ಮೈಸೂರು

ನೀರಿನ ಕರ ಬಾಕಿ ಪಾವತಿಗೆ ಮೈಸೂರಿಗರ ನಿರಾಸಕ್ತಿ

ಬಡ್ಡಿ ಮನ್ನಾ ಮಾಡಿದರೂ ಅಸಲು ಪಾವತಿಸಲು ಹಿಂದೇಟು ; 4 ತಿಂಗಳಲ್ಲಿ 2.50 ಕೋಟಿ ರೂ. ಬಾಕಿ ಹಣ ಪಾವತಿ

ಎಚ್.ಎಸ್.ದಿನೇಶ್ ಕುಮಾರ್.

ಮೈಸೂರು: ಆರ್ಥಿಕವಾಗಿ ಹಿಂದುಳಿದವರ ಹಿತಾಸಕ್ತಿ ಕಾಯುವ ಉದ್ದೇಶದಿಂದ ನಗರಪಾಲಿಕೆ ಆಯುಕ್ತರು ನೀರಿನ ಕರ ಬಾಕಿಯ ಬಡ್ಡಿ ಮನ್ನಾ ಮಾಡುವುದಾಗಿ ಹೇಳಿದರೂ ಜನರು ಅಸಲು ಪಾವತಿಸಲು ನಿರಾಸಕ್ತಿ ತೋರುತ್ತಿದ್ದಾರೆ. ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ 1731 ಮಂದಿ ಮಾತ್ರ ಬಡ್ಡಿ ಮನ್ನಾಯೋಜನೆಯಲ್ಲಿ ಅಸಲು ಪಾವತಿಸಿದ್ದಾರೆ.

ಜನರ ಒಳಿತಿಗಾಗಿ ರೂಪಿಸುವ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಬೇಕಾದದು ನಾಗರಿಕರ ಕರ್ತವ್ಯ. ಆದರೆ, ಬಡವರು ನೀರಿನ ಕರ ಬಾಕಿಯ ಜೊತೆಗೆ ಬಡ್ಡಿಯನ್ನೂ ಕಟ್ಟಬೇಕಾದಲ್ಲಿ ಸಂಕಷ್ಟಕ್ಕೀಡಾಗುತ್ತಾರೆ ಎಂಬುದನ್ನು ಮನಗಂಡು ಬಡ್ಡಿ ಮನ್ನಾ ಯೋಜನೆಯನ್ನು ಜಾರಿಗೊಳಿಸಿದರೂ ಜನರು ನೀರಿನ ಕರ ಬಾಕಿಯ ಅಸಲು ಪಾವತಿಸಲು ಮನಸ್ಸು ಮಾಡುತ್ತಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ.

 

