ಜಿಲ್ಲೆಗಳು

ಟಿಪ್ಪು ನಿಜಕನಸುಗಳು ನಾಟಕ ಪ್ರದರ್ಶನವನ್ನು ನಿಷೇಧಿಸುವಂತೆ ಮನವಿ

ಮೈಸೂರು: ಹುತಾತ್ಮ ಟಿಪ್ಪು ಸುಲ್ತಾನರ ವ್ಯಕ್ತಿತ್ವದ ಬಗ್ಗೆ ಕಾಲ್ಪನಿಕವಾಗಿ ಊಹಿಸಿ ದ್ವೇಷಭರಿತವಾದ ಪುಸ್ತಕ ಮತ್ತು ನಾಟಕ ಮುಟ್ಟುಗೋಲು ಹಾಕಿಕೊಂಡು ಪ್ರದರ್ಶನವನ್ನು ತಡೆಹಿಡಿಬೇಕು ಎಂದು ಫೆಡರೇಷನ್ ಆಫ್ ಮೈಸೂರು ಮುಸ್ಲಿಂ ಆರ್ಗನೈಜೇಷನ್ಸ್ ನಗರ ಪೊಲೀಸ್ ಆಯುಕ್ತ ಬಿ.ರಮೇಶ್ ಅವರಿಗೆ ಮನವಿ ಸಲ್ಲಿಸಿದೆ.

ನಗರದ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಆರ್ಗನೈಜೇಷನ್ಸ್ ಮತ್ತು ಪ್ರಗತಿಪರರ ಸಂಘಟನೆಯ ಮುಖಂಡರು ಸಭೆ ನಡೆಸಿ ನಾಟಕದ ಪ್ರದರ್ಶನವನ್ನು ನಿಷೇಧಿಸುವಂತೆ ಮನವಿ ಮಾಡಿದರು.

ಪಕ್ಷಾತೀತವಾಗಿ ಧರ್ಮಾತೀತವಾಗಿ ಎಲ್ಲಾ ಜಾತಿ – ಮತಗಳ ಜನರನ್ನು ಈ ಸಾಂಸ್ಕ ತಿಕ ವೇದಿಕೆಯಿಂದ ಸೌಹಾರ್ದತೆ, ಜಾತ್ಯತೀತತೆ ಮತ್ತು ಮಾನವೀಂತೆಂನ್ನು ಬೆಳೆಸುವ ಉzಶದಿಂದ ರಂಗಾಂಣವನ್ನು ಸ್ಥಾಪಿಸಿ ಇಲ್ಲಿಂದ ಜನರಿಗೆ ಈ ಎಲ್ಲಾ ಉzಶಗಳು ತಲುಪುವಂತೆ ಮಾಡಬೇಕಾದ ವೇದಿಕೆಂಗಿದೆ. ಆದರೆ ಈಗಿನ ನಿರ್ದೇಶಕರು ಜನರನ್ನು ಜಾತಿಂ ಆಧಾರದ ಮೇಲೆ ವಿಭಜಿಸಲು ಪರಸ್ಪರ ಸಮುದಾಂಗಳ ನಡುವೆ ದ್ವೇಷ – ವೈಮನಸ್ಸು ಮತ್ತು ತಮ್ಮ ಸ್ವಾರ್ಥ ತತ್ವ ಸಿದ್ಧಾಂತಗಳನ್ನು ಹೇರಲು ಈ ವೇದಿಕೆ ಬಳಸುತ್ತಿರುವುದು ಖಂಡನೀಂ.

ಅನೇಕ ವಿವಾದಗಳಲ್ಲೇ ಇರುವ ಈ ನಿರ್ದೇಶಕರು ಈಗ ತಮ್ಮದೇ ಆದ ಲೇಖನವೆಂದು ಹೇಳಿ ‘ಟಿಪ್ತ್ಯ್ಪುವಿನ ನಿಜ ಕನಸುಗಳು‘ ಎಂಬ ಪುಸ್ತಕ ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ನಾಟಕವಿದ್ದು ಆ ನಾಟಕವನ್ನು ನ.೨೦ ರಿಂದ ರಂಗಾಂಣದಲ್ಲೇ ಪ್ರದರ್ಶಿಸುತ್ತಿದ್ದು, ಜಾತ್ಯತೀತ ಮನೋಭಾವವುಳ್ಳ ಸ್ವಾತಂತ್ರ್ಯ ಹೋರಾಟಗಾರ, ಚರಿತ್ರೆಂಲ್ಲಿ ಉಲ್ಲೇಖಿತವಾದ ವ್ಯಕ್ತಿ ಟಿಪ್ತ್ಯ್ಪು ಸುಲ್ತಾನ ಅವರ ಬಗ್ಗೆ ಮತಾಂಧ, ಧರ್ಮ ಪರಿವರ್ತನೆ ಮಾಡಿದ ಎಂಬ ಸುಳ್ಳನ್ನು ಹೇಳಲಾಗಿದೆ.

