ಹಾಡು ಪಾಡು

ಹಾಡುಪಾಡು | ಜೈಫುಲ್ ಮೇಷ್ಟ್ರ ಕಷ್ಟಕ್ಕೆ ಮಿಡಿಯುತ್ತಿರುವ ಶಿಷ್ಯ ಹೃದಯಗಳು

ಗುರುವಿಗೆ ಕೃತಜ್ಞತೆ ಸಲ್ಲಿಸುವ ಶಿಷ್ಯರ ಈ ಕಾರ್ಯ ಯುವ ಪೀಳಿಗೆಗೆ ಮಾದರಿಯಾಗಿದೆ.

ಚಂದ್ರಶೇಖರ್ ಮೂರ್ತಿ ಕೆ.ಎಸ್.

ಹಾರ್ಮೋನಿಯಂ ವಾದಕ, ಗೀತ ರಚನೆಕಾರ, ಗಾಯಕ ಜಾಯ್ ಫುಲ್ ಜಯಶೇಖರ್ ಅವರು. ಚಾಮರಾಜನಗರ ಜಿಲ್ಲೆ ತಾಳವಾಡಿ ತಾಲ್ಲೂಕು ತಿಗಣಾರೆ ಗ್ರಾಮದವರು. ಜಾಯ್ ಫುಲ್ ಜಯಶೇಖರ್ ಅವರು ಚಾಮರಾಜನಗರ, ಮಂಡ್ಯ, ಮೈಸೂರು ಭಾಗದ ಪ್ರತಿ ಹಳ್ಳಿಗಳಲ್ಲೂ ಜೈಫುಲ್ ಮೇಷ್ಟ್ರು ಅಂತಾನೇ ಸುಪ್ರಸಿದ್ಧರು.

ಗ್ರಾಮೀಣ ನಾಟಕ, ನಿರ್ದೇಶನ, ಹಾರ್ಮೋನಿಯಂ ವಾದನ, ಸುಗಮ ಸಂಗೀತ, ಕಥಾ ವಾಚನವನ್ನೇ ವೃತ್ತಿಯಾಗಿಸಿಕೊಂಡು ೬೦ಕ್ಕೂ ಹೆಚ್ಚು ನಾಟಕಗಳಲ್ಲಿ ಅನಕ್ಷರಸ್ಥ ಗ್ರಾಮೀಣ ಕಲಾವಿದರನ್ನು ಒಳಗೊಂಡಂತೆ ನೂರಾರು ಕಲಾವಿದರಿಗೆ ಅವಕಾಶ ಕೊಟ್ಟು ಬದುಕಿಗೆ ದಾರಿದೀಪವಾಗಿ ಸಾವಿರಾರು ಶಿಷ್ಯ ವರ್ಗ ಹಾಗೂ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.

ಕಲಾ ಕ್ಷೇತ್ರದಲ್ಲಿ ಗಣನೀಯ ಸೇವೆಗೈದು ಸಾಧನೆಯ ಶಿಖರ ಏರಿರುವ ೮೭ ವರ್ಷದ ಜಾಯ್ ಫುಲ್ ಜಯಶೇಖರ್ ಅವರು ಇತ್ತೀಚೆಗೆ ವಯೋಸಹಜ ಕಾಯಿಲೆಗೆ ಒಳಗಾಗಿದ್ದಾರೆ. ಸಾಮಾನ್ಯ ಜ್ವರದಿಂದ ಆರಂಭವಾಗಿ ಇಂದು ಮೈಲ್ಡ್ ಬ್ರೈನ್ ಸ್ಟ್ರೋಕ್, ಕಿಡ್ನಿ ಸಮಸ್ಯೆ ಅಂತಹ ಗಂಭೀರ ಸ್ವರೂಪದ ಆರೋಗ್ಯ ಸಮಸ್ಯೆಗೆ ತುತ್ತಾಗಿದ್ದಾರೆ. ಇದರಿಂದ ಬದುಕು ಒಂದು ರೀತಿಯಲ್ಲಿ ಅನಿಶ್ಚಿತತೆಯೆಡೆಗೆ ಹೊರಳಿದಂತಾಗಿದೆ. ಮೊದಲೇ ಆರ್ಥಿಕವಾಗಿ ಸಬಲರಾಗಿರದ ಮಧ್ಯಮ ವರ್ಗದ ಕುಟುಂಬವಾದ್ದರಿಂದ ಆಸ್ಪತ್ರೆ ಚಿಕಿತ್ಸೆಯ ದುಬಾರಿ ವೆಚ್ಚ ಕುಟುಂಬಕ್ಕೆ ಕೈ ಎಟುಕಿದರೂ ತಾಕದ ಹಾಗೇ ಇದೆ. ಜಾಯ್ ಫುಲ್ ಜಯಶೇಖರ್ ಅವರಿಗೆ ಪತ್ನಿ, ಮೂವರು ಹೆಣ್ಣು ಮಕ್ಕಳು, ಅಳಿಯಂದಿರು ಚೆನ್ನಾಗಿ ನೋಡಿಕೊಂಡು ಸಹ ಆರೋಗ್ಯ ಕೈ ಕೊಟ್ಟಾಗ, ಆರ್ಥಿಕ ಪರಿಸ್ಥಿತಿ ಹದಗೆಟ್ಟಾಗ ಕೈ ಹಿಡಿಯುವ ಜೀವಗಳ ಎದುರು ನೋಡುವುದು ಸಾಮಾನ್ಯ.

