ಜಿಲ್ಲೆಗಳು

ರಾಜ್ಯದ ಎಲ್ಲ ರೈತರಿಗೆ ಸಿಗಲಿದೆ ಹೊಸ ಗುರುತಿನ ಚೀಟಿ

ಕೆ. ಕಿಸಾನ್‌ ಆಪ್‌ ನಡಿ ಎಲ್ಲ ರೈತರ ಕಡ್ಡಾಯ ನೋಂದಣಿ, ಐಡಿ ಇಲ್ಲದ ರೈತರಿಗೆ ಸರ್ಕಾರಿ ಸೌಲಭ್ಯ ಕಟ್

ಮೈಸೂರು: ಇನ್ನು ಮುಂದೆ ಕೆ ಕಿಸಾನ್ ಆನ್‌ಲೈನ್ ಆಪ್‌ಗೆ ರೈತರು ಜೋಡಣೆಯಾಗದಿದ್ದಲ್ಲಿ ಸರ್ಕಾರದ ಎಲ್ಲ ಯೋಜನೆಗಳಿಂದ ವಂಚಿತರಾಗಲಿದ್ದಾರೆ. ಸರ್ಕಾರದಿಂದ ಸಿಗುವ ಸಹಾಯಧನ, ಉಚಿತವಾಗಿ ಸಿಗುವ ಔಷಧಿಗಳು, ಸಬ್ಸಿಡಿ ದರದಲ್ಲಿ ಸಿಗುವ ಕೃಷಿ ಉಪಕರಣಗಳು ಇತ್ಯಾದಿಗಳು ಇನ್ನು ಮುಂದೆ ಫಾರ್ಮರ್ ಐಡಿ ಇಲ್ಲದ ರೈತರಿಗೆ ಸಿಗುವುದಿಲ್ಲ.

ರೈತರನ್ನು ಡಿಜಿಟಲೀಕರಣಗೊಳಿಸುವತ್ತ ರಾಜ್ಯದ ಕೃಷಿ ಇಲಾಖೆ ದಿಟ್ಟ ಹೆಜ್ಜೆ ಇಟ್ಟಿದ್ದು 2-023ರ ಏಪ್ರಿಲ್ ಒಂದರಿಂದ ರೈತರು ಸಂಪೂರ್ಣ ಕಾಗದರಹಿತ ಹಾಗೂ ಪಾರದರ್ಶಕ ರೀತಿಯಲ್ಲಿ ಖರೀದಿ ಮತ್ತು ವಿತರಣಾ ಪ್ರಕ್ರಿಯೆ ಮಾಡುವದನ್ನು ಕಡ್ಡಾಯ ಮಾಡಿದೆ. ಈ ನಿಟ್ಟಿನಲ್ಲಿ 2022ರ ಆರಂಭದಿಂದಲೇ ಶಿವಮೊಗ್ಗ, ಮೈಸೂರು,ವಿಜಯಪುರ ಹಾಗೂ ಚಿತ್ರದುರ್ಗ ಒಳಗೊಂಡು ನಾಲ್ಕು ಜಿಲ್ಲೆಗಳಲ್ಲಿ ಆನ್‌ಲೈನ್ ವಿತರಣೆ ಹಾಗೂ ಖರೀದಿ ಮಾಡುವ ಸೌಲಭ್ಯ ಕಲ್ಪಿಸಿತ್ತು.

