ಜಿಲ್ಲೆಗಳು

ಚಾಮರಾಜನಗರ ಜಿಲ್ಲೆಯಲ್ಲಿ ಮಂಜಿನಮಳೆ!

ಚಾಮರಾಜನಗರ: ಜಿಲ್ಲೆಯಾದ್ಯಂತ ಬುಧವಾರ ದಟ್ಟ ಮಂಜಿನ ಮಳೆಯ ಸುರಿದಿದ್ದು ಬೆಳಿಗ್ಗೆ ೮.೩೦ರವರೆಗೂ ಮಂಜು ಕವಿದಿತ್ತು. ಇದರೊಂದಿಗೆ ಚಳಿಯೂ ಶುರುವಾಗಿದೆ.

ಕೆಲದಿನಗಳಿಂದಲೇ ಇಬ್ಬನಿ ಬೀಳುತ್ತಿದೆಯಾದರೂ ಬುಧವಾರದ ಮಟ್ಟಿಗೆ ಮಂಜು ಸುರಿದಿರಲಿಲ್ಲ. ಪ್ರಖರ ಬಿಸಿಲು ಠಳಾಯಿಸುವವರೆಗೂ ಮಂಜಿನ ಕಾರಣದಿಂದಾಗಿ ವಾಹನಗಳು ಲೈಟ್ ಹಾಕಿಕೊಂಡೇ ಸಂಚರಿಸಬೇಕಾಯಿತು.

ವಾಯುವಿಹಾರ ಮಾಡುವವರು ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಹೆಜ್ಜೆ ಹಾಕಬೇಕಾಯಿತು. ಇಬ್ಬನಿ ಹಿನ್ನೆಲೆಯಲ್ಲಿ ರಸ್ತೆಬದಿಯಲ್ಲಿ ವಾಕಿಂಗ್ ಮಾಡುವವರು ಎಚ್ಚರಿಕೆ ವಹಿಸಬೇಕಿದೆ. ಮಂಜು ಕವಿದಾಗ ತೀರಾ ಸನಿಹಕ್ಕೆ ಬರುವವರೆಗೂ ಮುಂದೆ ಏನಿದೆ ಎಂಬುದೇ ಗೊತ್ತಾಗುವುದಿಲ್ಲ. ಹೀಗಾಗಿ ಹಿಮದ ಈ ಸಂದರ್ಭ ರಸ್ತೆಬದಿಯಲ್ಲಿ ವಾಯುವಿಹಾರ ಮಾಡದಿರುವುದೇ ಸೂಕ್ತ.

ಜಿಲ್ಲೆಯಲ್ಲಿ ಸತತವಾಗಿ ಮಳೆಯಾಗಿ ಕೆರೆಕಟ್ಟೆ ಹಾಗೂ ಜಲಾಶಯಗಳು ಭರ್ತಿ ಕಂಡಿರುವುದರಿಂದ ಇತರೆಡೆಗಿಂತ ಈ ನೀರಿನ ಪ್ರದೇಶಗಳಲ್ಲಿ ಇಬ್ಬನಿ ತುಸು ಹೆಚ್ಚಾಗಿಯೇ ಬೀಳತೊಡಗಿದೆ. ಆದ ಕಾರಣ ನೀರು ಹರಿದಾಡುವ ಭಾಗಗಳಲ್ಲಿನ ಜನರು ಅದಾಗಲೇ ಬೆಚ್ಚನೆಯ ಉಡುಪುಗಳ ಮೊರೆ ಹೋಗುವಂತಾಗಿದೆ.
ಆರೋಗ್ಯದ ಮೇಲೂ ಇಬ್ಬನಿ ಗಂಭೀರ ಪರಿಣಾಮ ಬೀರುತ್ತದೆ. ತಲೆನೋವು, ನೆಗಡಿ ಹಾಗೂ ಜ್ವರಕ್ಕೂ ಕಾರಣವಾಗಲಿದೆ. ಈ ಹಿನ್ನೆಲೆಯಲ್ಲಿ ಇಬ್ಬನಿ ತಲೆಮೇಲೆ ಬೀಳದಂತೆ ಜನತೆ ಟೊಪ್ಪಿ ಅಥವಾ ಟವೆಲ್ ಸುತ್ತಿಕೊಂಡು ದೈನಂದಿನ ಚಟುವಟಿಕೆಯಲ್ಲಿ ತೊಡಗಿದ್ದಾರೆ.

