ಮೈಸೂರು : ನಿಸ್ಪೃಹ ಮನಸ್ಸಿನ ರಾಜಕಾರಣಿಯೇನಾದರು ಇದ್ದರೆ ಅದು ಶ್ರೀನಿವಾಸ ಪ್ರಸಾದ್ ಮಾತ್ರ ಎಂದು ಸಂಸದ ಪ್ರತಾಪ್ ಸಿಂಹ ಅಭಿಪ್ರಯಾ ವ್ಯಕ್ತಪಡಿಸಿದರು.
ದಿವಂಗತ ಸಂಸದ ವಿ ಶ್ರೀನಿವಾಸ ಪ್ರಸಾದ್ ಅವರ ಅಂತಿಮ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ೧೦ ವರ್ಷದ ನನ್ನ ರಾಜಕಾರಣದಲ್ಲಿ ಎಲ್ಲಾ ರೀತಿಯ ಎಲ್ಲಾ ವಿಧದ ರಾಜಕಾರಣಿಗಳನ್ನು ನೋಡಿದ್ದೇನೆ. ಆದರೆ ಹಳೆ ಮೈಸೂರಿನ ನಿಶ್ಪೃಹ ಮನಸ್ಸಿನ ಏಕಮಾತ್ರ ವ್ಯಕ್ತಿ ಎಂದರೆ ಅದು ಶ್ರೀನಿವಾಸ ಪ್ರಸಾದ್ ಎಂದರು.
ಈ ಭಾಗದಲ್ಲಿ ದ್ವೇಷ-ಅಸೂಯೆ ಇಲ್ಲದಂತ ಒಬ್ಬನೇ ಒಬ್ಬ ರಾಜಕಾರಣೀ ಎಂದರೆ ಅದು ಶ್ರೀನಿವಾಸ ಪ್ರಸಾದ್. ನನಗೆ ವಯಕ್ತಿಕವಾಗಿ ನೋವಾಗಿದೆ. ಮೊದಲ ಬಾರಿ ಸಂಸದನಾಗಿದ್ದಾಗ ಅವರು ಮೈಸೂರಿನ ಉಸ್ತುವಾರಿ ಸಚಿವರಾಗಿದ್ದರು, ಪಕ್ಷ ಬೇರೆಯಾಗಿದ್ದರು ಒಂದು ದಿನ ನನ್ನನ್ನು ಬೇರೆಯವನಂತೆ ಕಂಡಿರಲಿಲ್ಲ ಎಂದರು.
ನಾನು ಸಂಸದನಾದ ಬಳಿಕ ಮೈಸೂರು ಭಾಗದಲ್ಲಿ ಒಂದು ದಿನಕ್ಕು-ಒಂದು ಕ್ಷಣಕ್ಕು ನನ್ನು ಟೀಕೆ ಮಾಡದಂತ ಮನಸ್ಸಿದ್ದರೆ ಅದು ಪ್ರಸಾದ್ ಸಾಹೇಬರು ಎಂದು ಹೇಳುವ ವೇಳೆ ಸಂಸದ ಪ್ರತಾಪ್ ಸಿಂಹ ಗದ್ಗತಿತರಾದರು.
ಒಳ್ಳೆ ರಾಜಕಾರಣಿಗಳಿಗೆ ಕಾಲನೇ ಇಲ್ಲವೇನೋ ! : ಈತ್ತೀಚೆಗೆ ಮಾಜಿ ಸಂಸದರಾದ ಧೃವನಾರಾಯಣ್ ಅವರು ತೀರಿಹೋದರು. ಈಗ ಸಂಸದರಾದ ಶ್ರೀನಿವಾಸ ಪ್ರಸಾದ್ ತೀರಿಹೋಗಿದ್ದಾರೆ. ಯಾಕೋ ಈ ಮೈಸೂರು ಭಾಗದಲ್ಲಿ ಒಳ್ಳೆ ರಾಜಕಾರಣಿಗಳಿಗೆ ಕಾಲನೇ ಇಲ್ಲವೇನೋ ಎಂದು ಅನ್ನಿಸಿಬಿಡುತ್ತದೆ ಎಂದು ದುಖಿತರಾಗಿ ಭಾವುಕರಾದರು.
ಬೆಂಗಳೂರು : ಬೆಂಗಳೂರಿನಲ್ಲಿ ಕನಿಷ್ಠ 15 ಡಿಗ್ರಿ ಸೆಲ್ಸಿಯಸ್ ಮತ್ತು ಗರಿಷ್ಟ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ವರೆಗೆ ಇರುತ್ತದೆ…
ಬೆಳಗಾವಿ : ಸರ್ಕಾರದಿಂದ ಪಡೆದ ಸಿಎ ನಿವೇಶನಗಳಲ್ಲಿ ಕಟ್ಟಡ ನಿರ್ಮಾಣ ಮಾಡಲು ಈಗಿರುವ ಮೂರು ವರ್ಷಗಳ ಮಿತಿಯನ್ನು ಐದು ವರ್ಷಗಳಿಗೆ…
ಮೈಸೂರು : ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ಹಾಗೂ ಮುಂಬೈನ ಬಾಂಧ್ರಾ ಪೊಲೀಸ್ ಅಧಿಕಾರಿ ಸೋಗಿನಲ್ಲಿ ನಗರದ ವೈದ್ಯರೊಬ್ಬರಿಗೆ…
ಮೈಸೂರು : ಜಾತಿ ನಿಂದನೆ, ಅಸ್ಪೃಶ್ಯತೆ ಆಚರಣೆ ಪ್ರಕರಣಗಳಿಗೆ ಸಂಬಂಧಿಸಿದಂತೆ ದೂರು ದಾಖಲು ಹಾಗೂ ತನಿಖೆ ನಡೆಸುವ ಉದ್ದೇಶದಿಂದ ಆರಂಭಗೊಂಡಿರುವ…
ಮೈಸೂರು : ಕರ್ನಾಟಕ ಪೊಲೀಸ್ ಅಕಾಡೆಮಿ ಮತ್ತು ಸಾವಿತ್ರಿಬಾಯಿ ಫುಲೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಂಸ್ಥೆಯ ನಡುವೆ ಒಡಂಬಡಿಕೆಗೆ…
ಬೆಳಗಾವಿ (ಸುವರ್ಣಸೌಧ) : ಇತ್ತೀಚೆಗೆ ನಿಧನರಾದ ಸಾಹಿತಿ ಎಸ್.ಎಲ್.ಭೈರಪ್ಪ ಅವರ ಸ್ಮಾರಕವನ್ನು ಮೈಸೂರಿನಲ್ಲಿ ನಿರ್ಮಿಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ…