ಮೈಸೂರು

ಪೇಪರ್ ಸುಬ್ಬಣ್ಣ ಇನ್ನಿಲ್ಲ

ಮೈಸೂರು : ಅದೊಂದು ರಸ್ತೆ ಬದಿಯಲ್ಲೇ ಸೃಷ್ಟಿಯಾಗಿದ್ದ ತೆರೆದ ಸುದ್ದಿಮನೆ! ಅಲ್ಲಿ ಕ್ಷಣಕಾಲ ನಿಂತರೆ ಲೋಕದ ಪ್ರಚಲಿತ ವಿದ್ಯಮಾನಗಳು ಗಮನಕ್ಕೆ ಬರುತ್ತಿತ್ತು. ನಗರದ ಹೃದಯ ಭಾಗ ಲ್ಯಾನ್ಸ್‌ಡೌನ್ ಕಟ್ಟಡದ ಮಳಿಗೆಯಲ್ಲಿ ಮೂರ್ನಾಲ್ಕು ದಶಕಗಳ ಕಾಲ ಜಗತ್ತಿನ ಬಹುತೇಕ ಸುದ್ದಿ ಪತ್ರಿಕೆಗಳನ್ನು ಮಾರುವ ಕಾಯಕವನ್ನೇ ತಪ್ಪಸ್ಸಿನಂತೆ 70 ವರ್ಷಗಳಿಗೂ ಹೆಚ್ಚು ಕಾಲ ನಡೆಸಿಕೊಂಡು ಬರುವ ಮೂಲಕ ಎಂ.ಆರ್.ಸುಬ್ರಹ್ಮಣ್ಯ (87), ಪೇಪರ್ ಸುಬ್ಬಣ್ಣ ಎಂದೇ ಹೆಸರಾಗಿದ್ದರು.

ಬಾಲಕನಾಗಿದ್ದಾಗಲೇ ಮೈಸೂರಿಗೆ ಬಂದು ಪತ್ರಿಕಾ ಮಾರಾಟದ ವೃತ್ತಿಯನ್ನು ಆಯ್ಕೆ ಮಾಡಿಕೊಂಡ ಸುಬ್ಬಣ್ಣ ಅವರು, ಲ್ಯಾನ್ಸ್‌ಡೌನ್ ಕಟ್ಟಡ ಕುಸಿದು ಬಿದ್ದಾಗಲೂ ತನ್ನ ಕಾಯಕ ನಿಷ್ಠೆಯನ್ನು ಮರೆಯಲಿಲ್ಲ. ಬದಲಿಗೆ ಜಗನ್ಮೋಹನ ಅರಮನೆ ರಸ್ತೆ ಬದಿಯಲ್ಲೇ ಪತ್ರಿಕೆಗಳ ಮಾರಾಟವನ್ನು ಮುಂದುವರಿಸಿದರು. ತನ್ನ ಕೊನೆಯ ದಿನದ ವರೆಗೂ ಅವರು ತನ್ನ ಕಾಯಕವನ್ನು ಮರೆಯಲಿಲ್ಲ. ಮಳೆ-ಬಿಸಿಲೆನ್ನದೇ ಜಗನ್ಮೋಹನ ಅರಮನೆ ರಸ್ತೆಯ ಲ್ಯಾನ್ಸ್‌ಡೌನ್ ಕಟ್ಟಡದ ಒಂದು ಪಾರ್ಶ್ವದಲ್ಲಿ ಪತ್ರಿಕೆಗಳನ್ನು ಹರಡಿಕೊಂಡು ಗ್ರಾಹಕರನ್ನು ನಿರೀಕ್ಷಿಸುತ್ತಾ ಕುಳಿತಿರುತ್ತಿದ್ದ ದೃಶ್ಯಆ ರಸ್ತೆಯಲ್ಲಿ ಸಾಗಿದವರಿಗೆ ಕಣ್ಣಿಗೆ ಕಟ್ಟಿದಂತಿದೆ. ಹೀಗೆ ಪತ್ರಿಕೆಗಳನ್ನು ಹರಡಿಕೊಂಡು ಕುಳಿತ ಸುಬ್ಬಣ್ಣ, ಪತ್ರಿಕೆ ಮಾರಾಟ ಮಾಡಿ ಹಣ ಏಣಿಸಿಕೊಂಡು ಹೋದವರಲ್ಲ. ಮೈಸೂರು ನಗರದಲ್ಲಿ ಪತ್ರಕರ್ತರ ಭವನ ಆರಂಭವಾಗುವುದಕ್ಕೂ ಮುನ್ನ ಸುಬ್ಬಣ್ಣನವರ ಪತ್ರಿಕಾ ಮಾರಾಟ ಮಳಿಗೆಯೇ ಸುದ್ದಿಗಳ ವಿನಿಮಯ, ಪತ್ರಕರ್ತರ ಚರ್ಚೆಯ ತಾಣವೂ ಆಗಿತ್ತು. ಹೀಗಾಗಿಯೇ ಮೈಸೂರಿನಲ್ಲಿ ಪತ್ರಿಕಾ ವೃತ್ತಿ ಆರಂಭಿಸಿ ಇಂದು ರಾಜ್ಯ, ರಾಷ್ಟ್ರಮಟ್ಟದಲ್ಲಿ ಹಿರಿಯ ಪತ್ರಕರ್ತರಾಗಿ ಬೆಳೆದಿರುವವರೆಲ್ಲ ಮೈಸೂರಿಗೆ ಬಂದರೆ ಇಂದಿಗೂ ಸುಬ್ಬಣ್ಣ ಅವರನ್ನು ಮಾತನಾಡಿಸದೆ ಹೋಗುತ್ತಿರಲಿಲ್ಲ.

