ಮೈಸೂರು

ಕಳಪೆ ಬಿತ್ತನೆ ಬೀಜ ಮಾಜಿ ಶಾಸಕರ ಜಮೀನಿನಲ್ಲಿ ಕಾಳುಕಟ್ಟದ ಬತ್ತ

ನಂಜನಗೂಡು : ಕಳಪೆ ಬಿತ್ತನೆ ಬೀಜ ಬಿತ್ತಿದ ಪರಿಣಾಮ ಮಾಜಿ ಶಾಸಕರ ಜಮೀನಿನಲ್ಲಿ ಬತ್ತದ ಪೈರು ಆಳೆತ್ತರಕ್ಕೆ ಬೆಳದಿದ್ದರೂ ಸರಿಯಾಗಿ ಕಾಳು ಕಟ್ಟದೆ ನಷ್ಠವಾಗುತ್ತಿರುವ ಘಟನೆ ನಡೆದಿದೆ.

ನಂಜನಗೂಡು ತಾಲೂಕಿನ ಹೆಜ್ಜಿಗೆ ಗ್ರಾಮದ ರೈತ ಮಾಜಿ ಶಾಸಕ ಹೆಜ್ಜಿಗೆ ಶ್ರೀನಿವಾಸರ ಜಮೀನೀನಲ್ಲಿ ಈ ಬಾರಿ ಬತ್ತದ ಪೈರು ಬೆಳದೂ ಬತ್ತ ಸಿಗದೆ ಕೇವಲ ಹುಲ್ಲಿಗಾಗಿ ಬತ್ತದ ಕೃಷಿ ಮಾಡಿದಂತಾಗಿದೆ.

ರಾಜ್ಯ ರೈತ ಸಂಘದ ಕಾರ್ಯದರ್ಶಿ ಆಗಿರುವ ಶ್ರೀನಿವಾಸನವರ ಪುತ್ರ ಪ್ರಕಾಶ, ನಗರದ ಕಿಸಾನ ಫರ್ಟಿಲೇಸರ‌್ಸ ಮಳಿಗೆಯಿಂದ ಕಾವೇರಿ ಸೀಡ್ಸ್ ನ ಬತ್ತದ ಬೀಜ ತಂದು ನಾಟಿ ಮಾಡಿದ್ದು ಬತ್ತದ ಪೈರು ಮಾತ್ರ ಸಖತ್ತಾಗಿ ಬೆಳೆದು ನಿಂತಿದ್ದನ್ನು ನೋಡಿದಾಗ ಬೆಳೆ ಬಂಪರ್ ಎಂದುಕೊಂಡೆ ಆದರೆ ಈಗ ಈಗ ನೋಡಿದರೆ ಶೇ% ೨೫ ರಷ್ಠು ಸಹ ಬತ್ತದ ಕಾಳು ಕಟ್ಟೇ ಇಲ್ಲಾ. ಕಳಪೆ ಬೀಜದಿಂದ ನಮಗಾಗುವ ನಷ್ಠಕ್ಕೆ ಯಾರು ಹೊಣೆ ಎನ್ನುತ್ತಾರೆ.

ಕಳಪೆ ಬೀಜದಿಂದಾಗಿ ಹೆಜ್ಜಿಗೆ ಗ್ರಾಮದಲ್ಲಿ ಒಂದು ಎಕರೆಗೆ ಈ ಬೀಜವನ್ನು ತಂದು ನಾಟಿ ಮಾಡಿದ್ದು ತಮಗೀಗ ಶೇ ೭೫ ರಷ್ಟು ನಷ್ಠವಾಗುತ್ತಿದ್ದು, ಈ ಕುರಿತು ಈಗಾಗಲೆ ತಾಲೂಕು ಕೃಷಿ ಅಧಿಕಾರಿಗಳಿಗೆ ದೂರೂ ನೀಡಿದ್ದು ಅವರು ಸ್ಥಳಕ್ಕೆ ಆಗಮಿಸಿ ಬೆಳೆ ಪರಿಕ್ಷೆ ಮಾಡಿಕೊಂಡು ಹೋಗಿದ್ದಾರೆ. ತಾಲೂಕಿನಲ್ಲಿ ಈ ಬತ್ತವನ್ನು ಸಾಕಷ್ಠು ಜನ ಖರಿದಿಸಿ ಬೆಳೆ ಬೆಳದಿದ್ದು ಎಲ್ಲಡೆ ಇದೇ ರೀತಿ ಕಾಳು ಕಟ್ಟಿಲ್ಲ. ಸರ್ಕಾರವೇ ಈಗ ಈ ಕಳಪೆ ಬೀಜದೀಂದಾಗ ನಷ್ಠ ಭರ್ತಿ ಮಾಡಿಕೊಡಲಿ ಎಂದು ಆಗ್ರಹಿಸಿದರು.

