ಮೈಸೂರು: ‘ಸಾಂಸ್ಕೃತಿಕ ನಗರಿ’ ಮೈಸೂರಿನ ಹಸಿರು ಮರಗಳು ಹಾಗೂ ಜನರ ಮನಸ್ಸಿನಲ್ಲಿ ಸಾಲುಮರದ ತಿಮ್ಮಕ್ಕನ ನೆನಪುಗಳು ಬೇರೂರಿದ್ದು, ಅದಕ್ಕೆ ಸಾಕ್ಷಿಯಂತಿವೆ ನಗರದಲ್ಲಿರುವ ತಿಮ್ಮಕ್ಕನ ಹೆಸರಿನಲ್ಲಿರುವ ಉದ್ಯಾನಗಳು..!
ಮಕ್ಕಳಿಲ್ಲದ ತಿಮ್ಮಕ್ಕ 8 ಸಾವಿರಕ್ಕೂ ಹೆಚ್ಚು ಸಸಿಗಳನ್ನು ತಮ್ಮ ಮಕ್ಕಳಂತೆ ಪೋಷಿಸಿ ಬೃಹತ್ ಮರಗಳನ್ನಾಗಿ ಬೆಳೆಸಿದ್ದಾರೆ. ಅಲ್ಲದೇ, ಪರಿಸರ ಸಂರಕ್ಷಣೆಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದರು. ವೃಕ್ಷಮಾತೆ ತಿಮ್ಮಕ್ಕನಿಗೂ ಮೈಸೂರಿನ ಮರಗಳಿಗೂ ಅವಿನಾಭಾವ ನಂಟಿದೆ.
ನಗರದ ಇಸ್ಕಾನ್ ಬಳಿ ಅರಣ್ಯ ಇಲಾಖೆ ನಿರ್ಮಿಸಿರುವ ಉದ್ಯಾನಕ್ಕೆ ‘ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನ’ ಎಂದು ಹೆಸರಿಡಲಾಗಿದೆ. ಅಲ್ಲದೇ, ಲಿಂಗಾಂಬುಧಿ ಕೆರೆ ಮುಂಭಾಗ ಇರುವ ಉದ್ಯಾನಕ್ಕೂ ಸಾಲುಮರದ ತಿಮ್ಮಕ್ಕ ಪಾರ್ಕ್ ಎಂದು ನಾಮಕರಣ ಮಾಡಲಾಗಿದೆ. ಇಲ್ಲಿಗೆ ಬರುವ ವಾಯುವಿಹಾರಿಗಳು ನಿತ್ಯ ತಿಮ್ಮಕ್ಕನನ್ನು ಸ್ಮರಿಸುತ್ತಲೇ ವಾಕಿಂಗ್ ಮಾಡುತ್ತಾರೆ.
ಕಳೆದ ವರ್ಷ ನಿವೇದಿತಾನಗರದ ಮನೆಯೊಂದಕ್ಕೆ ಆಗಮಿಸಿ ಸಸಿಗಳನ್ನು ನೆಡುವ ಮೂಲಕ ಸನ್ಮಾನ ಸ್ವೀಕರಿಸಿದ್ದರು. 2016ರಲ್ಲಿ ನಾಡಹಬ್ಬ ದಸರಾ ಮಹೋತ್ಸವ ಉದ್ಘಾಟನೆಗೆ ಆಹ್ವಾನಿಸಬೇಕೆಂದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಒತ್ತಡ ಬಂದಿತ್ತು. ಆದರೆ, ಅವರಿಂದ ಒಮ್ಮೆಯಾದರೂ ದಸರಾ ಉದ್ಘಾಟಿಸಬೇಕೆಂಬ ಮೈಸೂರಿಗರ ಕನಸು ಕನಸಾಗಿಯೇ ಉಳಿಯಿತು.
ಚೆನ್ನೈ: ತಮಿಳುನಾಡಿನ ಹಾಲಿ ಸಿಎಂ ಎಂ.ಕೆ.ಸ್ಟಾಲಿನ್ ಸ್ವ ಕ್ಷೇತ್ರದಲ್ಲೇ ಸೋಲು ಅನುಭವಿಸಿದ್ದಾರೆ. ಈ ಮೂಲಕ ಸತತ 2ನೇ ಬಾರಿಗೆ ಸರ್ಕಾರ…
ದಾವಣಗೆರೆ: ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಎರಡೂ ಕ್ಷೇತ್ರದಲ್ಲೂ ಕಾಂಗ್ರೆಸ್ ಜಯಭೇರಿ ಬಾರಿಸಿದೆ.…
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವ ಮತ್ತು ವಿಕಸಿತ ಭಾರತದ ಮೇಲೆ ಜನರು ಹೊಂದಿರುವ ನಂಬಿಕೆಯಿಂದಾಗಿ ಎನ್ಡಿಎ…
ಬೆಂಗಳೂರು: ತಮಿಳುನಾಡಿನ ಮತ ಎಣಿಕೆಯಲ್ಲಿ ಟಿವಿಕೆ ಭಾರೀ ಮುನ್ನಡೆ ಸಾಧಿಸಿದೆ. ಈ ಹಿನ್ನೆಲೆ ಪಕ್ಷದ ಮುಖ್ಯಸ್ಥ ನಟ ವಿಜಯ್ಗೆ ಸಿಎಂ…
ಬಾಗಲಕೋಟೆ : ಹಿರಿಯ ನಾಯಕ ಎಚ್.ವೈ. ಮೇಟಿ ನಿಧನದಿಂದ ತೆರವಾಗಿದ್ದ ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಉಮೇಶ್…
ತಿರುವನಂತಪುರಂ : ಕೇರಳ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮುನ್ನಡೆ ಸಾಧಿಸುತ್ತಿದ್ದು, ದಶಕದ ನಂತರ ಅಧಿಕಾರಕ್ಕೆ ಮರಳುವ ಸಂಭವನೀಯ…