ಮೈಸೂರು: ಗುರುಗಳು ಕೋಲು ತರಲು ಹೇಳುತ್ತಿದ್ದರು. ಯಾರಿಗೋ ಹೊಡೆಯಲು ಬೇಕೆಂದು ಕೇಳುತ್ತಿದ್ದರು. ಅದು ನಾನೇ ಆಗಿದ್ದೆ. ನಾನೇ ಕೋಲು ಕೊಟ್ಟು ಹೊಡೆಸಿಕೊಳ್ಳುತ್ತಿದ್ದ ಭಾಗ್ಯ ನನ್ನದಾಗಿತ್ತು..
ಹೀಗೆಂದು ತಮ್ಮ ನಾಟಕ ಕಲಿಕೆಯ ದಿನಗಳನ್ನು ಸ್ಮರಿಸಿದ ಹಿರಿಯ ನಟ ದೊಡ್ಡಣ್ಣ ಅವರು, ಅಂದು ಗುರುಗಳು ಕಲಿಸಿದ ಭಾಷೆ ಮತ್ತು ನಟನೆಯ ಆರಂಭಿಕ ಕಲಿಕೆ ಇಂದು ತಮ್ಮನ್ನು ರೂಪಿಸಿವೆ ಎಂದು ನೆನಪುಗಳನ್ನು ಮೆಲುಕು ಹಾಕಿದರು.
ರಂಗಾಯಣದ ಭೂಮಿಗೀತದಲ್ಲಿ ಪುನೀತ್ ರಾಜ್ಕುಮಾರ್ ನಟನೆಯ ಗಂಧದಗುಡಿ ಚಿತ್ರದ ಪ್ರದರ್ಶನದ ಮೂಲಕ ಬಹುರೂಪಿ ಚಲನಚಿತ್ರೋತ್ಸವಕ್ಕೆ ಶುಕ್ರವಾರ ಅವರು ಚಾಲನೆ ನೀಡಿ ಮಾತನಾಡಿದರು.
ಮಾತಿನ ಮಧ್ಯೆ ಪೌರಾಣಿಕ ನಾಟಕಗಳ ಡೈಲಾಗ್ಗಳನ್ನು ಹೊಡೆಯುತ್ತಾ, ಹಾಸ್ಯಮಯವಾಗಿ ಮಾತಾಡುತ್ತಾ ನೆರೆದಿದ್ದವರನ್ನು ತನ್ನತ್ತ ಸೆಳೆದು ನಗಿಸಿ-ನಲಿಸಿದ ದೊಡ್ಡಣ್ಣ ತಾವು ರಂಗಭೂಮಿಯಲ್ಲಿ ಬೆಳೆದ ಬಗೆಯನ್ನು ವಿವರಿಸಿದರು.
ಪ್ರತಿ ಜಿಲ್ಲೆಯಲ್ಲಿಯೂ ರಂಗಾಯಣದಂತಹ ಸಂಸ್ಥೆಗಳು ಆಗಬೇಕು. ಇದಕ್ಕೆ ಜಾಗ ಸೇರಿದಂತೆ ಅಗತ್ಯ ಸೌಲಭ್ಯವನ್ನು ಸರ್ಕಾರ ಒದಗಿಸಬೇಕು. ನಟನಿಗೆ ವೀಕ್ಷಕರ ಹೃದಯ ತಟ್ಟುವ ಗುಣವಿರಬೇಕು. ನಾಟಕದಲ್ಲಿ ಸಾಧನೆ ಮಾಡಿದವರು ಎಲ್ಲಿ ಹೋದರೂ ಬದುಕುತ್ತಾರೆ ಎಂದು ದೊಡ್ಡಣ್ಣ ಹೇಳಿದರು.
ಭಾರತೀಯ ಚಿತ್ರರಂಗದಲ್ಲಿ ಡಾ.ರಾಜಕುಮಾರ್ ಅವರಿಗೆ ಸಿಕ್ಕಷ್ಟು ಮತ್ತು ಒಪ್ಪುವಷ್ಟು ವೈವಿಧ್ಯಮಯ ಪಾತ್ರಗಳು ಬೇರೆ ಯಾರಿಗೂ ಸಲ್ಲಲಿಲ್ಲ. ಹಾಗಾಗಿಯೇ ಭಾರತದ ಎಲ್ಲ ಚಿತ್ರರಂಗದವರ ಗೌರವಕ್ಕೆ ಅವರು ಪ್ರೀತಿಗೆ ಪಾತ್ರರಾದರು. ಈ ನಮ್ಮ ಮಣ್ಣಿನಲ್ಲಿ ಧಮ್ ಇದೆ, ತ್ಯಾಗದ ಗುಣವಿದೆ. ಈ ಮಣ್ಣಿನಲ್ಲಿ ಇದ್ದರು ಎನ್ನಲಾದ ರಾಕ್ಷಸರಿಗೂ ತ್ಯಾಗದ ಗುಣವಿತ್ತು ಎಂದು ರಾವಣನನ್ನು ಉದಾಹರಿಸಿ ಹೇಳಿದರು. ಇಂತಹ ಮಣ್ಣಿನಲ್ಲಿ ಹುಟ್ಟಿರುವ ನಾವೆಲ್ಲರೂ ಶುದ್ಧ ಭಾರತೀಯರು ಎಂಬುದನ್ನು ಮರೆಯಬಾರದು ಎಂದು ಕಿವಿಮಾತು ಹೇಳಿದರು.