ಚರಿತ್ರೆಂಲ್ಲಿ ಮಠಮಾನ್ಯ ಮತ್ತು ದೇವಾಲಂಗಳನ್ನು ಜೀರ್ಣೋದ್ಧಾರ ಮಾಡಿದರು ಎಂದಿದ್ದರೆ ಅದರ ವಿರುದ್ಧವಾಗಿ ದೇವಾಲಂಗಳನ್ನು ಹೊಡೆದು ಮಸೀದಿ ಕಟ್ಟಿದ ಎಂಬ ಹಸಿ ಸುಳ್ಳುಗಳನ್ನು ಬರೆದಿದ್ದಾರೆ. ಚರಿತ್ರೆಂಲ್ಲಿ ಂದ್ಧ ರಂಗದಲ್ಲಿ ಮಡಿದದ್ದು ಅದು ವಿರೋಧಿಗಳ ಬಂದೂಕಿನಿಂದ ಎಂದಿದ್ದರೆ ಇವರು ಒಕ್ಕಲಿಗ ಸಮುದಾಂದವರು ಹೊಡೆದರೆಂದು ಅವರ ಹೆಸರುಗಳನ್ನು ಗೌಡ ಎಂದು ನಾಮವಿರುವುದು ಪ್ರಸ್ತಾಪಿಸಿ ಜನರ ಮಧ್ಯೆ ಘರ್ಷಣೆ, ಗಲಭೆ ಮತ್ತು ಅಶಾಂತಿ ಉಂಟಾಗಬೇಕೆನ್ನುವ ಎಲ್ಲಾ ತರದ ಪ್ರಂತ್ನ ಈ ಪುಸ್ತಕದ್ದಾಗಿದೆ. ಹೀಗಾಗಿ ಈ ಪುಸ್ತಕ ಮತ್ತು ನಾಟಕವನ್ನು ಕೂಡಲೇ ಮುಟ್ಟುಗೋಲು ಹಾಕಿಕೊಂಡು, ನಾಟಕವನ್ನು ತಡೆಹಿಡಿಂಬೇಕು ಎಂದು ಫೆಡರೇಷನ್‌ನ ಪದಾಧಿಕಾರಿಗಳು ಪತ್ರದ ಮೂಲಕ ಮನವಿ ಮಾಡಿದರು.

ಮೌಲನ್ ಆಶ್ರದ್, ಮಾಜಿ ಮಹಾಪೌರ ಅಯೂಬ್ ಖಾನ್, ರಂಗಾಯಣದ ಮಾಜಿ ನಿರ್ದೇಶಕ ಜನಾರ್ಧನ್ (ಜನ್ನಿ), ದಲಿತ ವೆಲ್ತ್‌ಫೇರ್ ಟ್ರಸ್ಟ್‌ನ ಶಾಂತರಾಜು, ಆರ್ಗನೈಜೇಷನ್‌ನ ಎಂ.ಎಫ್.ಕಲೀಮ್, ಖವಾಜ ಅಜ್ಹೀಮ್, ಅಜೀಜ್ ಉಲ್ಲಾ, ಮಕ್ಸೂದ್ ಮುಂತಾದವರು ಹಾಜರಿದ್ದರು.

andolana

Recent Posts

ಇಶಾ ಫೌಂಡೇಶನ್‌ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂಕೋರ್ಟ್‌

ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್‌ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್‌ವಾಶ್‌ ಮಾಡಲಾಗಿದೆ ಎಂಬ…

1 hour ago

ಮಡಿಕೇರಿ: ಮಗನಿಂದಲೇ ತಂದೆಯ ಹತ್ಯೆ..

ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…

2 hours ago

ಮುಡಾ: ಇಡಿ ದಾಳಿಗೆ ರಾಜಕೀಯ ಕಾರಣವಲ್ಲ; ಅಶೋಕ್

ಜಾರಿ ನಿರ್ದೇಶನಾಲಯದ ದಾಳಿಗೆ ರಾಜಕೀಯ ಕಾರಣವಲ್ಲ, 3-4 ಸಾವಿರ ಕೋಟಿ ರೂ. ಅಕ್ರಮ ನಡೆದಿದೆ ಎಂದು ಹೇಳಿದ್ದೇ ಕಾಂಗ್ರೆಸ್‌ನವರು: ಪ್ರತಿಪಕ್ಷ…

2 hours ago

BJP ಟಿಕೆಟ್‌ ವಂಚನೆ: ಆರೋಪ ತಳ್ಳಿ ಹಾಕಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ

ನವದೆಹಲಿ: ನನಗೆ ಸಹೋದರಿಯೇ ಇಲ್ಲ ಮತ್ತು ಗೋಪಾಲ್ ಜೋಶಿ ಮೇಲಿನ ಪ್ರಕರಣಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಕೇಂದ್ರ ಸಚಿವ…

2 hours ago

ಮಂಡ್ಯ ಟೂ ಇಂಡಿಯಾ: ಬೃಹತ್‌ ಉದ್ಯೋಗ ಮೇಳಕ್ಕೆ ಮೊದಲ ದಿನ ಅಭೂತಪೂರ್ವ ಸ್ಪಂದನೆ

ಮಂಡ್ಯ ಟೂ ಇಂಡಿಯಾ; ಸಕ್ಕರೆ ನಾಡಿನಲ್ಲಿ 2 ದಿನಗಳ ಬೃಹತ್ ಉದ್ಯೋಗ ಮೇಳ 150ಕ್ಕೂ ಹೆಚ್ಚು ಕಂಪನಿಗಳ ಭಾಗಿ, ಸಾವಿರಾರು…

3 hours ago

ಮುಡಾ ಮೇಲೆ ಇಡಿ ದಾಳಿ: ಸಿಬಿಐ ತನಿಖೆ ನಡೆಸುವರೆಗೂ ಹೋರಾಟ ಮುಂದುವರಿಕೆ: ಸ್ನೇಹಮಯಿ ಕೃಷ್ಣ

ಮೈಸೂರು: ಮುಡಾ ಮೇಲಿನ ಇಡಿ ಕಾರ್ಯಾಚರಣೆ ಕೇವಲ ಸಿಎಂ ಸಿದ್ದರಾಮಯ್ಯ ಅವರ ಕುಟುಂಬದವರ ಪ್ರಕರಣವಲ್ಲ. ಸಂಪೂರ್ಣ ಮುಡಾ ಅಕ್ರಮದ ಬಗ್ಗೆ…

3 hours ago