ಮಂಜು ಕೆಲ ಬೆಳೆಗಳಿಗೆ ವರದಾನವಾದರೆ ಅನೇಕ ಬೆಳೆಗಳ ರೋಗರುಜಿನಕ್ಕೂ ಕಾರಣವಾಗಲಿದೆ ಎನ್ನುತ್ತಾರೆ ಕೃಷಿ ತಜ್ಞರು. ಹಸಿಕಡಲೆ, ಕೊತ್ತಂಬರಿ ಬೆಳೆಗಳು ಇಬ್ಬನಿ-ಚಳಿ ವಾತಾವರಣದಲ್ಲೇ ಬೆಳೆಯುತ್ತವೆ. ತರಕಾರಿ ಇನ್ನಿತರ ಬೆಳೆಗಳು ವಿಶೇಷವಾಗಿ ಕುಂಬಳ ಜಾತಿಯ ಬಳ್ಳಿ ಸಸ್ಯಗಳಲ್ಲಿ ಇಬ್ಬನಿಯಿಂದ ಬೂದು ರೋಗ ತಲೆ ಎತ್ತುವ ಅಪಾಯವಿದೆ ಎಂಬುದು ತಜ್ಞರ ಅನಿಸಿಕೆ.

ಇಬ್ಬನಿ ಪ್ರಾರಂಭವಾಯಿತೆಂದರೆ ಮಳೆಗೆ ಬ್ರೇಕ್ ಬಿದ್ದಂತೆ ಎಂಬುದು ರೈತರ ಕೃಷಿ ಲೆಕ್ಕಾಚಾರ. ಕ್ಯಾಲೆಂಡರ್ ಪ್ರಕಾರ, ಇನ್ನೂ ಚಳಿಗಾಲ ಶುರುವಾಗಿಲ್ಲ. ಆದರೂ ಥಂಡಿ ವಾತಾವರಣ ಈಗಲೇ ಚಿಗುರೊಡೆದಿದೆ.

ಚಾಮರಾಜನಗರ ಜಿಲ್ಲೆಯಲ್ಲಿ ಬುಧವಾರ ಬೆಳಿಗ್ಗೆ ೮.೩೦ಕ್ಕೆ ಕೊನೆಗೊಂಡಂತೆ ಕನಿಷ್ಠ ೧೭.೦೨ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಇದರ ಹಿಂದಿನ ೨೪ಗಂಟೆ ಅವಧಿಯಲ್ಲಿ ಕನಿಷ್ಠ ೧೬.೦೭ಡಿಗ್ರಿ ಸೆಲ್ಸಿಯಸ್ ತಾಪಮಾನ ವರದಿಯಾಗಿದೆ. -ಹೆಚ್.ಕೆ.ರಜತ್, ಕೃಷಿ ಹವಾಮಾನ ತಜ್ಞ.

andolana

Recent Posts

28 ಕೇಂದ್ರಗಳಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ

ನವೀನ್ ಡಿಸೋಜ ಕೊಡಗು ಜಿಲ್ಲೆಯಲ್ಲಿ ಅಗತ್ಯ ಸಿದ್ಧತೆ; ಪರೀಕ್ಷೆಗೆ ನೋಂದಾಯಿಸಿಕೊಂಡಿರುವ ೬,೧೮೩ ವಿದ್ಯಾರ್ಥಿಗಳು ಮಡಿಕೇರಿ: ಮಾ.೧೮ರಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಆರಂಭವಾಗ…

2 mins ago

ರಾಗಿ ಖರೀದಿ ಕೇಂದ್ರದಲ್ಲಿ ಹೆಚ್ಚುತ್ತಿರುವ ಅಕ್ರಮ: ಆರೋಪ

ನವೀನ್ ಕುಮಾರ್ ಕ್ವಿಂಟಾಲ್ ರಾಗಿಗೆ ೪ ಕೆಜಿ ಕಳೆಯುತ್ತಿರುವುದರಿಂದ ನಷ್ಟ ಎಂಬುದು ರೈತರ ಅಳಲು ಪಿರಿಯಾಪಟ್ಟಣ: ರಾಗಿ ಖರೀದಿ ಕೇಂದ್ರಗಳಲ್ಲಿ…

