ಮೈಸೂರು : ಮಹಿಷಾ ದಸರಾ ಆಚರಣೆ ಮಾಡುವುದು ನಾಡ ಹಬ್ಬ ದಸರಾವನ್ನು ವಿರೋಧಿಸುವುದಕ್ಕಲ್ಲ. ಮಹಿಷಾ ಮತ್ತು ಚಾಮುಂಡಿ ಭೌಗೋಳಿಕವಾಗಿ ಎಲ್ಲೂ ಒಂದು ಕಡೆ ಹುಟ್ಟಿ ಬೆಳೆದವರಲ್ಲ. ಅಸುರರು ಎಂದರೆ ರಾಕ್ಷಸರಲ್ಲ. ಅವರು ರಕ್ಷಕರು ಎಂದು ಪ್ರೊ ಮಹೇಶ್ ಚಂದ್ರಗುರು ಹೇಳಿದರು.
ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಹಿಷಾ ನಮ್ಮ ಚಾರಿತ್ರಿಕ ಪುರುಷ ಈ ನೆಲದ ಮಹಾ ಪುರುಷನ ಆಚರಣೆ ಮಾಡೋದು ನಮ್ಮ ಧಾರ್ಮಿಕ ಕರ್ತವ್ಯ. ಸಂವಿಧಾನ ನಮಗೆ ಧಾರ್ಮಿಕ ಸ್ವಾತಂತ್ರ್ಯ ಕೊಟ್ಟಿದೆ. ಕಳೆದ 5 ವರ್ಷ ನಮಗೆ ಆಚರಣೆ ಮಾಡಲು ಅವಕಾಶ ಮಾಡಿಕೊಡಲಿಲ್ಲ.
ನಾವು ಮಹಿಷಾ ದಸರಾವನ್ನು ನಿರಂತರವಾಗಿ ಮಾಡಿಕೊಂಡು ಬಂದಿದ್ದೇವೆ. ಇತಿಹಾಸವನ್ನು ಮರೆಯಬಾರದು ನಮ್ಮ ಪರಂಪರೆಯನ್ನು ಮರೆಯಬಾರದು.ಚಾಮುಂಡಿ ತಾಯಿ ಪುರಾಣ ಪ್ರಸಿದ್ದರಾದವರು. ಆದರೆ ಮಹಿಷಾ ಇತಿಹಾಸ ಪುರುಷ. ಪುರಾಣ ಕಟ್ಟುಕತೆಗಳು, ಇತಿಹಾಸ ಸತ್ಯದ ಕತೆ ಎಂದರು.
ಸುಳ್ಳು ಮತ್ತು ಸತ್ಯದ ನಡುವೆ ನಡೆಯುವ ಸಂಘರ್ಷ ಇದು. ಮುಂದಿನ ಪೀಳಿಗೆಗೆ ನಾವು ಇತಿಹಾಸವನ್ನ ತಿಳಿಸದೇ ಮತ್ಯಾರು ತಿಳಿಸಬೇಕು. ನೀವು ಯಾರ ದಸರಾವನ್ನಾದರೂ ಮಾಡಿಕೊಳ್ಳಿ ನಾವು ಅಡ್ಡಿ ಮಾಡಲ್ಲ.ಮುಮ್ಮಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ದಸರಾ ಆರಂಭವಾಯಿತು. ನಾಲ್ವಡಿ ಅವರ ಕಾಲದಲ್ಲಿ ಇನ್ನೂ ಅದ್ದೂರಿಯಾಗಿ ಆಚರಣೆ ಮಾಡಲಾಯಿತು. ಚಾಮುಂಡಿ ಮತ್ತು ಮಹಿಷಾ ಒಂದು ಕಾಲಘಟ್ಟದವರಲ್ಲ. ಮಹಿಷಾ ಸತ್ಯ,ಚಾಮುಂಡಿ ಮಿತ್ಯ. ನೀವು ಚಾಮುಂಡಿ ಪೂಜೆ ಮಾಡ್ತಿರಾ ಮಾಡಿ. ನಾವು ಮಹಿಷಾ ದಸರಾ ಆಚರಣೆ ಮಾಡ್ತಿವಿ ನೀವ್ಯಾಕೆ ಪ್ರಶ್ನೆ ಮಾಡ್ತಿರಾ ಎಂದರು.