ಜನವರಿ ಒಂದರಿಂದ ಪ್ರಾಯೋಗಿಕವಾಗಿ ಎಲ್ಲ31 ಜಿಲ್ಲೆಗಳಲ್ಲಿ ಪ್ರಾರಂಭಿಸಲು ಸರ್ಕಾರ ಉದ್ಧೇಶಿಸಿದೆ. ಮೈಸೂರಿನಲ್ಲಿಯೂ ಇದೀಗ ನೂತನ “ಇ ಕಚೇರಿʼ ಆರಂಭಿಸಲು ಉದ್ಧೇಶಿಸಲಾಗಿದೆ.
ಕೆ ಕಿಸಾನ್ ಆನ್‌ಲೈನ್ ಆಪ್‌ಗೆ ರೈತರು ಕಡ್ಡಾಯವಾಗಿ ನೋಂದಣಿ ಆಗುವ ಮೂಲಕ ಸರ್ಕಾರದ ಎಲ್ಲ ಸಹಾಯ ಸೌಲಭ್ಯ ಹೊಂದುವಂತೆ ಮೈಸೂರು ಜಿಲ್ಲಾ ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ಬಿ.ಎಸ್.ಚಂದ್ರಶೇಖರ್ ಮನವಿ ಮಾಡಿದ್ದಾರೆ.

ಕೆ- ಕಿಸಾನ್ ನೋಂದಣಿ ರೈತರಿಗೆ ಕೃಷಿ ಇಲಾಖೆಯಿಂದ ನೀಡಲಾಗುವ ಪರಿಕರ,ಕೀಟನಾಶಕ ಔಷಧಿ ವಿತರಣೆ ಎಲ್ಲವೂ ದಾಖಲಾಗುವುದರಿಂದ ಹೆಚ್ಚಿನ ಫಲಾನುಭವಿಗಳಿಗೆ ಲಾಭ ಸಿಗಲಿದೆ. ರೈತರ ಪ್ರೋತ್ಸಾಹಧನ, ಸಹಾಯ ಧನ ಎಲ್ಲವೂ ರೈತರ ಬ್ಯಾಂಕ್ ಖಾತೆಗೆ ನೇರ ಜಮಾ ಆಗುತ್ತಿದೆ. ರೈತರು ಹೊಂದಿರುವ ಸಮಗ್ರ ಕೃಷಿ ಪ್ರದೇಶಗಳ ಮಾಹಿತಿ,ಸರ್ಕಾರದಿಂದ ಹೊಂದಿಕೊಂಡಿರುವ ಸವಲತ್ತು ದಾಖಲಾಗುವದರಿಂದ ವಂಚನೆ,ಶೋಷಣೆಗೆ ಕಡಿವಾಣ ಬೀಳಲಿದೆ.

ಕೆ ಕಿಸಾನ್‌ನಲ್ಲಿ ಕರ್ನಾಟಕದ ಸಮಗ್ರ ರೈತರ ಮಾಹಿತಿ ಸಿಗಲಿದೆ. ಕೆ ಕಿಸಾನ್ ಮೂಲಕ ರೈತರ ಆಧಾರ್ ಮತ್ತು ಪಹಣಿ (ಭೂ ದಾಖಲೆ)ಗೆ ಲಿಂಕ್ ಮಾಡುವ ಮೂಲಕ ರೈತರಿಗೆ ಗುರುತಿನ ಚೀಟಿ (ಫಾರ್ಮರ್ ಐಡಿ) ನೀಡಲಾಗುತ್ತಿದೆ. ಕೃಷಿ ಇಲಾಖೆ ಅಧೀನದಲ್ಲಿರುವ ಎಲ್ಲ ಕಚೇರಿಗಳು, ಜಿಲ್ಲಾ ತರಬೇತಿ ಕೇಂದ್ರಗಳು, ಪ್ರಯೋಗಾಲಯಗಳು ಮತ್ತು ರೈತ ಸಂಪರ್ಕ ಕೇಂದ್ರಗಳು ಸಂಪೂರ್ಣ ಡಿಜಿಟಲೀಕರಣವಾಗಲಿದೆ.

ಈಗಾಗಲೇ ರಾಜ್ಯದ ಐವತ್ತು ಲಕ್ಷಕ್ಕೂ ಅಧಿಕ ರೈತರು ಎಫ್‌ಐಡಿಯನ್ನು ಹೊಂದಿದ್ದಾರೆ. ಮೈಸೂರು ಜಿಲ್ಲೆಯಲ್ಲಿ 3,28,000 ರೈತರು ಕೆಕಿಸಾನ್‌ನಲ್ಲಿ ಬರುವುದರಿಂದ ರಾಜ್ಯದ ಸಮಗ್ರ ರೈತರ ಕೃಷಿ ಮಾಹಿತಿ ಅಂತರ್ಜಾಲದಲ್ಲಿ ಪಾರದರ್ಶಕವಾಗಿ ದಾಖಲೀಕರಣಗೊಳ್ಳಲಿದೆ.