ಆದರೆ ಇಂತಹ ಸಂಧರ್ಭದಲ್ಲಿ ಗುರುಗಳ ಆರೋಗ್ಯ ಹದಗೆಟ್ಟ ಸುದ್ದಿ ತಿಳಿದು ಜ್ಞಾನಧಾರೆ ಎರೆದ, ಬದುಕಿನ ಪಾಠ ಹೇಳಿಕೊಟ್ಟ ಗುರುಗಳ ಕುಟುಂಬದ ಆರ್ಥಿಕ ಪರಿಸ್ಥಿತಿ ಮನಗಂಡು ಶಿಷ್ಯವರ್ಗ ಸ್ವಯಂಪ್ರೇರಿತರಾಗಿ ಹೃದಯ ವೈಶಾಲ್ಯತೆಯ ಫಲವಾಗಿ ಲಕ್ಷಾಂತರ ರೂಪಾಯಿ ಅವರ ಚಿಕಿತ್ಸಾ ವೆಚ್ಚಕ್ಕೆ ಸೇರುವ ಹಾಗೆ ಮಾಡಿದ್ದಾರೆ. ಜಾಯ್ ಫುಲ್ ಜಯಶೇಖರ್ ಅಭಿಮಾನಿ ಬಳಗ ಎಂಬ ವಾಟ್ಸಪ್ ಗ್ರೂಪ್ ಮೂಲಕ ಶಿಷ್ಯರು, ಅಭಿಮಾನಿಗಳು ಗುರುವಿನ ತೀರಿಸಲಾಗದ ಋಣವನ್ನು ಕೊಂಚ ಮಟ್ಟಿಗೆ ತೀರಿಸುವ ನಿಟ್ಟಿನಲ್ಲಿ ಎಲ್ಲರೂ ಒಟ್ಟಾಗಿ ಆರ್ಥಿಕ ಸಹಾಯಕ್ಕೆ ಕುಟುಂಬದ ಜೊತೆಗೆ ಕೈ ಜೋಡಿಸಿ ಗುರುಭಕ್ತಿ, ಅಭಿಮಾನಿ ಪ್ರೀತಿ ಔದಾರ್ಯ ತೋರಿದ್ದಾರೆ ಅವರ ಶಿಷ್ಯ ಅಭಿಮಾನ ಬಳಗದವರಾದ ಕಿರಣ್ ಗಿರ್ಗಿ, ಎಸ್.ಜಿ.ಮಹಾಲಿಂಗ ಗಿರ್ಗಿ, ಧನಲಕ್ಷ್ಮೀ ಎನ್., ಕಿರಗಸೂರು ರಾಜಪ್ಪ.

ಅವರ ಶಿಷ್ಯರಾದ ಎಸ್.ಜಿ.ಮಹಾಲಿಂಗ ಗಿರ್ಗಿ ಅವರು ಹೇಳುವಂತೆ ಕ್ರೈಸ್ತ ಧರ್ಮದ ಆರಾಧಕರಾಗಿದ್ದರೂ ಸಹ ಎಲ್ಲ ಧರ್ಮಗಳನ್ನ ಅಧ್ಯಯನ ಮಾಡಿಕೊಂಡು ಮನುಷ್ಯತ್ವ ಧರ್ಮವನ್ನು ಅರಿತಿದ್ದರು. ಸೌಮ್ಯ ಸ್ವಭಾವದ, ಸರಳತೆಯ ಆದರ್ಶ ವ್ಯಕ್ತಿತ್ವಗಳನ್ನು ಕಂಡ ನಮಗೆ ಅವರು ಸಿಕ್ಕಿರುವುದು ಸೌಭಾಗ್ಯ ಅವರ ಆರೋಗ್ಯ ಚೇತರಿಕೆ ಆಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ ಅವರ ಎಲ್ಲಾ ಶಿಷ್ಯ ಅಭಿಮಾನಿ ಬಳಗ.