ನಗರದ ವಿವಿಧ ಬಡಾವಣೆಗಳು, ಆಶ್ರಯ  ಬಡಾವಣೆಗಳು, ನಗರಪಾಲಿಕೆ ವ್ಯಾಪ್ತಿಗೆ ಒಳಪಡುವ ಸಾಕಷ್ಟು ಬಡಾವಣೆಗಳಲ್ಲಿನ ಜನರು ಸಾಕಷ್ಟು ವರ್ಷಗಳಿಂದ ನೀರಿನ ಬಾಕಿ ಕಟ್ಟಲು ವಿಫಲರಾಗಿದ್ದಾರೆ. ಅವರಲ್ಲಿ ಬಡವರೇ ಹೆಚ್ಚು. ಇನ್ನು ಮಧ್ಯಮ ವರ್ಗ ಹಾಗೂ ಕೆಲ ಹಣವಂತರೂ ನೀರಿನ ಕರ ಪಾವತಿಸಿಲ್ಲ. ಹೀಗಾಗಿ ೨೨೦ ಕೋಟಿ ರೂ.ನಷ್ಟು ನೀರಿನ ಕರ ಬಾಕಿ ಉಳಿದಿದೆ. ಅದರಲ್ಲಿ ೭೦ ಕೋಟಿ ರೂ. ಬಡ್ಡಿಯೂ ಸೇರಿದೆ. ಹೀಗಾಗಿ ಕಳೆದ ಕೌನ್ಸಿಲ್ ಸಭೆಯಲ್ಲಿ ಈ ಕುರಿತು ಸಾಕಷ್ಟು ಚರ್ಚೆಗಳು ನಡೆದವು. ನೀರಿನ ಕರ ಬಾಕಿ ಮೇಲಿನ ಬಡ್ಡಿ ಮನ್ನಾ ಮಾಡಬೇಕು ಎಂದು ನಗರಪಾಲಿಕೆ ಸದಸ್ಯರು ಒಕ್ಕೊರಲಿನಿಂದ ಮನವಿ ಮಾಡಿದ್ದರು.  ಹೀಗಾಗಿ ಆಯುಕ್ತ ಲಕ್ಷ್ಮೀ ಕಾಂತರೆಡ್ಡಿ ಅವರು ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆದಿದ್ದರು. ಈ ಮನವಿಗೆ ಸ್ಪಂದಿಸಿದ ಸರ್ಕಾರ, ನೀರಿನ ಕರ ಬಾಕಿ ಹಣ ಪೂರ್ಣ ಪಾವತಿಸುವವರಿಗೆ ಬಾಕಿ ಮೇಲಿನ ಬಡ್ಡಿ ಮನ್ನಾ ಮಾಡಲು ಆದೇಶ ಹೊರಡಿಸಿತು. ನಗರಪಾಲಿಕೆ ವತಿಯಿಂದ ಈ ಸಂಬಂಧ ಪತ್ರಿಕಾ ಪ್ರಕಟಣೆ ಕೂಡ ಹೊರಡಿಸಲಾಗಿತ್ತು. ಅದರಂತೆ ಮೊದಲಿಗೆ ಕೆಲವರು ಹಣ ಪಾವತಿಸಲು ಮುಂದಾದರು. ನಂತರ ಹಣ ಪಾವತಿಸುವವರ ಸಂಖ್ಯೆ ತೀರಾ ಕಡಿಮೆಯಾಗಿದೆ. ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ ಸುಮಾರು ೨.೫೦ ಕೋಟಿ ರೂ. ಬಾಕಿ ಹಣವನ್ನು ನಗರಪಾಲಿಕೆಗೆ ಪಾವತಿಸಿದ್ದಾರೆ.

 

ಅಸಲು ಮನ್ನಾ ಮಾಡಿ: ಇದು ಜನರ ಹೊಸ ಬೇಡಿಕೆ. ಕಳೆದ ಹತ್ತಾರು ವರ್ಷಗಳಿಂದ ನಾನಾ ಕಾರಣಗಳಿಗಾಗಿ ನೀರಿನ ಕರ ಪಾವತಿಸಲಾಗಿಲ್ಲ. ಇದೀಗ ದಿಢೀರ್ ಎಂದು ಸಂಪೂರ್ಣ ಬಾಕಿ ಪಾವತಿಸಿಯೆಂದರೆ ಹಣವನ್ನು ಎಲ್ಲಿಂದ ತರುವುದು ಎಂದು ಪ್ರಶ್ನಿಸುತ್ತಿದ್ದಾರೆ.

ಕೋವಿಡ್‌ನಿಂದಾಗಿ ನಾವು ಎಲ್ಲವನ್ನೂ ಕಳೆದುಕೊಂಡಿದ್ದೇವೆ. ಇದೀಗ ಒಟ್ಟಿಗೆ ಸಾವಿರಾರು ರೂ. ಬಾಕಿ ಪಾವತಿಸಿ ಎಂದರೆ ನಮ್ಮಿಂದ ಸಾಧ್ಯವಿಲ್ಲ. ಹೀಗಾಗಿ ನೀರಿನ ಬಾಕಿಯ ಶೇ.೫೦ರಷ್ಟು ಹಣವನ್ನು ಮನ್ನಾ ಮಾಡಿ ಎಂದು ನಗರಪಾಲಿಕೆ ಅಧಿಕಾರಿಗಳಲ್ಲಿ ಹೊಸ ಬೇಡಿಕೆಯನ್ನು ಜನರು ಮುಂದಿಡುತ್ತಿದ್ದಾರೆ.