ಈ ದೇಶದ ಅಸಲಿ ವಿಶ್ವಗುರು ಮೋದಿಯಲ್ಲ ಬುದ್ಧ,ಬಸವ,ಮಹಾತ್ಮ ಗಾಂಧಿ, ನಾರಾಯಣಗುರು. ಈ ದೇಶದ ಸಂಪತ್ತಿನ ವಾರಸುದಾರರು ಇಲ್ಲಿನ ಮೂಲ ನಿವಾಸಿಗಳು. ನಮ್ಮ ಸಂಸ್ಕೃತಿಯನ್ನು ಅಗೌರವಿಸಬೇಡಿ. ಚಾಮುಂಡಿ ಬೆಟ್ಟಕ್ಕೆ ಮೊದಲು ಮಹಾಬಲೇಶ್ವರ ಬೆಟ್ಟ ಎನ್ನುವ ಹೆಸರಿತ್ತು. ವೈದಿಕರು ಇದನ್ನ ನಾಶ ಮಾಡಿ ಚಾಮುಂಡಿ ಬೆಟ್ಟ ಅಂತ ಮಾಡಿದರು ಎಂದು ಸುದ್ದಿ ಗೋಷ್ಠಿಯಲ್ಲಿ ವಿಚಾರವಾದಿ ಪ್ರೊ.ಮಹೇಶ್ ಚಂದ್ರಗುರು ಹೇಳಿದರು
ಕೃಷ್ಣ ಸಿದ್ದಾಪುರ ಅಣಬೆ ಕೃಷಿ ಗೃಹಿಣಿಯರಿಗೆ ಆದಾಯ ತರುವ ಉದ್ಯಮ ಸಿದ್ದಾಪುರ: ಕೊಡಗು ಜಿಲ್ಲೆಯಲ್ಲಿ ಅಣಬೆ ಕೃಷಿಗೆ ವಿಪುಲ ಅವಕಾಶಗಳಿದ್ದು,…
ʼರಾಮು ಅವರ ‘ಮಹಾಭಾರತದೊಳಗಿಂದ ಒಂದಿಷ್ಟು’ ಕೃತಿ ಬಿಡುಗಡೆ ಮಾಡಿದ ಚ.ಹ.ರಘುನಾಥ ಅಭಿಮತ ಮೈಸೂರು: ಸಾವಿರಾರು ವರ್ಷಗಳ ಹಿಂದಿನ ಮಹಾಭಾರತವನ್ನು ಸಮಕಾಲೀನ…
ಓ.ಎಲ್.ನಾಗಭೂಷಣ ಸ್ವಾಮಿ ‘ಹಾಡು-ಪಾಡು ರಾಮು’ ಅಂತಲೇ ಪರಿಚಯವಾಗಿರುವ ರಾಮು ನೆನಪು ಮಾತ್ರವಾಗಿ ಉಳಿದು ಇವತ್ತಿಗೆ ಮೂರು ವರ್ಷ. ರಾಮು ಮಹಾ…
ಮಂಡ್ಯ: ಮನೆಯ ಮುಂದಿನ ನೀರಿನ ಸಂಪ್ಗೆ ಬಿದ್ದು ಮಗು ಸಾವನ್ನಪ್ಪಿರುವ ಘಟನೆ ಪಾಂಡವಪುರ ತಾಲ್ಲೂಕಿನ ಲಕ್ಷ್ಮೀಸಾಗರ ಗ್ರಾಮದಲ್ಲಿ ನಡೆದಿದೆ. ಗ್ರಾಮದ…
ಗುಂಡ್ಲುಪೇಟೆ: ರಾಷ್ಟ್ರೀಯ ಹೆದ್ದಾರಿ ಮೈಸೂರು-ಊಟಿ ರಸ್ತೆಯ ಗುಂಡ್ಲುಪೇಟೆ ತಾಲ್ಲೂಕಿನ ಮಳವಳ್ಳಿ ಗೇಟ್ ಬಳಿ ಗೂಡ್ಸ್ ಲಾರಿ ಹಾಗೂ ಕೆಎಸ್ಆರ್ಟಿಸಿ ಬಸ್…