ganjeefa raghupati bhat
ಮೈಸೂರು : ಇಂದಿನಿಂದ ಜು. 26 ರವರೆಗೆ ಅರಮನೆ ಚಿತ್ರಕಲಾವಿದ ಎಸ್.ಆರ್.ಅಯ್ಯಂಗಾರ್ ರಚಿಸಿರುವ ಚಿತ್ರಕಲೆಗಳನ್ನು ಒಡೆಯರ್ ಸೆಂಟರ್ ಫಾರ್ ಆರ್ಕಿಟೆಕ್ಚರ್ನಲ್ಲಿ ಪ್ರದರ್ಶನಕ್ಕಿಡಲಾಗಿದೆ.
ಖ್ಯಾತ ಗಂಜೀಫಾ ಚಿತ್ರಕಲಾವಿದ ಗಂಜೀಫಾ ರಘುಪತಿ ಭಟ್ ಚಿತ್ರಕಲೆ ವೀಕ್ಷಿಸಿ ಬಳಿಕ ಚಾಲನೆ ನೀಡಿದರು. ಪ್ರದರ್ಶನದಲ್ಲಿ ಮೈಸೂರು ಅರಮನೆ ಆವರಣ, ನೈಸರ್ಗಿಕ ಚಿತ್ರಣ, ಶಿಲ್ಪಕಲೆಗಳಂತ ವಿಶಿಷ್ಟ ರೀತಿಯ ಹತ್ತು-ಹಲವು ಪ್ರಾಚೀನ ಚಿತ್ರಕಲೆಗಳನ್ನು ವೀಕ್ಷಿಸಿದರು.
ಬಳಿಕ ಮಾತನಾಡಿದ ಅವರು, ಕರ್ನಾಟಕದ ಚಿತ್ರಕಲೆ ಅತ್ಯಂತ ಹಿರಿಮೆ ಹಾಗೂ ವೈಶಿಷ್ಠತೆಯನ್ನು ಒಳಗೊಂಡಿದೆ. ಶ್ರೀಮಂತವಾದ ವಿಜಯನಗರ ಸಾಮ್ರಾಜ್ಯ ಪತನವಾದ ನಂತರದಲ್ಲಿ ಮೈಸೂರು ಸಂಸ್ಥಾನಕ್ಕೆ ಭೇಟಿ ನೀಡಿದ ಅನೇಕ ಕಲಾವಿದರು, ಅಂದಿನ ಕಾಲದಲ್ಲಿ ಚಿತ್ರ ಮಾಂತ್ರಿಕ ರವಿವರ್ಮನ ಪ್ರಭಾವಕ್ಕೊಳಗಾಗಿ ಚಿತ್ರಿಸಿರುವ ಚಿತ್ರಕಲೆಗಳು ಇಂದಿಗೂ ಹೆಚ್ಚು ಆಕರ್ಷಣಿಯವಾಗಿದ್ದು, ಎಲ್ಲರ ಗಮನ ಸೆಳೆಯುವಂತಿವೆ. ಅಂತಹ ಅತ್ಯಧ್ಬುತವಾದ ಚಿತ್ರಗಳಲ್ಲಿ ಮೈಸೂರು ಅರಮನೆಯ ಚಿತ್ರಕಲಾವಿದರಾಗಿದ್ದ ಎಸ್.ಆರ್.ಅಯ್ಯಂಗಾರ್ ಅವರು ರಚಿಸಿರುವ ಚಿತ್ರಗಳು ಬಹುಮುಖ್ಯವಾಗಿವೆ. ಅವರ ಚಿತ್ರಕಲೆಗಳನ್ನು ವೀಕ್ಷಿಸುತಿದ್ದರೆ, ಅವುಗಳಲ್ಲಿ ಸತ್ಯ-ಸತ್ವವೆಂಬುದನ್ನು ಒಳಗೊಂಡಿದೆ ಎಂದು ಅಭಿಪ್ರಾಯಿಸಿದರು.
ಮೈಸೂರಿನಲ್ಲಿ ಚಿತ್ರಕಲೆ ಉಳಿವು, ಮಹತ್ವ ದೊರೆತಿರುವುದಕ್ಕೆ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು ಚಿತ್ರಕಲೆಗೆ ಕೊಟ್ಟಂತಹ ಕೊಡುಗೆ ಮತ್ತು ಪ್ರಾಮುಖ್ಯತೆಯೇ ಕಾರಣ. ಇತ್ತೀಚೆಗೆ ಕೃತಕ ಬುದ್ದಿಮತ್ತೆ(ಎಐ) ತಂತ್ರಜ್ಞಾನ ಯುಗದಲ್ಲಿ ಚಿತ್ರಕಲೆ ಮೇಲಿನ ಆಸಕ್ತಿ ಕಡಿಮೆಯಾಗುತ್ತಿದ್ದು, ಎಲ್ಲವು ಕೃತಕವಾಗಿ ಸೃಷ್ಟಿಗೊಳ್ಳುತ್ತಿದೆ ಎಂದು ಆತಂಕಿಸಿದರು.
