ಮೈಸೂರು

ಅವಸಾನದ ಅಂಚಿಗೆ ತಲುಪಿದ ನಂಜರಾಜ ಬಹದ್ದೂರ್ ಛತ್ರ

40ಸಾವಿರ ಬಾಡಿಗೆ ನಿಗದಿ ಮಾಡಿದ್ದರೂ ಮದುವೆ ಮಾಡಲು ಯಾರೂ ಮುಂದೆ ಬರುತ್ತಿಲ್ಲ

ಮೈಸೂರು: ದೂರದ ಊರುಗಳಿಂದ ಮೈಸೂರಿಗೆ ಬಂದವರ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸುವ ಜತೆಗೆ ಮದುವೆ ಸಮಾರಂಭಗಳಿಗೆ ಒದಗಿಸುವ ಉದ್ದೇಶದಿಂದ ಮಹಾರಾಜರು ಕಟ್ಟಿಸಿದ್ದ ನಂಜರಾಜ ಬಹದ್ದೂರ್ ಛತ್ರ ನಿರ್ವಹಣೆ ಕೊರತೆಯಿಂದ ಅವಸಾನದ ಅಂಚಿಗೆ ಬಂದು ತಲುಪಿದೆ.

ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ಆಳ್ವಿಕೆಯ ಕಾಲದಲ್ಲಿ ನಿರ್ಮಾಣವಾದ ಕಟ್ಟಡ ಇದಾಗಿದ್ದು, ಇದು ಕೂಡ ಮೈಸೂರಿನ ಪಾರಂಪರಿಕತೆ ಇತಿಹಾಸ ಗರಿಮೆ ಸಾರುವ ಕಟ್ಟಡ. ಪ್ರಸ್ತುತ ಛತ್ರ, ಅವಸಾನದ ಅಂಚಿಗೆ ಬಂದು ತಲುಪಿದ್ದರೂ ಸರ್ಕಾರಕ್ಕೆ ಆದಾಯ ತಂದು ಕೊಡುತ್ತಿದೆ. 

ಆಗಿನ ಕಾಲಕ್ಕೆ ಮೈಸೂರಿಗೆ ದೂರದ ಪ್ರದೇಶಗಳಿಂದ ಆಗಮಿಸುತ್ತಿದ್ದವರ ವಾಸ್ತವ್ಯಕ್ಕೆ ಮೈಸೂರಿನಲ್ಲಿ ಸೂಕ್ತ ವ್ಯವಸ್ಥೆ ಇರಲಿಲ್ಲ. ಇದನ್ನು ಗಮನಿಸಿ ಸುಮಾರು 10 ಎಕರೆ ಜಾಗದಲ್ಲಿ ಈ ಛತ್ರದ ಕಟ್ಟಡವನ್ನು ನಿರ್ಮಿಸಲಾಯಿತು. ಇದರ ನಿರ್ವಹಣೆಯನ್ನು ಆಗಿನ ಮುನಿಸಿಪಲ್ ಆಡಳಿತಕ್ಕೆ ವಹಿಸಲಾಗಿತ್ತು. ಬಳಿಕ ಜಾಗದ ಬಳಕೆ ಇಲ್ಲದ ಕಾರಣ ಅವುಗಳನ್ನು ಭೋಗ್ಯಕ್ಕೆ ನೀಡಲಾಗಿದೆ. ಛತ್ರದ ಸುತ್ತಮುತ್ತ ಇರುವ ಖಾಸಗಿ ಹೋಟೆಲ್‌ಗಳು, ಕೆಲವು ಸರ್ಕಾರಿ ಕಚೇರಿ, ಆಟೋ ಗ್ಯಾರೇಜ್, ಎರಡು ಪೆಟ್ರೋಲ್ ಬಂಕ್‌ಗಳು, ವೇಬ್ರಿಡ್ಜ್, ನೌಕರರ ಸಂಘದ ಕಚೇರಿಗಳೆಲ್ಲವೂ ಛತ್ರಕ್ಕೆ ಸೇರಿದ ಜಾಗ ಎನ್ನಲಾಗಿದೆ.

