ಮೈಸೂರು : ಮಹಿಷಾ ದಸರಾ ಆಚರಣೆ ಮಾಡುವುದು ನಾಡ ಹಬ್ಬ ದಸರಾವನ್ನು ವಿರೋಧಿಸುವುದಕ್ಕಲ್ಲ. ಮಹಿಷಾ ಮತ್ತು ಚಾಮುಂಡಿ ಭೌಗೋಳಿಕವಾಗಿ ಎಲ್ಲೂ ಒಂದು ಕಡೆ ಹುಟ್ಟಿ ಬೆಳೆದವರಲ್ಲ. ಅಸುರರು ಎಂದರೆ ರಾಕ್ಷಸರಲ್ಲ. ಅವರು ರಕ್ಷಕರು ಎಂದು ಪ್ರೊ ಮಹೇಶ್ ಚಂದ್ರಗುರು ಹೇಳಿದರು.
ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಹಿಷಾ ನಮ್ಮ ಚಾರಿತ್ರಿಕ ಪುರುಷ ಈ ನೆಲದ ಮಹಾ ಪುರುಷನ ಆಚರಣೆ ಮಾಡೋದು ನಮ್ಮ ಧಾರ್ಮಿಕ ಕರ್ತವ್ಯ. ಸಂವಿಧಾನ ನಮಗೆ ಧಾರ್ಮಿಕ ಸ್ವಾತಂತ್ರ್ಯ ಕೊಟ್ಟಿದೆ. ಕಳೆದ 5 ವರ್ಷ ನಮಗೆ ಆಚರಣೆ ಮಾಡಲು ಅವಕಾಶ ಮಾಡಿಕೊಡಲಿಲ್ಲ.
ನಾವು ಮಹಿಷಾ ದಸರಾವನ್ನು ನಿರಂತರವಾಗಿ ಮಾಡಿಕೊಂಡು ಬಂದಿದ್ದೇವೆ. ಇತಿಹಾಸವನ್ನು ಮರೆಯಬಾರದು ನಮ್ಮ ಪರಂಪರೆಯನ್ನು ಮರೆಯಬಾರದು.ಚಾಮುಂಡಿ ತಾಯಿ ಪುರಾಣ ಪ್ರಸಿದ್ದರಾದವರು. ಆದರೆ ಮಹಿಷಾ ಇತಿಹಾಸ ಪುರುಷ. ಪುರಾಣ ಕಟ್ಟುಕತೆಗಳು, ಇತಿಹಾಸ ಸತ್ಯದ ಕತೆ ಎಂದರು.
ಸುಳ್ಳು ಮತ್ತು ಸತ್ಯದ ನಡುವೆ ನಡೆಯುವ ಸಂಘರ್ಷ ಇದು. ಮುಂದಿನ ಪೀಳಿಗೆಗೆ ನಾವು ಇತಿಹಾಸವನ್ನ ತಿಳಿಸದೇ ಮತ್ಯಾರು ತಿಳಿಸಬೇಕು. ನೀವು ಯಾರ ದಸರಾವನ್ನಾದರೂ ಮಾಡಿಕೊಳ್ಳಿ ನಾವು ಅಡ್ಡಿ ಮಾಡಲ್ಲ.ಮುಮ್ಮಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ದಸರಾ ಆರಂಭವಾಯಿತು. ನಾಲ್ವಡಿ ಅವರ ಕಾಲದಲ್ಲಿ ಇನ್ನೂ ಅದ್ದೂರಿಯಾಗಿ ಆಚರಣೆ ಮಾಡಲಾಯಿತು. ಚಾಮುಂಡಿ ಮತ್ತು ಮಹಿಷಾ ಒಂದು ಕಾಲಘಟ್ಟದವರಲ್ಲ. ಮಹಿಷಾ ಸತ್ಯ,ಚಾಮುಂಡಿ ಮಿತ್ಯ. ನೀವು ಚಾಮುಂಡಿ ಪೂಜೆ ಮಾಡ್ತಿರಾ ಮಾಡಿ. ನಾವು ಮಹಿಷಾ ದಸರಾ ಆಚರಣೆ ಮಾಡ್ತಿವಿ ನೀವ್ಯಾಕೆ ಪ್ರಶ್ನೆ ಮಾಡ್ತಿರಾ ಎಂದರು.
