ಕಾಡಾನೆಯೊಂದರ ಕಾರ್ಯಾಚರಣೆ ವೇಳೆ ಸಾವನ್ನಪ್ಪಿದ ದಸರಾ ಆನೆ ಅರ್ಜುನನ ಕುರಿತು ಇದೀಗ ಸಾಕಷ್ಟು ಸುದ್ದಿಗಳು ಹರಿದಾಡುತ್ತಿವೆ. ಅರ್ಜುನನ ಮಾವುತ ವಿನು ಕಾಡಾನೆಗೆ ಗುಂಡು ಹಾರಿಸುವ ಬದಲು ಅರ್ಜುನನಿಗೆ ಗುಂಡು ಹಾರಿಸಿದರು ಎಂದು ಆರೋಪಿಸಿ ಅಂತ್ಯಸಂಸ್ಕಾರದ ವೇಳೆ ಕಣ್ಣೀರು ಹಾಕಿದ್ದು ಅರ್ಜುನನ ಸಾವಿನ ಕುರಿತು ಸಾಕಷ್ಟು ಅನುಮಾನಗಳು ಉಂಟಾಗುವ ಹಾಗೆ ಮಾಡಿದೆ.
ಇನ್ನು ಸಾಮಾಜಿಕ ಜಾಲತಾಣದಲ್ಲಿ ಅರ್ಜುನನ ಅಂತ್ಯಕ್ರಿಯೆಯ ಬಗ್ಗೆ ಪೋಸ್ಟ್ ಒಂದು ದೊಡ್ಡ ಮಟ್ಟದಲ್ಲಿ ವೈರಲ್ ಆಗಿದ್ದು, ಇದರಲ್ಲಿ ಮುಖ್ಯಮಂತ್ರಿಗಳಿಂದ ಹಿಡಿದು ಅರಣ್ಯ ಇಲಾಖೆಯ ಅಧಿಕಾರಿಗಳವರೆಗೆ ಹಲವು ಪ್ರಶ್ನೆಗಳನ್ನು ಹಾಕಲಾಗಿದೆ.
ವೈರಲ್ ಆಗಿರುವ ಪೋಸ್ಟ್ನಲ್ಲಿ ಏನಿದೆ?
ಈ ವೈರಲ್ ಪೋಸ್ಟ್ನಲ್ಲಿ “ಅರ್ಜುನ ಸತ್ತಾಗ ಯಾರಿಗೂ ಬೇಡ ದಸರಾ ಸಮಯದಲ್ಲಿ ಮಾತ್ರ ಬೇಕಾ ನಿಮಗೆ?” ಎಂಬ ಹೆಡ್ಲೈನ್ ಒಂದನ್ನು ಬರೆಯಲಾಗಿದ್ದು ಪ್ರಶ್ನೆಗಳು ಈ ಕೆಳಕಂಡಂತಿವೆ..
1. ಮೈಸೂರು ರಾಜರು ಯಾಕೆ ಬರಲಿಲ್ಲ?
2. ಮುಖ್ಯಮಂತ್ರಿಗಳು ಯಾಕೆ ಬರಲಿಲ್ಲ?
3. ಉಪಮುಖ್ಯಮಂತ್ರಿ ಯಾಕೆ ಬರಲಿಲ್ಲ?
4. ರಾಜಕಾರಣಿಗಳು ಯಾಕೆ ಬರಲಿಲ್ಲ?
5. ಮೈಸೂರಿನಲ್ಲಿ ಅಂತ್ಯಕ್ರಿಯೆ ಯಾಕೆ ಮಾಡಲಿಲ್ಲ?
6. ತರಾತುರಿಯಲ್ಲಿ ಯಾಕೆ ಅಂತ್ಯಕ್ರಿಯೆ ಮಾಡಿದರು?
7. ಅರ್ಜುನನ ಸಾವಿನ ಸಂದರ್ಭದ ವಿಡಿಯೊಗಳನ್ನು ಯಾಕೆ ಹಂಚಿಕೊಂಡಿಲ್ಲ?
8. ದಂತ ಕತ್ತರಿಸುವ ಅಗತ್ಯವೇನಿತ್ತು?
