ಗೋಣಿಕೊಪ್ಪ: ಹಾತೂರು ಗ್ರಾಮದಲ್ಲಿ ಕಡವೆ ಬೇಟೆ ಮಾಡಿರುವ ಪ್ರಕರಣದಲ್ಲಿ ಸೋಮವಾರ ೬೦ ಕೆ.ಜಿ. ಕಡವೆ ಮಾಂಸ ವಶ ಪಡಿಸಿಕೊಂಡಿದ್ದು, ಇಬ್ಬರ ಮೇಲೆ ಪ್ರಕರಣ ದಾಖಲಾಗಿದೆ.
ಕಡವೆಯನ್ನು ಕೊಂದು ಮಾಂಸ ಮಾರಾಟಕ್ಕೆ ಮುಂದಾಗಿದ್ದ ಸಂದರ್ಭ ಸ್ಥಳಕ್ಕೆ ವಿರಾಜಪೇಟೆ ಅರಣ್ಯ ವಲಯದ ಕಾರ್ಯಾಚರಣೆ ತಂಡ ದಾಳಿ ಮಾಡಿದೆ. ಈ ಸಂದರ್ಭ ೬೦ ಕೆಜಿ ಮಾಂಸ ವಶಪಡಿಸಿಕೊಂಡಿದ್ದು, ಪ್ರಕರಣದಲ್ಲಿ ಮನೆ ಮಾಲೀಕ ಕೊಕ್ಕಂಡ ಸತ್ಯುಂಜಯ ಹಾಗೂ ಗೋಣಿಕೊಪ್ಪ ನಿವಾಸಿ ಶರಣು ಮತ್ತು ಇತರರ ಮೇಲೆ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆಗೆ ಪೊನ್ನಂಪೇಟೆ ಆರ್ಎಫ್ಒ ಶಂಕರ ಅವರಿಗೆ ಹಸ್ತಾಂತರಿಸಲಾಗಿದೆ.
ವಿರಾಜಪೇಟೆ ಡಿಸಿಎಫ್ ವೈ. ಚಕ್ರಪಾಣಿ ಮಾರ್ಗದರ್ಶನದಲ್ಲಿ ಎಸಿಎಫ್ ಕೊಚ್ಚೆರ ಎ. ನೆಹರು, ಆರ್ಎಫ್ಒ ಕಳ್ಳಿರ ದೇವಯ್ಯ, ಡಿಆರ್ಎಫ್ಒ ಶ್ರೀಶೈಲ ಮಾಲಿಗೌಡ್ರ, ದೇಯಂಡ ಸಂಜಿತ್ ಸೋಮಯ್ಯ, ಸಿಬ್ಬಂದಿ ಸಿ. ಅರುಣಾ, ಮಾಲತೇಶ್ ಬಡಿಗೇರ್, ಚಂದ್ರಶೇಖರ ಅಮರಗೋಳ, ಅಶೋಕ, ಆರ್ಆರ್ಟಿ ಸಿಬ್ಬಂದಿ ಅನಿಲ್, ವಿಕಾಸ್, ಸುರೇಶ, ಮಹೇಶ್, ನಾಚಪ್ಪ, ಮುರುಗನ್, ಮಂಜು, ಸಚಿನ್, ವಿನೋದ್, ವಿನು, ಅಚ್ಚಯ್ಯ ಇದ್ದರು.
ಅಧಿಸೂಚನೆ ಹೊರಡಿಸಿದ ಕೇಂದ್ರ ಸರ್ಕಾರ ಮೈಸೂರು : ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ತಂಬಾಕು ಬೆಳೆಗಾರರ ಸಮಸ್ಯೆಗಳು ಹಾಗೂ ಮಾರಾಟ…
ಮೈಸೂರು : ಮೈಸೂರು ಅರಮನೆ ಮಂಡಳಿ ವತಿಯಿಂದ ಕ್ರಿಸ್ಮಸ್ ಹಾಗೂ ಹೊಸವರ್ಷದ ಪ್ರಯುಕ್ತ 10 ದಿನಗಳ ‘ಅರಮನೆ ಫಲಪುಷ್ಪ ಪ್ರದರ್ಶನ’…
ಹಲಗೂರು : ಎತ್ತಿನ ಗಾಡಿ ತೆರಳುತ್ತಿದ್ದ ವೇಳೆ ಕೆಎಸ್ಆರ್ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಎತ್ತು ಸ್ಥಳದಲ್ಲೇ ಮೃತಪಟ್ಟ ಘಟನೆ…
ಹಲಗೂರು : ಇಲ್ಲಿಗೆ ಸಮೀಪದ ಮುತ್ತತ್ತಿ ಕಾವೇರಿ ನದಿಯಲ್ಲಿ ಈಜಾಡುತ್ತಿದ್ದ ವೇಳೆ ನೀರಿನ ಸೆಳೆತಕ್ಕೆ ಸಿಲುಕಿ ಯುವಕ ಮೃತಪಟ್ಟಿರುವ ಘಟನೆ…
ಭಾರತೀನಗರ : ಇಲ್ಲಿಗೆ ಸಮೀಪದ ಕೆ.ಶೆಟ್ಟಹಳ್ಳಿ ಗ್ರಾಮದಲ್ಲಿ ಪೊಲೀಸರ ಭದ್ರತೆಯೊಂದಿಗೆ ಗ್ರಾಮದ ಪರಿಶಿಷ್ಟ ಜಾನಾಂಗದ ಮಹಿಳೆಯರು, ಪುರುಷರು ದೇವಾಲಯಗಳಿಗೆ ಪ್ರವೇಶಿಸಿದರು.…
ಮೈಸೂರು : ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದಿರುವ ಸಂಬಂಧ ಯಶಸ್ವಿ ಕಾರ್ಯಾಚರಣೆ ನಡೆಸಿದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ(ಚಾವಿಸನಿನಿ)…