ಮೈಸೂರು

ಶಬರಿಯಂತೆ ಸಿಹಿಯನ್ನು ಮಾತ್ರ ರಾಮನಿಗೆ ನೈವೇದ್ಯ ಮಾಡಿದರಾಗದೇ!

ಕಾದಿರುವಳು ಶಬರಿ..

ದಟ್ಟ ಕಾನನದ ಕಡು ಘೋರ ಕತ್ತಲಲೂ
ಪುಟ್ಟ ದೀಪವೊಂದನುರಿಸಿ ಕಾದಿರುವಳು ಶಬರಿ,
ಹಣ್ಣಾಗಿಹ ಮೈಮನಗಳ ಸಿಹಿ ಹಣ್ಣು ಹೆಕ್ಕಲೆಂದೇ ದಣಿಸಿ,
ಮೈಮನಗಳ ಕಣ್ಣಾಗಿಸಿ ಕಾದಿರುವಳು ಶಬರಿ.

ಶಬರಿ ಮಾತೆಯ ತಪ ಬರಿಯ ಪದಗಳಿಂದ ವರ್ಣಿಸಲು ಸಾಧ್ಯವಿಲ್ಲ. ರಾಮಾಯಣದ ಕಾಲಮಾನಕ್ಕೂ ವರ್ತಮಾನಕ್ಕೂ ಯುಗಯುಗಾಂತರದ ಅಂತರ. ಅದು ತ್ರೇತಾಯುಗ, ಇದು ಕಲಿಯುಗ. ಆದರೂ ಶಬರಿ ಮಾತೆಯ ತಪೋಬಲ,‌ ಉಪಾಸನೆ ಬೆಟ್ಟದಷ್ಷು, ಅದಕ್ಕೇ ಇರಬೇಕು ಸ್ವಾಮಿ ಅಯ್ಯಪ್ಪ ನೆಲೆಸಿರುವ ಕ್ಷೇತ್ರದ ಹೆಸರೇ ಶಬರಿ ಬೆಟ್ಟ ಅಥವಾ ಶಬರಿಮಲೆ!

ಭವ್ಯ ಭಾರತ ತನ್ನ ಮರ್ಯಾದಾಪುರುಷೋತ್ತಮನ್ನು ಅಯೋಧ್ಯೆಯಲ್ಲಿ ಪ್ರತಿಷ್ಟಾಪಿಸಲು ಸಿದ್ಧವಾಗುತ್ತಿರುವಂತೆಯೇ ರಾಮಾಯಣ ಮತ್ತು ಮಹಾಭಾರತಗಳು ಎಂದಿಗಿಂತ ಇಂದು ಪ್ರಸ್ತುತವೆನಿಸುತ್ತದೆ. ಶಬರಿ ಕಾಯುವಿಕೆಯಲ್ಲಿ ಕಲಿಯುವಿಕೆ ಬಹಳಷ್ಟಿದೆ. ನಿತ್ಯ ಶ್ರೀರಾಮನ ಆಗಮನದ ಆಕಾಂಕ್ಷೆಯಲಿ,‌ ಅವನ ಸತ್ಕರಿಸಿ ಉಪಚರಿಸಲಿಕ್ಕಾಗಿ ಪ್ರತಿ ದಿನ ಹಣ್ಣುಗಳನ್ನು ಆರಿಸಿ ಆಯ್ದು ಕಾದಿರುತ್ತಿದ್ದಳು. ಇದು ಶಬರಿ ಮಾತೆಯ ನಿತ್ಯ ಕಾಯಕ.

