ನಂಜನಗೂಡು: ಮೈಕ್ರೋ ಫೈನಾನ್ಸ್ ಹಾವಳಿಯ ದುಂಡಾವರ್ತನೆಗೆ ಸಿಲುಕಿ ತಾಲ್ಲೂಕಿನ ಮಲ್ಕುಂಡಿ ಗ್ರಾಮದ ಕೃಷ್ಣಮೂರ್ತಿ ಆತ್ಮಹತ್ಯೆ ಮಾಡಿಕೊಂಡ ಹಿನ್ನಲೆಯಲ್ಲಿ ಐದು ಹಣಕಾಸು ಸಂಸ್ಥೆಗಳ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಕೃಷ್ಣಮೂರ್ತಿ ಧರ್ಮಸ್ಥಳ ಸೀಶಕ್ತಿ ಸ್ವಸಹಾಯ ಸಂಘ, ಉಜ್ಜೀವನ್, ಬಿಎಸ್ಎಸ್, ಗ್ರಾಮೀಣ ಕೂಟ, ಐಡಿಎಫ್ಎಸ್ ಸೇರಿದಂತೆ ಐದು ಸಂಸ್ಥೆಗಳಿಂದ ಅನೇಕ ಬಾರಿ ಸಾಲ ಪಡೆದು ಮರುಪಾವತಿ ಸಹ ಮಾಡಿದ್ದ ಎನ್ನಲಾಗಿದೆ.
ಈ ಸಂಸ್ಥೆಯ ಸಾಲ ಪಾವತಿಸಲು ಇನ್ನೊಂದು ಸಂಸ್ಥೆಯಿಂದ ಹೆಚ್ಚು ಸಾಲ ಪಡೆಯುತ್ತಲೇ ಕೃಷ್ಣಮೂರ್ತಿ ಎಲ್ಲ ಹಣಕಾಸು ಸಂಸ್ಥೆಗಳ ನಂಬಿಕೆ ಗಳಿಸಿಕೊಂಡು ಮೈಯೆಲ್ಲಾ ಸಾಲ ಮಾಡಿಕೊಂಡಿದ್ದು ಈಗ ಎಲ್ಲೂ ಸಾಲ ಸಿಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಹೇಳಲಾಗಿದೆ. ಆತನಿಗೆ ಪೈಪೋಟಿಯ ಮೇಲೆ ಸಾಲ ನೀಡಿದ ಧರ್ಮಸ್ಥಳ ಸೀಶಕ್ತಿ ಸ್ವಸಹಾಯ ಸಂಘ, ಉಜ್ಜೀವನ್, ಬಿಎಸ್ಎಸ್, ಗ್ರಾಮೀಣ ಕೂಟ, ಐಡಿಎ-ಎಸ್ ಈ ಐದೂ ಸಂಸ್ಥೆಗಳ ಮೇಲೆ ಕೃಷ್ಣಮೂರ್ತಿ ಕುಟುಂಬ ದೂರು ನೀಡಿದ್ದು ಪೊಲೀಸರು ಆ ಐದು ಸಂಸ್ಥೆಗಳವರನ್ನು ಸೋಮವಾರ ಸಂಜೆ ಠಾಣೆಗೆ ಕರೆಸಿ ವಿಚಾರಣೆ ಆರಂಭಿಸಿದ್ದಾರೆ ಎಂದು ಡಿವೈಎಸ್ಪಿ ರಘು ತಿಳಿಸಿದ್ದಾರೆ.
ಈ ಪ್ರಕರಣದಿಂದಾಗಿ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಮೇಲೆ ಎಫ್ಐಆರ್ ಹಾಕಿದ ಮೊದಲ ತಾಲ್ಲೂಕು ನಂಜನಗೂಡು ಆಗಿದೆ.
ಮಹಾದೇಶ್ ಎಂ ಗೌಡ, ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕಿನ ಶೆಟ್ಟಳ್ಳಿ ಗ್ರಾಮದಲ್ಲಿ ಆರು ಹಸುಗಳು ಅನುಮಾನಸ್ಪದವಾಗಿ ಮೃತಪಟ್ಟಿರುವ ಘಟನೆ…
ನವೀನ್ ಡಿಸೋಜ: ಕೊಡಗು ಜಿಲ್ಲಾ ವರದಿಗಾರರು ಸಿದ್ದಾಪುರ: ತಿತಿಮತಿ ವಲಯದ ಚೆನ್ನಂಗಿ ಶಾಖೆಯ ವ್ಯಾಪ್ತಿಗೆ ಒಳಪಡುವ ಕೊಡಗು ಶ್ರೀರಂಗಪಟ್ಟಣ ಗ್ರಾಮದ…
ಗುಂಡ್ಲುಪೇಟೆ ತಾಲ್ಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಹಲವಾರು ಭಾಗಗಳಲ್ಲಿ ಗಾಂಜಾ ಮಾರಾಟ ಮಾಡಲಾಗುತ್ತಿದೆ. ಕೆಲವು ಚಾಲಕರು ಗಾಂಜಾ ಸೇವಿಸಿ ವಾಹನ ಚಾಲನೆ…
ಇಂದು ಶಿಕ್ಷಣ ಎನ್ನುವುದು ವ್ಯಾಪಾರೀಕರಣವಾಗಿದ್ದು, ಪೋಷಕರು ದುಡಿಮೆಯ ಬಹುತೇಕ ಆದಾಯವನ್ನು ಮಕ್ಕಳ ಶಿಕ್ಷಣಕ್ಕೆ ಖರ್ಚು ಮಾಡುವುದು ಅನಿವಾರ್ಯವಾಗಿದೆ. ಕೇರಳ ಸರ್ಕಾರ…
ನಂಜನಗೂಡು ತಾಲ್ಲೂಕು ಬೆಳಗುಂದ ಗ್ರಾಮದಲ್ಲಿ ಬಸ್ ತಂಗುದಾಣವಿಲ್ಲದೆ ಪ್ರತಿದಿನ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಬೇಸಿಗೆಯಲ್ಲಿ ಬಿಸಿಲಿನಲ್ಲಿ ಹಾಗೂ ಮಳೆಗಾಲದಲ್ಲಿ ಮಳೆಯಲ್ಲಿಯೇ…
ರಾಜ್ಯ ರಸ್ತೆ ಸಾರಿಗೆ ನಿಗಮ ಹಾಗೂ ಬೆಂಗಳೂರು ಮಹಾನಗರ ಸಾರಿಗೆ ನಿಗಮದ ಬಸ್ಗಳ ಮೇಲೆ ಅಳವಡಿಸಿರುವ ಗುಟ್ಕಾ ಹಾಗೂ ತಂಬಾಕು…