ಎಡಿಟೋರಿಯಲ್

ಸಂಪಾದಕೀಯ : ಕಾಡು ಪ್ರಾಣಿಗಳ ರಕ್ಷಣೆಗೆ ಬೇಕಿದೆ ಸೂಕ್ತ ಕ್ರಮ

ಶ್ರೇಯಸ್ ದೇವನೂರು

ಪ್ರಕೃತಿಯಲ್ಲಿ ಮನುಷ್ಯನು ಸೃಷ್ಟಿಸಿರುವ ಹಸ್ತಕ್ಷೇಪಗಳು ಇಂದು ಮಾನವ -ಪ್ರಾಣಿಗಳ ಸಂಘರ್ಷಕ್ಕೆ ಬಹುದೊಡ್ಡ ಕಾರಣಗಳಾಗಿ ಪರಿಣಮಿಸಿವೆ. ಕಾಡಿನಿಂದ ನಾಡಿಗೆ ಬಂದು ಪ್ರಾಣಿಗಳು ದಾಳಿ ಮಾಡಿದಾಗ ಅವುಗಳ ವಿರುದ್ಧ ಒಗ್ಗೂಡುವ ಧ್ವನಿಗಳು, ಕಾಡಿನಲ್ಲಿಯೇ ಮನುಷ್ಯನಿಂದ ಅವುಗಳಿಗಾಗುವ ಅಪಾಯಗಳಿಗೆ ಮೌನವಹಿಸುತ್ತವೆ.

ಪ್ರಸ್ತುತ ದಿನಗಳಲ್ಲಿ ಪ್ರಾಣಿಗಳಿಂದ ಮನುಷ್ಯನ ಮೇಲೆ, ಮನುಷ್ಯನಿಂದ ಪ್ರಾಣಿಗಳ ಮೇಲೆ ದಾಳಿ ಹೆಚ್ಚಾಗತೊಡಗಿದೆ. ಉದ್ದೇಶ ಪೂರ್ವಕ ವಾಗಿ ನಡೆಯುತ್ತಿರುವ ಕಳ್ಳಬೇಟೆಗಳು ಒಂದೆಡೆ ಯಾದರೆ, ಅಪಘಾತದಂತಹ ಸಂದರ್ಭಗಳಲ್ಲಿ ಪ್ರಾಣಿಗಳು ಹೆಚ್ಚು ಜೀವ ಕಳೆದುಕೊಳ್ಳುತ್ತಿವೆ. ಇತ್ತೀಚೆಗೆ ಬಂಡೀಪುರದಲ್ಲಿ ನಡೆದ ಅಪಘಾತದಲ್ಲಿ ಸಾವನ್ನಪ್ಪಿದ ಆನೆಯ ವರೆಗೂ ಮನುಷ್ಯನಿಂದ ಪ್ರಾಣ ಕಳೆದುಕೊಂಡ ಪ್ರಾಣಿಗಳ ಸಾಕಷ್ಟು ಉದಾಹರಣೆಗಳನ್ನು ನೋಡಬಹುದಾಗಿದೆ.

ಈ ಸಾವುಗಳಿಗೆ ಕಾರಣವೇನು? ಹುಡುಕುತ್ತಾ ಹೋದರೆ ಬೆರಳು ನಮ್ಮತ್ತ ತೋರುತ್ತದೆ. ಈಗಾಗಲೇ ಸಾಕಷ್ಟು ಪ್ರಮಾಣದ ಕಾಡು ನಶಿಸಿದೆ. ಜೊತೆಗೆ ಸಂಪರ್ಕ ಕಲ್ಪಿಸುವ ರಸ್ತೆಗಳೂ ರಾಷ್ಟ್ರೀಯ ಹೆದ್ದಾರಿ ಎಂಬ ಹೆಸರಿನಲ್ಲಿ ಅತಿಯಾಗಿ ಅಭಿವೃದ್ಧಿಗೊಂಡು ವಾಹನಗಳ ಸಂಖ್ಯೆ ಮತ್ತು ವೇಗ ಹೆಚ್ಚಾಗಲು ಕಾರಣವಾಗಿದೆ. ಬಂಡೀಪುರದಲ್ಲಿಯೂ ಇದೇ ಸಮಸ್ಯೆಯನ್ನು ಕಾಣಬಹುದಾಗಿದೆ.