ಪ್ರಸ್ತುತದಲ್ಲಿ ಚಿತ್ರಕಲೆಯನ್ನು ಪ್ರೋತ್ಸಾಹಿಸುವ ಕೆಲಸವಾಗಬೇಕು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಚಿತ್ರಕಲೆಯ ಪ್ರೋತ್ಸಾಹಕ್ಕೆ ಪೂರಕವಾದ, ತರಬೇತಿ, ಕಾರ್ಯಚಟುವಟಿಕೆಗಳನ್ನು ರೂಪಿಸಿ ಹೆಚ್ಚಿನ ಒತ್ತು ನೀಡಬೇಕು. ಮುಖ್ಯವಾಗಿ ಸ್ಥಳೀಯತೆಯ ಉಳಿವಿಗಾಗಿ ದೇಶೀಯ ಚಿತ್ರಕಲೆಯನ್ನು ಉಳಿಸುವ ಕೆಲಸವಾಗಬೇಕಿದೆ. ಇದಲ್ಲದೇ ಚಿತ್ರಕಲೆ ಪ್ರೋತ್ಸಾಹಕ್ಕಾಗಿ ಇದೇ ಸ್ಥಳದಲ್ಲಿ ಶಾಶ್ವತವಾದ ಚಿತ್ರಕಲಾ ಗ್ಯಾಲರಿಯನ್ನು ಸ್ಥಾಪಿಸಬೇಕು ಎಂದು ಬೇಡಿಕೆಯನ್ನು ವ್ಯಕ್ತಪಡಿಸಿದರು.
ಅರಮನೆ ಕಲಾವಿದರಾದ ದಿ.ಎಸ್.ಆರ್.ಅಯ್ಯಂಗಾರ್ ಮೊಮ್ಮಗ ಅವಿನಾಶ್ ಪಾಠಕ್, ಆರ್ಕಿಟೆಕ್ಚರ್ ಬಿ.ಎಲ್.ಮಂಜುನಾಥ್, ಒಡೆಯರ್ ಸೆಂಟರ್ ಫಾರ್ ಆರ್ಕಿಟೆಕ್ಚರ್ನ ಸಹಾಯಕ ಪ್ರಾಧ್ಯಾಪಕ ಮದ್ವೇಶ್ ಪಾಂಡುರಂಗಿ ಇತರರಿದ್ದರು
ಇಂದಿನ ಧಾವಂತದ ಬದುಕಿನಲ್ಲಿ ನಾವೆಲ್ಲರೂ ಆಸೆಗಳ ಬೆನ್ನೇರಿ ಓಡುತ್ತಿದ್ದು, ನಮ್ಮ ಉಸಿರಿಗೆ ಆಧಾರವಾಗಿರುವ ಪ್ರಕೃತಿಯನ್ನು ಮರೆಯುತ್ತಿದ್ದೇವೆ. ಗಾಳಿ, ನೀರು, ಬೆಳಕಿಲ್ಲದೆ…
ಆರ್ಬಿಐ ಮುಂದಿನ ಹಣಕಾಸು ವರ್ಷದಿಂದ (೨೦೨೭-೨೮) ಪ್ಲಾಸ್ಟಿಕ್ (ಪಾಲಿಮರ್) ನೋಟುಗಳನ್ನು ಚಲಾವಣೆಗೆ ತರಲು ನಿರ್ಧರಿಸಿರುವುದು ಸ್ವಾಗತಾರ್ಹ ಮತ್ತು ದೂರದೃಷ್ಟಿಯ ಹೆಜ್ಜೆಯಾಗಿದೆ.…
ರಾಜ್ಯ ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ನೀಡದಿರುವುದು ಮಹಿಳೆಯರಿಗೆ ಮಾಡಿದ ಘೋರ ಅನ್ಯಾಯ. ಅಧಿಕಾರಕ್ಕೆ ಬರುವ ಮುನ್ನ ಮಹಿಳೆಯರ ಹೆಸರಿನಲ್ಲಿ…
ವೈಡ್ ಆಂಗಲ್: ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ ಇಂದು ಬಿಡುಗಡೆಯಾಗುತ್ತಿರುವ ‘ ಬಾಸ್’ಎಂದೋ ತೆರೆಗೆ ಬರಬೇಕಾಗಿತ್ತು. ಆದರೆ ಚಿತ್ರದ ಹೆಸರು,…
ನವೀನ್ ಡಿಸೋಜ ಕಳೆದ ಕೆಲ ದಿನಗಳಲ್ಲಿ ಉತ್ತಮ ಮಳೆ; ವಾಡಿಕೆ ಮಳೆ ಕೊರತೆ ವಿರಾಜಪೇಟೆ ತಾಲ್ಲೂಕಿನಲ್ಲಿ ಅತಿ ಹೆಚ್ಚು ಶೇ.೪೩…
ಮಂಜು ಕೋಟೆ ಎಚ್.ಡಿ.ಕೋಟೆ: ತಾಲ್ಲೂಕಿನ ಕಬಿನಿ ಜಲಾಶಯಕ್ಕೆ ಬರುತ್ತಿದ್ದ ಒಳಹರಿವ ಇಳಿಮುಖವಾಗಿರುವ ಹಿನ್ನೆಲೆಯಲ್ಲಿ ಹೊರಹರಿವು ಸ್ಥಗಿತಗೊಳಿಸಿ ಜಲಾಶಯದ ಕ್ರಸ್ಟ್ಗೇಟ್ಗಳನ್ನು ಬಂದ್…