ಜಿಲ್ಲೆಗಳು

ಮೈಸೂರಿನಲ್ಲಿ ಅಂತಾರಾಷ್ಟ್ರೀಯ ಸಿನಿಮಾ ಹಬ್ಬ ಮಾಡುವ ಮನಸಿದೆ: ಅಶೋಕ ಕಶ್ಯಪ್

ಮೈಸೂರು: ಮುಂದಿನ ವರ್ಷ ಮೈಸೂರಿನಲ್ಲಿ ಅಂತಾರಾಷ್ಟ್ರೀಯ ಸಿನಿಮಾ ಹಬ್ಬವನ್ನು ಮಾಡಬೇಕು ಎಂಬ ಬೇಡಿಕೆಯನ್ನು ಸರ್ಕಾರದ ಮುಂದೆ ಇಡಲಾಗುವುದು ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಅಶೋಕ ಕಶ್ಯಪ್ ತಿಳಿಸಿದರು.

ರಂಗಾಯಣದ ಈ ರಂಗೋತ್ಸವ ಕಾರ್ಯಕ್ರಮದಲ್ಲಿ ಸಿನಿಮಾಗೂ ಆದ್ಯತೆ ನೀಡುವ ಮೂಲಕ ಸಿನಿಮಾ ಕಲೆ, ಜ್ಞಾನವನ್ನು ತಿಳಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ. ಕಲೆಯನ್ನು ಕರಗತ ಮಾಡಿಕೊಳ್ಳಬೇಕು ಎಂದರೇ ಅದಕ್ಕೆ ಒಂದು ಸಂಸ್ಥೆ ಇರಬೇಕು. ಕಲೆಯನ್ನು ಕಲಿಸುವ ಮತ್ತು ಬೆಳೆಸುವ ಕೆಲಸವನ್ನು ಈ ರಂಗಾಯಣ ಮಾಡುತ್ತಿದೆ. ನನಗೂ ಮೈಸೂರಿನಲ್ಲಿ ಅಂತಾರಾಷ್ಟ್ರೀಯ ಸಿನಿಮಾ ಹಬ್ಬ ಆಚರಿಸುವ ಮನಸ್ಸಿದ್ದು, ಇದನ್ನು ಸರ್ಕಾರದ ಮುಂದಿಡುವೆ ಎಂದರು.
ಪ್ರಕೃತಿ ಪ್ರಿಯವಾಗಲಿ: ಪ್ರಕೃತಿ ನನಗೆ ಬದುಕಿನ ಭರವಸೆ ನೀಡಿದೆ.ಅವರ ಮುಂದೆ ನಾವೆಲ್ಲ ಸಣ್ಣವರು. ನನಗೆ ಕ್ಯಾನ್ಸರ್ ಇತ್ತು. ವೈದ್ಯರು ಎರಡು ವರ್ಷ ಇರುತ್ತೀರಾ. ಪ್ರಕೃತಿ ಮಡಿಲಿನಲ್ಲಿ ಸಮಯ ಕಳೆಯಿರಿ ಎಂದರು. ನಾನು ತೀರ್ಥಹಳ್ಳಿ ಕಡೆ ಹೋಗಿ ಮನೆ ಮಾಡಿದೆ. ಈಗ ಹದಿನೇಳು ವರ್ಷ ಬದುಕಿದ್ದೀನಿ. ಪ್ರಕೃತಿ, ಹಸಿರನ್ನು ಎಲ್ಲರೂ ಅಪ್ಪಿಕೊಳ್ಳಬೇಕು, ಅದನ್ನು ಕಾಪಾಡಿಕೊಳ್ಳಬೇಕು ಎಂದರು.

ಸಿನಿಮಾ ಪ್ರದರ್ಶನ

ಬಹುರೂಪಿ ಚಲನಚಿತ್ರೋತ್ಸವದ ಮೊದಲ ದಿನವಾದ ಶುಕ್ರವಾರ ಉಮೇಶ್ ಅಗರ್‌ವಾಲ್ ನಿರ್ದೇಶನದ ಜೈ ಹೋ-ಎ ಫಿಲ್ಮ್ ಎ.ಆರ್.ರೆಹಮಾನ್ ಹಿಂದಿ ಚಿತ್ರ ಮತ್ತು ಟ್ರೆಸಿಂಗ್ ರೈತರ್ ಶೆರ್ಪಾ ಅವರ ನಿರ್ದೇಶನದ ಕರ್ಮ ಎಂಬ ನೇಪಾಳಿ ಚಿತ್ರಗಳನ್ನು ಪುನೀತ್ ರಾಜ್ ಕುಮಾರ್ (ಶ್ರೀರಂಗ ರಂಗಮಂದಿರ) ಅವರ ಚಿತ್ರಮಂದಿರದಲ್ಲಿ ಪ್ರದರ್ಶಿಸಲಾಯಿತು. ಜೈ ಹೋ-ಎ ಫಿಲ್ಮ್ ಎ.ಆರ್.ರೆಹಮಾನ್ ಚಿತ್ರ ವೀಕ್ಷಣೆಗೆ ಇದ್ದಷ್ಟು ಪ್ರೇಕ್ಷಕರು ಮಧ್ಯಾಹ್ನದ ಕರ್ಮ ಚಿತ್ರ ನೋಡಲು ಇರಲಿಲ್ಲ. ಹೀಗಾಗಿ, ಮಧ್ಯಾಹ್ನ ಬಹುತೇಕ ಸೀಟುಗಳು ಖಾಲಿಯಿದ್ದವು.

