ಗುಂಡ್ಲುಪೇಟೆ (ಬೇಗೂರು ) : ಇಲ್ಲಿ ಪ್ರತಿವರ್ಷವೂ ಗೌರಿ-ಗಣೇಶ ಹಬ್ಬಕ್ಕೆ ಚಾಲನೆ ಸಿಗುವುದು ಗ್ರಾಮದ ದೇವಮ್ಮನಗುಡಿ ಹಾಗೂ ವೀರನಗುಡಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕವೆ,
ಹೌದು, ಗುಂಡ್ಲುಪೇಟೆ ತಾಲ್ಲೂಕಿನ ಬೇಗೂರು ಗ್ರಾಮದಲ್ಲಿ ಬಹತೇಕರು ಉಪ್ಪಾರ ಜನಾಂಗವೇ ವಾಸಿಸುತ್ತಿದ್ದಾರೆ. ಈ ಜನ ಗಳಿಗೆ ಮಾತ್ರ ಸೀಮಿತವಾಗಿರುವ ಈ ದೇವಾಲಯಕ್ಕೆ ಮನೆಗೊಬ್ಬರಂತೆ ಸದಸ್ಯರು ಒಗ್ಗೂಡಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ತೀರ್ಥ ಪ್ರಸಾದ ತಂದ ನಂತರವಷ್ಟೆ ಇಲ್ಲಿ ʼಗೌರಿ ಗಣೇಶ ಹಬ್ಬಕ್ಕೆ ಚಾಲನೆ. ಗ್ರಾಮದಿಂದ ಹೊರಹೊಲಯದಲ್ಲಿ ವೀರಗಲ್ಲನ್ನು ಪ್ರತಿಷ್ಠಾಪಿಸಲಾಗಿದ್ದು, ಹಬ್ಬದ ದಿನದಂದು ಅರಿಶಿಣ ಕುಂಕುಮಗಳಿಂದ ವೀರಗಲ್ಲನ್ನು ಸಿಂಗರಿಸಿ ಪೂಜಿಸಿ ಬಂದ ಬಳಿಕ ಭಕ್ತಾಧಿಗಳಿಗೆ ಸಿಹಿ ಪಾನಕವನ್ನು ವಿತರಿಸಲಾಗುತ್ತದೆ.
ಹೊಸ ನೀರು : ಗೌರಿ ಹಬ್ಬಕ್ಕೆ ಇಡೀ ಮನೆಯನ್ನು ಸಂಪೂರ್ಣವಾಗಿ ಶುಚಿಗೊಳಿಸಿ ಸುಣ್ಣ-ಬಣ್ಣಗಳಿಂದ ಅಲಂಕರಿಸಿ ನಂತರ ಮಹಿಳೆಯರೆಲ್ಲ ಒಗ್ಗೂಡಿ ಕೊಡಗಳನ್ನಿಡಿದು ಹೊಸ ನೀರು ತಂದು ಅದರಲ್ಲಿ ಹಬ್ಬದ ಅಡುಗೆ ಮಾಡುವುದರಂದ ಇದು ಹೊಸ ನೀರು ತರುವುದು ಎಂದೇ ಪ್ರಸಿದ್ಧಿಗೊಂಡಿದೆ. ಇಲ್ಲಿ ಗುಂಪು-ಗುಂಪಾಗಿ ಚಿಕ್ಕ ಮಕ್ಕಳು ಕೂಡ ಕೊಡಗಳನ್ನು ಹಿಡಿದು ಬರುವುದು ಸರ್ವೇ ಸಾಮಾನ್ಯವಾಗಿರುತ್ತದೆ. ಇದು ಗ್ರಾಮೀಣ ಭಾಗದಲ್ಲಿ ಇನ್ನೂ ಉಳಿದುಕೊಂಡು ಬಂದಿರುವ ವಿಶೇಷ ಪದ್ಧತಿಯಾಗಿದೆ.
ನವದೆಹಲಿ : ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಜಾಗತಿಕವಾಗಿ ಸಾಮಾನ್ಯ ಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ಪ್ರಧಾನಿ…
ಮೇಘನ ಕೆ.ಆರ್ ಕೇರಳಿಗಳಾದ ನನಗೆ ವರ್ಷಕ್ಕೆರಡು ಹಬ್ಬ-ಓಣಂ, ವಿಶು ಮಾತ್ರ ತಿಳಿದಿತ್ತು. ದೀಪಾವಳಿಗೆ ದನಗಳಿಗೆ ಪೂಜೆ ಮಾಡಿ ಅಮ್ಮ ಕೆಲಸಕ್ಕೆ…
ಡಾ. ಶಿಲಿನಾ ಕೋಟೆ ಎನ್. ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳು ಕೇವಲ ಧಾರ್ಮಿಕ ಆಚರಣೆ ಗಳಲ್ಲ; ಅವು ಪ್ರಕೃತಿ, ಕೃಷಿ, ಮಳೆ,…
ಶುಭಮಂಗಳ ರಾಮಾಪುರ ಗೌರಿಹಬ್ಬವೆಂದ ಕೂಡಲೇ ಸಂಭ್ರಮದ ನೆನಪು ಒಂದೆಡೆಯಾದರೆ ಕೆಲಸದ ಹೊರೆ ಮತ್ತೊಂದೆಡೆ. ನನ್ನೂರಿನಲ್ಲಂತೂ ಗೌರಿಹಬ್ಬಕ್ಕೆ ಮಡಿ ಮಾಡುವುದೇ ದೊಡ್ಡ…
ನಾಳಿನ ಗೌರಿ ಗಣೇಶ ಸಂಭ್ರಮಕ್ಕೆ ಬರಹಗಳ ಬಾಗಿನ ಡಾ.ಶುಭಶ್ರೀ ಪ್ರಸಾದ್, ಮಂಡ್ಯ ‘ಮಗಳು’ಎಂದ ಕ್ಷಣ ಕಣ್ಮುಂದೆ ಬರುವುದು ಜರಿ ಲಂಗ,…
ಅರಮನೆ ನಗರಿಯ ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ ಜೋರು ಸೇವಂತಿಗೆ ಹೂವು, ಏಲಕ್ಕಿ ಬಾಳೆಹಣ್ಣು ಸೇರಿ ಇನ್ನಿತರೆ ಹಣ್ಣುಗಳ ಬೆಲೆ ಹೆಚ್ಚಳ…