ಕೊಳ್ಳೇಗಾಲ: ವಿಶೇಷ ಚೇತನರ ಮನೆಗೆ ಕಂದಾಯ ಅಧಿಕಾರಿಗಳೇ ತೆರಳಿ ಆಧಾರ್ ಕಾರ್ಡ್ ಮಾಡಿಕೊಟ್ಟ ಮಾನವೀಯ ಘಟನೆ ತೇರಂಬಳ್ಳಿ ಗ್ರಾಮದಲ್ಲಿ ಜರುಗಿದೆ.
ಕೊಳ್ಳೇಗಾಲ ತಾಲ್ಲೂಕಿನ ತೇರಂಬಳ್ಳಿ ಗ್ರಾಮದ ಮಹದೇವಪ್ಪ ಎಂಬುವವರ ಪುತ್ರ ಚೇತನ್ (೨೪) ವಿಶೇಷ ಚೇತನರಾಗಿದ್ದು ನಡೆದಾಡಲು ಸಾಧ್ಯವಾಗಿದ ಪರಿಸ್ಥಿತಿಯಲ್ಲಿ ಬದುಕು ನೂಕುತ್ತಿದ್ದಾರೆ. ಸರ್ಕಾರದ ನಿರ್ಧಾರದಂತೆ ಮಾಸಾಶನ ತೆಗೆದುಕೊಳ್ಳುವವರೆಲ್ಲರೂ ಆಧಾರ್ ಲಿಂಕ್ ಮಾಡಿಸಬೇಕಾಗಿದ್ದು ಚೇತನ್ ಅವರು ಆಧಾರ್ ಕಾರ್ಡ್ ಲಿಂಕ್ ಮಾಡಿಸದೇ ಇರುವುದರಿಂದ ೩ ತಿಂಗಳ ಮಾಸಾಶನ ನಿಂತುಹೋಗಿತ್ತು.
ಈ ಸಂದರ್ಭದಲ್ಲಿ ಕೊಳ್ಳೇಗಾಲ ತಾಲ್ಲೂಕು ಕಛೇರಿಗೆ ಚೇತನ್ ಅವರನ್ನು ಕರೆದುಕೊಂಡು ಬಂದು ಆಧಾರ್ ಲಿಂಕ್ ಮಾಡಿಸಲು ಅವರ ತಂದೆ ಪ್ರಯತ್ನಪಟ್ಟಾಗ ಚೇತನ್ ಅವರು ಸಾರ್ವಜನಿಕರನ್ನು ನೋಡಿ ಗಾಬರಿಯಾಗಿ ಸೂಕ್ತ ರೀತಿಯಲ್ಲಿ ಸ್ಪಂದಿಸದೇ ಈ ವರೆಗೂ ಮಾಸಾಶನಕ್ಕೆ ಆಧಾರ್ ಲಿಂಕ್ ಮಾಡಿಸಲು ಸಾಧ್ಯವಾಗಿರುವುದಿಲ್ಲ. ಒಮ್ಮೆ ಪಾಳ್ಯ ನಾಡ ಕಛೇರಿ ಹಾಗೂ ತಹಶೀಲ್ದಾರ್ ಕಛೇರಿಗೂ ಬಂದು ಆಧಾರ್ ಲಿಂಕ್ ಮಾಡಿಸಲಾಗದೆ ಸಂಕಷ್ಟ ಅನುಭವಿಸಿದ್ದರು.
ಈ ಸಂಕಷ್ಟವನ್ನು ತಿಳಿದ ತೇರಂಬಳ್ಳಿ ಗ್ರಾಮದ ಲೆಕ್ಕಾಧಿಕಾರಿ ರಾಕೇಶ್ ಮತ್ತು ಗ್ರಾಂ.ಪಂ ಸದಸ್ಯ ರವಿಕುಮಾರ್ ಅವರು ಜಿಲ್ಲಾಧಿಕಾರಿಗಳಿಗೆ ಪತ್ರ ಮುಖೇನ ವಿಚಾರ ತಿಳಿಸಿ ಕೊಳ್ಳೇಗಾಲ ತಹಶೀಲ್ದಾರ್ ಮಂಜುಳ ಅವರ ಅನುಮತಿ ಪಡೆದು ಕಂದಾಯ ಅಧಿಕಾರಿಗಳು ಚೇತನ್ ಅವರ ಮನೆಗೆ ಬಂದು ಆಧಾರ್ ಲಿಂಕ್ ಮಾಡಿಕೊಡಿಸಲು ನೆರವಾದರು.
