ಇನ್ನು ಮೂರು ದಿನಗಳು ಬಾಕಿಯಿರುವಾಗಲೇ ಕರಕುಶಲ ಮೇಳದ ಮಳಿಗೆಗಳು ಖಾಲಿ
ಮೈಸೂರು: ರಂಗಾಯಣದ ಮಹತ್ವಾಕಾಂಕ್ಷಿ ಉತ್ಸವ ಬಹುರೂಪಿ ರಾಷ್ಟ್ರೀಯ ರಂಗೋತ್ಸವಕ್ಕೆ ಈ ಬಾರಿ ಮಳೆ ಆರಂಭಿಕ ಹೊಡತೆ ಕೊಟ್ಟಿದೆ. ಚೆನ್ನೈನಲ್ಲಿ ಎದ್ದಿರುವ ಸೈಕ್ಲೋನ್ ಕಾರಣ ನಗರದಲ್ಲಿ ಮೂರು ದಿನಗಳಿಂದಲೂ ಜಿಟಿಜಿಟಿ ಮಳೆ, ಮೋಡ ಕವಿದ ವಾತಾವರಣ ಇದೆ. ಇದರಿಂದ ಹೆಚ್ಚಿನ ಕಲಾಸಕ್ತರು ರಂಗಾಯಣದ ಕಡೆಗೆ ಮುಖ ಮಾಡುತ್ತಿಲ್ಲ. ಇದರ ಜೊತೆಗೆ ಆಯೋಜಕರ ಅಸಹಕಾರದಿಂದ ಕರಕುಶಲ ಮೇಳದಲ್ಲಿ ಮಳಿಗೆಗಳನ್ನು ಹಾಕಿದ್ದವರು ಮಳಿಗೆಯನ್ನು ಖಾಲಿ ಮಾಡಿ ಹೊರಟಿರುವುದರಿಂದ ರಂಗಾಯಣದ ಅಂಗಳ ಭಣಗುಡುತ್ತಿದೆ.
ಡಿ.೯ರಂದು ಸಂಜೆ ಬಹುರೂಪಿ ಕರಕುಶಲ ಮೇಳಕ್ಕೆ ಚಾಲನೆ ದೊರೆಯಿತು. ಹೀಗೆ ಆಂಭಗೊಂಡ ಕೆಲವೇ ಸಮಯದಲ್ಲಿ ಬಂದ ಮಳೆಯಿಂದಾಗಿ, ಅಂದೇ ಕೆಲವು ವ್ಯಾಪಾರಿಗಳು ಆಯೋಜಕರ ಕುರಿತು ಅಸಮಾಧಾನ ವ್ಯಕ್ತಪಡಿಸಿ, ಮಳಿಗೆಗಳಿಗಾಗಿ ತಾವು ಕಟ್ಟಿದ್ದ ಡಿಡಿ ಹಣವನ್ನು ಹಿಂಪಡೆದು ತಮ್ಮ ವಸ್ತುಗಳನ್ನು ತೆಗೆದುಕೊಂಡು ವಾಪಸ್ಸಾದರು.
ಈ ವೇಳೆ ಆಯೋಜಕರು ನಾಳೆಗೆ ಈ ರೀತಿ ಆಗದಂತೆ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ, ನಾಲ್ಕು ದಿನಗಳು ಕಳೆದರೂ ಇನ್ನೂ ಸಮರ್ಪಕ ವ್ಯವಸ್ಥೆ ಕಲ್ಪಿಸದ ಕಾರಣ ಭಾನುವಾರವೂ ಹಲವು ಮಳಿಗೆಗಳವರು ತಮ್ಮ ವಸ್ತುಗಳನ್ನು ತೆಗೆದುಕೊಂಡು ಹೋಗುತ್ತಿರುವ ದೃಶ್ಯಗಳು ರಂಗಾಯಣದ ಆವರಣದಲ್ಲಿ ಕಂಡು ಬಂದವು.
ವ್ಯಾಪಾರಿಗಳ ಅಳಲು
‘ಡಿಡಿ ಹಣವನ್ನು ಕಟ್ಟಿಸಿಕೊಳ್ಳುವಾಗ ವ್ಯವಸ್ಥಿತವಾಗಿ ಆಯೋಜನೆ ಮಾಡಲಾಗುವುದು ಎಂದು ಅಧಿಕಾರಿಗಳು ಹೇಳಿದ್ದರು. ಆದರೆ, ಹೇಳಿದಂತೆ ಏನೂ ಮಾಡಿಲ್ಲ. ನಾಲ್ಕು ದಿನಗಳಾಯ್ತು ಏನೂ ವ್ಯವಸ್ಥೆ ಮಾಡಲಿಲ್ಲ. ಬಟ್ಟೆ, ಪುಸ್ತಕಗಳು ಎಲ್ಲವೂ ಒದ್ದೆಯಾಗುತ್ತಿವೆ. ಮಳೆಯಿಂದ ಜನರೂ ಬಾರದೇ ವ್ಯಾಪಾರವಿಲ್ಲ. ಹಾಗಾಗಿ, ವಾಪಸ್ಸು ಹೋಗುತ್ತಿದ್ದೇವೆ. ಡಿಡಿ ಹಣವನ್ನು ಕೇಳಿದರೆ, ಎರಡು ದಿನಗಳ ಬಾಡಿಗೆ ಮುರಿದುಕೊಂಡು ಕೊಡುತ್ತೇವೆ ಎಂದು ಹೇಳುತ್ತಾರೆ. ನಮ್ಮ ವಸ್ತುಗಳನ್ನು ತರಲು ನೀಡಿರುವ ಟ್ರಾನ್ಸ್ಪೋರ್ಟ್ ಹಣವೂ ಇಲ್ಲಿ ಸಂಪಾದನೆಯಾಗಿಲ್ಲ ಎಂದು ಕರಕುಶಲ ಮೇಳದಲ್ಲಿನ ವ್ಯಾಪಾರಿಗಳು ಅಳಲು ತೋಡಿಕೊಂಡರು.
