡ ಪರಿಣಾಮ ಕೇರಳ ರಾಜ್ಯ ಸಾರಿಗೆ ಸಂಸ್ಥೆಯ ಬಸ್ ಹೊತ್ತಿ ಉರಿದಿರುವ ಘಟನೆ…

4 hours ago

ಓದುಗರ ಪತ್ರ: ನಂಜನಗೂಡಿನಲ್ಲಿ ಫ್ಲೆಕ್ಸ್‌ಗಳನ್ನು ತೆರವುಗೊಳಿಸಿ

ದಕ್ಷಿಣ ಕಾಶಿ ಎಂದೇ ಖ್ಯಾತಿ ಪಡೆದಿರುವ ನಂಜನಗೂಡು ಪಟ್ಟಣದಿಂದ ಊಟಿ ಮತ್ತು ಸುಲ್ತಾನ್ ಬತ್ತೇರಿಗೆ ಹಾದು ಹೋಗಿರುವ ರಸ್ತೆಗಳಲ್ಲಿ ಮತ್ತು…

4 hours ago

ಓದುಗರ ಪತ್ರ: ಸಬ್ ಅರ್ಬನ್ ಬಸ್ ನಿಲ್ದಾಣದ ಬಳಿ ಆಟೋ ಸಂಚಾರ ನಿಯಂತ್ರಿಸಿ

ಮೈಸೂರು ನಗರದ ಸಬ್ ಅರ್ಬನ್ ಬಸ್ ನಿಲ್ದಾಣದ ಪ್ರವೇಶ ಹಾಗೂ ನಿರ್ಗಮನ ದ್ವಾರಗಳ ಬಳಿ ಆಟೋಗಳನ್ನು ಅಡ್ಡಾದಿಡ್ಡಿಯಾಗಿ ನಿಲುಗಡೆ ಮಾಡುತ್ತಿದ್ದು,…

4 hours ago