ಜನರನ್ನು ಕಂಡರೆ ಗಾಬರಿಯಾಗುವ ಚೇತನ್ ಅವರ ಪರಿಸ್ಥಿತಿಯ ನಡುವೆ ಜಿಲ್ಲಾ ಆಧಾರ್ ಸಂಯೋಜಕ ಪ್ರಭುಸ್ವಾಮಿ ಅವರ ಸಲಹೆಯಂತೆ ತಾಳ್ಮೆ ವಹಿಸಿ ಡಾಟಾ ಆಪರೇಟರ್ ಸಂಧ್ಯಾ, ಅನುಪಮಾ ಹಾಗೂ ಮಂಜು ಅವರು ಚೇತನ್ ಅವರ ಮಾಸಾಶನಕ್ಕೆ ಆಧಾರ್ ಲಿಂಕ್ ಮಾಡಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಅಮೆರಿಕ-ಇಸ್ರೇಲ್ ಹಾಗೂ ಇರಾನ್ ನಡುವಿನ ಯುದ್ಧಕ್ಕಿಂತಲ್ಲೂ ಹೆಚ್ಚು ಸದ್ದು ಮಾಡುತ್ತಿರುವುದು ಭಾರತದಲ್ಲಿನ ಎಲ್ಪಿಜಿ ಪೂರೈಕೆ ವಿಚಾರ. ಯುದ್ಧೋನ್ಮಾದ ವೈರತ್ವ ಹೊಂದಿರುವ…
ಶುಭಾ ಖಟಾವಕರ ಮ್ಹೆತ್ರಸ್ ಬಲಾಢ್ಯ ರಾಷ್ಟ್ರಗಳಾದ ಅಮೆರಿಕ -ಇಸ್ರೇಲ್, ಇರಾನ್ ಮೇಲೆ ದಾಳಿ ಶುರು ಮಾಡಿ ೧೩-೧೪ ದಿನಗಳೇ ಕಳೆದು…
ರಾಜ್ಯ ಕಾಂಗ್ರೆಸ್ನಲ್ಲಿ ನಡೆಯುತ್ತಿರುವ ಅಧಿಕಾರ ಹಂಚಿಕೆಯ ಕಚ್ಚಾಟ ನಿರ್ಣಾಯಕ ಘಟ್ಟಕ್ಕೆ ತಲುಪಿದಂತೆ ಕಾಣುತ್ತಿದೆ. ಕಾರಣ ಅಧಿಕಾರ ಹಂಚಿಕೆಯ ಮಾತು ಉಳಿದುಕೊಂಡಿದೆ…
ನವೀನ್ ಡಿಸೋಜ ದೀರ್ಘಕಾಲದ ಬೇಡಿಕೆಗೆ ಸರ್ಕಾರದ ಸ್ಪಂದನೆ; ಕೊಡವರ ಶ್ರೇಯೋಭಿವೃದ್ಧಿಗೆ ಅನುಕೂಲ ಮಡಿಕೇರಿ:ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ರಾಜ್ಯ…
ಹೇಮಂತ್ ಕುಮಾರ್ ಮಂಡ್ಯ: ಪುರಸಭೆಯಾಗಿದ್ದ ಮದ್ದೂರು ಟೌನ್ ಆಡಳಿತ ನಗರಸಭೆಯಾಗಿ ಪರಿವರ್ತನೆ ಗೊಂಡಿದೆ. ಈ ನಗರಸಭೆಗೆ ಅಕ್ಕಪಕ್ಕದ ಗೆಜ್ಜಲಗೆರೆ ಗ್ರಾಮ…
ಗಿರೀಶ್ ಹುಣಸೂರು ಸಿಲಿಂಡರ್ ರೀಫಿಲ್ಲಿಂಗ್ಗೆ ೨೫ ದಿನಗಳ ಅವಧಿ ನಿಗದಿ; ವಸತಿ ಶಾಲೆಗಳು, ಹಾಸ್ಟೆಲ್ಗಳಿಗೆ ಬಿಸಿ ತಟ್ಟುವ ಸಂಭವ ಮೈಸೂರು: ಮಧ್ಯಪ್ರಾಚ್ಯದಲ್ಲಿ…