ಮೈಸೂರು: ಯುವ ದಸರಾದ ನಾಲ್ಕನೇ ದಿನವಾದ ಬುಧವಾರ ರಾತ್ರಿ ವೇದಿಕೆಯಲ್ಲಿ ಹಾಡು-ಅದ್ದೂರಿ ಬ್ಯಾಂಡ್ ತಂಡಗಳು ಮೇಳೈಸಿದವು. ಖ್ಯಾತ ಸಂಗೀತ ಸಂಯೋಜಕ ಎ.ಆರ್ ರೆಹಮಾನ್, ಖ್ಯಾತ ಗಾಯಕ ವಿಜಯ್ ಪ್ರಕಾಶ್ ಹಾಡುಗಳು ಯುವಜನರ ಸಂಭ್ರಮಕ್ಕೆ ಕಿಚ್ಚು ಹಚ್ಚಿದವು.
ಮೊದಲಿಗೆ ʻಜೈಹೋ ಜೈಹೋʼ ಎನ್ನುತ್ತಾ ವೇದಿಕೆ ಪ್ರವೇಶಿಸಿದ ಸಂಗೀತ ನಿರ್ದೇಶಕ ಮತ್ತು ಸಂಯೋಜಕ ಎ ಆರ್ ರೆಹಮಾನ್ ಕಂಠ ಸಿರಿಯೂ ಜನರ ಮನಗೆದ್ದಿತು. ಖ್ಯಾತ ಡ್ರಮ್ಮರ್ ಶಿವಮಣಿ ತಮ್ಮ ಪ್ರತಿಭೆಯ ಮೂಲಕ ಸಂಗೀತ ಲೋಕವನ್ನೇ ಸೃಷ್ಟಿಸಿದರು.
ʻಮುಕ್ಕಾಲಾ ಮುಕ್ಕಾಬುಲಾ ಲೈಲಾʼ ಹಾಡಿಗೆ ನೆರದಿದ್ದವೂ ದನಿಗೂಡಿಸಿದರು. ಗೀತೆಯ ಜೊತೆಗೆ ಯುವ ಮನಸ್ಸುಗಳು ಹೆಜ್ಜೆಗೆ ತಾಳ ಹಾಕಿದರು.
ಕನ್ನಡದ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರನ್ನು ರೆಹಮಾನ್ ವೇದಿಕೆಗೆ ಕರೆಯುತ್ತಿದ್ದಂತೆ ಪ್ರೇಕ್ಷಕರ ಶಿಳ್ಳೆ, ಚಪ್ಪಾಳೆಗಳು ಸಹ ದನಿಗೂಡಿಸಿದವು.
ʻರಾಮ ನಿನ್ನ ಮನದಲ್ಲಿ, ರಾಮ ನನ್ನ ಮನದಲ್ಲಿʻ ಎನುವ ಮೂಲಕ ತಮ್ಮ ಸುಮಧುರ ಕಂಠದಿಂದ ತಮ್ಮೂರಿನ ಜನರ ಮನಸೆಳೆದ ವಿಜಯ್ ಪ್ರಕಾಶ್ ಬಳಿಕ ಭಾವುಕರಾದರು.
ʻಎನ್ನ ಸೋ ನಾ ಕ್ಯೂ ರಬ್ನೇ ಬನಾಯʼ ʻಮಾಸಕ್ಕಲಿ.. ಮಸಕ್ಕಲಿʼ ಹೀಗೆ ಮೊದಲಾದ ಹಾಡುಗಳು ಸಂಗೀತ ಪ್ರೇಮಿಗಳ ಮನಸೊರೆಗೊಂಡವು.
ಪ್ರಖ್ಯಾತ ಡ್ರಾಂ ಬಿಟ್ಟರ್ ಶಿವಮಣಿ ತಮ್ಮ ಬ್ಯಾಂಡ್ ಮೂಲಕ ಯುವ ದಸರೆಗೆ ಮೆರುಗು ತಂದರು. ಸತತ 20 ನಿಮಿಷಗಳು ಯುವಕರಿಗೆ ಕೊರತೆಯಾಗದಂತೆ ಬ್ಯಾಂಡ್ ಬಾರಿಸುತ್ತಾ ಕೇಳುಗರ ಕಿವಿ ದಿಂ ಏನುವಂತೆ ಮಾಡಿದರು. ಪ್ರತಿಯೊಂದು ಬಿಟ್ಟ್ ಗಳಿಗೂ ಯುವ ಸಮೂಹ ಕುಣಿಯಲಾರಂಭಿಸಿತ್ತು, ಬಿಟ್ಸ್ ಗೆ ತಕ್ಕಂತೆ ಹೆಜ್ಜೆ ಜೊತೆಗೆ ಚಪ್ಪಾಳೆ ಶಿಳ್ಳೆ ಕೇಕೆ ಹಾಕುತ್ತಾ ರಿದಂ ಎಂಜಾಯ್ ಮಾಡಿದರು.