ಭಣಗುಡುತ್ತಿದೆ ರಂಗಾಯಣ
ತನ್ನದೇ ಆದ ಇತಿಹಾಸ ಮತ್ತು ಮಹತ್ವವನ್ನು ಹೊಂದಿರುವ ಬಹುರೂಪಿ ನಾಟಕೋತ್ಸವಕ್ಕೆ ಪ್ರತಿವರ್ಷವೂ ಅಸಂಖ್ಯಾತ ಕಲಾಸಕ್ತರು ಮತ್ತು ಪ್ರೇಕ್ಷಕ ವರ್ಗ, ಕಲಾವಿದರು ರಾಜ್ಯ ಮತ್ತು ಹೊರ ರಾಜ್ಯಗಳಿಂದ ಬರುತ್ತಿದ್ದರು. ಆದರೆ, ಈ ಬಾರಿ ಸಾಕಷ್ಟು ಜನರು ಕಾಣದೆ ರಂಗಾಯಣದ ಅಂಗಳ ಭಣಗುಡುತ್ತಿದೆ. ಇದಕ್ಕೆ, ಮಳೆ ಮುಖ್ಯ ಕಾರಣ. ಇದರ ಜೊತೆಗೆ ಅಸಮರ್ಪಕ ಆಯೋಜನೆಯೂ ಕಾರಣ ಎನ್ನಬಹುದು. ಅಲ್ಲದೇ, ಬಹುರೂಪಿ ಆರಂಭವಾಗಿ ನಾಲ್ಕು ದಿನಗಳಾದರೂ, ಇನ್ನು ಸಿದ್ಧತೆ ಪೂರ್ಣಗೊಳ್ಳದೆ ಸಣ್ಣಪುಟ್ಟ ಕೆಲಸಗಳು ನಡೆಯುತ್ತಲೇ ಇವೆ.
ಕೆಲವೊಂದು ನಾಟಕಗಳಿಗಷ್ಟೆ ಜನರು: ಕನ್ನಡ ಮತ್ತು ಕೆಲವು ಭಾಷೆಯ ನಾಟಕಗಳಲ್ಲಷ್ಟೇ ಜನರು ಕಂಡು ಬರುತ್ತಿದ್ದು, ಚಲನಚಿತ್ರೋತ್ಸವ ಮತ್ತು ಜನಪದೋತ್ಸವದಲ್ಲಿ ಹೆಚ್ಚಿನ ಪ್ರೇಕ್ಷಕರು ಕಂಡು ಬರುತ್ತಿಲ್ಲ.
‘ಎರಡು ದಿನಗಳ ಬಾಡಿಗೆ ಮುರಿದುಕೊಂಡು ಡಿಡಿ ಹಣವನ್ನು ನೀಡುವ ಕುರಿತು ರಂಗಾಯಣದ ನಿರ್ದೇಶಕರೊಂದಿಗೆ ಮಾತನಾಡುತ್ತೇನೆ’
-ನಿರ್ಮಲ ಮಠಪತಿ, ಉಪ ನಿರ್ದೇಶಕರು, ರಂಗಾಯಣ
ಹೊಸದಿಲ್ಲಿ : ಮುಂಬರುವ ಏಪ್ರಿಲ್ನಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ರಸ್ತೆಗಳ ಟೋಲ್ ಪ್ಲಾಜಾಗಳಲ್ಲಿ ನಗದು ವಹಿವಾಟುಗಳನ್ನು ಸ್ವೀಕರಿಸುವುದಿಲ್ಲ ಎಂದು ರಸ್ತೆ…
ಸಿದ್ದಾಪುರ : ವಿರಾಜಪೇಟೆ ತಾಲ್ಲೂಕಿನ ಮಾಲ್ದಾರೆ ಸಮೀಪದ ತಟ್ಟಳ್ಳಿಯಲ್ಲಿ ಕಾಫಿ ತೋಟದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕರ ಮೇಲೆ ಕಾಡಾನೆ ದಾಳಿ…
ಮೈಸೂರು : ಫೆ.28ರಿಂದ ಮಾ.17ರವರೆಗೆ ಮೈಸೂರು ನಗರದ 28 ಪರೀಕ್ಷಾ ಕೇಂದ್ರಗಳಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯಲಿದ್ದು, ಸದರಿ ಪರೀಕ್ಷೆಗಳನ್ನು…
ತಿ.ನರಸೀಪುರ : ತಾಲ್ಲೂಕಿನ ಕೇತಹಳ್ಳಿ ಗ್ರಾಮದಲ್ಲಿ ಚಿರತೆಯೊಂದು ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಗ್ರಾಮದಲ್ಲಿ ರಾತ್ರಿ ವೇಳೆ ಚಿರತೆ ಸಂಚರಿಸುತ್ತಿದ್ದುದನ್ನು ಯುವಕರಿಬ್ಬರು…
ಮೈಸೂರು : ಈ ಹಿಂದೆ ಎಂಡಿಎ ಆಯುಕ್ತರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಡಾ.ಡಿ.ಬಿ.ನಟೇಶ್ ಅವರ ವಿರುದ್ಧ ಲಂಚ ನೀಡಿರುವ ಆರೋಪ ಹೊರಿಸಿದ್ದ…
ಹನೂರು : ಇಲ್ಲಿನ ಗುಂಡಾಲ್ ಜಲಾಶಯದಲ್ಲಿ ಹುಲಿ ಕಳೇಬರ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೋರ್ವನನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.…