Someshwarpur Government School
ಮೈಸೂರು: ತಾಲ್ಲೂಕಿನ ಸೋಮೇಶ್ವರಪುರ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಂದನ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ನಡೆಯಿತು.
ಕಳೆದ 2009ರಲ್ಲಿ ಪಾಠ ಪ್ರವಚನ ಮಾಡಿದ್ದ ಶಿಕ್ಷಕರಾದ ಶಿವಕುಮಾರ್, ದೇವರಾಜು, ಕೃಷ್ಣಮೂರ್ತಿ, ಮೆಹಬೂಬ್ ಭಾಷ, ಸ್ಟೀವನ್, ಚಂದ್ರಶೇಖರ ಮೂರ್ತಿ, ನಂಜಯ್ಯ ಮತ್ತು ಶಿಕ್ಷಕಿಯರಾದ ಭಾರತಿ, ಪ್ರತಿಮ, ಮಧುರ, ನಾಗಲಾಂಬಿಕೆ ಮುಂತಾದವರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹಾಗು ಶಿಕ್ಷಕರ ನಡುವಿನ ಅವರ ಪಾಠ ಪ್ರವಚನಗಳು ಹಾಗು ಬೆಳೆದು ಬಂದ ಬಗೆಯ ಬಗ್ಗೆ ಮೆಲುಕು ಹಾಕುತ್ತ ಎಲ್ಲಾ ಗುರು ವೃಂದದವರಿಗೂ ಸನ್ಮಾನಿಸಿ ಅಭಿನಂದಿಸಲಾಯಿತು.
ಹಳೆಯ ವಿದ್ಯಾರ್ಥಿ ಶಶಾಂಕ ಹೆಚ್.ಎಸ್ ಮಾತನಾಡಿ, ಅಂದಿನ ನಮ್ಮ ಗುರುಗಳ ಶ್ರಮದ ಫಲವಾಗಿ ನಾವಿಂದು ಇಲ್ಲಿದ್ದೇವೆ. ಕಾಲ ಸರಿಯುತ್ತಾ ಹೋದಂತೆ ಎಲ್ಲರ ನಡುವೆ ಅಂತರಗಳು ಹೆಚ್ಚಾಗುತ್ತಾ ಹೋಗುತ್ತದೆ. ಈ ನಿಟ್ಟಿನಲ್ಲಿ ಎಲ್ಲರ ಸಮಾಗಮಕ್ಕೆ ಇಂತಹ ಕಾರ್ಯಕ್ರಮಗಳ ಆಯೋಜನೆ ಪ್ರಮುಖವಾಗುತ್ತದೆ. ನಮ್ಮ ಬಾಲ್ಯದ ನೆನಪುಗಳನ್ನು ಶಿಕ್ಷಕರೊಂದಿಗೆ ಮೆಲುಕು ಹಾಕಲು ಇದೊಂದು ಉತ್ತಮ ವೇದಿಕೆ ಎಂದು ಭಾವುಕರಾದರು
ಕಾರ್ಯಕ್ರಮದಲ್ಲಿ ಹಿರಿಯ ವಿದ್ಯಾರ್ಥಿಗಳಾದ ಸಿದ್ದರಾಜು, ಮನು, ಶಶಾಂಕ, ರವಿಕುಮಾರ್, ಮಹೇಂದ್ರ, ಪ್ರವೀಣ್, ಅಶ್ವಿನಿ, ಅಮೃತ, ತುಳಸಿ ಜಗದಾಂಬ, ಪಲ್ಲವಿ, ಸಚಿನ್ ಬಿ, ಹುಚ್ಚನಾಯಕ , ಭಾಸ್ಕರ್, ಕಾರ್ತಿಕ್, ಅಕ್ಷಯ್ , ಗಿರೀಶ್, ಕುಮಾರ್ , ಸುನಿಲ್ ಭಾಗವಹಿಸಿದ್ದರು.
ಇಂದಿನ ಧಾವಂತದ ಬದುಕಿನಲ್ಲಿ ನಾವೆಲ್ಲರೂ ಆಸೆಗಳ ಬೆನ್ನೇರಿ ಓಡುತ್ತಿದ್ದು, ನಮ್ಮ ಉಸಿರಿಗೆ ಆಧಾರವಾಗಿರುವ ಪ್ರಕೃತಿಯನ್ನು ಮರೆಯುತ್ತಿದ್ದೇವೆ. ಗಾಳಿ, ನೀರು, ಬೆಳಕಿಲ್ಲದೆ…
ಆರ್ಬಿಐ ಮುಂದಿನ ಹಣಕಾಸು ವರ್ಷದಿಂದ (೨೦೨೭-೨೮) ಪ್ಲಾಸ್ಟಿಕ್ (ಪಾಲಿಮರ್) ನೋಟುಗಳನ್ನು ಚಲಾವಣೆಗೆ ತರಲು ನಿರ್ಧರಿಸಿರುವುದು ಸ್ವಾಗತಾರ್ಹ ಮತ್ತು ದೂರದೃಷ್ಟಿಯ ಹೆಜ್ಜೆಯಾಗಿದೆ.…
ರಾಜ್ಯ ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ನೀಡದಿರುವುದು ಮಹಿಳೆಯರಿಗೆ ಮಾಡಿದ ಘೋರ ಅನ್ಯಾಯ. ಅಧಿಕಾರಕ್ಕೆ ಬರುವ ಮುನ್ನ ಮಹಿಳೆಯರ ಹೆಸರಿನಲ್ಲಿ…
ವೈಡ್ ಆಂಗಲ್: ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ ಇಂದು ಬಿಡುಗಡೆಯಾಗುತ್ತಿರುವ ‘ ಬಾಸ್’ಎಂದೋ ತೆರೆಗೆ ಬರಬೇಕಾಗಿತ್ತು. ಆದರೆ ಚಿತ್ರದ ಹೆಸರು,…
ನವೀನ್ ಡಿಸೋಜ ಕಳೆದ ಕೆಲ ದಿನಗಳಲ್ಲಿ ಉತ್ತಮ ಮಳೆ; ವಾಡಿಕೆ ಮಳೆ ಕೊರತೆ ವಿರಾಜಪೇಟೆ ತಾಲ್ಲೂಕಿನಲ್ಲಿ ಅತಿ ಹೆಚ್ಚು ಶೇ.೪೩…
ಮಂಜು ಕೋಟೆ ಎಚ್.ಡಿ.ಕೋಟೆ: ತಾಲ್ಲೂಕಿನ ಕಬಿನಿ ಜಲಾಶಯಕ್ಕೆ ಬರುತ್ತಿದ್ದ ಒಳಹರಿವ ಇಳಿಮುಖವಾಗಿರುವ ಹಿನ್ನೆಲೆಯಲ್ಲಿ ಹೊರಹರಿವು ಸ್ಥಗಿತಗೊಳಿಸಿ ಜಲಾಶಯದ ಕ್ರಸ್ಟ್ಗೇಟ್ಗಳನ್ನು ಬಂದ್…