ಶನಿವಾರ ಮುಂಜಾನೆ ನಿಧನರಾದ ಎಂ.ಆರ್.ಸುಬ್ರಹ್ಮಣ್ಯ (೮೭) ಅವರ ಪಾರ್ಥೀವ ಶರೀರವನ್ನು ಚೆಲುವಾಂಬ ಅಗ್ರಹಾರದ ಅವರ ಮನೆುಂಲ್ಲಿ ಮಧ್ಯಾಹ್ನ ೨ ಗಂಟೆುಂವರೆಗೆ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ನಂತರ ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ಅಂತ್ಯಕ್ರಿೆುಂ ನಡೆಸಲಾಯಿತು.
ಮೃತರು ಒಬ್ಬ ಪುತ್ರ, ಒಬ್ಬ ಪುತ್ರಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಸುಬ್ಬಣ್ಣನವರ ನಿಧನಕ್ಕೆ ಮೈಸೂರು ಜಿಲ್ಲಾ ಪತ್ರಕರ್ತರ ಸಂಘ, ಪತ್ರಿಕಾ ವಿತರಕರ ಸಂಘ, ಪತ್ರಿಕಾ ವಿತರಕರ ಕ್ಷೇವಾಭಿವೃದ್ಧಿ ಸಂಘ ಹಾಗೂ ಪತ್ರಿಕಾ ಏಜೆಂಟರ ಸಂಘಗಳು ತೀವ್ರ ಸಂತಾಪ ವ್ಯಕ್ತಪಡಿಸಿವೆ.

andolanait

Recent Posts

ಓದುಗರ ಪತ್ರ: ಅನುಮಾನ ಬಗೆಹರಿಸಿ

ರಾಜ್ಯದ ಬಹಳಷ್ಟು ಜನರು ಆನ್‌ಲೈನ್ -ಆಫ್ಲೈನ್ ಮೂಲಕ ನೋಂದಣಿ ಮಾಡಿಸುವ ಮೂಲಕ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದಾರೆ. ಆದರೆ ಅನೇಕರಲ್ಲಿ ಗೊಂದಲ…