ಆಂದೋಲನ ಡೆಸ್ಕ್

Recent Posts

ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ : ಚಿತ್ರೋದ್ಯಮವೂ ಪೈರಸಿ ಎಂಬ ಪೆಡಂಬೂತವೂ

ನಾಳಿದ್ದು 21ರಂದು ನಡೆಯುವ ನೀಟ್ ಪರೀಕ್ಷೆಯ ಹಿನ್ನೆಲೆಯಲ್ಲಿ ಟೆಲಿಗ್ರಾಂ ಆಪ್‌ಅನ್ನು ಜೂ. 27ರ ವರೆಗೆ ತಾತ್ಕಾಲಿಕವಾಗಿ ಕೇಂದ್ರ ಸರ್ಕಾರ ಬ್ಯಾನ್…

1 min ago

ಮೀಸಲಾತಿ ಸಾಂವಿಧಾನಿಕ ಹಕ್ಕು ; ಸಮಾನತೆಯ ಮೆಟ್ಟಿಲು

ಮೀಸಲಾತಿ ಸೌಲಭ್ಯ ಇದ್ದರೂ ಕಠಿಣ ಪರೀಕ್ಷೆ ಪಾಸ್ ಮಾಡಲೇಬೇಕು ಟಿ.ಕೆ. ಹರೀಶ್ ಐತಿಹಾಸಿಕವಾಗಿ ಮತ್ತು ಸಾಮಾಜಿಕವಾಗಿ ಶೋಷಣೆಗೊಳಗಾಗಿ, ಶಿಕ್ಷಣ ಹಾಗೂ…

19 mins ago

ಮಹಾಪಂಚ್‌ ಕಾರ್ಟೂನ್‌

ಮಹಾಪಂಚ್‌ ಕಾರ್ಟೂನ್‌ | ಜೂನ್‌ 19  ಶುಕ್ರವಾರ  

28 mins ago

ಮುಂಗಾರು ಮತ್ತೆ ಚುರುಕು ; ಮೈಸೂರು, ಮಂಡ್ಯ, ಕೊಡಗಿನಲ್ಲಿ ಮಳೆ ಸಾಧ್ಯತೆ

ಬೆಂಗಳೂರು : ಕರ್ನಾಟಕದಲ್ಲಿ ಮುಂಗಾರು ಮತ್ತೆ ಚುರುಕುಗೊಂಡಿದ್ದು, ಕರಾವಳಿ, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮುಂದಿನ…

9 hours ago

ಪರಿಷತ್‌ ಚುನಾವಣೆ : ಕಾಂಗ್ರೆಸ್‌ನ ಐವರು, ಬಿಜೆಪಿಯ ಇಬ್ಬರ ಗೆಲುವು,

ಬೆಂಗಳೂರು : ಭಾರಿ ಕುತೂಹಲ ಮೂಡಿಸಿದ್ದ ವಿಧಾನ ಪರಿಷತ್​​ ಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದು, ಕಾಂಗ್ರೆಸ್​​ನ ಐವರು ಮತ್ತು ಬಿಜೆಪಿಯ ಎರಡು…

12 hours ago

ಪರಿಷತ್‌ ಚುನಾವಣೆ ; ಕಾಂಗ್ರೆಸ್‌ನ 5ನೇ ಅಭ್ಯರ್ಥಿಗೆ ಜಯ

ಬೆಂಗಳೂರು: ವಿಧಾನ ಪರಿಷತ್‌ ಚುನಾವಣೆಯಲ್ಲಿ ಕಾಂಗ್ರೆಸ್‌ನ ಐದನೇ ಅಭ್ಯರ್ಥಿ ವಿನಯ್‌ ಕಾರ್ತಿಕ್‌ ಜಯ ಸಾಧಿಸಿದ್ದಾರೆ. ಅಡ್ಡಮತದ ಪರಿಣಾಮ ಮೈತ್ರಿ ಅಭ್ಯರ್ಥಿ…

13 hours ago