9. ಆನೆಗಳಿಗೆ 60 ವರ್ಷ ವಯಸ್ಸಾದರೆ ವಿಶ್ರಾಂತಿ ನೀಡಬೇಕು, ಅರ್ಜುನನಿಗೆ 64 ವರ್ಷ ವಯಸ್ಸಾದರೂ ಈ ಬೇಟೆ ಬೇಕಿತ್ತಾ?
ಈ ಪೋಸ್ಟ್ ಅನ್ನು ಹಲವಾರು ಮಂದಿ ಹಂಚಿಕೊಂಡಿದ್ದು ಸಂಬಂಧಪಟ್ಟವರು ಇದಕ್ಕೆ ಉತ್ತರ ನೀಡಲಿ ಎಂದು ಆಗ್ರಹಿಸಿದ್ದಾರೆ.
ಮಹಾತ್ಮ ಗಾಂಧೀಜಿ ಅವರು ಹುತಾತ್ಮರಾದ ನೆನಪಿನಾರ್ಥವಾಗಿ ಆಚರಿಸುವ ಸರ್ವೋದಯ ದಿನದಂತೆ ರಾಜ್ಯ ಸರ್ಕಾರ ಖಾದಿ ಗ್ರಾಮೋದ್ಯೋಗ ಕೇಂದ್ರಗಳಿಗೆ ಚೈತನ್ಯ ತುಂಬುವ…
ಮಂಡ್ಯದಲ್ಲಿ ಮೂರು ಬಾರಿ ಶಾಸಕರಾಗಿ ಗೆದ್ದು ದಾಖಲೆ ಡಾ.ಎಸ್.ಶಿವರಾಮು ಇತಿಹಾಸದಲ್ಲಿ ವ್ಯಕ್ತಿಚರಿತ್ರೆಗೆ ಮಹತ್ವವಾದ ಸ್ಥಾನವಿದೆ.ಇದನ್ನು ಮನಗಂಡೇ ಬ್ರಿಟಿಷ್ ಚರಿತ್ರೆಕಾರರಲ್ಲಿ ಪ್ರಮುಖರಾಗಿದ್ದ…
ಎಡಗೈಯಲ್ಲಿದ್ದ ಸಿಗರೇಟ್ ಅನ್ನು ಬಾಯಲ್ಲಿಟ್ಟು ಹೊಗೆ ಎಳೆದುಕೊಂಡವನು ಅದನ್ನು ಹೊರಬಿಟ್ಟಾಗ ಸುರುಳಿ ಸುರುಳಿಯಾಗಿ ಹೊಗೆ ಮೇಲೇರತೊಡಗಿತು. ಹೀಗೆ ಬಾಯೊಳಗೆ ಎಳೆದುಕೊಂಡ…
ತಿ.ನರಸೀಪುರ: ಪಟ್ಟಣದ ಕಪಿಲಾ ನದಿ ದಂಡೆಯ ಶ್ರೀ ಬಳ್ಳೇಶ್ವರ ಸ್ವಾಮಿ ದೇವಸ್ಥಾನದ ಬಳಿಯ ಪಾರ್ಕ್ ಹೋಟೆಲ್ ಉದ್ಯಮಿಯೊಬ್ಬರ ಪರಿಶ್ರಮದಿಂದ ಕಾಯಕಲ್ಪ…
ವರಹಳ್ಳಿ ಆನಂದ, ಸಂಶೋಧನಾ ವಿದ್ಯಾರ್ಥಿ, ಮೈಸೂರು ವಿಶ್ವವಿದ್ಯಾನಿಲಯ ಮೈಸೂರು: ನಗರದ ದೇವರಾಜ ಮೊಹಲ್ಲಾದಲ್ಲಿರುವ ಶತಮಾನ ತುಂಬಿರುವ ದೇವರಾಜ ಸರ್ಕಾರಿ ಹಿರಿಯ…
ರಾಜಾರಾಂ ತಲ್ಲೂರು ಆರ್ಥಿಕ ಶಿಸ್ತಿನ ಚೌಕಟ್ಟಿನ ಒಂದೊಂದೇ ಅಂಶಗಳನ್ನು ಮುಂದಿಟ್ಟುಕೊಂಡು - ‘ನೋಡಿ, ನಾವು ಆರ್ಥಿಕವಾಗಿ ಸ್ಥಿರವಾಗಿದ್ದು, ವಿಕಸಿತ ಭಾರತದತ್ತ…