ಜಿಲ್ಲೆಗಳು

ಮತದಾನದ ಮಹತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ಕಾರ್ಯಗಾರ

ಮೈಸೂರು: ycc (ಯಂಗ್ ಕಮ್ಯೂನಿಕೆಟರ್ ಕ್ಲಬ್) ಹಾಗೂ ವಿ-ಲೀಡ್ ಆರ್ಗನೈಜೇಷನ್ ಇವರ ವತಿಯಿಂದ ನಗರದ ಶೇಷಾದ್ರಿಪುರಂ ಪದವಿ ಕಾಲೇಜ್ ರವರ ಸಹಯೋಗದೊಂದಿಗೆ ವಿದ್ಯಾರ್ಥಿಗಳಿಗೆ  ಮತದಾನದ ಮಹತ್ವವನ್ನು ತಿಳಿಸಲು ವಿಶೇಷ ಕಾರ್ಯಗಾರವನ್ನು ಏರ್ಪಡಿಸಲಾಗಿತ್ತು.

ಕಾರ್ಯಗಾರದ ಮುಖ್ಯ ಭಾಷಣಕಾರರಾಗಿ ಡಾ ಸೀತಾರಾಮ್ ಹಾಗೂ ರಮೇಶ್ ವೆಂಕಟನಮ್ ರವರು ಭಾಗವಹಿಸಿ ವಿದ್ಯಾರ್ಥಿಗಳಿಗೊಂದಿಗೆ ಇಂಟರಾಕ್ಷನ್ ನಡೆಸುವ ಮೂಲಕ ಒಂದು ಮತದ ಮೌಲ್ಯವೆಷ್ಟು, ಎಷ್ಟು ಮುಖ್ಯವಾಗುತ್ತದೆ ಮತ್ತು ಒಂದು ಮತದಿಂದ ಸರ್ಕಾರವನ್ನು ಕಟ್ಟಲುಬಹುದು ಹಾಗೂ ಕೆಡವಲುಬಹುದು. ಪ್ರತಿಯೊಬ್ಬರೂ ಮತದಾನ ಮಾಡುವುದು ಅವರ ಹಕ್ಕು. 2004ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಎ ಆರ್ ಕೃಷ್ಣಮೂರ್ತಿಯವರು ಸಂತೆಮಾರಹಳ್ಳಿ, ಚಾಮರಾಜನಗರದಿಂದ ಸ್ಪರ್ಧಿಸುವಾಗ ಅವರ ವಿರುದ್ಧ ನಿಂತಿದ್ದ ಅಭ್ಯರ್ಥಿಯಿಂದ ಒಂದು ಮತದಿಂದ ಸೋಲನ್ನು ಅನುಭವಿಸುತ್ತಾರೆ. ಆ ಒಂದು ಮತ ಬೇರೆ ಯಾರದ್ದು ಅಲ್ಲ ಅವರ ಕಾರ್ ಡ್ರೈವರ್ ನಾದು. ಡ್ರೈವರ್ ಬೆಳಗ್ಗೆಯಿಂದ ಸರ್ ಮತದಾನ ಮಾಡಲು ಹೋಗಬೇಕು ಎಂದು ಕೇಳಿದಾಗ ಮತದಾನ ಮಾಡುವಂತೆ ಬಿಡು ಎಂದು ಹೇಳಿದರು, ಆದರೆ ಕಾಲ ಮಿಂಚಿ ಹೋಯಿತು. ಈ ಒಂದೇ ಒಂದು ಕಾರಣದಿಂದಾಗಿ ಸೋಲನ್ನು ಎದುರಿಸಬೇಕಾಯಿತು. ಇದನ್ನು ಉದಾಹರಣೆಯಾಗಿ ಹೇಳುವುದರ ಮೂಲಕ ವಿದ್ಯಾರ್ಥಿಗಳಲ್ಲಿ ಒಂದು ಮತದ ಬೆಲೆ ಎಷ್ಟರಮಟ್ಟಿಗೆ ಎಂಬುದನ್ನು ತಿಳಿಸಿದರು.

