Poorly sown seed
ನಂಜನಗೂಡು : ಕಳಪೆ ಬಿತ್ತನೆ ಬೀಜ ಬಿತ್ತಿದ ಪರಿಣಾಮ ಮಾಜಿ ಶಾಸಕರ ಜಮೀನಿನಲ್ಲಿ ಬತ್ತದ ಪೈರು ಆಳೆತ್ತರಕ್ಕೆ ಬೆಳದಿದ್ದರೂ ಸರಿಯಾಗಿ ಕಾಳು ಕಟ್ಟದೆ ನಷ್ಠವಾಗುತ್ತಿರುವ ಘಟನೆ ನಡೆದಿದೆ.
ನಂಜನಗೂಡು ತಾಲೂಕಿನ ಹೆಜ್ಜಿಗೆ ಗ್ರಾಮದ ರೈತ ಮಾಜಿ ಶಾಸಕ ಹೆಜ್ಜಿಗೆ ಶ್ರೀನಿವಾಸರ ಜಮೀನೀನಲ್ಲಿ ಈ ಬಾರಿ ಬತ್ತದ ಪೈರು ಬೆಳದೂ ಬತ್ತ ಸಿಗದೆ ಕೇವಲ ಹುಲ್ಲಿಗಾಗಿ ಬತ್ತದ ಕೃಷಿ ಮಾಡಿದಂತಾಗಿದೆ.
ರಾಜ್ಯ ರೈತ ಸಂಘದ ಕಾರ್ಯದರ್ಶಿ ಆಗಿರುವ ಶ್ರೀನಿವಾಸನವರ ಪುತ್ರ ಪ್ರಕಾಶ, ನಗರದ ಕಿಸಾನ ಫರ್ಟಿಲೇಸರ್ಸ ಮಳಿಗೆಯಿಂದ ಕಾವೇರಿ ಸೀಡ್ಸ್ ನ ಬತ್ತದ ಬೀಜ ತಂದು ನಾಟಿ ಮಾಡಿದ್ದು ಬತ್ತದ ಪೈರು ಮಾತ್ರ ಸಖತ್ತಾಗಿ ಬೆಳೆದು ನಿಂತಿದ್ದನ್ನು ನೋಡಿದಾಗ ಬೆಳೆ ಬಂಪರ್ ಎಂದುಕೊಂಡೆ ಆದರೆ ಈಗ ಈಗ ನೋಡಿದರೆ ಶೇ% ೨೫ ರಷ್ಠು ಸಹ ಬತ್ತದ ಕಾಳು ಕಟ್ಟೇ ಇಲ್ಲಾ. ಕಳಪೆ ಬೀಜದಿಂದ ನಮಗಾಗುವ ನಷ್ಠಕ್ಕೆ ಯಾರು ಹೊಣೆ ಎನ್ನುತ್ತಾರೆ.
ಕಳಪೆ ಬೀಜದಿಂದಾಗಿ ಹೆಜ್ಜಿಗೆ ಗ್ರಾಮದಲ್ಲಿ ಒಂದು ಎಕರೆಗೆ ಈ ಬೀಜವನ್ನು ತಂದು ನಾಟಿ ಮಾಡಿದ್ದು ತಮಗೀಗ ಶೇ ೭೫ ರಷ್ಟು ನಷ್ಠವಾಗುತ್ತಿದ್ದು, ಈ ಕುರಿತು ಈಗಾಗಲೆ ತಾಲೂಕು ಕೃಷಿ ಅಧಿಕಾರಿಗಳಿಗೆ ದೂರೂ ನೀಡಿದ್ದು ಅವರು ಸ್ಥಳಕ್ಕೆ ಆಗಮಿಸಿ ಬೆಳೆ ಪರಿಕ್ಷೆ ಮಾಡಿಕೊಂಡು ಹೋಗಿದ್ದಾರೆ. ತಾಲೂಕಿನಲ್ಲಿ ಈ ಬತ್ತವನ್ನು ಸಾಕಷ್ಠು ಜನ ಖರಿದಿಸಿ ಬೆಳೆ ಬೆಳದಿದ್ದು ಎಲ್ಲಡೆ ಇದೇ ರೀತಿ ಕಾಳು ಕಟ್ಟಿಲ್ಲ. ಸರ್ಕಾರವೇ ಈಗ ಈ ಕಳಪೆ ಬೀಜದೀಂದಾಗ ನಷ್ಠ ಭರ್ತಿ ಮಾಡಿಕೊಡಲಿ ಎಂದು ಆಗ್ರಹಿಸಿದರು.