ರಸ್ತೆ ಅಭಿವೃದ್ಧಿ ಮಾಡುವುದು ಸಂಚಾರಕ್ಕೆ ಪೂರಕವಾಗಿದ್ದರೆ, ಪ್ರಾಣಿಗಳ ಜೀವಕ್ಕೆ ಅದುಮಾರಕವಾಗಿದೆ. ಹುಲಿ, ಚಿರತೆ, ಜಿಂಕೆ, ಲಂಗೂರ್‌ನಂತಹ ಪ್ರಾಣಿಗಳು,ಸಾಕಷ್ಟು ಬಾರಿ ಪಕ್ಷಿಗಳು ವಾಹನಗಳಿಗೆ ಸಿಲುಕಿ ಸಾವನ್ನಪ್ಪುವ ಪ್ರಕರಣಗಳು ಹೆಚ್ಚಾಗಿದ್ದು, ಪ್ರಾಣಿ ಪ್ರಿಯರ ಬೇಸರಕ್ಕೆ ಕಾರಣವಾಗಿದೆ.

ಬಂಡೀಪುರ ಅರಣ್ಯದೊಳಗಿನ ರಸ್ತೆಯಲ್ಲಿ ಸಂಚಾರ ನಿಯಮಗಳು ಸಡಿಲವಾಗಿವೆಯೇ? ಎಂಬುದು ಸಾರ್ವಜನಿಕ ವಲಯದ ಪ್ರಶ್ನೆಯಾಗಿದೆ. ಬಂಡೀಪುರದಲ್ಲಿ ರಾತ್ರಿ ೯ರಿಂದ ಬೆಳಿಗ್ಗೆ ೬ಗಂಟೆವರೆಗೂ ಕಾಡಂಚಿನ ೨ ಗೇಟ್‌ಗಳನ್ನು ಬಂದ್ ಮಾಡುವ ಕಾರಣ ಅಷ್ಟರೊಳಗೆ ಗೇಟ್ ದಾಟಲು ವಾಹನಗಳು ಅತಿಯಾದ ವೇಗದಲ್ಲಿ ಸಂಚಾರ ಮಾಡುವುದರಿಂದ ರಾತ್ರಿ ವೇಳೆಯೇ ಅಪಘಾತಗಳು ಹೆಚ್ಚಾಗಲು ಕಾರಣವಾಗಿವೆ. ಅಪಘಾತಗಳನ್ನು ತಪ್ಪಸಿ ಪ್ರಾಣಿಗಳನ್ನು ಸಂರಕ್ಷಿಸಲು ಅರಣ್ಯ ಇಲಾಖೆ ಎಷ್ಟೇ ಪ್ರಯತ್ನಗಳನ್ನು ಮಾಡಿದರೂ ಒಂದಲ್ಲ ಒಂದು ಕಡೆ ಇಂತಹ ಪ್ರಕರಣಗಳು ವರದಿಯಾಗುತ್ತಲೇ ಇವೆ.