ಆರೋಗ್ಯವಾಗಿರಬೇಕು ಎಂದರೆ ದೇಹಕ್ಕೆ ಕೆಲಸ ಎಷ್ಟು ಮುಖ್ಯವೋ, ಜ್ಞಾನ ಹೆಚ್ಚಾಗಬೇಕು ಎಂದರೆ ತಲೆಗೆ ಕೆಲಸ ಕೊಡಬೇಕು. ಹಾಗಾಗಿ, ಎಲ್ಲರೂ ಹೆಚ್ಚು ಹೆಚ್ಚು ಓದಬೇಕು. ಕನ್ನಡ ಭಾಷೆಯಲ್ಲಿ ಪ್ರತಿ ಪದಕ್ಕೂ 30ಕ್ಕೂ ಹೆಚ್ಚು ಪಾರಿಭಾಷಿಕ ಪದಗಳು ಸಿಗುತ್ತವೆ. ನಮ್ಮ ಭಾಷೆ ಸಮೃದ್ಧವಾಗಿದೆ. ಹಾಗಾಗಿ, ಕೇವಲ ಇಂಗ್ಲಿಷ್ಗೆ ಮಾತ್ರ ಆದ್ಯತೆ ನೀಡಬೇಡಿ. ತಮ್ಮ ಮಕ್ಕಳಿಗೆ ಕನ್ನಡವನ್ನೂ ಕಲಿಸಿ. ತಮ್ಮ ಮಕ್ಕಳಿಗೆ ಕನ್ನಡ ಸಾಹಿತ್ಯ-ಕಲೆಯ ಬಗ್ಗೆ ಅರಿವು ಮೂಡಿಸಿ ಎಂದು ಕಿವಿಮಾತು ಹೇಳಿದರು.
ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಅಶೋಕ ಕಶ್ಯಪ್, ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ, ಉಪ ನಿರ್ದೇಶಕಿ ನಿರ್ಮಲಾ ಮಠಪತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಮಲ್ಲಿಕಾರ್ಜುನ ಸ್ವಾಮಿ, ಸಂಚಾಲಕರಾದ ಕೆ.ಮನು, ಬಿ.ಎನ್.ಶಶಿಕಲಾ ಹಾಜರಿದ್ದರು.
ಬೆಂಗಳೂರು: ಸಿಇಟಿ ಕೇಂದ್ರದಲ್ಲಿ ಜನಿವಾರ ತೆಗೆಸಿದ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್…
ಬೆಂಗಳೂರು: ರಾಜ್ಯದ ವಿವಿಧ ನಗರಗಳಲ್ಲಿ ಸುಡುತ್ತಿರುವ ಬಿಸಿಲು ಮತ್ತು ಹೆಚ್ಚುತ್ತಿರುವ ಧೂಳಿನ ನಡುವೆ ಕರ್ತವ್ಯ ನಿರ್ವಹಿಸುತ್ತಿರುವ ಸಂಚಾರ ಪೊಲೀಸರ ನೆರವಿಗೆ…
ಮೈಸೂರು: ಇಲ್ಲಿನ ಚಲುವಾಂಬ ಆಸ್ಪತ್ರೆಯಲ್ಲಿ ನವಜಾತ ಶಿಶು ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್ ಕೃಷ್ಣದತ್ತ…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ…
ಬೆಂಗಳೂರು: ಒಳಮೀಸಲಾತಿ ಬಗ್ಗೆ ಹಲವು ವರ್ಷಗಳಿಂದ ಇದ್ದ ಗೊಂದಲಗಳಿಗೆ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ತೆರೆ ಎಳೆದಿದೆ. ಸಿಎಂ ಸಿದ್ದರಾಮಯ್ಯ…
ಸೋಮವಾರಪೇಟೆ: ತಾಲೂಕಿನ ತೋಳೂರುಶೆಟ್ಟಳ್ಳಿ ಗ್ರಾಮದಲ್ಲಿನ ಶ್ರೀ ಸಬ್ಬಮ್ಮ ದೇವಿಯ ಸುಗ್ಗಿ ಉತ್ಸವ ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ಶುಕ್ರವಾರ ವಿಜೃಂಭಣೆಯಿಂದ ನಡೆಯಿತು.…