ಪ್ರತಿಯೊಬ್ಬರೂ 18 ವರ್ಷ ತುಂಬಿದ ನಂತರ ಮತದಾರರ ಚೀಟಿಯನ್ನು ಪಡೆದುಕೊಳ್ಳಬೇಕು ಮತ್ತು ತಪ್ಪದೇ ತಮ್ಮ ಕ್ಷೇತ್ರಕ್ಕೆ ಬರುವ ಪ್ರತಿಯೊಂದು ಚುನಾವಣೆಯಲ್ಲಿ ಕೂಡ ಮತದಾನ ಮಾಡಬೇಕು. ಸರ್ಕಾರವನ್ನು ತಪ್ಪು ಎಂದು ದೋಷಿಸುವುದು ಬಹಳ ಸುಲಭ ಆದರೆ ಆ ದೋಷದಲ್ಲಿ ನಮ್ಮ ಪಾಲು ಕೂಡ ಅಷ್ಟೇ ಇರುತ್ತದೆ. ನಾವು ಪ್ರಜಾಪ್ರಭುತ್ವದಲ್ಲಿ ಇರುವುದು, ನಮ್ಮ ನಾಯಕರನ್ನು ನಾವೇ ಆರಿಸಿಕೊಳ್ಳಲು ಅವಕಾಶ ಇರುವಾಗ ಅದನ್ನು ತಪ್ಪಿ ಹೋಗಲು ಬಿಡಬಾರದು.ವಿದ್ಯಾರ್ಥಿಗಳಿಗೆ ಇನ್ನಷ್ಟು ಪರಿಣಾಮಕಾರಿಯಾಗಿ ಹೇಳಲು ಅವರ ತರಗತಿಯ ಲೀಡರ್ಗಳನ್ನು ವೇದಿಕೆ ಮೇಲೆ ಕರೆಸಿ ಅವರು ಯಾವ ರೀತಿ ಚುನಾವಣೆಯನ್ನು ಎದುರಿಸಿದರು ಹಾಗೂ ಅವರು ಚುನಾವಣೆಯನ್ನು ಗೆದ್ದ ನಂತರ ಯಾವ ರೀತಿ ತರಗತಿಯ ಹಾಗೂ ಹೋಗುಗಳನ್ನು ನೋಡಿಕೊಳ್ಳುತ್ತಿದ್ದಾರೆ ಎಂದು ಕೇಳಿ ಇನ್ನಷ್ಟು ಪರಿಣಾಮಕಾರಿಯಾಗಿ ಪ್ರಭಾವ ಬೀರುವಂತೆ ಮಾಡಿದರು.

ಅಭ್ಯರ್ಥಿಗಳು ಯಾರು ನಮಗೆ ಇಷ್ಟ ಇಲ್ಲ ಎಂದಾಗ ಅದನ್ನು ಕೂಡ ತೋರಿಸಲು ನಮ್ಮ ಸಂವಿಧಾನದಲ್ಲಿ ಅವಕಾಶವಿದೆ. ಅದೇನೆಂದರೆ ನೋಟ, ನೋಟವನ್ನು ಹಾಕುವುದರ ಮೂಲಕ ನಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಬಹುದು. ಆದರೆ ಮತ ಹಾಕದೆ ಇರಬಾರದು ಎಂದು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು.

ಕಾರ್ಯಕ್ರಮದಲ್ಲಿ ವೈ ಸಿ ಸಿ ಮೈಸೂರು ವಿಭಾಗದ ಅಧ್ಯಕ್ಷರು ಹಾಗೂ ಪ್ರಾಧ್ಯಾಪಕರು, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಮೈಸೂರು ವಿಶ್ವವಿದ್ಯಾನಿಯ ಡಾ ಎಂ ಎಸ್ ಸಪ್ನ, ಪ್ರೊ ಸೌಮ್ಯ ಇರಪ್ಪ ಪ್ರಾಂಶುಪಾಲರು, ಶೇಷಾದ್ರಿಪುರಂ ಕಾಲೇಜ್, ಅಧ್ಯಾಪಕರು, ಆಡಳಿತ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

andolanait

Recent Posts

ಸಂಭ್ರಮದಿಂದ ಹೊಸ ವರ್ಷವನ್ನು ಬರಮಾಡಿಕೊಂಡ ಮೈಸೂರಿಗರು

ಮೈಸೂರು: ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಜಗಮಗಿಸುವ ದೀಪಾಲಂಕಾರ, ಫಲಪುಷ್ಪ ಪ್ರದರ್ಶನದ ಸೊಬಗಿನ ಮಧ್ಯೆ ಪಾರಂಪರಿಕ ಪೊಲೀಸ್‌ ಬ್ಯಾಂಡ್‌ನ ಸದ್ದಿನೊಂದಿಗೆ…