andolana

Recent Posts

ಮಕ್ಕಳ ಮನದಂಗಳದಲ್ಲಿ ಗಾಂಧಿ ಚಿಂತನೆಯ ಬೇರುಗಳು

ಗಾಂಧೀಜಿಯವರ ಜೀವನವೇ ತೆರೆದ ಪುಸ್ತಕ:  ಇಡೀ ವಿಶ್ವವೇ ಗಾಂಧೀಜಿಯವರ ಅಹಿಂಸೆ ಮತ್ತು ಸತ್ಯಾಗ್ರಹಗಳನ್ನು ಗೌರವಿಸುತ್ತದೆ. ಗಾಂಧಿಯವರು ತಮ್ಮ ಶಾಲಾ ದಿನಗಳಲ್ಲಿಯೇ…

4 hours ago

ಗಾಂಧಿ ಹಾದಿಯಲ್ಲಿ ಹತಳಾದ ಮಾತಂಗಿನಿ ಹಜ್ರಾ

ಡಾ.ಟಿ.ಮಂಜು ಸತ್ತಿಗೆಹುಂಡಿ, ಉಪನ್ಯಾಸಕರು, ಗಾಂಧಿ ಅಧ್ಯಯನ ಕೇಂದ್ರ, ಗಾಂಧಿ ಭವನ, ಮೈಸೂರು ವಿಶ್ವವಿದ್ಯಾಲಯ ಭಾರತದ ಸ್ವಾತಂತ್ರ್ಯ ಚಳವಳಿಗೆ ಕಾಲೇಜು ವಿದ್ಯಾರ್ಥಿಗಳು,…

4 hours ago

ಧರ್ಮವೆಂದು ತಿಳಿದು ತಿಗಣೆ ಇತ್ಯಾದಿಗಳನ್ನು ಕೊಲ್ಲುತ್ತಿದ್ದೆ

ನನ್ನ ಆರು ಏಳನೆಯ ವಯಸ್ಸಿನಿಂದ ಹದಿನಾರನೆಯ ವಯಸ್ಸಿನವರೆಗೆ ಪಾಠಶಾಲೆಯಲ್ಲಿ ವಿದ್ಯೆಯನ್ನು ಕಲಿತೆ. ಆದರೆ ಸ್ಕೂಲಿನಲ್ಲಿ ನನಗೆ ಯಾವ ಧಾರ್ಮಿಕ ಶಿಕ್ಷಣವೂ…

4 hours ago

ಜೂ.28ರಿಂದ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ

ನವೀನ್ ಡಿಸೋಜ ಮಡಿಕೇರಿ: ಜೂ.೨೮ರಿಂದ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ ನಡೆಯಲಿದ್ದು, ಕೊಡಗು ಜಿಲ್ಲೆಯಲ್ಲಿಯೂ ಅಗತ್ಯ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ…

4 hours ago

ಅಕ್ರಮ ಮದ್ಯ ಮಾರಾಟ: ಕಡಿವಾಣ ಕಾರ್ಯಾಚರಣೆ

ದಿನೇಶ್ ಕುಮಾರ್ ಹೆಚ್.ಎಸ್. ಅಗ್ನಿ ಅವಘಡದ ಬಳಿಕ ಎಚ್ಚೆತ್ತ ಅಧಿಕಾರಿಗಳು ಮೈಸೂರು: ನಗರದ ದಟ್ಟಗಳ್ಳಿಯ ಮಾರಾ ರೆಸ್ಟೋ ಬಾರ್‌ನಲ್ಲಿ ನಡೆದ…

4 hours ago

ಓದುಗರ ಪತ್ರ: ವಂಚನೆ ತಡೆಗಾಗಿ ನಿರ್ಬಂಧ

ನೀಟ್ -ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಹಿನ್ನೆಲೆಯಲ್ಲಿ ಇದೇ ಜೂನ್ ೨೧ ರಂದು ಮರು ಪರೀಕ್ಷೆ ನಡೆಯಲಿದೆ. ವಂಚನೆ ಜಾಲ…

6 hours ago