ಮೈಸೂರು : ನಗರದ ಚಲುವಾಂಬ ಉದ್ಯಾನವನದಲ್ಲಿಂದು ಮೈಸೂರು ಗ್ರಾಹಕರ ಪರಿಷತ್ತಿನ ಕರೆಗೆ ಓಗೊಟ್ಟ ಪಟ್ಟಣದ ಹಲವು ನಾಗರೀಕರು ಸರ್ಕಾರದ ಪಾರದರ್ಶಕ ಆಡಳಿತಕ್ಕಾಗಿ ಆಗ್ರಹಿಸಿ ಮೌನ ಸತ್ಯಾಗ್ರಹವನ್ನು ನಡೆಸಿದರು.
ಬೆಳಿಗ್ಗೆ 9ರ ವೇಳೆಗೆ ಒಂದೆಡೆ ಸೇರಿದ ನಾಗರಿಕರು ಸರಕಾರದ ಆಡಳಿತದಿಂದ ಹೇಗೆ ಭ್ರಮ ನಿರಸನವಾಗಿದೆ..ಲಂಚ.ಬ್ರಷ್ಡಾಚಾರ, ವಿಳಂಬ ನೀತಿಗಳು ನಾಗರಿಕರ ದೈನಂದಿನ ಬದುಕನ್ನು ಹೈರಾಣ ಮಾಡಿದೆ ಎಂದು ಎಳೆ ಎಳೆಯಾಗಿ ಬಿಚ್ಚಿಟ್ಟರು.
ನಾಗರಿಕರನ್ನು ಮೈ.ಗ್ರಾ.ಪ ಸಂಚಾಲಕ ಭಾಮಿ.ವಿ.ಶಣೈ ಅವರು ಎಲ್ಲರನ್ನೂ ಸ್ವಾಗತಿಸಿದರು.
ಮೈ.ಗ್ರಾ.ಪದ ಆಜೀವ ಸದಸ್ಯ ಕೊಸು.ನರಸಿಂಹ ಮೂರ್ತಿ, ಸಿ.ಎಫ್.ಟಿ.ಆರ್.ಐ ನ ನಿವೃತ್ತ ನಿರ್ದೇಶಕ ವಿ.ಪ್ರಕಾಶ್.ಮೇ.ಜ.ಒಂಬತ್ಕಡರೆ, ವೆಂಕಟೇಶ ರಾವ್ ಉಷಾ ಡಾ.ಜಯರಾಮ್ ಮುಂತಾವರು ಸತ್ಯಾಗ್ರಹದ ಕುರಿತು ಮಾತನಾಡಿ ಸರಕಾರಿ ಕಚೇರಿಗಳು ವಿಶೇಷವಾಗಿ ಪ್ರಾದೇಶಿಕ ಸಾರಿಗೆ ಕಚೇರಿ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಸೇರಿದಂತೆ ಹಲವು ಇಲಾಖೆಯ ಬಗ್ಗೆ ತಮ್ಮ ಅನುಭವವನ್ನು ತೆರೆದಿಟ್ಟರು. ಸತ್ಯಾಗ್ರಹದಲ್ಲಿ ಮೂವತ್ತು ಹೆಚ್ಚು ಮಂದಿ ಪಾಲ್ಗೊಂಡಿದ್ದರು.
ಬೆಂಗಳೂರು: ಸರ್ಕಾರ ಕೆಲವು ತಿಂಗಳ ಹಿಂದೆ ಸಂರಕ್ಷಿತ ಹುಲ್ಲುಗಾವಲು ಎಂದು ಘೋಷಿಸಿರುವ ಹೆಸರುಘಟ್ಟ ಕೆರೆ ಸೇರಿದಂತೆ 5678 ಎಕರೆ ಹುಲ್ಲುಗಾವಲು…
ಕಾಸರಗೋಡು: ಹಳಿ ದಾಟುವಾಗ ಯುವಕ ಸಾವನ್ನಪ್ಪಿರುವ ಘಟನೆ ಕಾಸರಗೋಡು ನಿಲ್ದಾಣದಲ್ಲಿ ನಡೆದಿದೆ. ಕೊಡಗು ಜಿಲ್ಲೆ ಗೋಣಿಮಾಗೂರಿನ ಸೋಮವಾರಪುರದ ಚೆನ್ನಯ್ಯ ಅವರ…
ಬೆಂಗಳೂರು: ಕರ್ನಾಟಕದಲ್ಲಿ ಬುಲ್ಡೋಜರ್ ಬಳಸಿ ಮುಸ್ಲಿಮರ ಮನೆಗಳನ್ನು ಧ್ವಂಸ ಮಾಡಲಾಗಿದೆ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಕಾಂಗ್ರೆಸ್ ಸರ್ಕಾರದ…
ಮೈಸೂರು: ಅರಮನೆ ಮುಂಭಾಗ ಸಂಭವಿಸಿದ ಹೀಲಿಯಂ ಸ್ಫೋಟ ದುರಂತದಲ್ಲಿ ಮೃತಪಟ್ಟ ಬೆಂಗಳೂರಿನ ಲಕ್ಷ್ಮಿ ಅವರ ಮೃತದೇಹವನ್ನು ಶವಗಾರದಲ್ಲಿ ಇರಿಸಲಾಗಿದೆ. ಸುದ್ದಿ…
ಮಂಡ್ಯ: ನಿಂತಿದ್ದ ಲಾರಿಗೆ ಕಾರು ಡಿಕ್ಕಿಯಾದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಂಗಳೂರು-ಮೈಸೂರು ಹೆದ್ದಾರಿಯ ಸರ್ವಿಸ್ ರಸ್ತೆಯಲ್ಲಿ…
ಬೆಂಗಳೂರು: ಕನ್ನಡ ಕವಯತ್ರಿ, ಬರಹಗಾರ್ತಿ ಸರಿತಾ ಜ್ಞಾನಾನಂದ ಅವರು ಆರ್.ಆರ್.ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಲೇಖಕಿ, ಅನುವಾದಕಿಯಾಗಿದ್ದ ಸರಿತಾ ಅವರು…