ನಂಜರಾಜ ಬಹದ್ದೂರ್ ಛತ್ರಕ್ಕೆ ಸೇರಿದ 10 ಎಕರೆ ಪ್ರದೇಶದಲ್ಲಿ ಕಿಂಗ್ಸ್ ಕೋರ್ಟ್ ಹೋಟೆಲ್, ಪೆಟ್ರೋಲ್ ಬಂಕ್, ವಾರ್ತಾ ಭವನ, ಪಶು ಆಸ್ಪತ್ರೆ, ಪ್ರವಾಸೋದ್ಯಮ ಇಲಾಖೆಯ ಕಚೇರಿ ಇನ್ನಿತರ ಕಟ್ಟಡಗಳನ್ನು ಕಟ್ಟಲಾಗಿದೆ. ಒಂದು ಎಕರೆ ಜಾಗವನ್ನು ಮಹಾರಾಣಿ ವಿಜ್ಞಾನ ಕಾಲೇಜು ಕಟ್ಟಡಕ್ಕಾಗಿ ನೀಡಲಾಗಿದೆ. ಇದನ್ನೆಲ್ಲಾ ಹೊರತು ಪಡಿಸಿ ಇನ್ನೂ 5-6 ಎಕರೆ ಜಾಗ ಪಾಳು ಬಿದ್ದಿದ್ದು, ಇದನ್ನು ಯಾವುದೇ ಚಟುವಟಿಕೆಗೂ ಬಳಸಿಕೊಂಡಿಲ್ಲ. ಇದು ನಂಜರಾಜ ಬಹದ್ದೂರ್ ಛತ್ರದ ಬಗೆಗೆ ಮುಜರಾಯಿ ಇಲಾಖೆ ತೋರಿರುವ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿ.

ಮದುವೆಗಳು ನಡೆಯುತ್ತಿಲ್ಲ: 130 ವರ್ಷಗಳ ಇತಿಹಾಸ ಹೊಂದಿರುವ ಛತ್ರದಲ್ಲಿ ಇತ್ತೀಚೆಗೆ ಯಾವುದೇ ಮದುವೆ ಸಮಾರಂಭಗಳು ನಡೆಯುತ್ತಿಲ್ಲ. ಒಂದು ಕಾಲದಲ್ಲಿ ಮೈಸೂರಿನ ಅತ್ಯಂತ ಬೇಡಿಕೆಯ ಕಲ್ಯಾಣ ಮಂಟಪಗಳ ಸಾಲಿನಲ್ಲಿದ್ದ, ನಂಜರಾಜ ಬಹದ್ದೂರ್ ಛತ್ರವು ಬರಬರುತ್ತಾ ತನ್ನ ವರ್ಚಸ್ಸು ಕಳೆದುಕೊಂಡಿತು. ಇದರಿಂದ ಮದುವೆ ಸಮಾರಂಭ ನಡೆಯುವುದು ಕಡಿಮೆಯಾಯಿತು. ಜೊತೆಗೆ ಕೆಲ ವರ್ಷಗಳಿಂದ ಮದುವೆಗೆ 40 ಸಾವಿರ ರೂ. ನಿಗದಿ ಪಡಿಸಲಾಗಿದ್ದು, ಬಡ ಮತ್ತು ಮಧ್ಯಮ ವರ್ಗದ ಜನರು ಇಷ್ಟು ಹಣ ಕೊಟ್ಟು ಮದುವೆ ಮಾಡಲು ಸಾಧ್ಯವಾಗದು ಎನ್ನಲಾಗುತ್ತಿದೆ.

ವರ್ಷಕ್ಕೆ ಲಕ್ಷಾಂತರ ರೂ. ವಹಿವಾಟು: ಛತ್ರದ ನಿರ್ವಹಣೆ ಕೊರತೆಯಿಂದ ಮದುವೆ ಕಡಿಮೆಯಾಗಿರಬಹುದು. ಆದರೆ, ಕೃಷಿ ಉತ್ಪನ್ನಗಳ ಮಾರಾಟ, ಆಹಾರ ಉತ್ಪನ್ನ, ಕೃಷಿ, ಕರಕುಶಲ ಮತ್ತು ಸೀರೆ, ಆಭರಣ, ಪುಸ್ತಕಗಳ ಮೇಳಗಳು ವರ್ಷ ಪೂರ್ತಿ ನಡೆಯುವ ಕಾರಣ ಛತ್ರದಿಂದ ವಾರ್ಷಿಕವಾಗಿ ಲಕ್ಷಾಂತರ ರೂ. ಆದಾಯ ಸರ್ಕಾರದ ಬೊಕ್ಕಸ ಸೇರುತ್ತಿದೆ. ಹೀಗಿದ್ದರೂ ಛತ್ರದ ಪಾರಂಪರಿಕತೆಯನ್ನು ಉಳಿಸಿಕೊಂಡು ಹೆಚ್ಚಿನ ಅಭಿವೃದ್ಧಿ ಮಾಡುವ ಮುತುವರ್ಜಿ ತೋರುತ್ತಿಲ್ಲ ಎಂದು ನಂಜರಾಜ ಬಹದ್ದೂರ್ ಛತ್ರ ವ್ಯವಸ್ಥಾಪನಾ ಸಮಿತಿಯ ಸದಸ್ಯರೊಬ್ಬರು ದೂರುತ್ತಾರೆ.

ಮಹಾರಾಜರು ಕಟ್ಟಿಸಿದ್ದ ನಂಜರಾಜ ಬಹದ್ದೂರ್ ಛತ್ರದಿಂದ ಬೊಕ್ಕಸಕ್ಕೆ ಆದಾಯವೇನು ಕಡಿಮೆಯಾಗಿಲ್ಲ. ಛತ್ರದ ಪಾರಂಪರಿಕತೆಯನ್ನು ಉಳಿಸಿಕೊಂಡು ಹೆಚ್ಚಿನ ಅಭಿವೃದ್ಧಿ ಮಾಡುವ ಮುತುವರ್ಜಿಯನ್ನು ಸರ್ಕಾರ ತೋರುತ್ತಿಲ್ಲ.