ಗುರು-ಶಿಷ್ಯರ ಸಂಬಂಧಕ್ಕೆ ಯಾವುದೇ ಕಾಲಮಿತಿಯಿಲ್ಲ ಎಂಬುದನ್ನು ಈ ಘಟನೆ ಸಾಕ್ಷೀಕರಿಸಿದೆ. ಗುರುವಿಗೆ ಕೃತಜ್ಞತೆ ಸಲ್ಲಿಸುವ ಶಿಷ್ಯರ ಈ ಕಾರ್ಯ ಯುವ ಪೀಳಿಗೆಗೆ ಮಾದರಿಯಾಗಿದೆ.

(ಜಾಯ್ ಫುಲ್ ಜಯಶೇಖರ್ ಮೇಷ್ಟರಿಗೆ ಸಹಾಯ ಮಾಡಬಯಸುವವರು ಕಿರಣ್ ಗಿರ್ಗಿ ಅವರನ್ನು 7411491077 ಈ ಸಂಖ್ಯೆಯಲ್ಲಿ ಸಂಪರ್ಕಿಸಬಹುದು)

ಆಂದೋಲನ ಡೆಸ್ಕ್

Recent Posts

ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ 2026: ಗಜಪಯಣಕ್ಕೆ ವಿದ್ಯುಕ್ತ ಚಾಲನೆ

ಹುಣಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ 2026ರ ದಸರಾ ಗಜಪಯಣಕ್ಕೆ ಇಂದು ಅದ್ಧೂರಿ ಚಾಲನೆ ದೊರೆತಿದೆ. ಮೈಸೂರು ಜಿಲ್ಲಾ…

24 mins ago

ಓದುಗರ ಪತ್ರ: ಕಾವೇರಿ ನದಿ ನೀರಿನ ವಿವಾದಕ್ಕೆ ಮಾತುಕತೆಯೇ ಮದ್ದು

ತಮಿಳುನಾಡಿಗೆ ಮುಂದಿನ ಹದಿನೈದು ದಿನಗಳ ಕಾಲ ನಿತ್ಯ ಒಂಬತ್ತು ಸಾವಿರ ಕ್ಯುಸೆಕ್ಸ್ ಕಾವೇರಿ ನದಿ ನೀರು ಹರಿಸಬೇಕಾಗಿರುವುದು ಅಘಾತಕಾರಿ ಸಂಗತಿಯಾಗಿದೆ.…

1 hour ago

ಓದುಗರ ಪತ್ರ: ಈ ‘ಎರಡು’ ಸಮಸ್ಯೆಗಳಿಗೆ ಪರಿಹಾರ ಸಿಗಬೇಕು

ಮೈಸೂರು ನಗರವು ‘ಸ್ವಚ್ಛ ನಗರಿ’, ‘ಸಾಂಸ್ಕೃತಿಕ ನಗರಿ’ ಮತ್ತು ‘ಪಾರಂಪರಿಕನಗರಿ’ ಎಂದೇ ಖ್ಯಾತವಾಗಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಈ ಹೆಮ್ಮೆಯ…

1 hour ago

ಓದುಗರ ಪತ್ರ: ಸ್ಥಳ ಶುದ್ಧೀಕರಣಕ್ಕಿಂತ ಮನ ಶುದ್ಧೀಕರಣವಾಗಲಿ

ಎಐಸಿಸಿ ಅಧ್ಯಕ್ಷರು ಹಾಗೂ ಕಾಂಗ್ರೆಸ್ ಹಿರಿಯ ಮುಖಂಡರಾದ, ಮಲ್ಲಿಕಾರ್ಜುನ ಖರ್ಗೆ ಅವರು ಉತ್ತರಖಂಡದ ಹಲ್ದ್ವಾನಿಯದಲ್ಲಿ ಭಾಷಣ ಮಾಡಿದ ಸ್ಥಳವನ್ನು ಶುದ್ಧೀಕರಣ…

1 hour ago

ಮಳೆ ಕೊರತೆಯ ನಡುವೆಯೂ ಕೃಷಿಗೆ ಆತಂಕವಿಲ್ಲ

ನವೀನ್ ಡಿಸೋಜ ಕೊಡಗಿನಲ್ಲಿ ಇಲ್ಲಿಯವರೆಗೆ ಶೇ.೩೭ರಷ್ಟು ಮಳೆ ಕೊರತೆ; ಭರದಿಂದ ಸಾಗಿದ ಬಿತ್ತನೆ ಕಾರ್ಯ ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ವಾಡಿಕೆಗಿಂತ…

6 hours ago

ರಸ್ತೆ ಕಾಮಗಾರಿ ಕಳಪೆ: ಸಾರ್ವಜನಿಕರ ಆರೋಪ

ದಾಸೇಗೌಡ ಸರಗೂರು ಸರಗೂರು: ಸ್ಥಳ ಪರಿಶೀಲಿಸಿ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಆಗ್ರಹ ಸರಗೂರು: ಪಟ್ಟಣದ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ…

6 hours ago