ಜಿಲ್ಲೆಗಳು

ಇಲ್ಲಿ ತೀರ್ಥ ಪ್ರಸಾದ ತಂದ ನಂತರವಷ್ಟೆ ಗಣೇಶ ಹಬ್ಬಕ್ಕೆ ಚಾಲನೆ

ಗುಂಡ್ಲುಪೇಟೆ (ಬೇಗೂರು ) : ಇಲ್ಲಿ ಪ್ರತಿವರ್ಷವೂ ಗೌರಿ-ಗಣೇಶ ಹಬ್ಬಕ್ಕೆ ಚಾಲನೆ ಸಿಗುವುದು ಗ್ರಾಮದ ದೇವಮ್ಮನಗುಡಿ ಹಾಗೂ ವೀರನಗುಡಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕವೆ,

ಹೊಸ ನೀರು ತರುತ್ತಿರುವುದು

ಹೌದು, ಗುಂಡ್ಲುಪೇಟೆ ತಾಲ್ಲೂಕಿನ ಬೇಗೂರು ಗ್ರಾಮದಲ್ಲಿ ಬಹತೇಕರು ಉಪ್ಪಾರ ಜನಾಂಗವೇ ವಾಸಿಸುತ್ತಿದ್ದಾರೆ. ಈ ಜನ ಗಳಿಗೆ ಮಾತ್ರ ಸೀಮಿತವಾಗಿರುವ ಈ ದೇವಾಲಯಕ್ಕೆ ಮನೆಗೊಬ್ಬರಂತೆ ಸದಸ್ಯರು ಒಗ್ಗೂಡಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ತೀರ್ಥ ಪ್ರಸಾದ ತಂದ ನಂತರವಷ್ಟೆ ಇಲ್ಲಿ ʼಗೌರಿ ಗಣೇಶ ಹಬ್ಬಕ್ಕೆ ಚಾಲನೆ. ಗ್ರಾಮದಿಂದ ಹೊರಹೊಲಯದಲ್ಲಿ ವೀರಗಲ್ಲನ್ನು ಪ್ರತಿಷ್ಠಾಪಿಸಲಾಗಿದ್ದು, ಹಬ್ಬದ ದಿನದಂದು ಅರಿಶಿಣ ಕುಂಕುಮಗಳಿಂದ ವೀರಗಲ್ಲನ್ನು ಸಿಂಗರಿಸಿ ಪೂಜಿಸಿ ಬಂದ ಬಳಿಕ ಭಕ್ತಾಧಿಗಳಿಗೆ ಸಿಹಿ ಪಾನಕವನ್ನು ವಿತರಿಸಲಾಗುತ್ತದೆ.

ಹೊಸ ನೀರು ತರುವಲ್ಲಿ ಮಕ್ಕ:ಳು, ಹಿರಿಯರು ನಿರತ

ಹೊಸ ನೀರು : ಗೌರಿ ಹಬ್ಬಕ್ಕೆ ಇಡೀ ಮನೆಯನ್ನು ಸಂಪೂರ್ಣವಾಗಿ ಶುಚಿಗೊಳಿಸಿ ಸುಣ್ಣ-ಬಣ್ಣಗಳಿಂದ ಅಲಂಕರಿಸಿ ನಂತರ ಮಹಿಳೆಯರೆಲ್ಲ ಒಗ್ಗೂಡಿ ಕೊಡಗಳನ್ನಿಡಿದು ಹೊಸ ನೀರು ತಂದು ಅದರಲ್ಲಿ ಹಬ್ಬದ ಅಡುಗೆ ಮಾಡುವುದರಂದ ಇದು ಹೊಸ ನೀರು ತರುವುದು ಎಂದೇ ಪ್ರಸಿದ್ಧಿಗೊಂಡಿದೆ. ಇಲ್ಲಿ ಗುಂಪು-ಗುಂಪಾಗಿ ಚಿಕ್ಕ ಮಕ್ಕಳು ಕೂಡ ಕೊಡಗಳನ್ನು ಹಿಡಿದು ಬರುವುದು ಸರ್ವೇ ಸಾಮಾನ್ಯವಾಗಿರುತ್ತದೆ. ಇದು ಗ್ರಾಮೀಣ ಭಾಗದಲ್ಲಿ ಇನ್ನೂ ಉಳಿದುಕೊಂಡು ಬಂದಿರುವ ವಿಶೇಷ ಪದ್ಧತಿಯಾಗಿದೆ.