7 hours ago

ವಿದ್ಯುತ್ ಶಾರ್ಟ್ ಸರ್ಕ್ಯೂಟ್: ಕಾಫಿ ಪುಡಿ ಅಂಗಡಿ ಬೆಂಕಿಗಾಹುತಿ

ಕೊಳ್ಳೇಗಾಲ: ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ರಸ್ತೆಯಲ್ಲಿರುವ ಸಾಕಮ್ಮಾಸ್ ಕಾಫಿ ಪುಡಿ ಅಂಗಡಿ ಬುಧವಾರ ರಾತ್ರಿ ಸಂಪೂರ್ಣ…

8 hours ago

ಮೈಸೂರು, ಚಾ.ನಗರ, ಮಂಡ್ಯ, ಕೊಡಗು ಎಸ್‌ಪಿಗಳ ವರ್ಗ

ಮೈಸೂರು: ರಾಜ್ಯದ ವಿವಿಧೆಡೆ ಸೇವೆ ಸಲ್ಲಿಸುತ್ತಿದ್ದ 25 ಮಂದಿ ಐಪಿಎ ಅಧಿಕಾರಿಗಳನ್ನು ರಾಜ್ಯ ಸರ್ಕಾರ ವರ್ಗಾವಣೆಗೊಳಿಸಿ ಆದೇಶ ನೀಡಿದೆ. ಅವರಲ್ಲಿ…

8 hours ago

ಕೊಡಗು ಜಿಲ್ಲೆಯ ನೂತನ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ಬಿಂದುಮಣಿ ನೇಮಕ

ಕೊಡಗು: ಕರ್ನಾಟಕ ಸರ್ಕಾರದ ಆದೇಶದಂತೆ ಕೊಡಗಿನ ಪೊಲೀಸ್‌ ವರಿಷ್ಠಾಧಿಕಾರಿ ರಾಮರಾಜನ್‌ ಅವರನ್ನು ಬೆಳಗಾವಿ ಜಿಲ್ಲೆಗೆ ವರ್ಗಾವಣೆ ಮಾಡಲಾಗಿದೆ. ಖಾಲಿಯಾದ ಸ್ಥಳಕ್ಕೆ…

8 hours ago

ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ ಸೇರಿದ ಟೇಲ್ಸ್ ಬೈ ಪರಿ ಕೃತಿಯ ಪುಟ್ಟ ಲೇಖಕಿ ಪರಿಣಿತಾ

ಬೆಂಗಳೂರು: ಸಣ್ಣ ವಯಸ್ಸಿನಿಂದಲೇ ಬರವಣಿಗೆ ರೂಢಿಸಿಕೊಂಡು 9ನೇ ವಯಸ್ಸಿಗೆ 'ಟೇಲ್ಸ್ ಬೈ ಪರಿ' ಪುಸ್ತಕವನ್ನು ಬರೆದು ಹೆಸರು ಮಾಡಿರುವ ನಮ್ಮ…

11 hours ago

ಅಕ್ರಮ ನಿವಾಸಿಗಳಿಗೆ ಮನೆ: ಸರ್ಕಾರದ ವಿರುದ್ಧ ವಿ.ಸೋಮಣ್ಣ ಆಕ್ರೋಶ

ನವದೆಹಲಿ: ಕೋಗಿಲು ಲೇಔಟ್‌ನಲ್ಲಿ ಅಕ್ರಮ ನಿವಾಸಿಗಳಿಗೆ ಮನೆ ನೀಡುತ್ತಿದ್ದಾರೆ. ಇದು ರಾಜ್ಯ ಸರ್ಕಾರದ ದಡ್ಡತನದ ಪರಮಾವಧಿ ಎಂದು ಕೇಂದ್ರ ಸಚಿವ…

12 hours ago