ಪಿರಿಯಾಪಟ್ಟಣ ತಾಲ್ಲೂಕಿನ ರಾವಂದೂರು ಮುಂದುವರೆಯುತ್ತಿರುವ ಹೋಬಳಿ ಕೇಂದ್ರವಾಗಿದೆ. ಯಾವುದರಲ್ಲಿ ಮುಂದುವರೆಯುತ್ತಿರುವುದೋ ಗೊತ್ತಿಲ್ಲ, ಆದರೆ ಬಾರ್ಗಳು ಮಾತ್ರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದು ದುರಂತದ ಹಾಗೂ ಕಳವಳಕಾರಿ ಸಂಗತಿಯೆನಿಸಿವೆ. ಈ ಮೊದಲು ಒಂದಿದ್ದರೆ ಈಗ ರಾವಂದೂರಿನಲ್ಲಿ ಎರಡು ಖಾಸಗಿ, ಒಂದು ಎಂಎಸ್ಐಎಲ್, ಜತೆಗೆ ಈಗ ಹೊಸದಾಗಿ ಭೋಗನಹಳ್ಳಿ ತಿರುವಿನಲ್ಲಿ ಒಂದು, ಹೀಗೆ ನಾಲ್ಕು ಬಾರ್ಗಳು ತೆರೆದಿವೆ. ಹೀಗಾದರೆ ಜನರ ಆರೋಗ್ಯ ಹಾಗೂ ಆರ್ಥಿಕ ಪರಿಸ್ಥಿತಿ ಹೇಗೆ ಸುಧಾರಿಸಬೇಕು? ದಿನದ ಸಂಪಾದನೆಯೆಲ್ಲವೂ ರ್ಬಾ ಪಾಲಾದರೆ ಮನೆಯ ನಿರ್ವಹಣೆ ಹೇಗೆ ? ಕುಡಿತದ ಚಟ ಬೆಳೆಸಿಕೊಂಡ ಎಷ್ಟೋ ಮಂದಿ ಯುವಕರು, ಮಧ್ಯಮಯಸ್ಕರ ಜೀವನ ಹಾಗೂ ಅವರ ಮನೆಯವರ ಪಾಡು ದೇವರಿಗೆ ಪ್ರೀತಿ! ಸಂತೋಷ ಮತ್ತು ದುಃಖ ಎರಡಕ್ಕೂ ನೆಪಮಾಡಿಕೊಂಡು ಕುಡಿತಕ್ಕೆ ಹೋಗುವ ಜನರಿಗೆ ಈ ರ್ಬಾ ಗಳು ತವರುಮನೆಯಾಗಿವೆ. ಈ ಬಗ್ಗೆ ಸರ್ಕಾರ, ಜಿಲ್ಲಾಡಳಿತ ಹಾಗೂ ಗ್ರಾಮಾಡಳಿತ ಒಂದಷ್ಟು ಯೋಚಿಸಿ ಯಾವ ಪ್ರಭಾವಕ್ಕೂ ಒಳಗಾಗದೇ ಇವುಗಳಿಗೆ ಕಡಿವಾಣ ಹಾಕಬೇಕು.
-ಗೋವಿಂದೇಗೌಡ, ಅರೇನಹಳ್ಳಿ ಗ್ರಾಮ, ಪಿರಿಯಾಪಟ್ಟಣ ತಾಲ್ಲೂಕು.
ಹನೂರು : ಅತಿಯಾದ ಗಾಳಿಯ ರಭಸಕ್ಕೆ ವಿದ್ಯುತ್ ತಂತಿ ಒಂದಕ್ಕೊಂದು ಸ್ಪರ್ಶಿಸಿ ಬೆಂಕಿ ಹೊತ್ತಿಕೊಂಡು ಜಮೀನಿನಲ್ಲಿದ್ದ 6 ಎಕರೆ ಕಬ್ಬು…
ಮೈಸೂರು: ಆಷಾಢ ಶುಕ್ರವಾರ, ಶನಿವಾರ ಹಾಗೂ ಭಾನುವಾರ ಚಾಮುಂಡಿಬೆಟ್ಟಕ್ಕೆ ಖಾಸಗಿ ವಾಹನಗಳ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ ಎಂದು ಸಚಿವ ಯತೀಂದ್ರ…
ಮೈಸೂರು: ಜೀವವೈವಿಧ್ಯ ತಾಣವಾಗಿರುವn ಹಾಗೂ ಪ್ರಕೃತಿಯ ಸೊಬಗಿನ ವಾತಾವರಣದಿಂದ ಕೂಡಿರುವ ಕಾರಂಜಿ ಕೆರೆ ಉದ್ಯಾನದಲ್ಲಿ ‘ಪರಿಸರ ಅನುಭವ ವಲಯ’ ನಿರ್ಮಾಣ…
ಟಿ.ಕೆ.ಹರೀಶ್ ಸಮುದಾಯಗಳಿಗೆ ಸೂರು, ಶಿಕ್ಷಣ ಒದಗಿಸುವುದು ಅತ್ಯಗತ್ಯ ಭಾರತೀಯ ಅಲೆಮಾರಿ ಜನಾಂಗಗಳು ಕೇವಲ ಸಂಚಾರಿಗಳಲ್ಲ; ಅವರು ನಮ್ಮ ಶ್ರೀಮಂತ ಸಾಂಸ್ಕೃತಿಕ…
ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲ್ಲೂಕು ಕಚೇರಿ ಆಡಳಿತ ಸೌಧದಲ್ಲಿ ಇರುವ ನೆಮ್ಮದಿ ಕೇಂದ್ರದ ಮೂಲಕ ಜಾತಿ ಪ್ರಮಾಣ ಪತ್ರ, ಆದಾಯ…
ನಗರ ಪ್ರದೇಶಗಳ ಹೋಟೆಲ್ಗಳಲ್ಲಿ ನೀಡಲಾಗುವ ಆಹಾರ ಪಾರ್ಸೆಲ್ಗಳು ಹಾಗೂ ಆನ್ ಲೈನ್ ಮೂಲಕ ಸರಬರಾಜಾಗುವ ಶೇ.೯೦ ಕ್ಕಿಂತ ಹೆಚ್ಚು ಆಹಾರ…