ಈಗ ತಂತ್ರಜ್ಞಾನ ಸಾಕಷ್ಟು ಮುಂದುವರಿದಿದೆ. ಬಹುಶಃ ಆ ತಂತ್ರಜ್ಞಾನದ ಬಳಕೆ ಕಾಡಿನ ರಸ್ತೆಗಳಲ್ಲಾದರೆ ಇಂತಹ ಅಪಘಾತಗಳನ್ನು ತಪ್ಪಿಸಲು ಉಪಯೋಗವಾಗಬಹುದಾಗಿದೆ. ಕಾಡಿನಲ್ಲಿ ಹಾದುಹೋಗುವ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಸ್ವಯಂ ಚಾಲಿತವಾಗಿ ವಾಹನದ ವೇಗ ಗುರುತಿಸುವ ಕ್ಯಾಮೆರಾಗಳನ್ನು ಅಳವಡಿಸಿ ನಿಗದಿತ ವೇಗಕ್ಕಿಂತ ಅತಿಯಾಗಿ ಚಾಲನೆ ಮಾಡುವವರನ್ನು ಗುರುತಿಸಿ ಕೂಡಲೆ ಆ ವಾಹನಗಳಿಗೆ ದಂಡ ಅಥವಾ ಕಾನೂನು ಕ್ರಮ ಜರುಗಿಸಬೇಕಿದೆ. ಇದು ಉಳಿದ ವಾಹನಚಾಲಕರಿಗೆ ಎಚ್ಚರಿಕೆ ಯಾಗಲಿದೆ. ಜೊತೆಗೆ ಅರಣ್ಯದೊಳಗೆ ರಸ್ತೆಯಲ್ಲಿ ಅಲ್ಲಲ್ಲಿ ಸ್ಪೀಡ್ ಬ್ರೇಕರ್‌ಗಳನ್ನು ಅಳವಡಿಸುವುದು ಸೂಕ್ತವೆನಿಸುತ್ತದೆ. ಇನ್ನು ರಾತ್ರಿಯ ವೇಳೆ ಅರಣ್ಯದೊಳಗಿನ ರಸ್ತೆಗಳಲ್ಲಿ ವಾಹನ ಸಂಚಾರವನ್ನು ನಿಷೇಧ ಮಾಡುವುದು ಮತ್ತಷ್ಟು ಸೂಕ್ತವೆನಿಸುತ್ತದೆ. ಹಾಗೆಯೇ ಪ್ರವಾಸಿಗರು ವಾಹನ ನಿಲ್ಲಿಸಿ ಪ್ರಾಣಿಗಳಿಗೆ ಕೀಟಲೆ ಮಾಡುವುದು, ಮದ್ಯವ್ಯಸನಿಗಳು ಕಾಡಿನಲ್ಲಿ ವಾಹನ ನಿಲ್ಲಿಸಿ ಮದ್ಯ ಸೇವನೆ ಮಾಡುವ ಪ್ರಕರಣಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ನೋಡುತ್ತಿದ್ದೇವೆ. ಅವುಗಳಿಗೆ ಸೂಕ್ತ ಕಾನೂನು ಕ್ರಮವಾದಲ್ಲಿ ಮಾತ್ರ ಇಂತಹ ಸಮಸ್ಯೆಗಳನ್ನು ತಪ್ಪಿಸಲು ಸಾಧ್ಯ.

ರಾತ್ರಿಯ ವೇಳೆ ವಾಹನಗಳ ಬೆಳಕು ಪ್ರಾಣಿಗಳಿಗೆ ತೊಂದರೆಯನ್ನುಂಟು ಮಾಡುತ್ತಿದೆ. ಬೆಳಕಿನ ತೀವ್ರತೆಗೆ ಅವು ದಿಕ್ಕು ಕಾಣದೆ ರಸ್ತೆ ಬಿಟ್ಟು ಹೋಗಲಾ ರದೇ ವಾಹನಗಳಿಗೆ ಸಿಲುಕುವ ಸಾಧ್ಯತೆಯೇ ಹೆಚ್ಚು ಅದರಲ್ಲೂ ನಿಶಾಚರಿ ಪ್ರಾಣಿಗಳೇ ಹೆಚ್ಚಾಗಿ ಸಿಲುಕುತ್ತವೆ. ಆದ್ದರಿಂದ ವನ್ಯಸಂಪತ್ತು ಹೆಚ್ಚಾಗಿರುವ ಬಂಡೀಪುರದಂತಹ ಪ್ರದೇಶಗಳಲ್ಲಿ ರಾತ್ರಿ ಸಂಚಾರಕ್ಕೆ ಕೊಂಚ ಬ್ರೇಕ್ ನೀಡಬೇಕಿದೆ. ಏಕೆಂದರೆ ನಮ್ಮಂತೆಯೇ ಮುಂದಿನ ಪೀಳಿಗೆಯೂ ಪ್ರಾಣಿಗಳನ್ನು ನೈಜ್ಯವಾಗಿ ನೋಡಬೇಕಿದೆ ಅಲ್ಲವೇ?

andolanait

Recent Posts

ಓದುಗರ ಪತ್ರ | ರಾಜ್ಯ ವಿಧಾನ ಮಂಡಲ ಅಧಿವೇಶನ ಸದ್ಬಳಕೆಗೆ ದಾರಿ ಯಾವುದಯ್ಯ!?

