ಜಿಲ್ಲೆಗಳು

ಆಡಳಿತ ಚುರುಕುಗೊಳಿಸುವಂತೆ ಆಗ್ರಹಿಸಿ ಪ್ರತಿಭಟನೆ

ಮೈಸೂರು :ನೇತಾಜಿ ನಗರದಲ್ಲಿರುವ ಗಣಪತಿ  ದೇವಾಲಯದ ಆವರಣದಲ್ಲಿಂದು ಪರಿಸರ ಬಳಗದ ಸದಸ್ಯರುಗಳು ಹಾಗೂ ನೇತಾಜಿ ನಗರದ ನಿವಾಸಿಗಳು ಉತ್ತಮ ಆಡಳಿತಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.

ಪರಶುರಾಮೇಗೌಡ ಅವರು ಸತ್ಯಾಗ್ರಹ ಸಭೆಯ ಉದ್ದೇಶಗಳನ್ನು ತಿಳಿಸಿದರು. ಬಳಿಕ ಮಾತನಾಡಿದ ಶಿವಬಸಪ್ಪ ಅವರು ನೇತಾಜಿ ನಗರ ಮತ್ತು ಸುತ್ತ ಮುತ್ತ ಇರುವ ಹಲವಾರು ಬಡಾವಣೆಗಳ ರಸ್ತೆಗಳು ತುಂಬಾ ಹಾಳಾಗಿದ್ದು ಸಂಚಾರ ದುಸ್ತರವಾಗಿದೆ. ತುರ್ತಾಗಿ ರಸ್ತೆಗಳನ್ನು ದುರಸ್ತಿ ಮಾಡದಿದ್ದರೆ ಮುಂಬರುವ ವಿಧಾನ ಸಭಾ ಚುನಾವಣೆಯನ್ನು ಬಹಿಷ್ಕರಿಸುವ ಸಲಹೆ ಕೊಟ್ಟರು.ಶಾಸಕರು ಮತ್ತು ಅಧಿಕಾರಿಗಳನ್ನು ಬೆಂಬತ್ತಿ ನಮ್ಮ ಬಡಾವಣೆಗಳ ಕೆಲಸಗಳನ್ನು ಮಾಡಿಸಿಕೊಳ್ಳೋಣ ಎಂದು ಸವಿತಾ ಗೌಡ ಹೇಳಿದರು.
ಒಗ್ಗಟ್ಟಿನಿಂದ ಪ್ರಯತ್ನ ಮಾಡಿದರೆ ಏನು ಬೇಕಾದರೂ ಸಾಧಿಸಬಹುದು, ಇದಕ್ಕೆ ಪರಿಸರ ಬಳಗದ ಮಾಡಿರುವ ಕೆಲಸಗಳು ಸಾಕ್ಷಿ ಎಂದು ಲೀಲಾ ಶಿವಕುಮಾರ್ ಹೇಳಿದರು. ಮುಂದಿನ ಮಂಗಳವಾರ ನಮ್ಮ ಬಡಾವಣೆಗಳ ಕೆಲಸಗಳನ್ನು ಬೇಗ ಮಾಡಿ ಎಂದು ಸಂಬಂಧಿಸಿದ ಅಧಿಕಾರಿಗಳನ್ನು ಭೇಟಿಯಾಗಿ ಒತ್ತಡ ಹಾಕೋಣ ಎಂದು ರಾಜಗೋಪಾಲ್ ಹೇಳಿದರು.
ಸತೀಶ್ ಮಹಂತ ಮಾತನಾಡಿ ಬಡಾವಣೆಯ ನಿವಾಸಿಗಳು ಆಗಾಗ್ಗೆ ಸಭೆ ಸೇರಿ ಚರ್ಚೆ ಮಾಡೋಣ ಎಂಬ ಸಲಹೆ ಕೊಟ್ಟರು.
ನೇತಾಜಿ ನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಉಮೇಶ್ ಮಾತನಾಡಿ ಇಂದಿನ ಸಭೆಯ ತೀರ್ಮಾನಗಳನ್ನು ಕಾರ್ಯರೂಪಕ್ಕೆ ತರಲು ಸಂಕಲ್ಪ ಮಾಡಿದರು.
ಸತ್ಯಾಗ್ರಹದಲ್ಲಿ ಪರಿಸರ ಬಳಗದ ಸದಸ್ಯರಾದ ಜವರಪ್ಪ, ಸುಶೀಲಾ, ಶ್ರೀಲಕ್ಷ್ಮಿ, ಸುಮಲತಾ, ಗಂಟಯ್ಯ ಡಾ. ಕೃಷ್ಣಮೂರ್ತಿ ಹಾಗೂ ನೇತಾಜಿ ನಗರ ನಿವಾಸಿಗಳಾದ ಕೃಷ್ಣ, ಗುರುಸ್ವಾಮಿ, ಲೋಲ ಕುಮಾರ್, ಶಿವಪ್ಪ,ಚಂದ್ರಶೇಖರ್, ಜನಾರ್ದನ, ಬಸಪ್ಪ ಸೇರಿದಂತೆ ಮೂವತ್ತೈದಕ್ಕೂ ಹೆಚ್ಚು ಜನ ಭಾಗವಹಿಸಿದ್ದರು.