7 mins ago

ಇರಾನ್ ಮಹಿಳಾ ಫುಟ್ಬಾಲ್ ತಂಡಕ್ಕೆ ಹೆಚ್ಚುತ್ತಿರುವ ಭಯ ; ಆಸ್ಟ್ರೇಲಿಯಾದಲ್ಲಿ ಆಶ್ರಯಕ್ಕೆ ಹೆಚ್ಚುತ್ತಿರುವ ಕರೆ!

ಗೋಲ್ಡ್ ಕೋಸ್ಟ್ (ಆಸ್ಟ್ರೇಲಿಯಾ) :  ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಏಷ್ಯಾ ಮಹಿಳಾ ಫುಟ್ಬಾಲ್ ಕಪ್ 2026ನಲ್ಲಿ ಭಾಗವಹಿಸಿದ್ದ ಇರಾನ್ ರಾಷ್ಟ್ರೀಯ ಮಹಿಳಾ…

9 hours ago

ಜಾಗತಿಕ ತೈಲ ಬೆಲೆಗಳಲ್ಲಿ ಭಾರೀ ಏರಿಕೆ ; ಬ್ಯಾರೆಲ್‌ಗೆ 120 ಡಾಲರ್ ಗಡಿ ದಾಟಿದ ತೈಲ ಬೆಲೆ

ಹೊಸದಿಲ್ಲಿ : ಇರಾನ್ ಮೇಲಿನ ಅಮೆರಿಕಾ-ಇಸ್ರೇಲ್ ದಾಳಿಗಳು ಮತ್ತು ಇರಾನ್‌ಗೆ ಹೊಸ ಸುಪ್ರೀಂ ಲೀಡರ್ ನೇಮಕದ ನಂತರ ಮಧ್ಯಪ್ರಾಚ್ಯದಲ್ಲಿ ತೀವ್ರ…

10 hours ago

ಮಧ್ಯಪ್ರಾಚ್ಯ ಸಂಘರ್ಷ | ದೆಹಲಿಯಿಂದ ಮ್ಯಾಂಚೆಸ್ಟರ್‌ಗೆ ತೆರಳುತಿದ್ದ ಇಂಡಿಗೊ ವಿಮಾನ ಯು-ಟರ್ನ್‌

ಹೊಸದಿಲ್ಲಿ : ಮಧ್ಯಪ್ರಾಚ್ಯದಲ್ಲಿ ಇರಾನ್-ಇಸ್ರೇಲ್-ಅಮೆರಿಕಾ ನಡುವಿನ ಸಂಘರ್ಷದ ಹಿನ್ನೆಲೆಯಲ್ಲಿ ವಾಯುಪ್ರದೇಶದಲ್ಲಿ ತುರ್ತು ನಿರ್ಬಂಧಗಳು ಜಾರಿಯಾಗಿರುವುದರಿಂದ ದೆಹಲಿಯಿಂದ ಮ್ಯಾಂಚೆಸ್ಟರ್‌ಗೆ ಹೋಗುತಿದ್ದ ಇಂಡಿಗೊ…

12 hours ago

ಎಂಡಿಎ ಬಜೆಟ್‌ | ಮೈಸೂರು ಅಭಿವೃದ್ಧಿಗೆ ಒತ್ತು ; 799.90 ಕೋಟಿ ರೂ. ಸಂಪನ್ಮೂಲ ನಿರೀಕ್ಷೆ

ಮೈಸೂರು : ಮೈಸೂರು ಅಭಿವೃದ್ಧಿ ಪ್ರಾಧಿಕಾರ (MDA) ಈ ಬಾರಿಯ ಆರ್ಥಿಕ ವರ್ಷದ ಬಜೆಟ್‌ನಲ್ಲಿ ನಗರದ ಸಮಗ್ರ ಅಭಿವೃದ್ಧಿಗೆ ತೀವ್ರ…

12 hours ago