ಬಳ್ಳೂರಹುಂಡಿ ಗ್ರಾಮಸ್ಥರಿಗೆ ಪರಿಹಾರ ಮರೀಚಿಕೆ
ಶ್ರೀನಿವಾಸ ಟಿ.ಎಲ್.
ಮೈಸೂರು: ಹುಲಿ ದಾಳಿಯಿಂದ ತೀವ್ರ ಗಾಯಗೊಂಡು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಂಜನಗೂಡು ತಾಲ್ಲೂಕಿನ ಬಳ್ಳೂರು ಹುಂಡಿಯ ದನಗಾಹಿ ಸ್ವಾಮಿ ದಾಸಯ್ಯ (೫೪) ಚೇತರಿಸಿಕೊಳ್ಳುತ್ತಿದ್ದಾರೆ. ಈ ನಡುವೆ ಸ್ವಾಮಿ ಮೇಲಿನ ದಾಳಿ ಬಳಿಕ ಅವರ ಹಸುವಿನ ಮೇಲೆ ದಾಳಿ ಮಾಡಿರುವ ಹುಲಿ ಅದನ್ನು ಕೊಂದು ಮಾಂಸವನ್ನು ಭಕ್ಷಿಸಿದೆ.
ಹಾಡಹಗಲೇ ನಡೆದ ಹುಲಿ ದಾಳಿಯಿಂದ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ. ಬಳ್ಳೂರು ಹುಂಡಿಗೆ ಮಂಗಳವಾರ ಭೇಟಿ ನೀಡಿದ ” ಆಂದೋಲನʼ ತಂಡದೊಂದಿಗೆ ಮಾತನಾಡಿದ ಗ್ರಾಮಸ್ಥರು “” ಅರಣ್ಯ ಇಲಾಖೆ ನಮಗೆ ಬೇರೆ ಕಡೆ ಜಾಗ ನೀಡಲಿ. ನಾವು ಅಲ್ಲಿಗೆ ಹೋಗಿ ಬದುಕುತ್ತೇವೆ. ಇಲ್ಲಿ ನಮ್ಮ ಜೀವಕ್ಕೆ ರಕ್ಷಣೆಯಿಲ್ಲʼʼ ಎಂದು ಅಳಲು ತೋಡಿಕೊಂಡರು. ಹುಲಿಯು ಹಸು “ಪೂಜಾʼಳ ಕಾಲು ಮತ್ತು ತಲೆ ಭಾಗ ಬಿಟ್ಟು ಪೂರ್ಣವಾಗಿ ಕಬಳಿಸಿದ್ದು ಕಂಡುಬಂತು. ಅದರ ಎರಡು ತಿಂಗಳ ಗಂಡು ಕರು ಅನಾಥವಾಗಿದೆ.
ಹುಲಿ ದಾಳಿಗೆ ತುತ್ತಾಗಿರುವ ಸ್ವಾಮಿ ದಾಸಯ್ಯ ಖಾಸಗಿ ಆಸ್ಪತ್ರೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ಇನ್ನೂ ಮಾತನಾಡುವ ಸ್ಥಿತಿಯಲ್ಲಿಲ್ಲ. ಆದರೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳು ” ಆಂದೋಲನ ಡಿಜಿಟಲ್ ʼ ಗೆ ದೃಢಪಡಿಸಿವೆ.
“” ತಿಂಗಳಿಗೆ ಮೂರ್ನಾಲ್ಕು ರಾಸುಗಳನ್ನು ಹುಲಿ ಕಬಳಿಸುತ್ತಾ ಬಂದರೂ ಅರಣ್ಯ ಇಲಾಖೆ ಶಾಶ್ವತ ಪರಿಹಾರ ನೀಡಿಲ್ಲ. ರೈತರು ಆನೆ, ಕಡವೆ,ಜಿಂಕೆ, ಚಿರತೆ,ಕಾಡುಹಂದಿ,ಮುಳ್ಳುಹಂದಿ,ನವಿಲುಗಳೂ ಹೊಲಕ್ಕೆ ಬಂದು ನಾವು ಬೆಳೆದ ಕೃಷಿಯನ್ನು ನಾಶಪಡಿಸುತ್ತಿವೆ. ಲಕ್ಷಗಟ್ಟಲೆ ಬೆಳೆನಾಶವಾದರೂ ಅರಣ್ಯ ಇಲಾಖೆ ಕೇವಲ ಎರಡು, ಮೂರು ಸಾವಿರ ರೂಪಾಯಿ ಪರಿಹಾರ ನೀಡಿ ಕೈ ತೊಳೆದುಕೊಳ್ಳುತ್ತಿದೆ. ನಮಗೆ ಪರಿಹಾರಕ್ಕಿಂತಲೂ ವನ್ಯಪ್ರಾಣಿ ಜನವಸತಿಯತ್ತ ಬರದಂತೆ ತಡೆಗಟ್ಟಲಿʼʼ ಎಂದು ಕೃಷಿಕರು ಅಳಲು ತೋಡಿಕೊಂಡರು.