andolanait

Recent Posts

ಓದುಗರ ಪತ್ರ: ಮೇಕೆದಾಟು ಯೋಜನೆ ಶೀಘ್ರ ಅನುಷ್ಠಾನವಾಗಲಿ

ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ೨೦೧೪ರ ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ಕರ್ನಾಟಕವು ಮೇಕೆದಾಟು ಜಲಾಶಯ ನಿರ್ಮಿಸಲು ತಮಿಳುನಾಡು ಸೇರಿದಂತೆ ಯಾವುದೇ…

10 hours ago

ಓದುಗರ ಪತ್ರ: ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ಚುರುಕುಗೊಳ್ಳಲಿ

ಮೈಸೂರು ನಗರದಲ್ಲಿ ಅನೇಕ ಕಡೆ ಪಾದಚಾರಿಗಳಿಗೆ ಅಡಚಣೆಯಾಗಿದ್ದ ಫುಟ್‌ಪಾತ್ ವ್ಯಾಪಾರಿಗಳ ಒತ್ತುವರಿ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಆದರೆ ಬಹುತೇಕ ಕಡೆ…

10 hours ago

ಓದುಗರ ಪತ್ರ: ಕೂಡ್ಲಾಪುರ ಗ್ರಾಮಕ್ಕೆ ಕಬಿನಿ ನೀರು ಕೊಡಿ

ನಂಜನಗೂಡು ತಾಲ್ಲೂಕಿನ ಕೂಡ್ಲಾಪುರ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬರ ಪರಿಸ್ಥಿತಿಯಿಂದಾಗಿ ಕೆರೆಗಳು ಬತ್ತಿಹೋಗಿದ್ದು, ಕುಡಿಯುವ ನೀರು ಸಿಗದೆ ತೊಂದರೆಯಾಗಿದೆ. ನಂಜನಗೂಡು…

10 hours ago

ಗಾಮೀಣ ಜನರ ಏಳಿಗೆಗೆ IHDUA ಪಣ

ಪ್ರಸನ್ನ ಎಂ.ಕೆ. ಖ್ಯಾತ ಕ್ಯಾನ್ಸರ್ ರೋಗ ತಜ್ಞರು, ಭಾರತ್ ಕ್ಯಾನ್ಸರ್ ಹಾಸ್ಪಿಟಲ್ ಹಾಗೂ ಎಚ್‌ಸಿಜಿ ಆಸ್ಪತ್ರೆ ಛೇರ್ಮನ್ ಮತ್ತು ಸಂಸ್ಥಾಪಕರು,…

10 hours ago

ಸತ್ಯಮಂಗಲ-ಮೀಣ್ಯಂ ರಸ್ತೆಯಲ್ಲಿ ಸಂಚಾರ ದುಸ್ತರ

ಮಾದೇಶ್ ಗೌಡ ಹದಗೆಟ್ಟ ರಸ್ತೆ ಅಭಿವೃದ್ಧಿಗೆ ಸವಾರರ ಆಗ್ರಹ; ಅಭಿವೃದ್ಧಿಯಾಗದಿದ್ದರೆ ಪ್ರತಿಭಟನೆ ಎಚ್ಚರಿಕೆ ಹನೂರು: ತಾಲ್ಲೂಕಿನ ಮೀಣ್ಯಂ ಗ್ರಾಪಂ ವ್ಯಾಪ್ತಿಯ…

10 hours ago

ಪಿರಿಯಾಪಟ್ಟಣ: ಗರಿಗೆದರಿದ ತಂಬಾಕು ಕೃಷಿ ಚಟುವಟಿಕೆ

ನವೀನ್‌ಕುಮಾರ್ ತಂಬಾಕು ಹದಗೊಳಿಸುವ ಕಾರ್ಯ ಚುರುಕು; ಉತ್ತಮ ಬೆಲೆ ನಿರೀಕ್ಷೆಯಲ್ಲಿ ರೈತರು ಪಿರಿಯಾಪಟ್ಟಣ: ತಾಲ್ಲೂಕಿನಾದ್ಯಂತ ತಂಬಾಕು ಕೃಷಿ ಚಟುವಟಿಕೆಗಳು ಗರಿಗೆದರಿವೆ.…

10 hours ago