ಸಂಪರ್ಕ ಕಡಿತ: ಜನರ ಈ ಧೋರಣೆಯಿಂದ ಬೇಸತ್ತ ಅಧಿಕಾರಿಗಳು ಇದೀಗ ಕರ ಬಾಕಿ ಪಾವತಿಸದವರ ನೀರಿನ ಸಂಪರ್ಕವನ್ನು ಕಡಿತಗೊಳಿಸುವ ಕೆಲಸಕ್ಕೆ ಮುಂದಾಗಿದ್ದಾರೆ. ಆಯಾ ಬಡಾವಣೆಯ ಇಂಜಿನಿಯರ್‌ಗಳ ನೇತೃತ್ವದಲ್ಲಿ  ನೀರಿನ ಸಂಪರ್ಕ ಕಡಿತಗೊಳಿಸುವ ಕೆಲಸವನ್ನು ಮುಂದುವರಿಸಲಾಗುತ್ತಿದೆ. ಈಗಲೂ ಕಾಲ ಮಿಂಚಿಲ್ಲ ಬಾಕಿ ಹಣವನ್ನು ಪಾವತಿಸಿದಲ್ಲಿ ಬಡ್ಡಿಯನ್ನು ಮನ್ನಾ ಮಾಡುವುದಾಗಿ ಅಧಿಕಾರಿಗಳು ಹೇಳುತ್ತಾರೆ.

ಜನರಿಗೆ ನೀರಿನ ಕರ ಹೊರೆಯಾಬಾರದು ಎಂಬ ಉದ್ದೇಶದಿಂದ ಬಡ್ಡಿ ಮನ್ನಾ ಮಾಡಲಾಗಿದೆ. ಆದರೂ ಜನರು ಯೋಜನೆಯನ್ನು ಸದುಪಯೋಗ ಪಡೆದುಕೊಳ್ಳುತ್ತಿಲ್ಲ. ಕೆಲವರು ಅಸಲು ಪಾವತಿಸಲು ಐದು ಕಂತುಗಳ ಬೇಡಿಕೆ ಇಟ್ಟಿದ್ದಾರೆ. ಆದರೆ, ಅದು ಸಾಧ್ಯವಾಗದ ಮಾತು. ಈಗಲಾದರೂ ಜನರು ಅಸಲು ಪಾವತಿಸಿ ಬಡ್ಡಿಯ ಹೊರೆಯನ್ನು ಕಡಿಮೆ ಮಾಡಿಕೊಳ್ಳಬೇಕು.

ಲಕ್ಷ್ಮೀಕಾಂತ ರೆಡ್ಡಿ, ಆಯುಕ್ತರು, ಮೈಸೂರು ಮಹಾನಗರಪಾಲಿಕೆ.


  • ಇಲ್ಲಿಯವರೆಗೆ ನೀರಿನ ಬಿಲ್ ಬಾಕಿ-೧೪೦ ಕೋಟಿ ರೂ.
  • ಬಾಕಿಯ ಮೇಲಿನ ಬಡ್ಡಿ – ೭೦ ಕೋಟಿ ರೂ.
  • ಬಡ್ಡಿ ಮನ್ನಾ ಘೋಷಣೆ: ಆಗಸ್ಟ್ ಮಾಹೆ
  • ೪ ತಿಂಗಳಿನಲ್ಲಿ ಸಂಗ್ರಹವಾದ ಮೊತ್ತ: ೨.೫೦ ಕೋಟಿ ರೂ.
andolana

Recent Posts

ಉಪಸಭಾಪತಿಗೆ ಚಿತ್ರಹಿಂಸೆ ಆರೋಪ : ಐಪಿಎಸ್‌ ಅಧಿಕಾರಿ ಬಂಧನ

ಅಮರಾವತಿ : ಹಿಂದಿನ ವೈಎಸ್‍ಆರ್‍ಸಿಪಿ ಆಡಳಿತದ ಅವಧಿಯಲ್ಲಿ ಆಂಧ್ರ ವಿಧಾನಸಭೆಯ ಪ್ರಸ್ತುತ ಉಪಸಭಾಪತಿ ಕೆ. ರಘುರಾಮ ಕೃಷ್ಣ ರಾಜು ಅವರ…