“” ಗ್ರಾಮಸ್ಥರು ಜಾನುವಾರುಗಳನ್ನು ಅರಣ್ಯ ಪ್ರದೇಶದಲ್ಲಿ ಮೇಯಲು ಬಿಡುತ್ತಿರುವುದು ಹುಲಿದಾಳಿಗೆ ಕಾರಣವಾಗುತ್ತಿದೆ. ಕೆಲವು ರೈತರು ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡು ಸಾಗುವಳಿ ಮಾಡುತ್ತಿದ್ದು ದಾಖಲೆ ಇಲ್ಲದ ಜಾಗದಲ್ಲಿ ಫಸಲು ನಷ್ಟವಾದರೆ ಪರಿಹಾರ ಅಸಾಧ್ಯ. ಈವರೆಗೆ ಸಾಧ್ಯವಾದಷ್ಟೂ ಶೀಘ್ರ ಪರಿಹಾರ ನೀಡಲಾಗಿದೆ. ಕೆಲವರಿಗೆ ಪರಿಹಾರ ವಿತರಣೆ ಪ್ರಗತಿಯಲ್ಲಿದೆ. ಸ್ವಾಮಿ ದಾಸಯ್ಯ ಕುಟುಂಬಕ್ಕೆ ಶೀಘ್ರವೇ ಪರಿಹಾರ ವಿತರಿಸಲಾಗುವುದು. ಅವರ ಆಸ್ಪತ್ರೆ ಖರ್ಚನ್ನು ಅರಣ್ಯ ಇಲಾಖೆ ಭರಿಸಲಿದೆ.ʼʼ ಎಂದು ಆರ್ ಎಫ್ ಒ ಕೆ.ಆರ್.ನಾರಾಯಣ ಆಂದೋಲನ ಡಿಜಿಟಲ್ ಗೆ ಮಾಹಿತಿ ನೀಡಿದ್ದಾರೆ.
10 ಮಂದಿ ಅರಣ್ಯ ಸಿಬ್ಬಂದಿಯ ತಂಡ ಮಂಗಳವಾರದಿಂದಲೇ ಹುಲಿ ಪತ್ತೆಗೆ ಕಾರ್ಯಾಚರಣೆ ಆರಂಭಿಸಿದೆ. ಬುಧವಾರದಿಂದ ಹುಲಿಯ ಚಲನ ವಲನ ವೀಕ್ಷಣೆಗೆ ಡ್ರೋಣ್ ಬಳಸಿಕೊಳ್ಳಲಾಗುವುದು. ಹುಲಿಯನ್ನು ಸೆರೆ ಹಿಡಿಯಲು ರಾಜ್ಯ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ (ಪಿಸಿಸಿಎಫ್) ಅನುಮತಿ ಪಡೆಯಬೇಕಿದೆ ಎಂದು ಅವರು ತಿಳಿಸಿದ್ದಾರೆ.
ನಂಜನಗೂಡು: ದಕ್ಷಿಣ ಕಾಶಿ ನಂಜನಗೂಡಿನಲ್ಲಿ ಕಪಿಲಾ ನದಿ ಪಕ್ಕದಲ್ಲೇ ಇದ್ದರೂ ಜನತೆಗೆ ಕುಡಿಯುವ ನೀರಿನ ಅಭಾವ ಎದುರಾಗಿದೆ. ಹಳ್ಳಿಗಳಿಗೆ ನದಿ…
ಬೆಂಗಳೂರು: ರಾಜ್ಯದಲ್ಲಿ ಇನ್ನೂ ಒಂದು ವಾರಗಳ ಕಾಲ ಧಾರಾಕಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಪೂರ್ವವ ಮಧ್ಯ…
ಇತ್ತೀಚೆಗೆ ಮೈಸೂರಿನಲ್ಲಿ ಸರಗಳ್ಳತನ ಪ್ರಕರಣಗಳು ವರದಿಯಾಗುತ್ತಿದ್ದು, ಮಹಿಳೆಯರು ಒಂಟಿಯಾಗಿ ರಸ್ತೆಯಲ್ಲಿ ಓಡಾಡಲು ಹೆದರುವಂತಾಗಿದೆ. ಎರಡು ದಿನಗಳ ಹಿಂದಷ್ಟೇ ನಮ್ಮ ಸಂಬಂಧಿಕರೊಬ್ಬರು…
ಕನ್ನಡದ ಖಾಸಗಿ ಚಾನೆಲ್ವೊಂದರಲ್ಲಿ ಪ್ರಸಾರವಾಗುತ್ತಿರುವ ಬಿಗ್ಬಾಸ್ ಸೀಸನ್-11 ವಿವಾದಗಳಿಂದಲೇ ಸುದ್ದಿಯಾಗುತ್ತಿದ್ದು, ಸ್ಪರ್ಧಿಗಳು ನಿತ್ಯ ಜಗಳವಾಡುತ್ತಿರುವುದರಿಂದ ಕಾರ್ಯಕ್ರಮ ವೀಕ್ಷಿಸುವವರಿಗೆ ಕಿರಿಕಿರಿಯಾಗುತ್ತಿದೆ. ವಿವಿಧ…
ನಾಡಹಬ್ಬ ದಸರಾ ಮಹೋತ್ಸವದಲ್ಲಿ ಈ ಬಾರಿ ಜನ ಸಾಗರವೇ ಹರಿದು ಬಂದಿತ್ತು. ದಸರಾ ಅಂಗವಾಗಿ ಆಯೋಜಿಸಿದ್ದ ಯುವ ಸಂಭ್ರಮ, ಯುವ…
ಸರ್ಕಾರವೇ ನಮ್ಮ ದೇವರಾಗಿದೆ ಮೇಲಾಧಿಕಾರಿಗಳ ಮೇಲೆ ಗೌರವವಿದೆ ಜನರ ಸಮಸ್ಯೆಗಳ ಅರಿವಿದೆ ಅವರಿಗಾದ ಅಡಚಣೆಗೆ ವಿಷಾದವಿದೆ ನಮಗೂ ಬದುಕಿದೆ. ನಮ್ಮದೂ…