ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ (ಕೆಎಸ್ಓಯು) 2023-24ನೇ ಸಾಲಿನ (ಜನವರಿ ಆವೃತ್ತಿ) ಪತ್ರಿಕೋದ್ಯಮ ವಿಷಯದ ಪಿ.ಹೆಚ್.ಡಿ ಪರೀಕ್ಷೆಯ CET Series-D ಪ್ರಶ್ನೆಪತ್ರಿಕೆಗೆ ಸಂಬಂಧಿಸಿದಂತೆ ತಪ್ಪು ಕೀ-ಉತ್ತರಗಳನ್ನು ಪ್ರಕಟಿಸಿ ಎಂದು ಹರೀಶ್ ಕುಮಾರ್ ಎಂಬುವವರು ದೂರು ನೀಡಿದ್ದಾರೆ.
ಪಿಎಚ್ಡಿ ಪತ್ರಿಕೋದ್ಯಮ ವಿಷಯಕ್ಕೆ ಸಂಬಂಧಿಸಿದಂತೆ ಎನ್. ಹರೀಶ್ ಕುಮಾರ್ ಎಂಬುವವರು ಮುಕ್ತ ವಿವಿಗೆ ಪತ್ರ ಬರೆಯುವ ಮೂಲಕ ಪರೀಕ್ಷಾ ಲೋಪವನ್ನು ಬಿಚ್ಚಿಟ್ಟಿದ್ದಾರೆ.
ಇದೇ ಮಾ.17 ರಂದು ಪತ್ರಿಕೋದ್ಯಮ ವಿಷಯದಲ್ಲಿ ಪಿ.ಹೆಚ್.ಡಿ ಪ್ರವೇಶ ಪರೀಕ್ಷೆ ನಡೆಸಲಾಗಿದ್ದು, ಸದರಿ ಪರೀಕ್ಷೆಯ ಕೀ ಉತ್ತರಗಳನ್ನು ಕೆಎಸ್ಓಯು ಅಂತರ್ಜಾಲದಲ್ಲಿ ಪ್ರಕಟಿಸಿದೆ. ಆದರೆ ಪ್ರಕಟಿಸಿರುವ CET Series-D (ಪತ್ರಿಕೋದ್ಯಮ ವಿಷಯ) ಕೀ-ಉತ್ತರಗಳು ತಪ್ಪಾಗಿರುವುದು ಹರೀಶ್ ಗಮನಕ್ಕೆ ಬಂದಿದೆ.
ಕೆ.ಎಸ್.ಒ.ಯು ಅಂತರ್ಜಾಲದಲ್ಲಿ ತಪ್ಪಾಗಿ ಪ್ರಕಟಿಸಿರುವ ಕೀ-ಉತ್ತರಗಳನ್ನು ಪ್ರಶ್ನೆ ಸಂಖ್ಯೆ ಸಮೇತ ಪಟ್ಟಿ ಮಾಡಿ ವಿವರ ಸಹಿತ ವಿಶ್ವವಿದ್ಯಾಲಯದ ಗಮನಕ್ಕೆ ತಂದಿದ್ದಾರೆ.
ಕರ್ನಾಟಕ ರಾಜ್ಯ ಮುಕ್ತ ವಿವಿಯಂತ ಉನ್ನತ ಸಂಸ್ಥೆಯೇ ಈ ರೀತಿ ಪ್ರಶ್ನೆಗಳಿಗೆ ತಪ್ಪು ಕೀ-ಉತ್ತರಗಳನ್ನು ಪ್ರಕಟ ಮಾಡಿರುವುದು ದಿಗ್ಧಮೆ ತಂದಿದೆ ಎಂದು ದೂರುದಾರ ಹರೀಶ್ ಆತಂಕ ವ್ಯಕ್ತಪಡಿಸಿದ್ದಾರೆ.
ಮನುಷ್ಯರಿಗೆ ಅಭಿವೃದ್ಧಿ, ಆನೆಗಳಿಗೆ ಅತಿಕ್ರಮಣ ದೇವನೂರು, ವನ್ಯಜೀವಿ ಛಾಯಾಗ್ರಾಹಕ ಮೇ ೧೮ರಂದು ಕರ್ನಾಟಕದ ದುಬಾರೆ ಶಿಬಿರದಲ್ಲಿ ನಡೆದ ಆನೆಗಳ ಕಾಳಗ;…
ಕೆ.ವಿ.ಸ್ಲ್ಯಾನ್ಲಿ ಇದು ಎಂಬತ್ತರ ದಶಕದ ಕಥೆಯಲ್ಲದ ಜೀವನಗಾಥೆ. ದ್ವೀಪ ರಾಷ್ಟ್ರಸಿಂಹಳ ಮೂಲದ ಕುಟುಂಬವೊಂದು ಸಾಂಸ್ಕೃತಿಕ ಕರ್ನಾಟಕದಲ್ಲಿ ವಿಲೀನವಾಗಿ ಜೀವನ ನಡೆಸುತ್ತಿತ್ತು.…
ದೆಹಲಿ : ಮದುವೆಯಾದ ಯುವತಿಯರು ಸಾವನ್ನಪ್ಪುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ಬಾಲಿವುಡ್ ನಟಿ ಹಾಗೂ ಸಂಸದೆ ಕಂಗನಾ ರಣಾವತ್ ಯುವತಿಯರಿಗೆ…
ಹೊಸದಿಲ್ಲಿ : ಆಗಸ್ಟ್ ೩೧ರೊಳಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ವ್ಯಾಪ್ತಿಯ ಐದು ನಗರಪಾಲಿಕೆಗಳಿಗೆ ಚುನಾವಣೆ ನಡೆಸುವಂತೆ ಸರ್ವೋಚ್ಚ ನ್ಯಾಯಾಲಯ…
ಸಫಾರಿ ಕ್ಯಾಂಪರ್ ಗಳಿಗೆ ಕಬ್ಬಿಣದ ಸರಳು, ಒಡೆಯದ ಗಾಜು ಅಳವಡಿಸಲು ಖಂಡ್ರೆ ಸೂಚನೆ ಬೆಂಗಳೂರು : ರಾಜ್ಯದ ಐದು ಹುಲಿ…