37 mins ago

ಮಾರ್ಚ್‌ 11ರಿಂದ ವೈದ್ಯಾಧಿಕಾರಿಗಳ ಮುಷ್ಕರ : ಆರೋಗ್ಯ ಸೇವೆಯಲ್ಲಿ ವ್ಯತ್ಯಯ ಸಾಧ್ಯತೆ

ಬೆಂಗಳೂರು : ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘವು ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಮಾರ್ಚ್ 11ರಿಂದ…

44 mins ago

ಟ್ರಂಪ್‌ ಜಾಗತಿಕ ಸುಂಕ ರದ್ದು : ವರದಿ

ವಾಷಿಂಗ್ಟನ್ : ಕಾನೂನುಬಾಹಿರವಾಗಿ ಟ್ರಂಪ್ ವಿಧಿಸಿದ್ದ ಆಮದು ಸುಂಕ ಸಂಗ್ರಹವನ್ನ ಅಮೆರಿಕ ನಿಲ್ಲಿಸಲಿದೆ ಎಂದು ಯುಎಸ್ ಕಸ್ಟಮ್ಸ್ ಮತ್ತು ಗಡಿ…

1 hour ago

ಸಫಾರಿ ಆದಾಯದ ಶೇ.35 ಭಾಗ ಕಾಡಿನಂಚಿನ ಜನಕಲ್ಯಾಣಕ್ಕೆ ಬಳಕೆ : ಖಂಡ್ರೆ

ಬೆಂಗಳೂರು : ಸಫಾರಿಯಿಂದ ಬರುವ ಆದಾಯದಲ್ಲಿ ಶೇ.35ರಷ್ಟನ್ನು ಕಾಡಿನಂಚಿನ ಗ್ರಾಮದ ಜನರ ಕಲ್ಯಾಣಕ್ಕಾಗಿ ಬಳಸಲು ರಾಜ್ಯ ಸರ್ಕಾರ ತೀರ್ಮಾನಿಸಿದ್ದು, ಗ್ರಾಮಗಳಲ್ಲಿ…

1 hour ago

ವನ್ಯಜೀವಿ ಸಂಚಾರ | ಕಾಡಂಚಿನ ಗ್ರಾಮದ ಮುಖಂಡರಿಗೆ ಮಾಹಿತಿ ರವಾನಿಸಲು ಖಂಡ್ರೆ ಸೂಚನೆ

ಬೆಂಗಳೂರು : ಅರಣ್ಯದಂಚಿನ ಜಮೀನುಗಳಲ್ಲಿ ವನ್ಯಜೀವಿಗಳ ಸಂಚಾರದ ಬಗ್ಗೆ ಕಮಾಂಡ್ ಕೇಂದ್ರಕ್ಕೆ ಮಾಹಿತಿ ಬಂದ ಕೂಡಲೇ ತೋಟದ ಬೆಳೆಗಾರರ ಸಂಘಟನೆ…

2 hours ago

ಮನರೇಗಾ ನಾಶ | ಜನರ ಅನ್ನ ಕಿತ್ತುಕೊಳ್ಳುತ್ತಿರುವ ಕೇಂದ್ರ ; ಸಿಎಂ ಸಿದ್ದರಾಮಯ್ಯ

ಚಿಕ್ಕಬಳ್ಳಾಪುರ : ಗ್ರಾಮೀಣ ಜನರ ಉದ್ಯೋಗದ ಹಕ್ಕನ್ನು ಕಸಿಯುತ್ತಿರುವ ವಿಬಿಜಿರಾಮ್ ಜಿ ಕಾಯ್ದೆಯನ್ನು ರದ್ದುಪಡಿಸಿ, ಮನರೇಗಾ ಮರುಸ್ಥಾಪಿಸುವವರೆಗೆ ದೇಶಾದ್ಯಂತ ಕಾಂಗ್ರೆಸ್…

2 hours ago