ರಾಜ್ಯ ವಿಧಾನ ಮಂಡಲದ ಮುಂಗಾರು ಅಧಿವೇಶನ ವಿರೋಧ ಪಕ್ಷಗಳ ಸಕ್ರೀಯ ಭಾಗವಹಿಸುವಿಕೆ ಇಲ್ಲದೇ ನೀರಸವಾಗಿ ಕೊನೆಗೊಂಡಿದ್ದು ಪ್ರಜಾಪ್ರಭುತ್ವದ ದುರ್ದೈವದ ಸಂಗತಿಯಾಗಿದೆ.…

5 hours ago

ಓದುಗರ ಪತ್ರ | ಹಿಂದಿ ಶಿಕ್ಷಕರ ನೇಮಕಾತಿ ಏಕಿಲ್ಲ?

15 ಸಾವಿರ ಶಿಕ್ಷಕರ ನೇಮಕಾತಿಯಲ್ಲಿ ಹಿಂದಿ ಶಿಕ್ಷಕರನ್ನು ಪಟ್ಟಿಯಿಂದ ಹೊರಗಿಟ್ಟಿರುವುದು ಖಂಡನೀಯ. ಇದು ಸಂವಿಧಾನ ಬಾಹಿರ ನಡೆ. ಇದು ಹಿಂದಿ…

6 hours ago

ಓದುಗರ ಪತ್ರ | ಕನ್ನಡ ಚಿತ್ರ; ಟಿಕೆಟ್‌ಗಳಲ್ಲಿ ಆಂಗ್ಲ ಹೆಸರು !

ಮಲ್ಟಿಪ್ಲೆಕ್ಸ್‌ಗಳಲ್ಲಿ ಕನ್ನಡದ ಚಲನಚಿತ್ರಗಳು ಪ್ರದರ್ಶಿತವಾಗುತ್ತವೆ. ಗ್ರಾಹಕರಿಗೆ ನೀಡುವ ಟಿಕೆಟಿನಲ್ಲಿ ಸಿನಿಮಾದ ಹೆಸರೂ ಅಚ್ಚಾಗಿರುತ್ತದೆ.ಆದರೆ... ಕನ್ನಡ ಚಿತ್ರಕ್ಕೆ ಖರೀದಿಸುವ ಟಿಕೆಟ್‌ನಲ್ಲಿ ಚಿತ್ರದ…

6 hours ago

ಓದುಗರ ಪತ್ರ | ಮತದಾರರ ಕರಡು ಪಟ್ಟಿಯ ತಪ್ಪುಗಳನ್ನು ಸರಿಪಡಿಸಿ

ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್-೨೬) ಕಾರ್ಯ ಮುಗಿದು ಇದೀಗ ಕರಡು ಪಟ್ಟಿ ಬಿಡುಗಡೆಯಾಗಿದೆ. ಎಸ್‌ಐಆರ್ ಬಗ್ಗೆ ಹಲವಾರು ಅನುಮಾನ…

6 hours ago

ಬಾ.ನಾ.ಸುಬ್ರಹ್ಮಣ್ಯ ಅವರ ವೈಡ್‌ ಆಂಗಲ್‌ | ಕಳಚಿದ ಚಲನಚಿತ್ರ ಪತ್ರಿಕೋದ್ಯಮದ ಹಿರಿಯ ಕೊಂಡಿ ಶ್ರೀಕೃಪಾ

ಕನ್ನಡ ಚಿತ್ರವೊಂದು ದೇಶ-ವಿದೇಶಗಳಲ್ಲಿ ಜೈತ್ರಯಾತ್ರೆ ಮಾಡುತ್ತಿರುವ ಸಂದರ್ಭ. ಕನ್ನಡ ಚಿತ್ರರಂಗದ ಕಡೆ ಭಾರತದ ಉಳಿದ ಚಿತ್ರೋದ್ಯಮಗಳು ತಿರುಗಿ ನೋಡುವ ಬೆಳವಣಿಗೆ.…

6 hours ago

ಮಹಾಪಂಚ್‌ ಕಾರ್ಟೂನ್‌

ಮಹಾಪಂಚ್‌ ಕಾರ್ಟೂನ್‌ | ಆಗಸ್ಟ್‌ 28  ಶುಕ್ರವಾರ

6 hours ago