ಫಾರ್ಮರ್ ಐಡಿ ಹೊಂದದ ರೈತರು ಸ್ಥಳೀಯ ರೈತ ಸಂಪರ್ಕ ಕೇಂದ್ರಕ್ಕೆ ಪಹಣಿ ಪತ್ರ, ಬ್ಯಾಂಕ್ ಪಾಸ್ ಬುಕ್ ಹಾಗೂ ಆಧಾರ್ ಕಾರ್ಡ್‌ನೊಂದಿಗೆ ಹೋದಲ್ಲಿ ಕೆ ಕಿಸಾನ್ ಫಾರ್ಮರ್ ಐಡಿ ಹೊಂದಬಹುದು.

ರೈತರು, ರೈತರ ಕುಟುಂಬ, ಭೂಮಿ ವಿಸ್ತೀರ್ಣ, ಮಣ್ಣಿನ ಗುಣಮಟ್ಟ,ಸಮಗ್ರ ಬೆಳೆ ಮಾಹಿತಿ, ಆಧಾರ್ ಮಾಹಿತಿ, ಬ್ಯಾಂಕ್ ಖಾತೆ ಮಾಹಿತಿಯೊಂದಿಗೆ ರೈತರಿಗೆಲ್ಲ ಒಂದೇ ಮಾದರಿ ಐಡಿ ನೀಡಲಾಗುತ್ತದೆ. ರೈತ ಗುರುತಿನ ಚೀಟಿ ಹೊಂದಿದವರು ಯಾವುದೇ ಅಡೆತಡೆ ಇಲ್ಲದೆ ಕೃಷಿ ಇಲಾಖೆಯಿಂದ ನೇರ ಸೌಲಭ್ಯ ಪಡೆಯಲು ಅರ್ಹರಾಗುತ್ತಾರೆ.

ರೈತರು ಮೊಬೈಲ್ ಮೂಲಕವೂ ಉಚಿತವಾಗಿ ಕೆ ಕಿಸಾನ್ ಆಪ್ ಡೌನ್ ಲೋಡ್ ಮಾಡಿಕೊಳ್ಳಬಹುದು. ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೂ ನೇರ ಸೌಲಭ್ಯ ದೊರೆಯುತ್ತದೆ. ನೀರಾವರಿ ಯಂತ್ರೋಪಕರಣಗಳು, ಕೃಷಿ ಉಪಕರಣ,ಕಳೆ ಕೊಚ್ಚುವ ಯಂತ್ರ ಇತ್ಯಾದಿ ಸಬ್ಸಿಡಿ ದರದಲ್ಲಿ ಪಡೆಯಲು ಹಾಗೂ ಸರ್ಕಾರ ನೀಡುವ ಸಹಾಯಧನವನ್ನು ನೇರವಾಗಿ ಬ್ಯಾಂಕ್‌ ಖಾತೆ ಮೂಲಕ ಪಡೆಯಲು ಕೆ. ಕಿಸಾನ್‌ ನೋಂದಣಿ ನೆರವಾಗಲಿದೆ.

andolanait

Recent Posts

ಬಜೆಟ್‌ ಪ್ರತಿ ಇರುವ ಸೂಟ್‌ಕೇಸ್‌ ಜೊತೆ ವಿಧಾನಸೌಧಕ್ಕೆ ಆಗಮಿಸಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ರಾಜ್ಯ ಬಜೆಟ್‌ ಮಂಡನೆಗೆ ಕ್ಷಣಗಣನೆ ಶುರುವಾಗಿದ್ದು, ಸಿಎಂ ಸಿದ್ದರಾಮಯ್ಯ ಅವರು ದಾಖಲೆಯ 17ನೇ ಬಜೆಟ್‌ ಮಂಡಿಸಲು ಸಿದ್ಧರಾಗಿದ್ದಾರೆ. ಸಾಂಪ್ರದಾಯಿಕವಾಗಿ…