ಈ ದೇಶದ ಅಸಲಿ ವಿಶ್ವಗುರು ಮೋದಿಯಲ್ಲ ಬುದ್ಧ,ಬಸವ,ಮಹಾತ್ಮ ಗಾಂಧಿ, ನಾರಾಯಣಗುರು. ಈ ದೇಶದ ಸಂಪತ್ತಿನ ವಾರಸುದಾರರು ಇಲ್ಲಿನ ಮೂಲ ನಿವಾಸಿಗಳು. ನಮ್ಮ ಸಂಸ್ಕೃತಿಯನ್ನು ಅಗೌರವಿಸಬೇಡಿ. ಚಾಮುಂಡಿ ಬೆಟ್ಟಕ್ಕೆ ಮೊದಲು ಮಹಾಬಲೇಶ್ವರ ಬೆಟ್ಟ ಎನ್ನುವ ಹೆಸರಿತ್ತು. ವೈದಿಕರು ಇದನ್ನ ನಾಶ ಮಾಡಿ ಚಾಮುಂಡಿ ಬೆಟ್ಟ ಅಂತ ಮಾಡಿದರು ಎಂದು ಸುದ್ದಿ ಗೋಷ್ಠಿಯಲ್ಲಿ ವಿಚಾರವಾದಿ ಪ್ರೊ.ಮಹೇಶ್ ಚಂದ್ರಗುರು ಹೇಳಿದರು
ಹೊಸದಿಲ್ಲಿ : ಸಾರ್ವಜನಿಕರ ಸಮ್ಮುಖದಲ್ಲಿ ಅಥವಾ ಸಾರ್ವಜನಿಕರ ವೀಕ್ಷಣೆಗೆ ಒಳಪಡುವ ಸ್ಥಳದಲ್ಲಿ ಜಾತಿ ನಿಂದನೆ ನಡೆದಿರುವುದು ಸಾಬೀತಾಗದಿದ್ದರೆ, ಅದನ್ನು ಪರಿಶಿಷ್ಟ…
ಬೆಂಗಳೂರು : ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಗರಣದಲ್ಲಿ ದುರುಪಯೋಗವಾಗಿದೆ ಎಂದು ಹೇಳಲಾಗಿದ್ದ 187 ಕೋಟಿ ರೂಪಾಯಿ…
ಹನೂರು : ಅರಣ್ಯ ಇಲಾಖೆ ಸಿಬ್ಬಂದಿ ಗುಂಡಿಗೆ ಮೂವರು ಬಲಿ ಪ್ರಕರಣಕ್ಕೆ ದಿನಕ್ಕೊಂದು ಟ್ವಿಸ್ಟ್ ಸಿಗುತ್ತಿದೆ. ದನ ಹುಡುಕಲು ಹೋಗಿದ್ದವರ…
ಬೆಂಗಳೂರು: ಬೆಂಗಳೂರು ದಕ್ಷಿಣದ ದೊಡ್ಡೇರಿಯಲ್ಲಿ ಬೃಹತ್ ನಕಲಿ ಔಷಧ ಜಾಲ ಪತ್ತೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ ಈ ಪ್ರಕರಣವನ್ನು…
ಸದ್ದಿಲ್ಲದೆ ಕೈಗೊಂಡ ತೀರ್ಮಾನಕ್ಕೆ ಬೆಚ್ಚಿದ ರಿಯಲ್ ಎಸ್ಟೇಟ್ ಉದ್ಯಮಿಗಳು; ಮೂರು ಪಕ್ಷಗಳಲ್ಲೂ ತಳಮಳ ಕೆ.ಬಿ.ರಮೇಶನಾಯಕ ಮೈಸೂರು : ಕಳೆದ ಎರಡು…
ಮೊದಲಬಾರಿಗೆ ರಾಷ್ಟ್ರರಾಜಧಾನಿಯಿಂದ ಹೊರಗೆ ಆಯೋಜನೆ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭವು ಇದೇ ಮೊದಲ ಬಾರಿಗೆ ನವದೆಹಲಿಯಿಂದ…