6 hours ago

ಓದುಗರ ಪತ್ರ: ಕನ್ನಡ ಒಗ್ಗಟ್ಟು

ಕನ್ನಡ ಒಗ್ಗಟ್ಟು ಕಾವೇರಿಯ ಹೆಸರಲ್ಲಿ ಕಂಡಿದೆ ಕನ್ನಡ ನಾಯಕರ ಒಗ್ಗಟ್ಟು ಆಳುವವರ ಜೊತೆ ಕೈ ಜೋಡಿಸಿದರೆ ಬಿಡಿಸಲಿವೆ ಹಲವು ಬಿಕ್ಕಟ್ಟು…

6 hours ago

ಓದುಗರ ಪತ್ರ: ರಾಜಕಾರಣದ ಸರಕು!

ರಾಜಕಾರಣದ ಸರಕು! ‘ನೀರಿಗಾಗಿ ತಮಿಳುನಾಡು ಸುಪ್ರೀಂಗೆ ಮೊರೆ!’ ನೀರಿzಗ ಹರಿಸಿದೆ ಕರ್ನಾಟಕ ಯಥೇಚ್ಛ ನೀರನು ಸಮುದ್ರ ತುಳುಕುವಷ್ಟು ಇಲ್ಲದಾಗ ಹರಿಸುವುದೆಂತು…

6 hours ago

ಓದುಗರ ಪತ್ರ: ಅಕ್ಕಿ ದರ ಏರಿಕೆಗೆ ಕಡಿವಾಣ ಅಗತ್ಯ

ರಾಜ್ಯದಲ್ಲಿ ದಿನೇ ದಿನೇ ಏರುತ್ತಿರುವ ಅಕ್ಕಿ ಬೆಲೆ ಸಾಮಾನ್ಯ ಜನರ ನಿದ್ದೆಗೆಡಿಸಿದೆ. ತುಂಗಭದ್ರಾ ಜಲಾಶಯದ ಗೇಟ್ ರಿಪೇರಿಯಿಂದಾಗಿ ಸುಮಾರು ೭…

6 hours ago

ಸತ್ಯದ ಪ್ರತಿಪಾದಕರು ಮಾತ್ರ ಆದರ್ಶ ಆಗಬಲ್ಲರು

ಸಿ.ಹರಕುಮಾರ್, ಲೇಖಕ ಜನರ ನೆಮ್ಮದಿ ಕಸಿದುಕೊಂಡವರು, ನೆಮ್ಮದಿಯಿಂದಿರಲು ಸಾಧ್ಯವೆ? ಸತ್ಯದ ಪ್ರತಿಪಾದನೆ ಆ ಕ್ಷಣಕ್ಕೆ ಇಷ್ಟವಾಗದಿರಬಹುದು, ಶತ್ರುಗಳನ್ನು ಹುಟ್ಟುಹಾಕಬಹುದು, ಜೀರ್ಣಿಸಿಕೊಳ್ಳಲು…

6 hours ago

300 ಮಕ್ಕಳ ಶಿಕ್ಷಣಕ್ಕೆ ಶೇ.96ರಷ್ಟು ಸಂಪತ್ತನ್ನು ದಾನ ಮಾಡಿದ ಟೆಕ್ಕಿ

ಪಂಜುಗಂಗೊಳ್ಳಿ ಅವರ ವಾರದ ಅಂಕಣ  ಬಾಲಕಾರ್ಮಿಕರಿಗಾಗಿ ಏಕಲವ್ಯ ಟ್ರಸ್ಟ್ ಸ್ಥಾಪನೆ  ಛತ್ತೀಸ್‌ಘಡದ ಭಿಲಾಯ್‌ಯ ವಿವೇಕ್ ಶಂಗಾರಿಯ ತಾಯಿ ತೀರಿಕೊಂಡಾಗ ಅವನಿಗೆ…

6 hours ago