ಸಾಗರೋಪದಿಯಲ್ಲಿ ಹಾರಿದು ಬಂದ ಜನ ಸಾಗರ
ಯುವ ದಸರಾ ಕಾರ್ಯಕ್ರಮ ಆರಂಭವಾಗಿ 3 ದಿನ ಕಳೆದಿದೆ ಆದರೆ ಯುವ ದಸರಾದ ನಾಲ್ಕನೇ ದಿನದ ಕಾರ್ಯಕ್ರಮದಲ್ಲಿ ಕಂಡಂತಹ ಜನಸಾಗರ ಇಂದೆಂದು ನೋಡಿರದ ರೀತಿಯಲ್ಲಿ ಜನಸ್ಥೋಮವು ಹರಿದು ಬಂದಿದ್ದು ಸಾರ್ವಜನಿಕರನ್ನು ನಿಯಂತ್ರಿಸುವಲ್ಲಿ ಪೊಲೀಸ್ ಇಲಾಖೆಗೆ ಕಷ್ಟ ಸಾಧ್ಯವಾಗಿದೆ. ಸಂಜೆ 5 ಗಂಟೆಯಿಂದಲ್ಲೇ ಹೊರವಲಯ ರಸ್ತೆಯ ತುಂಬಾ ಜನ ಸಾಗರ ತುಂಬಿ ತುಳುಕುತ್ತಿತ್ತು ರಸ್ತೆಯಲ್ಲಿ ಸುಮಾರು ಒಂದು ಕಿಲೋಮೀಟರ್ ವರೆಗೂ ಕೂಡ ವಾಹನಗಳು ನಿಧಾನಗತಿಯಲ್ಲಿ ಸಾಗಿದವು.
ನವೀನ್ ಡಿಸೋಜ ಮಡಿಕೇರಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಮಾ.೬ರಂದು ರಾಜ್ಯ ಬಜೆಟ್ ಮಂಡನೆ ಮಾಡಲಿದ್ದಾರೆ. ಸಹಜವಾಗಿಯೇ ಕೊಡಗು ಜಿಲ್ಲೆಯಲ್ಲಿಯೂ ಹತ್ತಾರು ನಿರೀಕ್ಷೆಗಳಿದ್ದು,…
ಮಹೇಂದ್ರ ಹಸಗೂಲಿ ಸೂರ್ಯಕಾಂತಿ, ಬಾಳೆ, ಆಲೂಗಡ್ಡೆ ಅರಿಶಿನ, ಈರುಳ್ಳಿ ಬೆಳೆದು ಸೂರ್ತಿಯಾದ ಎಚ್.ಎಂ.ನಂದೀಶ್ ಗುಂಡ್ಲುಪೇಟೆ: ತಾಲ್ಲೂಕಿನ ಹಂಗಳ ಗ್ರಾಮದ ಎಚ್.…
ಪ್ರಸಾದ್ ಲಕ್ಕೂರು ಚಾ.ನಗರ ಜಿಲ್ಲೆಗೆ ವಿಶೇಷ ಪ್ಯಾಕೇಜ್ ಘೋಷಣೆ, ಎಂಸಿಡಿಸಿಸಿ ಬ್ಯಾಂಕ್ ರಚನೆ ಸೇರಿ ಹಲವು ಆಶಾಭಾವನೆ ಚಾಮರಾಜನಗರ: ರಾಜ್ಯ…
ಜಾಗದ ವಿಚಾರವಾಗಿ ಅಭಿಪ್ರಾಯ ಹಂಚಿಕೊಂಡ ಸಾರ್ವಜನಿಕರು, ರೈತರು, ಮುಖಂಡರು ಕೆ.ಎಸ್.ಚಂದ್ರಶೇಖರ್ ಮೂರ್ತಿ ಮೈಸೂರು: ತಿ.ನರಸೀಪುರ ಪಟ್ಟಣದಲ್ಲಿ ಕೆಎಸ್ಐಸಿಗೆ ಸೇರಿದ ಜಾಗದಲ್ಲಿ…
ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅಮೆರಿಕ-ಇಸ್ರೇಲ್ ಜಂಟಿ ದಾಳಿಯಲ್ಲಿ ಹತರಾಗಿದ್ದಾರೆ. ಶನಿವಾರ ನಡೆದ ದಾಳಿಯಲ್ಲಿ ಎಂಬತ್ತಾರು ವರ್ಷದ…
ಮಾಧ್ಯಮ ತಜ್ಞ ಶೇಷಾದ್ರಿ ಗಂಜೂರು ವಿಶ್ಲೇಷಣೆ ಇತ್ತೀಚೆಗೆ ನ್ಯೂಸ್ ಚಾನಲ್ಗಳನ್ನು ನೋಡುತ್ತಿದ್ದರೆ ಮಿಡ್ಲ್ ಈಸ್ಟ್ ಅಂದರೆ ಮಧ್ಯ ಪ್ರಾಚ್ಯದ ಗಲಾಟೆಗಳೇ ಕಾಣ್ತಿವೆ.…