ಆಯ್ದ ಹಣ್ಣುಗಳಲ್ಲಿ ಕಹಿಯಾಗಿದ್ದವು ಎಷ್ಟೋ? ಒಗಚು ಒಗರು ಎಷ್ಟೋ? ಹುಳಿಯಾಗಿದ್ದವದೆಷ್ಟೋ? ಇದೆಲ್ಲದರ ನಡುವೆ ಆರಿಸಿ ಆರಿಸಿ ಶ್ರೀರಾಮನಿಗಾಗಿ ಅತ್ಯುತ್ತಮವಾದ ಹಣ್ಣುಗಳನ್ನು ಬೇರ್ಪಡಿಸುವ ಸಂಭ್ರಮ. ಒಂದು ಸಿಹಿ ಹಣ್ಣು ಕಚ್ಚುವ ಮೊದಲ ಎರಡು ಹುಳಿಯಿದ್ದಿರಬಹುದು, ಹತ್ತು ಕಾರ್ಕೋಟಕ ಕಹಿ, ಒಂದೆರಡು ಒಗಚು. ಇವಿಷ್ಟರಲ್ಲೇ ಶಬರಿಯ ನಾಲಿಗೆ ಜಡ್ಡು ಹಿಡಿದಿರಬಹುದು. ಆದರೂ ಅನುದಿನದ ಪ್ರಯತ್ನ. ಕಹಿ, ಹುಳಿ, ಒಗಚೆಲ್ಲಾ ಹೊರಗೆ, ಸಿಹಿ ಸಿಹಿಯಾದ ಹಣ್ಣುಗಳು ಮಾತ್ರ ಶ್ರೀರಾಮನಿಗೆ.

ನಮ್ಮ ನಿಮ್ಮ ಬದುಕಿನ ಅನುಭವವೂ ಇದೇ ತಾನೇ, ಎಂದಾದರೊಂದು ದಿನ ಶ್ರೀರಾಮ ದರ್ಶನ ಭಾಗ್ಯ ದೊರೆಕೀತೆಂಬ ಶಬರಿ ಆಕಾಂಕ್ಷೆಯವರೇ ತಾನೇ! ನಮ್ಮ ಜೀವನದ ಅನುಭವಗಳನ್ನು ನೋಡಿದಾಗ, ಅವೂ ಕೂಡ ಈ ಶಬರಿ ಆರಿಸಿಟ್ಟ ಹಣ್ಣುಗಳಂತೆಯೇ. ಕೆಲವು ಕಹಿ, ಹಲವು ಹುಳಿ, ಅಲ್ಲೊಂದು ಇಲ್ಲೊಂದು ಸಿಹಿ. ಆದರೆ ನಾವು, ಸಿಹಿಯನ್ನು ಮರೆತು ಬರೀ ಕಹಿ ಹುಳಿ ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾ ಬದುಕಿಗೇ ಹುಳಿ ಹಿಂಡಿಕೊಳ್ಳುತ್ತೀವಿ. ಶಬರಿ ಹಾಗೇ ನಾವೂ ಕಹಿ ಹುಳಿ ಹೊರಗೆಸೆದು ಸಿಹಿಯಾದದ್ದನ್ನೆಲ್ಲಾ ಶ್ರೀರಾಮನಿಗೆ ನೈವೇದ್ಯ ಮಾಡಿದರಾಗದೇ?

ಹೃದಯ ಹೂದೋಟವಾಗಿರಲಿ,
ದುರ್ವಾಸನೆಯ ಗೊಬ್ಬರದಲರಳಿ
ಸುವಾಸನೆಯ ಸುತ್ತ ಪಸರಿಸುವಂತೆ
ಹೃದಯ ಹೂದೋಟವಾಗಿರಲಿ.

 

 – ಅನಿರುದ್ಧಪದ್ಮನಾಭ, ಮೈಸೂರು

andolanait

Recent Posts

ಓದುಗರ ಪತ್ರ: ಪುಷ್ಪ ವೃಷ್ಟಿ..!