-ಪುಷ್ಪವಲ್ಲಿ, ಮಾಜಿ ಅಧ್ಯಕ್ಷೆ, ವ್ಯವಸ್ಥಾಪನಾ ಸಮಿತಿ

andolana

Recent Posts

ಓದುಗರ ಪತ್ರ: ಅನುಮಾನ ಬಗೆಹರಿಸಿ

ರಾಜ್ಯದ ಬಹಳಷ್ಟು ಜನರು ಆನ್‌ಲೈನ್ -ಆಫ್ಲೈನ್ ಮೂಲಕ ನೋಂದಣಿ ಮಾಡಿಸುವ ಮೂಲಕ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದಾರೆ. ಆದರೆ ಅನೇಕರಲ್ಲಿ ಗೊಂದಲ…

2 hours ago

ಓದುಗರ ಪತ್ರ: ಕನ್ನಡ ಒಗ್ಗಟ್ಟು

ಕನ್ನಡ ಒಗ್ಗಟ್ಟು ಕಾವೇರಿಯ ಹೆಸರಲ್ಲಿ ಕಂಡಿದೆ ಕನ್ನಡ ನಾಯಕರ ಒಗ್ಗಟ್ಟು ಆಳುವವರ ಜೊತೆ ಕೈ ಜೋಡಿಸಿದರೆ ಬಿಡಿಸಲಿವೆ ಹಲವು ಬಿಕ್ಕಟ್ಟು…

2 hours ago

ಓದುಗರ ಪತ್ರ: ರಾಜಕಾರಣದ ಸರಕು!

ರಾಜಕಾರಣದ ಸರಕು! ‘ನೀರಿಗಾಗಿ ತಮಿಳುನಾಡು ಸುಪ್ರೀಂಗೆ ಮೊರೆ!’ ನೀರಿzಗ ಹರಿಸಿದೆ ಕರ್ನಾಟಕ ಯಥೇಚ್ಛ ನೀರನು ಸಮುದ್ರ ತುಳುಕುವಷ್ಟು ಇಲ್ಲದಾಗ ಹರಿಸುವುದೆಂತು…

2 hours ago

ಓದುಗರ ಪತ್ರ: ಅಕ್ಕಿ ದರ ಏರಿಕೆಗೆ ಕಡಿವಾಣ ಅಗತ್ಯ

ರಾಜ್ಯದಲ್ಲಿ ದಿನೇ ದಿನೇ ಏರುತ್ತಿರುವ ಅಕ್ಕಿ ಬೆಲೆ ಸಾಮಾನ್ಯ ಜನರ ನಿದ್ದೆಗೆಡಿಸಿದೆ. ತುಂಗಭದ್ರಾ ಜಲಾಶಯದ ಗೇಟ್ ರಿಪೇರಿಯಿಂದಾಗಿ ಸುಮಾರು ೭…

2 hours ago

ಸತ್ಯದ ಪ್ರತಿಪಾದಕರು ಮಾತ್ರ ಆದರ್ಶ ಆಗಬಲ್ಲರು

ಸಿ.ಹರಕುಮಾರ್, ಲೇಖಕ ಜನರ ನೆಮ್ಮದಿ ಕಸಿದುಕೊಂಡವರು, ನೆಮ್ಮದಿಯಿಂದಿರಲು ಸಾಧ್ಯವೆ? ಸತ್ಯದ ಪ್ರತಿಪಾದನೆ ಆ ಕ್ಷಣಕ್ಕೆ ಇಷ್ಟವಾಗದಿರಬಹುದು, ಶತ್ರುಗಳನ್ನು ಹುಟ್ಟುಹಾಕಬಹುದು, ಜೀರ್ಣಿಸಿಕೊಳ್ಳಲು…

2 hours ago

300 ಮಕ್ಕಳ ಶಿಕ್ಷಣಕ್ಕೆ ಶೇ.96ರಷ್ಟು ಸಂಪತ್ತನ್ನು ದಾನ ಮಾಡಿದ ಟೆಕ್ಕಿ

ಪಂಜುಗಂಗೊಳ್ಳಿ ಅವರ ವಾರದ ಅಂಕಣ  ಬಾಲಕಾರ್ಮಿಕರಿಗಾಗಿ ಏಕಲವ್ಯ ಟ್ರಸ್ಟ್ ಸ್ಥಾಪನೆ  ಛತ್ತೀಸ್‌ಘಡದ ಭಿಲಾಯ್‌ಯ ವಿವೇಕ್ ಶಂಗಾರಿಯ ತಾಯಿ ತೀರಿಕೊಂಡಾಗ ಅವನಿಗೆ…

3 hours ago