ಇಂದಿನ ಧಾವಂತದ ಬದುಕಿನಲ್ಲಿ ನಾವೆಲ್ಲರೂ ಆಸೆಗಳ ಬೆನ್ನೇರಿ ಓಡುತ್ತಿದ್ದು, ನಮ್ಮ ಉಸಿರಿಗೆ ಆಧಾರವಾಗಿರುವ ಪ್ರಕೃತಿಯನ್ನು ಮರೆಯುತ್ತಿದ್ದೇವೆ. ಗಾಳಿ, ನೀರು, ಬೆಳಕಿಲ್ಲದೆ…
ಆರ್ಬಿಐ ಮುಂದಿನ ಹಣಕಾಸು ವರ್ಷದಿಂದ (೨೦೨೭-೨೮) ಪ್ಲಾಸ್ಟಿಕ್ (ಪಾಲಿಮರ್) ನೋಟುಗಳನ್ನು ಚಲಾವಣೆಗೆ ತರಲು ನಿರ್ಧರಿಸಿರುವುದು ಸ್ವಾಗತಾರ್ಹ ಮತ್ತು ದೂರದೃಷ್ಟಿಯ ಹೆಜ್ಜೆಯಾಗಿದೆ.…
ರಾಜ್ಯ ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ನೀಡದಿರುವುದು ಮಹಿಳೆಯರಿಗೆ ಮಾಡಿದ ಘೋರ ಅನ್ಯಾಯ. ಅಧಿಕಾರಕ್ಕೆ ಬರುವ ಮುನ್ನ ಮಹಿಳೆಯರ ಹೆಸರಿನಲ್ಲಿ…
ವೈಡ್ ಆಂಗಲ್: ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ ಇಂದು ಬಿಡುಗಡೆಯಾಗುತ್ತಿರುವ ‘ ಬಾಸ್’ಎಂದೋ ತೆರೆಗೆ ಬರಬೇಕಾಗಿತ್ತು. ಆದರೆ ಚಿತ್ರದ ಹೆಸರು,…
ನವೀನ್ ಡಿಸೋಜ ಕಳೆದ ಕೆಲ ದಿನಗಳಲ್ಲಿ ಉತ್ತಮ ಮಳೆ; ವಾಡಿಕೆ ಮಳೆ ಕೊರತೆ ವಿರಾಜಪೇಟೆ ತಾಲ್ಲೂಕಿನಲ್ಲಿ ಅತಿ ಹೆಚ್ಚು ಶೇ.೪೩…
ಮಂಜು ಕೋಟೆ ಎಚ್.ಡಿ.ಕೋಟೆ: ತಾಲ್ಲೂಕಿನ ಕಬಿನಿ ಜಲಾಶಯಕ್ಕೆ ಬರುತ್ತಿದ್ದ ಒಳಹರಿವ ಇಳಿಮುಖವಾಗಿರುವ ಹಿನ್ನೆಲೆಯಲ್ಲಿ ಹೊರಹರಿವು ಸ್ಥಗಿತಗೊಳಿಸಿ ಜಲಾಶಯದ ಕ್ರಸ್ಟ್ಗೇಟ್ಗಳನ್ನು ಬಂದ್…