19 mins ago

ಓದುಗರ ಪತ್ರ: ಶಾಂತಿ ನೆಲೆಸಲಿ

ಏಕಸ್ವಾಮ್ಯ ಸಾಧಿಸಲು ತಯಾರು ಪರಮಾಣು ಅಣ್ವಸ್ತ್ರ ಅದಕ್ಕಾಗಿಯೇ ನಿಲ್ಲದೆ ನಡೆಯುತ್ತಿದೆ ವಾಯು, ಡ್ರೋನ್, ಕ್ಷಿಪಣಿ ದಾಳಿ ನೆತ್ತರು ಹರಿಯುತ್ತಿದೆ ಹಿಂಸೆ…

3 hours ago

ಓದುಗರ ಪತ್ರ: ಸಂಬಂಧ..!

ಸಂಬಂಧ..! ಒಂದೊಂದು ರೀತಿ ಒಬ್ಬೊಬ್ಬರ ಸಂಬಂಧ.. ಇವರದು ಹಾಲು-ಜೇನು ಅವರದು ಎಣ್ಣೆ-ಸೀಗೆಕಾಯಿ ಬೇಕಿದ್ದರೆ ಗಮನಿಸಿ.. ಇರಾನ್ -ಇಸ್ರೇಲ್ ಹಾವು-ಮುಂಗುಸಿ !…

3 hours ago

ಓದುಗರ ಪತ್ರ: ಒಣಗಿದ ಮರ ತೆರವುಗೊಳಿಸಿ

ಮೈಸೂರು ವಿಶ್ವವಿದ್ಯಾನಿಲಯದ ಕ್ರಾಫರ್ಡ್ ಹಾಲ್ ನಿರ್ಗಮನ ದ್ವಾರದ ಬಳಿ ಮರವೊಂದು ಒಣಗಿ ನಿಂತಿದ್ದು, ಯಾವಾಗಲಾದರೂ ಬೀಳುವ ಸಾಧ್ಯತೆಯಿದೆ. ಕ್ರಾ-ರ್ಡ್ ಹಾಲ್…

3 hours ago

ಓದುಗರ ಪತ್ರ: ರೈಲು ನಿಲ್ದಾಣದಲ್ಲಿ ಕಾರ್ಯ ನಿರ್ವಹಿಸದ ಎಸ್ಕಲೇಟರ್

ಮೈಸೂರಿನ ಮುಖ್ಯ ರೈಲ್ವೆ ನಿಲ್ದಾಣದಲ್ಲಿರುವ ಎಸ್ಕಲೇಟರ್ ಕೇವಲ ತೋರಿಕೆಗೆ ಮಾತ್ರ ಇದೆ ಎನಿಸುತ್ತದೆ. ಒಂದನೇ ಪ್ಲಾಟ್ ಫಾರ್ಮ್ ಬಿಟ್ಟರೆ ಉಳಿದ…

3 hours ago

ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ: ಗಂಭೀರ ಸಮಸ್ಯೆ ಎದುರಿಸಲು ಒಟ್ಟಾದವರೂ ಸಿನಿಮಾ ಪ್ರಚಾರವೂ

ಚಿತ್ರರಂಗದಲ್ಲಿರುವ ಮಹಿಳೆಯರಾಗಿ, ನಿರಂತರವಾಗಿ ನಡೆಯುತ್ತಿರುವ ಒಂದು ಗಂಭೀರ ಸಮಸ್ಯೆಯನ್ನು ಎದುರಿಸಲು ಒಟ್ಟಾಗಿ ನಿಂತಿದ್ದೇವೆ. ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮಹಿಳಾ ಕಲಾವಿದರ…

3 hours ago