andolanait

Recent Posts

ತಮಿಳುನಾಡು| ಸಿಎಂ ಎಂ.ಕೆ.ಸ್ಟಾಲಿನ್‌ಗೆ ಸೋಲು

ಚೆನ್ನೈ: ತಮಿಳುನಾಡಿನ ಹಾಲಿ ಸಿಎಂ ಎಂ.ಕೆ.ಸ್ಟಾಲಿನ್‌ ಸ್ವ ಕ್ಷೇತ್ರದಲ್ಲೇ ಸೋಲು ಅನುಭವಿಸಿದ್ದಾರೆ. ಈ ಮೂಲಕ ಸತತ 2ನೇ ಬಾರಿಗೆ ಸರ್ಕಾರ…

2 hours ago

ದಾವಣಗೆರೆ ದಕ್ಷಿಣ ಉಪಚುನಾವಣೆ: ಕೈ ಅಭ್ಯರ್ಥಿ ಸಮರ್ಥ್‌ ಶಾಮನೂರು ಜಯಭೇರಿ

ದಾವಣಗೆರೆ: ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಎರಡೂ ಕ್ಷೇತ್ರದಲ್ಲೂ ಕಾಂಗ್ರೆಸ್ ಜಯಭೇರಿ ಬಾರಿಸಿದೆ.…

3 hours ago

ಪ್ರಧಾನಿ ಮೋದಿ ದೂರದೃಷ್ಟಿಯ ನಾಯಕತ್ವಕ್ಕೆ ಎನ್‌ಡಿಎ ಭರ್ಜರಿ ಗೆಲುವು: ಎಚ್.ಡಿ.ಕುಮಾರಸ್ವಾಮಿ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವ ಮತ್ತು ವಿಕಸಿತ ಭಾರತದ ಮೇಲೆ ಜನರು ಹೊಂದಿರುವ ನಂಬಿಕೆಯಿಂದಾಗಿ ಎನ್‌ಡಿಎ…

4 hours ago

ತಮಿಳುನಾಡಿನಲ್ಲಿ ಟಿವಿಕೆಗೆ ಮುನ್ನಡೆ: ವಿಜಯ್‌ಗೆ ಸಿಎಂ ಸಿದ್ದರಾಮಯ್ಯ ಅಭಿನಂದನೆ

ಬೆಂಗಳೂರು: ತಮಿಳುನಾಡಿನ ಮತ ಎಣಿಕೆಯಲ್ಲಿ ಟಿವಿಕೆ ಭಾರೀ ಮುನ್ನಡೆ ಸಾಧಿಸಿದೆ. ಈ ಹಿನ್ನೆಲೆ ಪಕ್ಷದ ಮುಖ್ಯಸ್ಥ ನಟ ವಿಜಯ್‌ಗೆ ಸಿಎಂ…

5 hours ago

ಬಾಗಲಕೋಟೆ ಉಪಚುನಾವಣೆ : ‘ಉಮೇಶ್‌ ಮೇಟಿಗೆ ಜಯ ; ಇಲ್ಲಿವೆ ಗೆಲುವಿನ ಅಂಶಗಳು….

ಬಾಗಲಕೋಟೆ : ಹಿರಿಯ ನಾಯಕ ಎಚ್.ವೈ. ಮೇಟಿ ನಿಧನದಿಂದ ತೆರವಾಗಿದ್ದ ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಉಮೇಶ್…

6 hours ago

ಕೇರಳದಲ್ಲಿ ಯುಡಿಎಫ್‌ ಅಭೂತಪೂರ್ವ ಸಾಧನೆ

ತಿರುವನಂತಪುರಂ : ಕೇರಳ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮುನ್ನಡೆ ಸಾಧಿಸುತ್ತಿದ್ದು, ದಶಕದ ನಂತರ ಅಧಿಕಾರಕ್ಕೆ ಮರಳುವ ಸಂಭವನೀಯ…

6 hours ago