ಪುಷ್ಪ ವೃಷ್ಟಿ..! ಅತಿವೃಷ್ಟಿ, ಅನಾವೃಷ್ಟಿಯ ವರದಿ ಬರೆಯುತಿಹರಂತೆ ಸಚಿವರು... ‘ಒಂಬತ್ತು ಜಿಗಳಲ್ಲಿ ಮೋಡ ಕವಿದ ವಾತಾವರಣ ಕಾರಣ, ಅಲ್ಲಿಗಿಲ್ಲ ಮಂತ್ರಿ…

5 hours ago

ಓದುಗರ ಪತ್ರ: ರೈತ ಮಕ್ಕಳ ವಿದ್ಯಾಭ್ಯಾಸ ಶುಲ್ಕದಲ್ಲಿ

ರಿಯಾಯಿತಿಗೆ ಸರ್ಕಾರ ಕ್ರಮ ಕೈಗೊಳ್ಳಲಿ ರಾಜ್ಯದ ಹಲವು ಭಾಗಗಳಲ್ಲಿ ಕಳೆದ ವರ್ಷಕ್ಕಿಂತ ಈ ಬಾರಿ ನಿರೀಕ್ಷಿಸಿದಷ್ಟು ಮಳೆಯಿಲ್ಲದ ಕಾರಣ ಕೃಷಿ ಕ್ಷೇತ್ರ…

5 hours ago

ಓದುಗರ ಪತ್ರ: ಧಾರ್ಮಿಕ ಮುಖಂಡರು ರೈತರ ಬೆನ್ನಿಗೆ ನಿಲ್ಲಬೇಕು

ರಾಜ್ಯದಲ್ಲಿ ನಗರೀಕರಣದ ವೇಗದಿಂದಾಗಿ ಕೃಷಿ ಭೂಮಿಯ ವಿಸ್ತೀರ್ಣ ಸುಮಾರು ಶೇ. ೧೩ರಷ್ಟು ಕುಸಿದಿದೆ ಎಂದು ವರದಿಗಳು ಹೇಳಿವೆ. ಮೂಲಸೌಕರ್ಯಗಳ ಹೆಸರಿನಲ್ಲಿ…

5 hours ago

ಧ್ರುವೀಕರಣದ ನೆಲೆಗಟ್ಟಿನ ಮೇಲೆ ರಾಜ್ಯ ರಾಜಕಾರಣ

ಆರ್.‌ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ  ಕರ್ನಾಟಕದ ರಾಜಕಾರಣ ಧ್ರುವೀಕರಣದ ನೆಲೆಗಟ್ಟಿಗೆ ಬಂದು ತಲುಪಿದೆ. ಅಂದ ಹಾಗೆ ಧ್ರುವೀಕರಣಕ್ಕೆ ಅಸಮಾ ಧಾನ,ಅತೃಪ್ತಿ,ಭಿನ್ನಾಭಿಪ್ರಾಯಗಳೇ…

5 hours ago

ಪಕ್ಕದಲ್ಲೇ ನದಿಯಿದ್ದರೂ ಚಿಕ್ಕಮಂದಗೆರೆ ಗ್ರಾಮಕ್ಕಿಲ್ಲ ನೀರು!

ಮಹೇಶ್ ಕರೋಟಿ ಹೇಮಾವತಿ ನದಿ ದಡದಲ್ಲೇ ನೀರಿಗಾಗಿ ಹಾಹಾಕಾರ ಕಿಕ್ಕೇರಿ: ಮಂದಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಮಂದಗೆರೆ ಗ್ರಾಮವು ಹೇಮಾವತಿ…

5 hours ago

ಕೊಡಗಿನಲ್ಲಿ1,20,874 ಮಕ್ಕಳಿಗೆ ಮಾತ್ರೆ ವಿತರಣೆ ಗುರಿ

ನವೀನ್ ಡಿಸೋಜ ಇಂದು ರಾಷ್ಟ್ರೀಯ ಜಂತುಹುಳು ನಿವಾರಣಾ ದಿನ ಜಂತುಹುಳು ಬಾಧೆ ತಡೆಗೆ ಆರೋಗ್ಯ ಇಲಾಖೆಯ ಮಹತ್ವದ ಹೆಜ್ಜೆ ಮಡಿಕೇರಿ:…

5 hours ago